About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Thursday, May 19, 2011

ಶಿಕಾರಿಗೆ ಸಿಕ್ಕ ಪಶು

ಹಸನಾಯಿತು ಸಹನೆಯ ಬಾಳು
ವೆಂಕಟರೆಡ್ಡಿ, ಆ ಲಾಡ್ಜ್ ನ ರಿಸೆಪ್ಷನ್ ನಲ್ಲಿ ಕೂತಿದ್ದರೂ ಆತನ ದೃಷ್ಟಿ ಎಲ್ಲಾ ಮುಂದಿನ ರಸ್ತೆ ಮೇಲೆಯೇ ಬಿದ್ದಿದೆ. ಅವನು ಬರ್ತಾನಾ ? ಬಂದೇ ಬರ್ತಾನೆ. ದೇಹ ಮಾರಿಕೊಂಡು ತುತ್ತು ತಿನ್ನೋ ಮಹಿಳೆಯರನ್ನೂ ಬಿಡದ, ಮಾನ, ಮರ್ಯಾದೆ, ನಾಚಿಕೆ ಇಲ್ಲದ ಅವನು ಇಲ್ಲಿಗೆ ಬರದೇ ಇರಲು ಸಾಧ್ಯವೇ? ಹೀಗಂತ ಬೆಳಗ್ಗೆ ಎದ್ದಾಗಲಿಂದ ಅದೆಷ್ಟು ಬಾರಿ ತನಗೆ ತಾನೆ ಈ ಪ್ರಶ್ನೆಯನ್ನು ಕೇಳಿಕೊಂಡಿದ್ದನೋ.
---
ಪ್ರತಿ ದಿನ ಎದ್ದ ಕೂಡಲೇ ರಿಸೆಪ್ಷನ್ ನಲ್ಲಿರುವ ತಿರುಪತಿ ವೆಂಕಟರಮಣಸ್ವಾಮಿ ಫೋಟೋಗೆ ಹೂಮಾಲೆ ಹಾಕಿ, ಊದುಬತ್ತಿ ಹಚ್ಚಿ ವೇಟರ್ ತಂದುಕೊಟ್ಟ ಕಾಫಿ ಕುಡಿದು ದೂರದ ಊರುಗಳಿಂದ ಬರುವ ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ತಾನು ಭೋಗ್ಯಕ್ಕೆ ಪಡೆದಿರುವ ಹಿಮವಂತ್ ಲಾಡ್ಜ್ ನ ರಿಸೆಪ್ಷನ್ ನಲ್ಲಿ ಕೂತರೆ ಗಮನವೆಲ್ಲವೂ ಬರುವ ಗಿರಾಕಿಗಳ ಮೇಲೆಯೇ.

ಆತನ ಹೆಸರು ವೆಂಕಟರೆಡ್ಡಿ. ಆತ್ಮೀಯರು ಆತನನ್ನು ರೆಡ್ಡಿ ಎಂದು ಕರೆಯುತ್ತಾರೆ. ಆಂಧ್ರ ಮೂಲದವನು. ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದವ, ಸ್ವಲ್ಪ ಹಣ ಕೂಡಿಟ್ಟು ಬೆಂಗಳೂರಿನ ಮೆಜೆಸ್ಟಿಕ್ ಸಮೀಪದ ಕಾಟನ್ ಪೇಟೆಯಲ್ಲಿರುವ ಲಾಡ್ಜ್ ಒಂದನ್ನು ಲೀಸ್ ಗೆ ಪಡೆದಿದ್ದಾನೆ. ಈತನಿಗೆ ಒಬ್ಬ ಮಗ ಮತ್ತು ಮಗಳು. ಆಕೆ ತುಂಬಾ ರೂಪವಂತೆ. ಅದೇ ಅವನ ಇಂದಿನ ಗಾಬರಿಗೆ ಕಾರಣ!

ಹಾಗಂತ ಅವಳೇನೂ ಯಾರನ್ನೂ ಪ್ರೀತಿಸಿ ಓಡಿ ಹೋಗಿಲ್ಲ. ಆದರೆ, ಬೆಳ್ಳಗಿರುವುದೆಲ್ಲಾ ಹಾಲು ಎಂದು ನಂಬಿದ್ದಳಷ್ಟೇ. ಪದವಿ ಮುಗಿಸಿದ ಬಳಿಕ ತಂದೆಗೆ ಸಹಾಯ ಮಾಡುವ ದೃಷ್ಟಿಯಿಂದ ಮತ್ತು ಸುಂದರವಾದ ಹುಡುಗಿ ರಿಸೆಪ್ಷನ್್ನಲ್ಲಿದ್ದರೆ ಗಿರಾಕಿಗಳನ್ನು ಸೆಳೆಯಬಹುದು ಎಂಬ ವ್ಯಾಪಾರ ತಂತ್ರದಿಂದ ಆಗಾಗ್ಗೆ ರಿಸೆಪ್ಷನ್್ನಲ್ಲಿ ಕೂರುತ್ತಿದ್ದಳು. ಅದೇ ಅವಳಿಗೆ ಮುಳುವಾಗುತ್ತೆ ಎಂಬುದನ್ನು ಪಾಪ, ರೆಡ್ಡಿ ಊಹಿಸಲೇ ಇಲ್ಲ.
--
ದುಗುಡಕ್ಕೆ ಕಾರಣ

ಬಿಳಿಗಿರಿ ರಂಗನಬೆಟ್ಟ ಗೊತ್ತಲ್ಲ ? ಅದರ ಪಕ್ಕದಲ್ಲೇ ಇದೆ ರಾಂಪುರ. ಸುಮಾರು 20 ಮನೆಗಳಿರುವ ಈ ಹಳ್ಳಿ ಹೊರ ಜಗತ್ತಿನ ಮಟ್ಟಿಗೆ ಅನಾಮಿಕ. ಹಾಗಾಗಿ, ಆ ಊರಿನ ಯಾರೇ ಆಗಲಿ ಮೈಸೂರು ಅಥವಾ ಬೆಂಗಳೂರಿಗೆ ಬಂದಾಗ ಎಲ್ಲರೂ ಊರ ಹೆಸರು ಹೇಳಬೇಕಾದರೆ ಬಿಳಿಗಿರಿರಂಗನ ಬೆಟ್ಟ ಎಂದೇ ಹೇಳುತ್ತಾರೆ.

ಅದೇ ಊರಿಂದ ಬಂದವನು ಸೂರ್ಯ. ಯಾರಾದರು ಊರ ಹೆಸರು ಕೇಳಲಿ ಕೇಳದಿರಲಿ, ಅವನು ಬಿಳಿಗಿರಿ ಎಂದು ಹೇಳುತ್ತಿದ್ದ. ತನ್ನನ್ನು ತಾನು ಸೂರ್ಯ ಬಿಳಿಗಿರಿ ಎಂದೇ ಕರೆಸಿಕೊಂಡಿದ್ದ. ಅವನೂ ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದವನೇ. ಕೆಲ ದಿನ ಊರಿನ ಕಾಲೇಜೊಂದರಲ್ಲಿ ಪಾಠ ಮಾಡಿಕೊಂಡಿದ್ದ ಪದವೀಧರ. ಆದರೆ, ತನ್ನ ವಿದ್ಯಾರ್ಥಿನಿ ಜತೆಯೇ ಅಸಭ್ಯವಾಗಿ ವರ್ತಿಸಿ ಗೂಸಾ ತಿಂದು ಓಡಿ ಬಂದವ. ತಾನೊಬ್ಬ ಖುಷ್ವಂತ್್ಸಿಂಗ್್ನಂತೆ ಆಗಬೇಕು ಎಂಬುದು ಅವನ ಆಸೆ. ಆದ್ದರಿಂದಲೇ ಅವನು ಪತ್ರಿಕೋದ್ಯಮಕ್ಕೆ ವಕ್ಕರಿಸಿ ಅವನಿಗಿಂತ ಮೊದಲೇ ಆರಂಭವಾಗಿದ್ದ ಪೀತ ಪತ್ರಿಕೋದ್ಯಮದ ಸದಸ್ಯನಾದ.

ಪತ್ರಕರ್ತನಾದವನು ಹೊಟ್ಟೆಪಾಡಿಗಾಗಿ ಮತ್ತೇನಾದರೂ ಕಸುಬು ಮಾಡಲೇಬೇಕಾದ ಸ್ಥಿತಿ ಇದ್ದ ಸಮಯವದು. ಆದರೆ, ಈ ಬಿಳಿಗಿರಿ ಆಯ್ದಕೊಂಡಿದ್ದೇ ಬೇರೆ ಕಸಬು! ಮೆಜೆಸ್ಟಿಕ್್ನ ಅಕ್ಕಪಕ್ಕದ ಕೆಲವು ಲಾಡ್ಜ್ ಸೇರಿದಂತೆ ಕೆ. ಆರ್. ಮಾರುಕಟ್ಟೆಯ ಕೆಲವು ಲಾಡ್ಜ್ ಗಳಲ್ಲಿ ಇಂದಿಗೂ ಅವ್ಯಾಹತವಾಗಿ ವೇಶ್ಯಾವಾಟಿಕೆ ನಡೆಯುತ್ತಿದೆ. ಇದು ಗೊತ್ತಿದ್ದರೂ ಪೊಲೀಸರು ಜಾಣ ಕುರುಡು ಪ್ರದರ್ಶಿಸುತ್ತಾರೆ. ಅದಕ್ಕೆ ಕಾರಣ ಹೊಟ್ಟೆಪಾಡಿಗಾಗಿ ಪರದಾಡುವ ಹೆಣ್ಣುಗಳ ಬಗ್ಗೆ ಸ್ವಲ್ಪ ಮಟ್ಟಿಗಿನ ಕನಿಕರದ ಜೊತೆಗೆ ಲಾಡ್ಜ್ ಗಳಿಂದ ತಿಂಗಳು ತಿಂಗಳು ಬರುವ ಮಾಮೂಲಿಯೂ ಒಂದು ಕಾರಣ.

ಈ ಗುಟ್ಟನ್ನು ಮೊದಲು ಗುರ್ತಿಸಿದವನು ಬಿಳಿಗಿರಿ. ಮೊದಲೇ ಭಗನಿ ಕಳ್ಳು, ನಾಟಿ ಸಾರಾಯಿ ಕುಡಿದು ಬೆಳೆಸಿದ್ದ ದೇಹಕ್ಕೆ ಪ್ರತಿ ದಿನ ಮದ್ಯ, ಮಾನಿನಿ ಇಲ್ಲದೆ ಕಾಲ ಕಳೆಯುವುದು ಅಸಾಧ್ಯವಾಗಿತ್ತು. ಇಂಥ ಸಂದರ್ಭದಲ್ಲಿ ಇವನು ಬಳಸಿಕೊಂಡಿದ್ದು ಪೀತ ಪತ್ರಿಕೋದ್ಯಮವನ್ನು. ಲಾಡ್ಜ್ ನಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಪತ್ರಿಕೆಯಲ್ಲಿ ಬರೆಯುವುದಾಗಿ ಹೆದರಿಸಿ ಲಾಡ್ಜ್್ಗಳಿಂದ ತಿಂಗಳ ಮಾಮೂಲಿ ವಸೂಲಿ ಮಾಡಲು ಆರಂಭಿಸಿದ. ಲಾಡ್ಜ್್ನವರೂ ಪತ್ರಿಕೆಯವರನ್ನು ಎದುರು ಹಾಕಿಕೊಳ್ಳುವುದು ಯಾಕೆ ಎಂದು ಚಿಲ್ಲರೆ ಕೊಟ್ಟು ಕಳುಹಿಸುತ್ತಿದ್ದರು.

ಇದರ ರುಚಿ ಕಂಡ ಬಿಳಿಗಿರಿ ಹೊಟ್ಟೆ ಪಾಡಿಗಾಗಿ ಮೈಮಾರಿಕೊಳ್ಳುವ ಹೆಂಗಸರನ್ನೂ ಬಿಡಲಿಲ್ಲ. ಲಾಡ್ಜ್್ಗಳಲ್ಲಿ ದುಡಿಯುವ ಹೆಂಗಸರು ಇವನಿಗೆ ಉಚಿತವಾಗಿ ಸಿಗಬೇಕಿತ್ತು! ಪ್ರಶ್ನಿಸಿದರೆ ಪತ್ರಿಕೆಯಲ್ಲಿ ಬರೆಯುವ ಬೆದರಿಕೆ. ವಿಧಿ ಇಲ್ಲದೆ ಅವರೂ ಇವನ ಹಿಂಸೆಯನ್ನು ತಡೆದುಕೊಳ್ಳಬೇಕಿತ್ತು. ಇಂಥ ಗುಳ್ಳೆ ನರಿಯ ಬಿಳಿಗಿರಿ ರೆಡ್ಡಿಗೆ ಪರಿಚಯವಾಗಿದ್ದು ಒಂದು ಅನಿರೀಕ್ಷಿತ ಸನ್ನಿವೇಶದಲ್ಲಿ.
--
ಹಿಮವಂತ್ ಲಾಡ್ಜ್ ಪಕ್ಕದಲ್ಲೇ ಇದ್ದ ಒಂದು ಲಾಡ್ಜ್ ನಲ್ಲಿ ಅಕ್ರಮ ಚಟುವಟಿಕೆಗಳು ಹೇರಳವಾಗಿ ನಡೆಯುತ್ತಿರುತ್ತವೆ. ಒಂದು ದಿನ ಆ ಲಾಡ್ಜ್್ನಲ್ಲಿ ಒಬ್ಬ ಹೆಂಗಸಿನ ಕೊಲೆಯಾಗುತ್ತದೆ. ಇದರ ಜತೆ ರೆಡ್ಡಿ ಲಾಡ್ಜ್ ಗೆ ವ್ಯಾಪಾರ ಪೈಪೋಟಿ ಇತ್ತಾದರೂ ರೆಡ್ಡಿ ಲಾಡ್ಜ್್ನಲ್ಲಿ ಯಾವುದೇ ಅಕ್ರಮಗಳು ನಡೆಯದ ಕಾರಣ, ಸಂಪ್ರದಾಯಸ್ಥರು ಮಾತ್ರ ಹಿಮವಂತ್ ಲಾಡ್ಜ್್ಗೆ ಬಂದು ವ್ಯಾಪಾರ ಕಡಿಮೆ ಇರುತ್ತಿತ್ತು. ಕೊಲೆಯಾದಾಗ ಅದನ್ನು ಪತ್ರಿಕೆಯಲ್ಲಿ ಬರೆಸಿದರೆ ತಮ್ಮ ಲಾಡ್ಜ್ ವ್ಯಾಪಾರದಲ್ಲಿ ಮುಂದುವರಿಯುತ್ತದೆ ಎಂಬ ಯೋಚನೆಯಿಂದ ರೆಡ್ಡಿ ಮೊದಲ ಬಾರಿಗೆ ಬಿಳಿಗಿರಿಗೆ ಪುಡಿಗಾಸು, ಅಗ್ಗದ ಮದ್ಯ ನೀಡಿ ಪತ್ರಿಕೆಯಲ್ಲಿ ಬರೆಸಿದ. ಒಂದು ಬಾರಿ ರುಚಿ ಕಂಡರೆ ಬಿಡುವವನಲ್ಲ ಬಿಳಿಗಿರಿ. ಎಲ್ಲೂ ಎಣ್ಣೆ ಸಿಗಲಿಲ್ಲವೆಂದರೆ ರೆಡ್ಡಿ ಬಳಿ ಬಂದು ಜೊಲ್ಲು ಸುರಿಸುತ್ತಿದ್ದ. ಹಾಗೆ ಪರಿಚಯವಾದ ಅವರ ಸ್ನೇಹ ಮನೆವರೆಗೂ ಮುಟ್ಟಿತು. ಬಿಳಿಗಿರಿಯ ನರಿ ಬುದ್ಧಿ ತಿಳಿಯದ ರೆಡ್ಡಿ ಯಾವಾಗ ಮನೆಗೆ ಬಿಟ್ಟುಕೊಂಡನೋ ಅದೇ ದಿನ ಅವನ ಮನೆಗೆ ಗೂಬೆ ಪ್ರವೇಶವಾದಂತಾಗಿತ್ತು!

ಮೊದಲಿಗೆ ರೆಡ್ಡಿ ಇದ್ದಾಗ ಬರುತ್ತಿದ್ದ ಬಿಳಿಗಿರಿ ಕ್ರಮೇಣ ರೆಡ್ಡಿ ಇಲ್ಲದ ಸಮಯದಲ್ಲೇ ಬರತೊಡಗಿದ. ಮೊದಲಿಗೆ ಏನೂ ತಿಳಿಯದ ರೆಡ್ಡಿ ಸುಮ್ಮನಿದ್ದ. ಆದರೆ, ಕ್ರಮೇಣ ಹೆಂಡತಿಯಲ್ಲಿ ಕೆಲ ಬದಲಾವಣೆಗಳನ್ನು ಕಂಡ. ಬಿಳಿಗಿರಿ ಮಾಡುತ್ತಿರುವ ದ್ರೋಹಕ್ಕೆ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ರೆಡ್ಡಿ ಒದ್ದಾಡತೊಡಗಿದ. ಹೆಂಡತಿ ವಿಚಾರವಾಗಿ ಸಹಿಸಿಕೊಂಡಿದ್ದ ರೆಡ್ಡಿಗೆ ಮತ್ತೊಂದು ಶಾಕ್; ಮಗಳು ಕೂಡಾ ಅದೇ ಬಿಳಿಗಿರಿಯ ಮೋಸದ ಜಾಲದಲ್ಲಿ ಸಿಲುಕಿದ್ದಳು! ಇದನ್ನು ತಿಳಿದು ಹೌಹಾರಿದ ರೆಡ್ಡಿ ಮಗಳಿಗೆ ಬುದ್ಧಿ ಹೇಳಿದ. ಆದರೆ, ಪ್ರಯೊಜನ ಆಗಲಿಲ್ಲ. ಮೊದಲೆಲ್ಲಾ ತಂದೆಗೆ ತಿಳಿಯದ ಹಾಗೆ ಓಡಾಡುತ್ತಿದ್ದ ಮಗಳು ಈಗ ನಿರ್ಭಯವಾಗಿ ತಂದೆಯ ಎದುರಿಗೇ ಓಡಾಡಲು ಆರಂಭಿಸಿದ್ದಳು. ಇದೆಲ್ಲವೂ ನಡೆಯುತ್ತಿರುವಾಗಲೇ

ಅವಳಿಗೆ ಅರಿವಾಗತೊಡಗಿತು; ಇವನು ಕೇವಲ ತನ್ನನ್ನು ಬಳಸಿಕೊಳ್ಳುತ್ತಾನೆ, ಹೊರತು ಬಾಳು ಕೊಡುವುದಿಲ್ಲ ಎಂಬುದು. ಅಷ್ಟರಲ್ಲಾಗಲೇ ಆಕೆ ಬಹುದೂರ ಬಂದಾಗಿತ್ತು. ಅವನಿಂದ ದೂರವಾಗುವ ಪ್ರಯತ್ನ ಮಾಡತೊಡಗಿದಳು. ಅದು ಸುಲಭವಿರಲಿಲ್ಲ. ಮಗಳ ಸ್ಥಿತಿ, ತಾನು ಮಾಡಿದ ತಪ್ಪಿನ ಅರಿವಾಗ ತೊಡಗಿತ್ತು ರೆಡ್ಡಿಯ ಹೆಂಡತಿಗೆ. ಆಕೆ ಕೂಡಾ ಬಿಳಿಗಿರಿಯ ತೆಕ್ಕೆಯಿಂದ ದೂರವಾದಳು. ಆದರೆ, ಇವರ ಅಗಲಿಕೆ ಬಿಳಿಗಿರಿಯ ಕೋಪಕ್ಕೆ ತಿರುಗಿತು.

'ತನಗೆ ಅವಶ್ಯವಿರುವ ಅಷ್ಟೂ ದಿನ ತನ್ನಿಂದ ದೂರವಾಗಲು ಬಿಡುವುದಿಲ್ಲ. ಒಂದು ವೇಳೆ ದೂರವಾಗುವ ಪ್ರಯತ್ನ ಮಾಡಿದರೆ ನಿಮ್ಮ ನನ್ನ ನಡುವಿನ ಸಂಬಂಧದ ಬಗ್ಗೆ ಪತ್ರಿಕೆಯಲ್ಲಿ ಬರೆಯುತ್ತೇನೆ. ಅಷ್ಟೇ ಅಲ್ಲ, ನಿಮ್ಮ ತಂದೆ ನಡೆಸುತ್ತಿರುವ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಪೊಲೀಸ್ ರೈಡ್ ಮಾಡಿಸುತ್ತೇನೆ' ಎಂಬ ಬೆದರಿಕೆ ಹಾಕತೊಡಗಿದ. ಸಹಜವಾಗಿ ಇಡೀ ಕುಟುಂಬದ ನೆಮ್ಮದಿ ಹಾಳಾಯಿತು.

ಇವನಿಗೆ ತಿಳಿಯದ ಹಾಗೆ ಮಗಳ ಮದುವೆ ಮಾಡಿ ಮುಗಿಸಿದರೆ ಮುಂದೆ ತಮ್ಮ ಬಾಳು ಹೇಗಾದರೂ ಆಗಲಿ ಎಂಬ ತೀರ್ಮಾನಕ್ಕೆ ರೆಡ್ಡಿ ದಂಪತಿ ಬಂದರು. ಹುಡುಗಿಗೆ ಒಂದು ಒಳ್ಳೆಯ ಸಂಬಂಧವೂ ಗೊತ್ತಾಯಿತು. ಈ ಸಂಬಂಧ ಒಪ್ಪಿದರೆ ಮಗಳು ವಿದೇಶದಲ್ಲಿ ನೆಲೆಸುತ್ತಾಳೆ. ನಂತರವಾದರೂ ಈ ಬಿಳಿಗಿರಿಯಿಂದ ಮುಕ್ತಿ ಸಿಗುತ್ತದೆ ಎಂಬುದು ರೆಡ್ಡಿಯ ಯೋಚನೆ. ಇದಕ್ಕೆ ಮಗಳೂ ಒಪ್ಪಿದಳು. ಆದರೆ, ಈ ವಿಷಯವನ್ನು ಹೇಗೋ ತಿಳಿದ ಬಿಳಿಗಿರಿ ಹಿಂದಿನ ದಿನದ ರಾತ್ರಿ ಫೋನ್ ಮಾಡಿ ನಾಳೆ ಬಂದು ಹುಡುಗನ ಮುಂದೆ ಎಲ್ಲಾ ವಿಚಾರ ಹೇಳುವುದಾಗಿ ಧಮಕಿ ಹಾಕಿದ. ಅದೇ ಕಾರಣಕ್ಕೆ ಇಂದು ರೆಡ್ಡಿ ತೀರಾ ತಲೆ ಕೆಡಿಸಿಕೊಂಡು ಪದೇ ಪದೇ ರಸ್ತೆಯ ಕಡೆ ನೋಡುತ್ತಿದ್ದಾನೆ.
--
ಬಂತು ಗುಳ್ಳೆನರಿ!

ಲಾಡ್ಜ್ ಮುಂದೆ ಕೆಂಪು ಬಣ್ಣದ ಸ್ಕೋಡಾ ಕಾರು ಬಂದು ನಿಂತಿತೆಂದರೆ ಸಾಕು ರೆಡ್ಡಿಯ ಎದೆ ಬಡಿತ ಹೊರಗೆ ಕೇಳಿಸುವಷ್ಟು ಗಟ್ಟಿಯಾಗಿ ಬಡಿದುಕೊಳ್ಳುತ್ತದೆ. ಯಾಕೆಂದರೆ, ಆ ಕಾರು ಬಿಳಿಗಿರಿಯದು ಎಂದು ಅವನಿಗೆ ಚೆನ್ನಾಗಿ ಗೊತ್ತಿದೆ. ಅನೇಕ ಮಾಂಸದ ಮನೆಗಳ ಅದೆಷ್ಟೋ ಹೆಣ್ಣುಮಕ್ಕಳು ಬೆವರು ಸುರಿಸಿ ರಾತ್ರಿ ಹಗಲು ದುಡಿದು ಸಂಪಾದಿಸಿದ ಹಣದಲ್ಲೂ ಪಾಲು ಪಡೆದು ಈ ಕಾರು ಪಡೆದಿದ್ದಾನೆ ಎಂಬ ಸತ್ಯವೂ ರೆಡ್ಡಿಗೆ ಗೊತ್ತು. ಆದರೆ, ಏನು ಮಾಡಲೂ ರೆಡ್ಡಿ ನಿಸ್ಸಾಹಯಕ. ಯಾಕೆಂದರೆ, ಅವನಿಗೆ ಪತ್ರಕರ್ತನೆಂಬ ಹಣೆಪಟ್ಟಿಯಿದೆ; ಅದೇ ಕಾರಣಕ್ಕೆ ಪೊಲೀಸ್ ಅಧಿಕಾರಿಗಳ ಸ್ನೇಹವಿದೆ, ರಾಜಕಾರಣಿಗಳ ಬೆಂಬಲವಿದೆ!

ಕಾರಿಳಿದು ಒಳಬರುತ್ತಿರುವ ಬಿಳಿಗಿರಿಯನ್ನು ಕಂಡ ರೆಡ್ಡಿ ಕೈ ಮುಗಿದು ಬೇಡಿಕೊಳ್ಳುತ್ತಾನೆ. ಆದರೆ, ಕೇಳುವುದಕ್ಕೆ ಬಿಳಿಗಿರಿ ಅನ್ನೋ ಪ್ರಾಣಿಗೆ ಮಾನವೀಯತೆ ಅನ್ನೋದು ಇದ್ದರೆ ತಾನೆ? ಇದ್ಯಾವುದಕ್ಕೂ ಸೊಪ್ಪು ಹಾಕದ ಅವನು ನೇರವಾಗಿ ಮನೆಯೊಳಗೆ ಹೋಗಿ ರೆಡ್ಡಿ ಮಗಳನ್ನು ತನ್ನ ಜೊತೆ ಬರುವಂತೆ ಆದೇಶಿಸುತ್ತಾನೆ. ಆದರೆ, ಇದನ್ನು ಮೊದಲೇ ಊಹಿಸಿದ್ದ ಅವಳು ನೇರವಾಗಿ ಮುಖದ ಮೇಲೆ ಕ್ಯಾಕರಿಸಿ ಉಗಿದು ನಿರಾಕರಿಸುತ್ತಾಳೆ. ಇಂಥ ಅಸಹ್ಯಗಳನ್ನು ಅದೆಷ್ಟೋ ನೋಡಿರುವ

ಅವನಿಗೆ ಇದೇನು ಮಹಾ ಲೆಕ್ಕ? ಮುಖದ ಮೇಲಿನ ಉಗುಳನ್ನು ಒರೆಸಿಕೊಂಡು 'ನೋಡಿಕೊಳ್ಳುತ್ತೇನೆ' ಎಂಬ ಧಮಕಿ ಹಾಕಿ ಹೊರಬಂದ. ಅದೇ ಸಮಯಕ್ಕೆ ಗಂಡಿನ ಕಡೆಯಿಂದ ಫೋನು ಬಂದು ಅಂದು ನಡೆಯಲಿರುವ ವಧು ಪರೀಕ್ಷೆ ಮುಂದೂಡಿರುವ ಬಗ್ಗೆ ತಿಳಿಸುತ್ತಾರೆ. ಇದರಿಂದ ರೆಡ್ಡಿ ಕುಟುಂಬ ಸ್ವಲ್ಪ ಮಟ್ಟಿಗೆ ನಿರಾಳವಾಗುತ್ತೆ ನಿಜ. ಆದರೆ, ಈ ಬಿಳಿಗಿರಿಯಿಂದ ಪಾರಾಗುವ ಮಾರ್ಗದ ಬಗ್ಗೆ ದಿಕ್ಕು ಕಾಣದೆ ಪರದಾಡುತ್ತಾರೆ.

ಮುಂದೇನಾಯ್ತು?

ಶತ್ರುವಿನ ಶತ್ರು ಮಿತ್ರ ಅಂತಾರೆ; ಇಲ್ಲಿ ಆಗಿದ್ದು ಅದೇ. ಈ ಬಿಳಿಗಿರಿ ಇದ್ದಾನಲ್ಲಾ ಇವನಿಗೆ ಸಜ್ಜನರನ್ನು ಕಂಡರೆ ಅವನ ಅಪ್ಪನಾಣೆಗೂ ಆಗೋದಿಲ್ಲ. ಒಳ್ಳೆಯ ವ್ಯಕ್ತಿಗಳ ಮೇಲೆ ಕೆಟ್ಟ ಸುದ್ದಿ ಹಬ್ಬಿಸೋದು

ಅವನ ಜಾಯಮಾನ. ಹಾಗಂತ ಅವನು ಹೇಳಿದ್ದೆಲ್ಲಾ ಸತ್ಯ ಎಂದು ನಂಬುವವರಿಲ್ಲ ಅದು ಬೇರೆ ಪ್ರಶ್ನೆ. ಆದರೂ ಮಾನವಂತರಾದವರಿಗೆ ಇವನ ಗಾಸಿಪ್ ಗಳಿಗೆ ಇರುಸು ಮುರುಸಾಗುವುದು ತಪ್ಪುತ್ತಿರಲಿಲ್ಲ. ಅಂಥ ಅನವಶ್ಯಕ ಗಾಸಿಪ್್ಗಳಿಗೆ ತುತ್ತಾಗಿದ್ದ ವ್ಯಕ್ತಿಯೊಬ್ಬರಿಗೆ ರೆಡ್ಡಿಯ ದುಃಖ ತಿಳಿಯಿತು. (ಅವರ ಹೆಸರು ಇಲ್ಲಿ ಅಪ್ರಸ್ತುತ) ಕೂಡಲೇ ಧಾವಿಸಿ ಬಂದ ಅವರು ರೆಡ್ಡಿಯ ಬೆನ್ನಿಗೆ ನಿಂತರು. ರೆಡ್ಡಿಯ ಹಿಂದೆ ಆ ಪ್ರಮುಖ ವ್ಯಕ್ತಿ ಇರುವುದನ್ನು ತಿಳಿದ ಬಿಳಿಗಿರಿ ಬಾಲ ಮುದುರಿಕೊಂಡು ಆ ಕಡೆ ಮುಖ ಹಾಕುವುದನ್ನು ಬಿಟ್ಟ. ಹಾಗಾಗಿ, ಯಾವುದೇ ಅಡ್ಡಿ ಇಲ್ಲದೆ ರೆಡ್ಡಿಯ ಮಗಳ ಮದುವೆಯಾಗಿದೆ. ಆಕೆ ಸದ್ಯ ಆಸ್ಟ್ರೇಲಿಯಾದಲ್ಲಿ ನೆಮ್ಮದಿಯಿಂದ ಇದ್ದಾಳೆ. ಬಿಳಿಗಿರಿ ಇನ್ನೂ ಇಂಥ ಹಲವು ಹೆಣ್ಣು ಮಕ್ಕಳ ಬಾಳು ಹಾಳು ಮಾಡುವ ಸಂಚು ಮುಂದುವರಿಸಿದ್ದಾನೆ. ಹೆಣ್ಣು ಹೆತ್ತವರೇ ಎಚ್ಚರ, ಆತ ಇನ್ನೂ ನಮ್ಮ ನಡುವೆ ಇದ್ದಾನೆ !
- ಅಶ್ವಪ್ರಭ

Friday, April 29, 2011

ತಪ್ಪಾಯ್ತು ತಿದ್ಕೋತೀನಿ!

ಹೌದು, ಹಾಗೊಂದು ತಪ್ಪೊಪ್ಪಿಗೆಯನ್ನು ನಿಮ್ಮಗಳ ಮುಂದೆ ಇಡಲೇಬೇಕಾಗಿ ಬಂದಿದೆ. ಎರಡು ಕಾರಣಕ್ಕಾಗಿ. ಮೊದಲನೆಯದಾಗಿ, ಮತ್ತೆ ಎಲ್ಲೊ ಒಂದು ಕಡೆ ಕೊಳೆಗೇರಿ ನಿರ್ಮಲನೆಯ ಕಾರ್ಯವನ್ನು ಮರೆತು ನನ್ನಷ್ಟಕ್ಕೆ ನಾನು ನನ್ನ ಕೆಲಸ, `ಸಖಿ' ನಿರ್ವಹಣೆಯಲ್ಲಿ ಮುಳುಗಿ ಹೋಗಿದ್ದೆ. ಕೆಲಸದ ಭರ, ಒತ್ತಡದಲ್ಲಿ ನಾನೇ ಕೈಗೆತ್ತಿಕೊಂಡಿದ್ದ ಮತ್ತು ಮೇಲಿಂದ ಮೇಲೆ ನೀವು ಹಕ್ಕೊತ್ತಾಯದಲ್ಲಿ ಮಂಡಿಸಿದ್ದ ಕೊಳೆಗೇರಿ ನಿರ್ಮೂಲನೆಯ ಈ ಆಂದೋಲನ ಅರ್ಧಕ್ಕೆ ನಿಂತು ಹೋಗಿತ್ತು. ಹಾಗಂತ ಅದನ್ನು ಮರೆತಿದ್ದೆ ಎಂದಲ್ಲ.

ಇಲ್ಲಿ ಕಾರಣಗಳು ಹಲವು. ಮೊದಲ ಆದ್ಯತೆ ನಿಮ್ಮೆಲ್ಲರ ನಿರೀಕ್ಷೆಯಂತೆ ಬರವಣಿಗೆಯನ್ನು ಮತ್ತೆ ಪ್ರಾರಂಭಿಸುವುದಾಗಿತ್ತು. ಮುಖ್ಯವಾಹಿನಿಯಲ್ಲಿನ ಬರಹ, ನೀರಿನ ಕುರಿತಾದ ಕೆಲಸಗಳನ್ನು ಪುನರಾರಂಭಿಸಲೇಬೇಕೆಂಬ ಒತ್ತಾಸೆಯೊಂದಿಗೆ ಉಳಿದೆಲ್ಲವನ್ನೂ ಬದಿಗೊತ್ತಿ ಲೇಖನಿಯನ್ನು ಹಿಡಿದಿದ್ದೆ. ಮೊದಲು ಈ ಕರ್ತವ್ಯ. ಜತೆಗೆ ಅನಿರೀಕ್ಷಿತವಾಗಿ ಜತೆಗೂಡಿದ ಸಖಿ. ಕನ್ನಡಕ್ಕೆ ಉತ್ತಮ ನಿಯತಕಾಲಿಕೆಯೊಂದನ್ನು ಕೊಡಲೇಬೇಕೆಂಬ ವ್ರತವನ್ನು ಸ್ವೀಕರಿಸಿ ಅದರಲ್ಲಿ ಮುಳುಗಿ ಹೋಗಿದ್ದೆ.

ನನಗೆ ಗೊತ್ತು, ಕೆಲಸವಿಲ್ಲದೇ ಮೂರು ತಿಂಗಳು ಮನೆಯಲ್ಲಿ ಕುಳಿತಿದ್ದಾಗ ನನ್ನನ್ನು ಸ್ಥಿತಪ್ರಜ್ಞ ರೀತಿಯಲ್ಲಿ ಇಟ್ಟದ್ದು ನಿಮ್ಮ ಬೆಂಬಲವೇ. ಜತೆಗೆ ಕೊಳೆಗೇರೆಯಂಥವನ ವಿರುದ್ಧ ಹೋರಾಟಕ್ಕೆ ನೈತಿಕ ಸ್ಥೈರ್ಯ ನೀಡಿದ್ದೂ ನೀವೇ. ಹೀಗಾಗಿ ನಿಮ್ಮ ಅಣತಿಯನ್ನು ಮೀರುವಂತೆಯೇ ಇಲ್ಲ. ಅದನ್ನು ಅರ್ಧಕ್ಕೆ ನಿಲ್ಲಿಸುವ ಪ್ರಮೇಯವೂ ಇಲ್ಲ.

ಕೆಲವು ಸತ್ಯ ಜಗತ್ತಿಗೆ ಗೊತ್ತಾಗಲೇಬೇಕು. ಅದನ್ನು ಎಲ್ಲಿಯವರೆಗೆ ಮುಚ್ಚಿಟ್ಟುಕೊಳ್ಳಲು ಸಾಧ್ಯ ? ಅಂಥ ಸತ್ಯವನ್ನು ಸಾರುವ ಕೆಲಸವನ್ನು ಮಾಡುವವರು ಯಾರು? ಎಲ್ಲರೂ `ಹಾಳಾಗಿ ಹೋಗಲಿ, ಅವನ ಕರ್ಮ, ಅವನು ಅನುಭವಿಸುತ್ತಾನೆ' ಎಂಬರ್ಥದಲ್ಲಿ ಸುಮ್ಮನಿದ್ದುಬಿಟ್ಟರೆ ಬೆಕ್ಕಿಗೆ ಗಂಟೆ ಕಟ್ಟುವವರು...ಅಲ್ಲಲ್ಲ ನರಿಗೆ ಬುದ್ಧಿ ಕಲಿಸುವವರಾದರೂ ಯಾರು ? ಜನರ ಮುಂದೆ ವಾಸ್ತವವನ್ನು ಬಿಚ್ಚಿಡಬೇಕು. ನಮ್ಮ ನಡುವಿನ ಸೋಗುಗಾರರ ಅಸಲೀ ವಿಕೃತಿಯನ್ನು ಸಾರಬೇಕು. ತನ್ಮೂಲಕ ಈ ಸಮಾಜ ಎಚ್ಚೆತ್ತುಕೊಳ್ಳುಬೇಕು. ತಾನು ಹೇಳಿದ್ದೇ ಸತ್ಯವೆಂದು ನಂಬಿಸಿ, ಮನಸ್ಸಿಗೆ ಬಂದ್ದದ್ದನ್ನು ಬರೆದು ಅಕ್ಷರ ಹಾದರ ಮಾಡುತ್ತಾ, ಅದನ್ನೇ ಸಾಧನೆಯೆಂದು ಬಿಂಬಿಸಿಕೊಳ್ಳುತ್ತಾ ವ್ಯಾಪಾರಕ್ಕಿಳಿದಿರುವ `ದೈತ್ಯ ಬರಹಗಾರ'ರನ್ನು ತಿರಸ್ಕರಿಸುವಂತಾಗಬೇಕು. ಕನ್ನಡ ಓದುಗರು ಸದಭಿರುಚಿಯುಳ್ಳವರು, ಕ್ರಿಯಾಶೀಲ, ರಚನಾತ್ಮಕವಾದುದಷ್ಟೇ ಓದುತ್ತಾರೆ ಎಂಬ ಸಂದೇಶ ಇಂಥ ಟ್ಯಾಬ್ಲಾಯ್ಡ್ ಪತ್ರಕರ್ತರಿಗೆ ತಲುಪಲೇಬೇಕು. ಅದಕ್ಕಾಗಿ ನನ್ನ ಆಂದೋಲನ.

ಅವನು ಅಸಹಾಯಕತೆಯ ಪರೋಚ್ಚ ಸ್ಥಿತಿಯನ್ನು ತಲುಪಿದ್ದಾನೆ. ಕೈಲಾಗದವನು ಮೈ ಪರಚಿಕೊಂಡ ಎಂಬಂತೆ ನನ್ನ ಹೆಂಡತಿ, ಹತ್ತು ವರ್ಷದ ಮಗಳ ಬಗ್ಗೆಯೆಲ್ಲಾ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದಾನೆ. ನಿಮ್ಮ ಬೆಂಬಲ ಇರುವವರೆಗೆ ಇಂಥದಕ್ಕೆಲ್ಲಾ ಬಗ್ಗುವವನು ನಾನಲ್ಲ. ಅವನ ವಿಕೃತಿಯ ಪರಾಕಾಷ್ಠೆಯ ಬಗ್ಗೆ ಪೋಲಿಸರಿಗೆ ದೂರಿದ್ದೇನೆ. ಸಮರ ಮುಂದುವರಿಯಲಿದೆ.

ಅದೆಲ್ಲಾ ಇರಲಿ, ಅವನ ವಿಚಾರ ಬದಿಗಿಟ್ಟು ಸದ್ಯಕ್ಕೆ ನಿಮಗೆ ನಾನು ಮಾಡುವ ಮನವಿ ಇಷ್ಟೇ, ನೀವು ಸಖಿಯನ್ನು ಓದಲೇಬೇಕು; ಹಾಗೂ ಓದುತ್ತಲೇ ಇರಬೇಕು.


Friday, April 1, 2011

`ಬೆಳದಿಂಗಳು'-ನಿಮಗೇನನ್ನಿಸುತ್ತೆ ?

`ಬೆಳದಿಂಗಳು'

ಸುಂದರವಾದ ಒಂದು ವಾಕ್ಯದಲ್ಲಿ ಇದನ್ನು ನಿಮ್ಮಿಂದ ವ್ಯಾಖ್ಯಾನಿಸಲು ಸಾಧ್ಯವೇ?


ಸಾಲು ಕಾವ್ಯಾತ್ಮಕವಾಗಿದ್ದರೆ ಒಳಿತು.


ಇಲ್ಲವೇ ಪಂಚ್ ನೀಡಲಿ.


ಕಲ್ಪನೆಗೆ ಸಾಕಷ್ಟು ಅವಕಾಶವಿದೆ.


ಕೊಡುತ್ತೀರಾ ಪ್ಲೀಸ್ !



ಉದಾ: ಬಂಡೆಯ ಮೇಲೆ ಚೆಲ್ಲಿ ಹೋದ ನೊರೆವಾಲ ತೆರೆ...


ಭೂಮಿಯ ಮಹಾಮಜ್ಜನಕ್ಕೆ ತಿಂಗಳನು ತಂದಿಟ್ಟ ಕೆನೆ ಹಾಲು...


ನಿಶಾ ದೇವಿಯ ಮುಖಾರವಿಂದಕೆ ಲೇಪಿತ ಕಾಂತಿ ವರ್ಧಕ...

Thursday, March 10, 2011

ಮತ್ತೆ ಬರೆಯುತ್ತಿದ್ದೇನೆ...ಅಂಕಣವನ್ನೂ ಸಹ

ಇದಕ್ಕೆ ಕ್ಷಮೆ ಇಲ್ಲ. ಖಂಡಿತಾ ನಾನಾಗಿದ್ದರೆ ಇದನ್ನು ಸಹಿಸುತ್ತಿರಲಿಲ್ಲ. ಸರಿ ಸುಮಾರು 22 ದಿನಗಳಿಂದ ಒಂದಕ್ಷರವನ್ನೂ ಬ್ಲಾಗ್ಗೆ ಬರೆಯಲಿಲ್ಲ. ನನಗೆ ಗೊತ್ತು ಪ್ರತಿದಿನವೂ ಹೊಸತರ ಕಾತರದಲ್ಲಿ ನೀವು ಬ್ಲಾಗ್ ತೆರೆಯುವುದು ಮತ್ತದೇ ಹಳೆಯ ಹೆಡ್ಡಿಂಗ್ಗಳನ್ನು ನೋಡಿ ಬೇಸರದಿಂದ ಮನದಲ್ಲೇ "ಇವನಿಗೇನಾಗಿದೆ ಧಾಡಿ, ಹೊಸ ಪತ್ರಿಕೆ ಸೇರುತ್ತಿದ್ದಂತೆಯೇ ನಮ್ಮನ್ನು ಮರೆತೇಬಿಟ್ಟಿದ್ದಾನಲ್ಲಾ ?" ಎಂದು ಮನದಲ್ಲೇ ಶಪಿಸುತ್ತಾ ವಿಂಡೋ ಕ್ಲೋಸ್ ಮಾಡುವುದು ನಡೆಸಿಯೇ ಇರುತ್ತೀರಿ. ನಿಮ್ಮ ಗೊಣಗಾಟದಲ್ಲೂ ಅರ್ಥ ಇದೆ. ಆದರೇನು ಮಾಡಲಿ. ಒಮ್ಮಿಂದೊಮ್ಮಲೇ ಬ್ಯುಸಿ ಆಗಿಬಿಟ್ಟದ್ದು ನಿಜ. ಇಂಥದ್ದೊಂದು ಕೆಲಸಬಾಕತನಕ್ಕಾಗಿ ಎರಡೂವರೆ ತಿಂಗಳು ನಾನು ತಪಸ್ಸು ಮಾಡಿದ್ದು ಗೊತ್ತೇ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಹೊಸ ಪತ್ರಿಕೆ, ಹೊಸ ಪರಿಸರ, ಹೊಸ ವ್ಯವಸ್ಥೆ, ಹೊಸ ಮುಖಗಳು...ಹೀಗೆ ಎಲ್ಲ ಹೊಸತರ ನಡುವೆ ನಾವು ಮಾತ್ರ ಮುಖ ಸಿಂಡರಿಸಿಕೊಂಡು, ತಲೆ ಬಗ್ಗಿಸಿ ಮೂದೇವಿ ಥರ ಕುಳಿತುಬಿಡೋದರಲ್ಲಿ ಏನು ಅರ್ಥವಿದೆ ಹೇಳಿ. ಎಲ್ಲರಿಗೂ ಹೊಂದಿಕೊಳ್ಳಬೇಕು. ನಗುನಗುತ್ತಾ ಸ್ವಾಗತಿಸಬೇಕು. ನಮ್ಮ ಸ್ನೇಹದ ತೆಕ್ಕೆಯೊಳಕ್ಕೆ ಅವರನ್ನು ಎಳೆದುಕೊಳ್ಳಬೇಕು. ಅವರನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮನ್ನು ಅವರಿಗೆ ಅರ್ಥ ಮಾಡಿಸಿಬೇಕು. ಈ ಎಲ್ಲದರ ನಂತರ ಹೊಸ ಸಾಫ್ಟ್ವೇರ್ ಕಲಿಕೆಯೊಂದು ತಲೆಬಿಸಿ. ಇವನ್ನೆಲ್ಲಾ ಅರಗಿಸಿಕೊಳ್ಳಬೇಕೆನ್ನುವಾಗಲೇ ಹೊಸ "ಸಖಿ' ನನ್ನ ಬೆನ್ನುಬಿದ್ದುಬಿಡಬೇಕೇ? ಅತ್ಯಂತ ತುಂಟಿಯಾಕೆ. ಮೊದಲ ನೋಟದಲ್ಲೇ ನನ್ನ ಸೆಳೆದುಬಿಟ್ಟಳು ಚಕೋರಿ. ಅಷ್ಟೆ, ಸತ್ಯ ಹೇಳಬೇಕೆಂದರೆ ಆಕೆ ಸಿಕ್ಕ ಕ್ಷಣದಿಂದ ಎಲ್ಲೆವೆಂದರೆ ಎಲ್ಲವೂ, ಈ ಜಗತ್ತನ್ನೇ ಮರೆತುಬಿಟ್ಟೆ ನಾನು. ಮೊದಲೇ ರೂಪವತಿ. ತುಸುವೇ ಹಚ್ಚಿಕೊಂಡರೂ ಆಪ್ತವಾಗಿಬಿಡುತ್ತಾಳೆ. ಆದರೆ ಪೆದ್ದುಮುಂಡೇದು. ಏನೇನೋ ಹರಟುತ್ತಾಳೆ, ಸ್ವಲ್ಪ ಶಿಸ್ತುಕಡಿಮೆ. ಒಂಚೂರು ಜತೆಗಿದ್ದು, ಗಮನಕೊಟ್ಟು ತಿದ್ದಿದರೆ ಜಗತ್ತನ್ನೇ ಗೆಲ್ಲಬಲ್ಲಳು. ನನಗೆ ಸಿಕ್ಕ ಈ ಹೊಸ ಗೆಳತಿಯನ್ನು ಎಲ್ಲ ರೀತಿಯಿಂದಲೂ ಸವರ್ಾಂಗ ಸುಂದರಗೊಳಿಸಿ ನಿಮ್ಮೆದುರು ತಂದು ನಿಲ್ಲಿಸುವವರೆಗೆ ನನಗೆ ಸಮಾಧಾನವಿರಲಿಲ್ಲ. ಅದಕ್ಕಾಗಿ ಇಷ್ಟು ದಿನ ನಿಮ್ಮ ಜತೆ ಈ ಬ್ಲಾಗ್ ತಾಣದಲ್ಲಿ ಸಂವಾದಿಸಲು ಆಗಲಿಲ್ಲ. ಅರ್ಥ ಮಾಡಿಕೊಳ್ಳುತ್ತೀರಲ್ಲಾ ? ಪ್ಲೀಸ್...

ನನಗೆ ಗೊತ್ತು ನಿಮ್ಮದು ಹುಸಿ ಮುನಿಸು. ಈ ಬರಹ ನೋಡುತ್ತಿದ್ದಂತೆಯೇ ಕೋಪ ಕರಗಿ ಹೋಗಿರುತ್ತದೆ. ಹಾಗೆಂದು ನಿಮ್ಮ ಅವ್ಯಾಜ್ಯ ಪ್ರೇಮಕ್ಕೆ ದ್ರೋಹ ಬಗೆಯಲಾರೆ. ಕೊಟ್ಟ ಮಾತಿಗೆ ತಪ್ಪಿ ನಡೆಯಲಾರೆ. ತೀರಾ ಪ್ರತಿ ದಿನವಲ್ಲದಿದ್ದರೂ ಆಗಾಗ, ನಿಯಮಿತವಾಗಿ ನಿಮ್ಮ ಜತೆ ಸಂವಾದಿಸುತ್ತಿರುತ್ತೇನೆ. ಈಗ ಹೇಳಿ, "ಕನ್ನಡ ಪ್ರಭ' ಹೇಗನ್ನಿಸುತ್ತಿದೆ ? ನಮ್ಮ ಬದಲಾವಣೆಗಳು ನಿಮಗೆ ಇಷ್ಟವಾಗುತ್ತಿದೆಯಲ್ಲವೇ ? ಹೊಸ ಪುರವಣಿ ಸಖಿಯ ನನ್ನ ಪಾಲಿನ ಮೊದಲ ಸಂಚಿಕೆಯ ಕೆಲಸವನ್ನು ನಿನ್ನೆಯಷ್ಟೇ ಮುಗಿಸಿ ನಿಮ್ಮೊಂದಿಗೆ ಹರಟಲು ಕುಳಿತಿದ್ದೇನೆ.


ಇನ್ನೇನು ಈ ತಿಂಗಳ ಹದಿನೈದರ ಹೊತ್ತಿಗೆ ಆಕೆಯೂ ನಿಮ್ಮೆದುರು ಬಂದುಬಿಡುತ್ತಾಳೆ. ಆಕೆಯನ್ನೂ ಒಂದಷ್ಟು ಹೊಸರೂಪದಲ್ಲಿ ನೋಡಲು ಪ್ರಯತ್ನಿಸಿದ್ದೇನೆ. ಅದು ಆಕೆಗೆ ಚೆಂದ ಕಾಣುತ್ತದೆಯೋ ಇಲ್ಲವೋ ಎಂಬುದನ್ನು ನೋಡಿ ಹೇಳುತ್ತೀರಲ್ಲಾ ? ಬಹಳಷ್ಟು ಅಲ್ಲದಿದ್ದರೂ ಒಂದಷ್ಟು ಆಕೆಯನ್ನು ಬದಲಿಸಿದೇನೆ. ಇಷ್ಟರವರೆಗೆ ಕೇವಲ ಮಹಿಳೆಯರ ಗೆಳತಿಯಷ್ಟೇ ಆಗಿ ಉಳಿದಿದ್ದ ಆಕೆ, ಇನ್ನು ಮುಂದೆ ಎಲ್ಲ ಯುವ ಮನಸ್ಸುಗಳ ಸನಿಹಕ್ಕೆ ಆಕೆಯನ್ನು ಕರೆದೊಯ್ಯಲು ನಿರ್ಧರಿಸಿದ್ದೇನೆ. ಹಾಗೆಂದು ಮತ್ತೆ ಯುವಕರಿಗಷ್ಟೇ ಸೀಮಿತವೆಂತಲ್ಲ. ಅನುಭವ ಮಾಗಿದ, ಮನಸ್ಸು ಇನ್ನೂ ಯವ್ವನವನ್ನು ಕಳೆದುಕೊಳ್ಳದ ಎಲ್ಲ ಸಹೃದಯೀಗಳು ಪ್ರೀತಿಯಿಂದ ಸ್ವೀಕರಿಸುವ ಸಂಚಿಕೆಗಳನ್ನು ತರಬೇಕೆಂಬ ಹಂಬಲ ನನ್ನದು. ಆ ನಿಟ್ಟಿನಲ್ಲಿ ನಿಮ್ಮ ಬೆಂಬಲ.


ಹಾಂ...ಮರೆತಿದ್ದೆ, ನಾಳೆಯಿಂದ ನನ್ನ ಅಂಕಣ "ಕನ್ನಡಪ್ರಭ"ದಲ್ಲಿ ಮತ್ತೆ ಪ್ರತ್ಯಕ್ಷವಾಗುತ್ತಿದೆ; ಒಂದಷ್ಟು ಬದಲಾವಣೆಗಳೊಂದಿಗೆ. ಹಾಗೆಂದು, ನೀರ ದಾಹವನ್ನು ಬತ್ತಿಸಿಕೊಂಡಿಲ್ಲ. ಬರಹದ ಕ್ಯಾನ್ವಾಸನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವ ಆಸೆ ನನ್ನದು. ನೀರಿಗಾಗಿ ಸೀಮಿತವಾದ ನನ್ನ ಅಂಕಣ ಆರಂಭವಾದ ದಿನವಿನ್ನೂ ನನಗೆ ಚೆನ್ನಾಗಿ ನೆನಪಿದೆ. ಅಂದು ನಾನು ಯಾರೆಂಬುದೇ ಓದುಗರಿಗೆ ಗೊತ್ತಿರಲಿಲ್ಲ. ಅಷ್ಟು ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದರೂ, ಸಂಯುಕ್ತ ಕನರ್ಾಟಕ, ಕರ್ಮವೀರ, ಕಸ್ತೂರಿ, ವಿಜಯ ಕನರ್ಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಆಗಾಗ ಬರೆಯುತ್ತಿದ್ದರೂ ನನ್ನದೇ ಅಂತ ಒಂದು ವೇದಿಕೆ ಸಿಕ್ಕಿರಲಿಲ್ಲ. ಅಂಥದ್ದೊಂದು ಅಪರೂಪದ ಅವಕಾಶವನ್ನು ಒದಗಿಸಿಕೊಟ್ಟವರು ನನ್ನ ನೆಚ್ಚಿನ ಸಂಪಾದಕ ಶ್ರೀ ವಿಶ್ವೇಶ್ವರ ಭಟ್ಟರು. ಮೂರ್ನಾಲ್ಕು ವರ್ಷಗಳಿಂದ ನೀರಿನ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರೂ ಅದನ್ನು ಬರೆದಿಡುವ, ನಿಯಮಿತವಾಗಿ ದಾಖಲಿಸಿಡುವ ಗೋಜಿಗೆ ಹೋಗಿರಲೇ ಇಲ್ಲ. ನನ್ನೊಳಗಿನ ಈ ಆಸಕ್ತಿಯನ್ನು ಗುರುತಿಸಿ ಶ್ರೀ ಭಟ್ಟರು ಅಂಕಣ ಬರೆಯಲು ಹಚ್ಚಿದರು. ಹಲವು ದಿನಗಳಿಂದ ಇಂಥದ್ದೊಂದು ಬಯಕೆಯನ್ನು ಅವರ ಮುಂದಿಟ್ಟು ಅವಕಾಶಕ್ಕಾಗಿ ಪೀಡಿಸುತ್ತಲೇ ಇದ್ದೆ. ನೀರಿನ ಬಗ್ಗೆ ಬರೆದರೂ ಎಷ್ಟು ಬರೆದಾನು ? ಅದು ಅಂಕಣಕ್ಕೆ ಸೂಕ್ತ ವಸ್ತುವೇ ? ಇಂಥ ಶುಷ್ಕ ವಿಷಯದ ಮೇಲೆ ಬರೆದರೆ ಓದುಗರು ಒಪ್ಪಿಕೊಂಡಾರೆ...ಎಂಬಿತ್ಯಾದಿ ಸಂಶಯಗಳು ಅವರಲ್ಲಿದ್ದಂತಿತ್ತು. ಬಹುಶಃ ಅವರಲ್ಲಿದ್ದುದಕ್ಕಿಂತ ಹೆಚ್ಚಿನ ಅನುಮಾನ ನನ್ನೊಳಗಿತ್ತು. ಆದರೆ ನೀರಿನ ಮೇಲಿರುವ ನನ್ನ ಪ್ರೀತಿ, ಮತ್ತು ಏನಾದರೂ ಹೊಸತನ್ನು ಕೊಡಬೇಕೆಂಬ ಹಂಬಲ, ಅದು ಅಭಿವೃದ್ಧಿಪರ ಬರವಣಿಗೇ ಆಗಿರಬೇಕೆಂಬ ಸಂಕಲ್ಪ ನನ್ನನ್ನು ನೀರಿನ ಮೇಲಿನ ಅಂಕಣಕ್ಕೆ ಪ್ರೇರೇಪಿಸಿತ್ತು.


ಅಂತೂ ಈಗ್ಗೆ ಆರು ವರ್ಷದ ಕೆಳಗೆ ಇದೇ ಮಾಚರ್್ ಮೊದಲ ಶುಕ್ರವಾರ "ನೀರು-ನೆರಳು" ಎಂಬ ಹೆಸರಿನಡಿ ನನ್ನ ಮೊದಲ ಅಂಕಣ ವಿಜಯ ಕನರ್ಾಟಕದ ಸಂಪಾದಕೀಯ ಪುಟದಲ್ಲಿ ಪ್ರಕಟವಾಗಿಯೇ ಬಿಟ್ಟಿತು. ಮೊದಲ ಲೇಖನವನ್ನು ಈಗ ಓದಿಕೊಂಡರೆ ನನಗೇ ನಾಚಿಕೆಯಾಗುತ್ತದೆ. ಅಷ್ಟೊಂದು ಬಾಲೀಶವಾಗಿತ್ತು. ಮುಂದಿನದಕ್ಕೆ ಸಾಕಷ್ಟು ಹಿಂಜರಿಕೆ ಕಾಡಿತು. ಆದರೆ ಓದುಗರು ಹಿಂಜರಿಯಲಿಲ್ಲ. ಅದನ್ನು ಮುಕ್ತವಾಗಿ ಸ್ವೀಕರಿಸಿದರು. ಸುಧಾರಣೆಗಾಗಿ ಕಾದರು. ಮೊದಲ ಹತ್ತು ಹನ್ನೆರಡು ವಾರದ ವರೆಗೂ ಅದೇ ಸ್ಥಿತಿ ಮುಂದುವರಿಕೆ. ನನ್ನ ಸಂಪಾದಕರೂ ತಾಳ್ಮೆ ಕಳೆದುಕೊಳ್ಳಲಿಲ್ಲ. ಅಷ್ಟರಲ್ಲಿ ಒಂದಷ್ಟು ಹಿಡಿತ ಸಿಕ್ಕಿತ್ತು. ಹಿತೈಷಿಗಳು, ವಿಷಯ ತಜ್ಞರು, ಹಿರಿಯರು ನನ್ನ ಬೆಂಬಲಕ್ಕೆ ನಿಂತರು. ಅಂಕಣವೊಂದಕ್ಕೆ ಬೇಕಾದ ಅಧ್ಯಯನ ಶಿಸ್ತು, ಗಾಂಭೀರ್ಯ, ನಿಯಮಿತತೆ, ಭಾಷೆ, ಓದಿಸಿಕೊಳ್ಳು ಶೈಲಿ, ವಿಯ ನಿರೂಪಣೆಗೆ ಅಗತ್ಯ ನವಿರು ಇತ್ಯಾದಿಗಳನ್ನು ಒಂದೊಂದಾಗಿಒ ಅವರು ನನಗೆ ಹೇಳಿಕೊಟ್ಟರು. ಅಲ್ಲಿಗೆ ನನ್ನಲ್ಲಿ ಒಂದು ರೀತಿಯ ವಿಶ್ವಾಸ ಮೂಡಿತ್ತು. ಇದನ್ನುಳಿದು ಮುಂದಿನದೆಲ್ಲವೂ ಓದುಗರದ್ದೇ ಸಿಂಹಪಾಲು. ಅವರು ನನ್ನ ಬೆನ್ನಿಗೆ ನಿಂತು ಕಾಯ್ದರು. ಆರು ವರ್ಷಗಳ ಬಳಿಕ ಇಂದು ನಾಡಿನಲ್ಲಿ ನನಗಿಂತ ನೀರು-ನೆರಳು ಜನಪ್ರಿಯ. ಆನಂತರ ಬೇರೆ, ಬೇರೆ ಜವಾಬ್ದಾರಿಗಳನ್ನು ಪತ್ರಿಕಾ ಕ್ಷೇತ್ರದಲ್ಲಿ ನಿರ್ವಹಿಸಿದ್ದೇನೆ. ಬೇರೆ ಅದೆಷ್ಟನ್ನೋ ಬರೆದಿದ್ದೇನೆ. ವೈಯಕ್ತಿಕವಾಗಿ ಅವೆಲ್ಲವೂ ಕೊಟ್ಟ ಖುಷಿಗಿಂತ ನೀರಿನ ಬಗೆಗಿನ ಬರಹ ನನ್ನಗೆ ತೃಪ್ತಿ ತಂದಿದೆ. ಅದು ನನಗೆ ತಂದುಕೊಟ್ಟ ಇಮೇಜಿನ ಮುಂದೆ ಉಳಿದೆಲ್ಲವೂ ಗೌಣ ಎಂದುಕೊಳ್ಳುತ್ತೇನೆ.


ನೀರಿನ ಬಗೆಗಿನ ನನ್ನ ಪ್ರಾಮಾಣಿಕ ಪ್ರೀತಿಯನ್ನು ಓದುಗರು ಗುರುತಿಸಿದ್ದಾರೆ. ಅಷ್ಟು ಸಾಕು. ಅದಕ್ಕಿಂತ ಇನ್ನೇನು ಬೇಕು ನನಗೆ ?ಇದೀಗ ಕನ್ನಡಪ್ರಭದಲ್ಲಿ ಮತ್ತೆ ಬರೆಯುವ ಹುಚ್ಚು ಸಾಹಸಕ್ಕೆ ಮುಂದಾಗುತ್ತಿದ್ದೇನೆ; ನೀವೆಲ್ಲ ನನ್ನ ಜತೆಗಿದ್ದೀರಿ ಎಂಬ ಧೈರ್ಯದೊಂದಿಗೆ. ನಾಳೆ ಅಂಕಣ ಓದಿ ಏನಾಗಿದೆ? ಏನಾಗಬೇಕಿತ್ತು ಎಂಬುದನ್ನು ತಿಳಿಸುತ್ತೀರಲ್ಲಾ ? ನಿಮ್ಮ ಉತ್ತರಕ್ಕಾಗಿ ಕಾದಿರುತ್ತೇನೆ. ಪ್ಲೀಸ್ ಮರೆಯದಿರಿ. ಬರಲೇ ?

Tuesday, February 22, 2011

ಪ್ರೀತಿಯ ಸೇಸೆಗೆ ಶಿರವೊಡ್ಡಿ...


ಆ ಸುಂದರ ಸಂಜೆಯ ಮಳೆಯಲ್ಲಿ ನೆನೆದು ತೊಪ್ಪೆಯಾಗಿಬಿಡಬೇಕೆಂಬ ತವಕ. ಹುಚ್ಚೆದ್ದು ಕುಣಿಯುವ ಉತ್ಸಾಹ....


ಅದೇಕೋ ಕಾಣೆ, ಕಳೆದು ಮೂರ‍್ನಾಲ್ಕು ದಿನಗಳಿಂದ ಬೆಂಗಳೂರೆಂಬ ಬೆಂಗಳೂರಿನ ವಾತಾವರಣ ಇನ್ನಿಲ್ಲದಂತೆ ಜನರನ್ನು ಕಾದು ಕಂಗೆಡಿಸಿಬಿಟ್ಟಿತ್ತು. ಮೈಮನಗಳೆಲ್ಲ ಗಾರು ಗಬರೆದ್ದುಹೋಗಿತ್ತು. ನಡುವೆಯೇ ಹಾದು ಹೋದ ಹುಣ್ಣಿಮೆಯ ಬೆಳದಿಂಗಳ ರಾತ್ರಿಯೂ ಸಹ ತಣ್ಣನೆಯ ಅನುಭವನ್ನು ಕಸಿದುಕೊಂಡುಬಿಟ್ಟಿತ್ತು. ಶಿವರಾತ್ರಿಗೆ ಇನ್ನೂ ಹದಿನೈದು ದಿನಗಳಿವೆ ಎಂಬಾಗಲೇ ಚಳಿ ಸುಳಿವಿಲ್ಲದಂತೆ ಓಡಿ ಹೋಗಿತ್ತು. ಅದೆಂಥದ್ದೋ ಅರ್ಥವಿಲ್ಲದ ಅಸಹನೆ, ಆಯಾಸ, ದುಗುಡಗಳು ಸುಳಿದಾಡುತ್ತಿದ್ದವು. ಒಂದಕ್ಕೂ ಉತ್ತರ ಸಿಕ್ಕುತ್ತಿರಲಿಲ್ಲ. ಸುದೀರ್ಘ ತಾಳ್ಮೆಯ ಎಳೆ ಎಲ್ಲೋ ಬಿಚ್ಚಿಕೊಳ್ಳಲಾರಂಭಿಸಿದ ಅನುಭವ. ವ್ಯಾಖ್ಯಾನಕ್ಕೆ ಸಿಗದ ಬೇಸರ. ಇವೆಲ್ಲದರ ಪ್ರತೀಕವೋ ಎಂಬಂತೆ ನಿನ್ನೆ ಸೋಮವಾರದ ಬೆಳಗು ಎಂದಿನಂತಿರಲಿಲ್ಲ. ಸೂರ್ಯ ಮೂಡಿ ತಾಸು ಎರಡಾದರೂ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ. ಹಾಗಿದ್ದರೂ ಒಳಗೊಳಗೇ ಬೆವರು ಕಿತ್ತು ಬರುತ್ತಿತ್ತು. ಸ್ವಲ್ಪ ಹೊತ್ತಷ್ಟೇ ಮತ್ತೆ ಬಿಸಿಲು ಕಣ್ಬಿಟ್ಟಿತ್ತು. ಬಹುಶಃ ಮನದ ಸ್ಥಿತಿಯೂ ಅದೇ ಆಗಿತ್ತೇನೋ ?


ಇದ್ದ ಬದ್ದ ಉತ್ಸಾಹವನ್ನೆಲ್ಲಾ ಒಟ್ಟುಗೂಡಿಸಿಕೊಂಡು ಹೊರಟರೂ ಲವಲವಿಕೆಯ ಸುಳಿವಿಲ್ಲ. ಬಹುತೇಕ ಅದೇ ಸ್ಥಿತಿಯಲ್ಲೇ ರಾಜವೀಥಿಯ ಮಗ್ಗುಲಲ್ಲೇ ಮೇಲೆದ್ದು ನಿಂತಿರುವ ‘ಕನ್ನಡಪ್ರಭ’ಕಟ್ಟಡದ ನಾಲ್ಕನೇ ಮಹಡಿಯನ್ನೇರಿದ್ದೆ. ಬಿಸಿಲು ಅದೇ ಪರಿ ಬಾರಿಸುತ್ತಲೇ ಇತ್ತು. ನೆಚ್ಚಿನ ಸಂಪಾದಕರ ಕೊಠಡಿಯನ್ನು ಪ್ರವೇಶಿಸಿದಾಗ ೩.೪೦. ಐದೇ ನಿಮಿಷದಲ್ಲಿ ಪತ್ರಿಕೆಯ ಸಹಾಯಕ ಸಂಪಾದಕ ಹುದ್ದೆಯ ಆದೇಶ ಕೈ ಸೇರಿತ್ತು. ಔಪಚಾರಿಕ ಪ್ರಕ್ರಿಯೆ ಮುಗಿದು ಹೊಸ ಸಹೋದ್ಯೋಗಿಗಳತ್ತ ಸ್ನೇಹದ ಹಸ್ತ ಚಾಚಿದರೆ ಅಭೂತಪೂರ್ವ ಪ್ರತಿಕ್ರಿಯೆ. ಯಾರೊಬ್ಬರೂ ಹೊಸಬರಂತೆ ಅನ್ನಿಸಲೇ ಇಲ್ಲ. ಅರ್ಧಕ್ಕಿಂತ ಹೆಚ್ಚುಮಂದಿ ವೃತ್ತಿಯಿಂದ ಪರಿಚಿತರೇ. ಉಳಿದವರದ್ದು ಹೊಸ ಮುಖ. ಒಂದು ಸುತ್ತು ಮುಗಿಸಿ ಕಿಟಕಿಯಿಂದ ಹೊರಗಿಣುಕಿದರೆ ಬೆಳಗ್ಗೆ ಕಂಡದ್ದಕ್ಕಿಂತಲೂ ದಟ್ಟ ಮೋಡ ಕಚೇರಿಯ ಮೇಲಿನ ಬಾನಿನಲ್ಲಿ ಆವರಿಸಿದಂತೆ ಕಂಡುಬರುತ್ತಿತ್ತು. ಒಮ್ಮೆ ಆಗಸದತ್ತ ಮುಖಮಾಡಿ ನಿಟ್ಟುಸಿರು ಬಿಟ್ಟು ಬರುವ ಬಯಕೆಯಾಗಿ ಹೊರ ಬಂದರೆ, ಇದ್ದಕ್ಕಿದ್ದಂತೆ ನಾಲ್ಕಾರು ಹನಿಗಳ ಸಿಂಚನ. ಹನಿಗಳ ಸಂಖ್ಯೆ ಬೆಳೆಯುತ್ತಲೇ ಹೋಯಿತು. ಇದ್ದಕ್ಕಿದ್ದಂತೆ ಧೋ ಗುಟ್ಟುತ್ತಾ ಮಳೆ ಸುರಿಯಲಾರಂಭಿಸಿತು. ಪಕ್ಕದಲ್ಲಿದ್ದ ಗೆಳೆಯರಾರೋ ಪ್ರಶ್ನಿಸಿದರು; ಇದೆಂಥಾ ಮಳೆ ? ಸ್ವಗತವೆಂಬಂತೆ ಆದರೆ, ಸ್ವರ ಬಿಟ್ಟೇ ಉಸುರಿದ್ದೆ ಒನಕೆಮಳೆ’, ಮುಸಲಧಾರೆ !


ಬಿಟ್ಟೂಬಿಡದೇ ಅರ್ಧ ತಾಸು ನನ್ನ ನೆಚ್ಚಿನ ಮಳೆ ಸುರಿಯುತ್ತಲೇ ಇತ್ತು. ಹೊಸ ಮಿತ್ರರಲ್ಲಿ ಕೆಲವರು ರೇಗಿಸಿದರು; ನೆರಳೂ ಸಿಕ್ಕಿತ್ತು, ಜತೆಗೆ ನೀರೂ ಬಂತು. ಅವರದನ್ನು ಹಾಗೇ ಸುಮ್ಮನೇ ಹೇಳಿದ್ದರೂ ನನ್ನ ಪಾಲಿಗೆ ನೀರು-ನೆರಳೆರಡೂ ಹೊಸ ಕಚೇರಿಯ ಬಾಗಿಲಲ್ಲೇ ದಕ್ಕಿತ್ತು.


ಕೊನೆಗೂ ಎರಡೂವರೆ ತಿಂಗಳ ವನವಾಸಕ್ಕೆ ಮಂಗಳ ಹಾಡಿದ್ದೆ. ಡಿಸೆಂಬರ್ ೮, ೨೦೧೦ರ ಮಧ್ಯಾಹ್ನ ವಿಜಯ ಕರ್ನಾಟಕವನ್ನು ತೊರೆದು ಬಂದ ಬಳಿಕ ಪತ್ರಿಕಾ ಕಚೇರಿಗಳ ಕಡೆ ಮುಖ ಹಾಕಿ ನೋಡಿರಲಿಲ್ಲ. ಇಷ್ಟು ಸುದೀರ್ಘ ವಿಶ್ರಾಂತಿಯೆಂದರೆ ನಿಜವಾದ ಪತ್ರಕರ್ತನೊಬ್ಬನಿಗೆ ಅದಕ್ಕಿಂತಲೂ ಕಠಿಣ ಶಿಕ್ಷೆ ಬೇರೊಂದು ಇರಲಾರದು. ಆದರೆ ಇದೊಂದು ರೀತಿಯ ಅದ್ಭುತ ಅನುಭವ. ಜೀವನದಲ್ಲಿ ಮ್ಮೆಯಾದರೂ ಇಂಥ ಸಮಯ ಬರದಿದ್ದರೆ ನಮ್ಮನ್ನು ನಾವು ಅವಲೋಕಿಸಿಕೊಳ್ಳಲೇ ಆಗದೇನೋ. ನಾವೇನು ಎಂಬುದನ್ನು ಕಂಡುಕೊಳ್ಳುವುದರ ಜತೆಗೆ ನಿಜವಾಗಿ ನಮ್ಮವರು ಯಾರು ಎಂಬುದನ್ನು ಅರಿಯಲು ಸಾಧ್ಯವಾದದ್ದು ಈ ಅವಯ ಲಾಭ. ಹಾಗೆ ನೋಡಿದರೆ ನಿಜವಾಗಿ ನನ್ನ ಜತೆಗೆ ನಿಂತವರು ನನ್ನ ಅಭಿಮಾನಿ ಓದುಗರು. ಯಾವುದೇ ಕಾರಣವಿಲ್ಲದೇ ಕೇವಲ ನನ್ನ ಬರಹಗಳಿಗಾಗಿಯೇ ನನ್ನನ್ನು ಪ್ರೀತಿಸಿದವರು ಅವರು. ನಾವು ಪತ್ರಿಕೆಯ ಒಳಗಿದ್ದಾಗಲೂ ಹೊರಗಿದ್ದಾಗಲೂ ಒಂದೇ ರೀತಿಯಲ್ಲಿ ಕಂಡವರು. ಏನಂದರೆ ಏನನ್ನೂ ಅಪೇಕ್ಷಿಸದೇ ನಿಷ್ಕಲ್ಮಷವಾದ ಪ್ರೀತಿಯ ಧಾರೆ ಹರಿಸಿದರು. ಅದೇ ನನ್ನಲ್ಲಿ ಧೈರ್ಯ, ವಿಶ್ವಾಸ ಮೂಡಿಸಿದವು. ಮತ್ತೆ ಹೊಸ ಸಾಹಸಕ್ಕೆ ಹುರಿದುಂಬಿಸಿದವು. ಯಾರ‍್ಯಾರೋ ಏನೇನೋ ಬರೆದರು, ಹೀಗಳೆದರು, ನಿಂದಿಸಿದರು, ಬಿದ್ದಾಗಲೇ ಕಲ್ಲು ಎಸೆಯಲು ಹವಣಿಸಿದರು, ಮತ್ತೆ ಕೆಲವರು ಹೊಗಳಿದರು, ಸಹಾನುಭೂತಿಯನ್ನೂ ವ್ಯಕ್ತಪಡಿಸಿದರು, ವೃಥಾ ಅನುಕಂಪ ತೋರಿದವರಿಗೂ ಕಡಿಮೆ ಇಲ್ಲ. ಇದಾವುದಕ್ಕೂ ನನ್ನ ಓದುಗರು ತಲೆ ಕೆಡಿಸಿಕೊಳ್ಳಲಿಲ್ಲ. ಅವರಿಗೆ ಗೊತ್ತಿರುವುದು ನಿಷ್ಕಪಟ ಪ್ರೀತಿ. ಅದನ್ನು ನಿರಂತರ ನೀಡಿ, ನನ್ನಲ್ಲಿ ಬರಹ ಪ್ರೀತಿಯನ್ನು ಹೆಚ್ಚಿಸಿದರು.


ಹೆಚ್ಚಿಗೆ ಹೇಳಲೇನು ? ಮತ್ತೆ ಲೇಖನಿಗೆ ಸಾಣೆ ಹಿಡಿದುಕೊಂಡು ಸಜ್ಜಾಗಿದ್ದೇನೆ ಓದುಗರ ಅಪ್ಪಣೆಯ ಪಾಲಿಸಲು. ಮತ್ತದೇ ತುಂತುರು ಮಳೆ ಮನಕ್ಕೆ ಹಿತ ನೀಡುತ್ತಿದೆ. ಒಬ್ಬೊಬ್ಬ ಓದುಗನ ಪ್ರೀತಿಯೂ ಒಂದೊಂದು ಹನಿಯ ರೂಪದಲ್ಲಿ ಸೇಸೆಯಾಗುತ್ತಿದೆ. ಅದಕ್ಕೆ ತಲೆ ಒಡ್ಡಿದೇನೆ....ಇನ್ನೇನು ಬೇಕು ಜೀವನದಲ್ಲಿ ?

Monday, February 7, 2011

ನಿಜವಾದ ಬ್ರೇಕಿಂಗ್ ನ್ಯೂಸ್

ಬೆಸ್ಟ್ ವಿಷಸ್ ಟು ವಿಷ್ ಭಟ್....

ಅಬ್ಬಾ, ಕೊನೆಗೂ ನಾವು ಕಾಯುತ್ತಿದ್ದ ಕಾಲ ಬಂದೇ ಬಿಟ್ಟಿದೆ. ‘ಒಂದಾಟ ಭಟ್ರುದ್ದು’ ಎಂಬ ವಿನೂತನ ನಾಟಕವನ್ನು ರಂಗದ ಮೇಲೆ ತರಲು ಅತ್ತ ನಾಟಕಕಾರ ಯಶವಂತ ಸರದೇಶಪಾಂಡೆ ರಿಹರ್ಸಲ್ ನಡೆಸುತ್ತಿದ್ದಾಗಲೇ ನಮ್ಮ ಭಟ್ರು ಆಟ ಶುರು ಮಾಡೇಬಿಟ್ಟಿದ್ದಾರೆ ಕಣ್ರಿ.


ನಿಜವಾದ ಬ್ರೇಕಿಂಗ್ ನ್ಯೂಸ್ ಇದು ಸ್ವಾಮಿ, ನಮ್ಮ ನೆಚ್ಚಿನ ಸಂಪಾದಕ ವಿಶ್ವೇಶ್ವರ ಭಟ್ಟರು ‘ಕನ್ನಡ ಪ್ರಭ’ದ ಮುಖ್ಯ ಸಂಪಾದಕರಾಗಿ ಇವತ್ತು (ಸೋಮವಾರ, ೦೭.೦೨.೨೦೧೧) ಮಧ್ಯಾಹ್ನ ಅಭಿಜಿನ್ ಮೂಹೂರ್ತದಲ್ಲಿ ಅಕಾರ ಸ್ವೀಕರಿಸಿದ್ದಾರೆ. ಕನ್ನಡದ ಓದುಗರಿಗೆ ಇದಕ್ಕಿಂತ ಒಳ್ಳೆಯ ಬ್ರೇಕಿಂಗ್ ನ್ಯೂಸ್ ಬೇರಾವುದು ಇದ್ದೀತು ? ಅದೇ ಕ್ಷಣಕ್ಕೆ ಕೆಲವರ ಪಾಲಿಗೆ ಇದು ಹಾರ್ಟ್ ಬ್ರೇಕಿಂಗ್ ನ್ಯೂಸ್ ಆಗಿಯೂ ಕಾಡಿರುತ್ತದೆ ಎಂಬ ಅರಿವು ಇದ್ದೇ ಇದೆ. ಏನು ಮಾಡೋದು ? ತಲೆಗೆ ಹೊಯ್ದ ನೀರು ಕಾಲಿಗೆ ಇಳಿಯಲೇ ಬೇಕಲ್ಲಾ ?

ಈ ಎರಡು ತಿಂಗಳಲ್ಲಿ ಯಾರ‍್ಯಾರೋ ತಲೆಗೆ ಏರಿಸಿಕೊಂಡಿದ್ದರು, ಯಾರ‍್ಯಾರದೋ ತಲೆ ತಿರುಗಿತ್ತು, ಇನ್ಯಾರ‍್ಯಾರೋ ತಲೆ ಕೆಡಿಸಿಕೊಂಡಿದ್ದರು...ಆಗೋದೆಲ್ಲಾ ಒಳ್ಳೇದಕ್ಕೇ ಎಂಬ ಪಾಸಿಟೀವ್ ಥಿಂಕಿಂಗ್ ನಮ್ಮದಾಗಿತ್ತು. ಒಂದು ರೀತಿಯಲ್ಲಿ ನಮ್ಮ ಸಾಮರ್ಥ್ಯದ ನೈಜ ಅರಿವು ಆದದ್ದೇ ಈ ಅವಯಲ್ಲಿ. ಎಲ್ಲಕ್ಕಿಂತ ಹೆಚ್ಚಾಗಿ ಈ ಅವಯಲ್ಲಿ ಬಹಳಷ್ಟು ‘ಮಿತ್ರರ’ ಮುಖವಾಡ ಕಳಚಿಬಿದ್ದಿದೆ. ಎಲ್ಲವನ್ನು ಕೊಡವಿಕೊಂಡು ಹೊಸ ಹುಮ್ಮಸ್ಸಿನೊಂದಿಗೆ ಆಟ ಶುರು ಮಾಡಿದ್ದಾರೆ ಭಟ್ಟರು. ನಾವುಗಳೂ ವೀರ ಯೋಧರಂತೆ ಭಟ್ಟರ ಸಮರ್ಥ ಸೇನಾಪತ್ಯದಲ್ಲಿ ಮುನ್ನುಗ್ಗಲು ಸಜ್ಜಾಗಿದ್ದೇವೆ. ಇನ್ನೇನು ಅಕೋ, ಇಕೋ ಎನ್ನುವಷ್ಟರಲ್ಲಿ ಒಂದೇ ಮನಸ್ಸಿನಲ್ಲಿ ಮತ್ತೆ ಓದುಗ ದೊರೆಯ ದಾಹ ತಣಿಸಲು ಹೊರಡುತ್ತೇವೆ.

ಒಬ್ಬೊಬ್ಬ ಓದುಗನೂ ತಾನೇ ಸಂಪಾದಕ ಹುದ್ದೆಗೇರಿದಷ್ಟು ಸಂಭ್ರಮ ಪಡುತ್ತಿದ್ದಾನೆ. ಒಬ್ಬೊಬ್ಬರ ಉತ್ಸಾಹವನ್ನೂ ನೀವು ನೋಡಬೇಕು. ಬೆಳಗ್ಗಿನಿಂದ ಫೋನ್ ಕಾಲ್‌ಗಳದ್ದೇ ಪಾರುಪತ್ಯ. ಖಂಡಿತಾ ಓದುಗರ ನಿರೀಕ್ಷೆ ನಮ್ಮನ್ನು ದಂಗಾಗಿಸಿದೆ. ಇಂಥದ್ದೊಂದು ಭೀಮ ಬಲದೊಂದಿಗೆ ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಲು ಹೊರಡುತ್ತೇವೆ. ನಿಮ್ಮೆಲ್ಲರ ಕಣ್ಕಾಪು ಎಚ್ಚರ ತಪ್ಪದಂತೆ ಸರಿದಾರಿಯಲ್ಲಿ ನಮ್ಮನ್ನು ಕೊಂಡೊಯ್ಯುತ್ತದೆ ಎಂಬ ವಿಶ್ವಾಸ ನಮಗಿದೆ. ಗುರಿ ಮುಟ್ಟುವರೆಗೆ ಇನ್ನು ವಿರಮಿಸುವ ಪ್ರಶ್ನೆಯೇ ಇಲ್ಲ. ಮನ ಹುಚ್ಚೆದ್ದು ಕುಣಿಯುತ್ತಿದೆ. ಹೆಚ್ಚು ಬರೆಯಲು ಇವತ್ತು ಸಾಧ್ಯವೇ ಇಲ್ಲ. ಪತ್ರಿಕೆಗಳಲ್ಲಿ ಬರೆಯಲು ಇನ್ನೂ ಸಾಕಷ್ಟಿದೆಯಲ್ಲಾ ? ಇನ್ನು ದಿನವಿಲ್ಲ. ಲೇಖನಿಗೆ ಸಾಣೆ ಹಿಡಿದುಕೊಳ್ಳಬೇಕು. ಬರಲೇ...?

ನಿಮ್ಮ
ಗಿಂಡಿ ಮಾಣಿ

Saturday, February 5, 2011

ಈ ಪರಿ ದ್ವೇಷ ಅವನ ತಪ್ಪಲ್ಲ, ಮಾನಸಿಕ ವಿಕೃತಿ


ದು ಮೂಲಭೂತ ಪ್ರಶ್ನೆ. ಕೊಡೆ ಹಿಡಿಯಲು ಕಾರಣವೇನು ?
ಉತ್ತರ ಬಹಳ ಸರಳ. ಒಂದೇ ಮಳೆ ಸುರಿಯುತ್ತಿರಬೇಕು. ಇಲ್ಲವೇ ಬಿಸಿಲು ಭಾರಿಸುತ್ತಿರಬೇಕು. ‘ನೀರು-ನೆರಳು’ಎರಡೇ ಕಾರಣಕ್ಕೆ ಕೊಡೆ ಉಪಯೋಗಿಸುವುದು. ಇದನ್ನು ಹೊರತಾಗಿ ಒಮ್ಮೊಮ್ಮೆ ಅದನ್ನು ಬಳಸುವುದೆಂದರೆ ಕೆಲ ‘ಛತ್ರಿ’ ಮಂದಿ ರಸ್ತೆಯಲ್ಲಿ ಕೆಸರು ಎರಚಿಕೊಂಡು ಹೋಗುತ್ತಿರುತ್ತಾರೆ. ಅದು ನಮ್ಮತ್ತ ರಾಚದಿರಲಿ ಎಂಬ ಕಾರಣಕ್ಕೆ ಕೊಡೆಯನ್ನು ಅಡ್ಡಲಾಗಿ ಹಿಡಿಯುವುದೂ ಉಂಟೆನ್ನಿ.


ಇದ್ದಕ್ಕಿದ್ದಂತೆ ಕೊಡೆಯ ವಿಚಾರವನ್ನು ಇಲ್ಲಿ ಪ್ರಸ್ತಾಪಿಸುವುದಕ್ಕೂ ಕಾರಣವಿದೆ. ಒಪ್ಪಿಕೊಳ್ಳುತ್ತೇನೆ. ಈ ಸಮಾಜದಲ್ಲಿ ನಮ್ಮ ಎಲ್ಲ ನಡೆಗಳಿಗೂ ನಾವು ಉತ್ತರಿಸಲೇಬೇಕಿಲ್ಲ. ಹಾಗೆ ಮಾಡಿದರೆ ಹೀಗೆ, ಹೀಗೆ ಮಾಡಿದರೆ ಹಾಗೆ ಪ್ರಶ್ನಿಸುವ ಜನ ಇದ್ದೇ ಇರುತ್ತಾರೆ. ನಮ್ಮ ಆತ್ಮ ಸಾಕ್ಷಿಗನುಗುಣವಾಗಿ ನಾವು ನಡೆದುಕೊಳ್ಳುವುದೇ ಸೂಕ್ತ. ಇನ್ನು ಕೆಲವೊಂದಕ್ಕೆ ಕಾಲವೇ ಉತ್ತರಿಸುತ್ತದೆ. ಹೀಗಿದ್ದೂ ಛತ್ರಿ ಮಂದಿ ವಿನಾಕಾರಣ ಕೆಸರು ಎರಚಲು ಬಂದಾಗ ಕೊಡೆಯನ್ನು ಅಡ್ಡ ಹಿಡಿಯಲೇಬೇಕಾಗುತ್ತದೆ. ಮಾತ್ರವಲ್ಲ ಅಂಥವರನ್ನು ನಿಲ್ಲಿಸಿ ಚೆನ್ನಾಗಿ ಉಗಿದು ಮುಖದ ನೀರಿಳಿಸವುದೂ ಅಗತ್ಯವಾಗುತ್ತದೆ.


ನಾನು ‘ನೀರ್‌ಸಾಧಕ್’ನನ್ನು ಬಿಟ್ಟು ‘ಗಿಂಡಿಮಾಣಿ’ಯ ಬೆನ್ನು ಹತ್ತಿದಾಗ ಬಹಳಷ್ಟು ಮಂದಿ ಇದರ ಔಚಿತ್ಯವನ್ನು ಪ್ರಶ್ನೆ ಮಾಡಿದರು. ಅದು ಸಹಜವೂ ಸಹ. ಹಾಗೆಂದು ಎಲ್ಲದಕ್ಕೂ ಉತ್ತರಿಸಲೇಬೇಕೆಂದೇನೂ ಇಲ್ಲ. ಏಕೆಂದರೆ ಇಂಥ ಬ್ಲಾಗ್‌ಗಳನ್ನು ಓದುವುದೂ, ಬಿಡುವುದು ಓದುಗರ ಸ್ವಾತಂತ್ರ್ಯಕ್ಕೆ ಬಿಟ್ಟ ವಿಚಾರ. ಪತ್ರಿಕೆಗಳಲ್ಲಿ ಅಂಕಣವಾದರೆ ಹಾಗಲ್ಲ. ಅಲ್ಲಿ ಓದುಗ ದೊರೆಯ ಆಜ್ಞೆಯೇ ಅಂತಿಮ. ಹೀಗಿದ್ದರೂ ನನ್ನ ತೀರಾ ಅಭಿಮಾನಿ ಓದುಗರಲ್ಲಿ ಕೆಲವರು; ಶ್ರೀನಿವಾಸ್, ಗುರು(ಮಯೂರ), ಹರಿಹರಭಟ್ ಮತ್ತಿತರರಂಥವರು ನರಿಕೊಳಗೆರೆ ಮತ್ತು ನಮ್ಮ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಪ್ರಶ್ನಿಸಿದರು. ಅಂಥ ಆತ್ಮೀಯ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವುದು ನನ್ನ ಕರ್ತವ್ಯ ಎಂಬ ಕಾರಣಕ್ಕೆ ಈ ಬರಹ.


ಒಂದು ವಿಚಾರವನ್ನು ಮೊದಲೇ ಸ್ಪಷ್ಟ ಪಡಿಸಿಬಿಡುತ್ತೇನೆ. ಕೊಳಗೆರೆಗೂ ನನಗೂ ಯಾವತ್ತೂ ಸ್ನೇಹವೆಂಬುದು ಇರಲೇ ಇಲ್ಲ. ಆತನ ಪತ್ರಿಕೆಯನ್ನು ನಾನು ಯಾವತ್ತೂ ಗಂಭೀರವಾಗಿ ಪರಿಗಣಿಸಿಯೂ ಇರಲಿಲ್ಲ. ಏಕೆಂದರೆ ಯಾವುದೇ ಅಧ್ಯಯನವಿಲ್ಲದೇ, ಹೆಚ್ಚಿನ ಶ್ರಮವಿಲ್ಲದೇ ಕೇವಲ ಭಾವನಾತ್ಮಕ ಬರಹಗಳಿಂದ, ಪ್ರಚೋದಕ ಸಾಹಿತ್ಯದಿಂದ, ಅತಿರಂಜಿತ ವರದಿಗಳಿಂದ, ರತಿ-ಅಪರಾಯ ವಿಷಯಗಳಿಂದಲೇ ಓದುಗರ ಮನಸ್ಸನ್ನು ಕದಡುವುದು ನನ್ನ ದೃಷಿಯಲ್ಲಿ ಅತ್ಯಾಚಾರವೆಂದೇ ಪರಿಗಣಿತ. ಅದೇನೂ ಮಹಾ ವಿದ್ಯೆಯೂ ಅಲ್ಲ; ಸಾಧನೆಯೂ ಅಲ್ಲ. ಆದರೆ ನೀರಿನಂಥ ಪಕ್ಕಾ ವಿಜ್ಞಾನವನ್ನು ಓದಿಸುವುದು ಎಂಥ ಸಾಹಸವೆಂಬುದು ನಾನು ನನ್ನಂಥವನಿಗೆ ಮಾತ್ರ ಗೊತ್ತು. ನಾಲ್ಕು ಗೋಡೆಗಳ ನಡುವೆ ಕುಳಿತು, ಇಂಟರ್‌ನೆಟ್ ಸಹಾಯದಿಂದಲೋ, ನಾಲ್ಕಾರು ಪುಸ್ತಕಗಳ ಸಾಲನ್ನು ಕದ್ದೋ ಬರೆಯವುದು ಇಂಥ ವಿಚಾರಗಳಲ್ಲಿ ಸಾಧ್ಯವೇ ಇಲ್ಲ. ಇದಕ್ಕೊಂದು ಅಧ್ಯಯನದ ಶಿಸ್ತು ಬೇಕು. ನಾಲ್ಕಾರು ಮಂದಿಯ ಜತೆ ಚರ್ಚಿಸಬೇಕು. ನೂರಕ್ಕೆ ನೂರು ಕ್ಷೇತ್ರ ಕಾರ್ಯವನ್ನು ಬೇಡುವ ಕೆಲಸವದು. ಕಳೆದ ಹತ್ತು ವರ್ಷ ನಾನಿದನ್ನು ಮಾಡಿದ್ದೇನೆ ಎಂಬುದಕ್ಕೆ ನನ್ನ ಓದುಗರೇ ಸಾಕ್ಷಿ.


ಕ್ಷುಲ್ಲಕ ವಿಷಯಗಳನ್ನು ನಾನು ಎಂದೂ ಬರೆದವನಲ್ಲ. ಹೀಗಾಗಿ ನನ್ನ ಅಂಕಣಗಳಲ್ಲಾಗಲೀ, ನಾನು ಕಾರ್ಯ ನಿರ್ವಹಿಸಿದ ಯಾವುದೇ ಪತ್ರಿಕಾ ವಿಭಾಗದಲ್ಲಾಗಲೀ ಈ ಕೊಳಗೆರೆಯ ವಿಚಾರವನ್ನು ಪ್ರಸ್ತಾಪಿಸುವ ಔಚಿತ್ಯ ಕಾಣಲಿಲ್ಲ. ಇಲ್ಲೂ ಬರೆಯುತ್ತಿರಲಿಲ್ಲವೇನೋ. ಆದರೆ ನಾವು ನೀರು ನೆರಳಿನಿಂದ ಹೊರಬಂದು ನಿಶ್ಯಸ್ತ್ರರಾಗಿ ನಿಂತದ್ದನ್ನು ನೋಡಿಯೇ ಈತ ಕಲ್ಲು ಬೀಸಲಾರಂಭಿಸಿದ್ದು. ಅದೂ ತಾನು ಗಾಜಿನ ಮನೆಯಲ್ಲಿ ನಿಂತು. ಹಾಗೆಂದು ನಾವೇನೂ ಆತ ಬೀಸಿದ ಕಲ್ಲಿಗೆಲ್ಲಾ ಗುರಿಯಾಗಬೇಕೆಂದೇನೂ ಇಲ್ಲವಲ್ಲಾ? ಅಥವಾ ನಾವು ಕನಿಷ್ಠ ಪ್ರತಿಭಟನೆಯನ್ನೂ ತೋರದ ದುರ್ಬಲರೂ ಆಗಿರಲಿಲ್ಲ.


ಶ್ರೀ ವಿಶ್ವೇಶ್ವರ ಭಟ್ ಮತ್ತು ಅವರ ನಡುವೆ ಸ್ನೇಹವಿದ್ದುದು ನಿಜ. ಭಟ್ಟರನ್ನು ಬಲ್ಲ ಎಲ್ಲರಿಗೂ ಗೊತ್ತು ಅವರ ಸ್ವಭಾವ ಎಂಥದ್ದು ಎಂಬುದು. ಸ್ನೇಹಶೀಲರಾದ ಅವರು ಯಾವತ್ತಿಗೂ ಯಾರ ಸ್ನೇಹವನ್ನೂ ನಿರಾಕರಿಸಿದ್ದಿಲ್ಲ. ಸುದ್ದಿಮನೆಯ ಒಳಗಿರಲಿ, ಹೊರಗಿರಲಿ ಅದನ್ನು ಸದುಪಯೋಗಪಡಿಸಿಕೊಂಡಿದ್ದಕ್ಕಿಂತ ದುರುಪಯೋಗಪಡಿಸಿಕೊಂಡವರೇ ಹೆಚ್ಚು. ಅದೇ ಸಾಲಿಗೆ ಈ ಕೊಳಗೆರೆಯೂ ಸೇರುತ್ತಾನೆ. ಸುದ್ದಿಮನೆಯ ಹೊರಗೆ ಇವನಾದರೆ ಒಳಗೆ ಆತನ ಒಂದಷ್ಟು ಶಿಷ್ಯರೂ ಇದ್ದಾರೆ. ಹಾಗೆಂದು ಯಾವತ್ತಿಗೂ ಇವ ನನ್ನ ಗೆಳೆಯ ಎಂದು ಭಟ್ಟರು ಸಾರಿಕೊಳ್ಳುತ್ತಾ ಹೋಗಲಿಲ್ಲ. ಇಂದಿಗೂ ಅವರದ್ದು ‘ಜನ್ಮೇಪಿ ಗೆಳೆತನ’ವೇ. ಅದನ್ನು ಉಳಿಸಿಕೊಳ್ಳುವುದು ಬಿಡುವುದು ಅವರವರಿಗೆ ಬಿಟ್ಟದ್ದು.


ಇನ್ನು ಪ್ರತಾಪ ಸಿಂಹ ಪಕ್ಕಾ ಸೈದ್ಧಾಂತಿಕ ಮನುಷ್ಯ. ಪ್ರತಾಪನ ವಿಚಾರಗಳು ನಮಗೆ ಸರಿ ಕಾಣುತ್ತಿಲ್ಲ ಎಂಬ ಮಾತ್ರಕ್ಕೆ ಆತನನ್ನು ವೈಯಕ್ತಿಕವಾಗಿ ಟೀಕಿಸುವುದು, ದ್ವೇಷಿಸುವುದು ಸರಿಯೇ ? ಇಲ್ಲಿ ಸಿದ್ಧಾಂತದ ವಿರೋಧ ಎನ್ನುವುದಕ್ಕಿಂತ ಪ್ರತಾಪನ ಜನಪ್ರಿಯತೆ, ಅಂಕಣಕಾರನಾಗಿ ಆತ ಬೆಳೆಯುತ್ತಿರುವ ವೇಗ ಕೊಳಗೆರೆಯಂಥವನಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂಬುದು ನನ್ನ ಭಾವನೆ. ಇದೂ ಸಹ ಅವರಿಬ್ಬರಿಗೆ ಸೇರಿದ್ದು.


ಹಾಗೆಂದು ನಾವುಗಳು ಪೂಜಿಸುವ ನಮ್ಮ ಸುದ್ದಿಮನೆಗೂ ಕೊಳಗೆರೆಯಂಥವನನ್ನು ಎಳೆದು ತಂದು, ಆತನ ಕಲ್ಯಾಣಗುಣಗಳನ್ನು ನಮ್ಮ ನಮ್ಮ ಅಂಕಣಗಳಲ್ಲಿ ಸಾರಬೇಕಿತ್ತೇ ? ಹಾಗೊಮ್ಮೆ ಮಾಡಿದ್ದರೆ ಕೊಳಗೆರೆಗೂ ನಮಗೂ ಉಳಿಯುವ ವ್ಯತ್ಯಾಸವಾದರೂ ಏನು ? ಅವನಂತೆ ಬೇರೆಯವರ ಬಗ್ಗೆ ಬರೆದೇ, ಯಾರದ್ದೋ ಚಾರಿತ್ರ್ಯ ವಧೆ ಮಾಡಿಯೇ ನಾವು ಅನ್ನ ಕಾಣಬೇಕಿಲ್ಲ; ಓದುಗರನ್ನು ಹೆಚ್ಚಿಸಿಕೊಳ್ಳಬೇಕಿಲ್ಲ. ಅದಕ್ಕಾಗಿ ಈವರೆಗೆ ಆತನ ಬಗ್ಗೆ ಎಲ್ಲ ಗೊತ್ತಿದ್ದೂ ಬರೆಯು ಪ್ರಸಂಗ ಬಂದಿರಲಿಲ್ಲ. ಮತ್ತು ನಮ್ಮ ಪತ್ರಿಕೆ ಅಂಥದ್ದಕ್ಕೆ ಸೂಕ್ತ ವೇದಿಕೆಯೂ ಅಲ್ಲ; ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವುದು ನಮ್ಮ ಜಾಯಮಾನವೂ ಅಲ್ಲ. ನನಗಂತೂ ಮೊನ್ನೆ ಮೊನ್ನೆ ನಾನು ‘ವಿಕ’ವನ್ನು ತೊರೆದು, ಆತ ನನ್ನ ಬಗ್ಗೆ ವೃಥಾ ಕೆಸರೆರಚುವವರೆಗೆ ಆತನೊಂದಿಗೆ ಸ್ನೇಹವೂ ಇರಲಿಲ್ಲ, ದ್ವೇಷವೂ ಇರಲಿಲ್ಲ.


ಹಾಗೆ ನೋಡಿದರೆ ಆ ಮನುಷ್ಯನ ಜತೆಗೆ ನಾನು ಮೊನ್ನೆ ಮೊನ್ನೆ ಫೊನ್‌ನಲ್ಲಿ ಮಾತನಾಡಿದ್ದೇ ಎರಡನೇ ಬಾರಿಯೋ, ಮೂರನೇ ಬಾರಿಯೋ. ಹಿಂದೊಮ್ಮೆ ಆತ ಕರ್ಮವೀರದ ಸಂಪಾದಕರಾಗಿದ್ದಾಗ ನಾನು ಆಗಷ್ಟೇ ಸಂಯುಕ್ತ ಕರ್ನಾಟಕಕ್ಕೆ ಸೇರಿದ್ದೆ. ಅದಾದ ಮೂರು ತಿಂಗಳಲ್ಲೇ ಆತನ ‘ಲೋಕ’ ಕೆ. ಶಾಮರಾವ್ ಅವರ ಮುಂದೆ ತೆರೆದುಕೊಂಡಿತ್ತು. ಅಷ್ಟೆ, ಅಕ್ಷರಶಃ ಅಲ್ಲಿಂದ ಓಡಿಸಿದ್ದರು ರಾಯರು. ಆನಂತರ ಕಪ್ಪು ಸುಂದರಿಯನ್ನು ಆರಂಭಿಸಿದ್ದು, ಪದ್ಮನಾಭ ನಗರದ ಸ್ಕೂಟರ್ ಗ್ಯಾರೇಜ್‌ನಲ್ಲಿ ಬೋರೆಂದು ಅತ್ತಿದ್ದು, ಯಾರ‍್ಯಾರೋ ಅವರ ತುತ್ತಿನ ಚೀಲ ತುಂಬಿದ್ದು, ಕೊನೆಗೂ ಪ್ರತಿಭಾ ನಂದಕುಮಾರ್ ಜತೆಗೆ ಬಂದು ಸಂಸ್ಥೆಗೆ ಕೊಡಬೇಕಿದ್ದ ಬಾಕಿ ಹಣವನ್ನು ಕಟ್ಟಿ ತಮ್ಮ ದ್ವಿಚಕ್ರ ವಾಹನವನ್ನು ಬಿಡಿಸಿಕೊಂಡು ಹೋಗಿದ್ದು, ವರ್ಷದಲ್ಲಿ ವಾರದ ಅಚ್ಚರಿಯೆನ್ನುತ್ತಲೇ ಬೊಗಳೆ ಬಿಟ್ಟು, ಸ್ವ ಕುಚ ಮರ್ಧನ ಮಾಡಿಕೊಳ್ಳುತ್ತಲೇ ಮತ್ತೆ ನಿಗರಿಕೊಂಡದ್ದು ಎಲ್ಲವೂ ಇತಿಹಾಸ...


ಆಗ್ಯಾವತ್ತೂ ಆತನನ್ನು ನೇರಾ ನೇರವಾಗಿ ಮಾತನಾಡಿಸಿದ್ದಿರಲಿಲ್ಲ. ಇದಾಗಿ ಸರಿ ಸುಮಾರು ಹತ್ತು ಹದಿನೈದು ವರ್ಷಗಳೇ ಕಳೆದಿದ್ದಿರಬಹುದು. ಒಂದು ದಿನ, ಅಲ್ಲಲ್ಲ...ರಾತ್ರಿ, ಇಂಥದ್ದೇ ‘ಮದ್ಯ’ರಾತ್ರಿ ಶ್ರೀ ವಿಶ್ವೇಶ್ವರ ಭಟ್ಟರ ಮನೆಯ ಮಹಡಿಯ ಮೇಲೆ, ತೀರಾ ಮರೆತು ಹೋದವನಂತೆ, ಹೊಸದಾಗಿ ಪರಿಚಯ ಮಾಡಿಕೊಂಡು ‘ಓ ಅಪ್ಪಿ...ಆರಾಮಿದ್ಯನೋ...ಮತ್ತೇನೋ ಮಾಣಿ...’ ಎಂದು ಪಕ್ಕಾ ಹವ್ಯಕ ಶೈಲಿಯಲ್ಲೇ ನನ್ನನ್ನು ಮಾತನಾಡಿಸಿದ್ದ. ಇನ್ನಿಲ್ಲದ ಅಚ್ಚೆಯಿಂದ ಬಿಗಿದಪ್ಪಿಕೊಂಡು ಬೆನ್ನು ಸವರಿದ್ದ. ಇಂಥವೆಲ್ಲ ಕಲೆಯಲ್ಲಿ ಆತ ನಿಷ್ಣಾತ ಎಂಬುದು ಗೊತ್ತಿದ್ದದ್ದೇ. ಆದರೂ ಸೌಜನ್ಯ ಮೀರಲಾರದೇ ಒಂದೆರಡು ಮಾತನಾಡಿ ಬಂದಿದ್ದೆ.


ಅದಾದ ಮೇಲೆ ಆತ ಮಾತನಾಡಿದ್ದು ನಾನು ‘ಲವಲವಿಕೆ’ಯ ಮುಖ್ಯಸ್ಥನಾದ ಮೇಲೆಯೇ. ಯಾವುದೋ ಲೇಖನ, ಯಾರ ಬಗ್ಗೆಯೋ ಬರೆದು ಕಳುಹಿಸಿದ್ದ. ಬಹುಶಃ ಅದನ್ನು ಪ್ರಕಟಿಸಲೇಬೇಕೆಂದು ಭಟ್ಟರ ಮೇಲೆ ಒತ್ತಡವನ್ನೂ ತಂದಿದ್ದಿರಬೇಕು. ಅದು ನನ್ನ ಟೇಬಲ್‌ಗೆ ಬರುವವರೆಗೂ ಈ ಮಹಾನುಭಾವನ ಲೇಖನವೆಂಬುದು ನನಗೆ ಅರಿವಿರಲಿಲ್ಲ. ಅಷ್ಟರಲ್ಲಾಗಲೇ ಅವರೇ ಪೋನ್ ಮಾಡಿದ್ದರಿಂದ ವಿಷಯ ಗೊತ್ತಾಯಿತು. ಆ ಹೊತ್ತಿಗಾಗಲೇ ವಿಜಯ ಕರ್ನಾಟಕಕ್ಕೆ ತನ್ನ ಎಂದಿನ ಹಳಸಲು, ಯಾವತ್ತೋ ಬರೆದಿಟ್ಟ (ವಾರದ ಅಚ್ಚರಿಯಲ್ಲಿ ಪ್ರಕಟಗೊಂಡು, ಪುಸ್ತಕವಾಗಿಯೂ ಹೊರ ಬಂದ) ಕಂತೆ ಪುರಾಣವನ್ನು ಹೊಚ್ಚ ಹೊಸ ವಿಚಾರವೆಂಬಂತೆ ಕೊಡುತ್ತಿದ್ದ. ಹತ್ತು ವರ್ಷಗಳಿಂದ ಅದು ಪ್ರಕಟಗೊಳ್ಳುತ್ತಾ ಜಾಗ ತಿನ್ನುತ್ತಲೂ ಇತ್ತು. ಇದೀಗ ಲವಲವಿಕೆಗೂ ಲೇಖನ ಕೊಡುತ್ತಿದ್ದಾನೆಂಬುದು ನನಗೆ (ಬಹುಶಃ ನಮ್ಮ ಸಂಪಾದಕರಿಗೆ ಸಹ ಅಂದುಕೊಳ್ಳುತ್ತೇನೆ) ನುಂಗಲಾರದ ತುತ್ತಾಗಿತ್ತು. ಇದ್ಯಾವ ‘ಕರ್ಮ’ ಗಂಟು ಬಿತ್ತು ಎಂಬ ಮನದಿಂಗಿತ ಅರಿವಿಲ್ಲದೇ ಸ್ವಗತ ರೂಪ ಪಡಕೊಂಡಿತ್ತು. ಅದೇ ನಾನು ಮಾಡಿದ ಮೊದಲನೆಯ ತಪ್ಪೇನೋ. ನಾನು ತೀರಾ ಅಕ್ಕರೆಯಿಂದ ರೂಪಿಸುತ್ತಿರುವ ಲವಲವಿಕೆಯಲ್ಲಿ ಇಂಥ ಲೇಖನಗಳನ್ನು (ರಾಜಕಾರಣಿಯೊಬ್ಬರ ಬಗ್ಗೆ ಬರೆದು ಕಳುಹಿಸಿದ್ದ) ನಾನು ನಿರೀಕ್ಷಿರಲಿಲ್ಲ. ಹೀಗಾಗಿ ಅದನ್ನು ‘ಕರ್ಮ’ ಎನ್ನದೇ ವಿ ಇರಲಿಲ್ಲ. ನಮ್ಮ ಪತ್ರಿಕಾ ಕಚೇರಿಯೊಳಗೇ ಇದ್ದು ಆತ ಬಿಸಾಕುವ ಬಿಸ್ಕೆಟ್‌ಗೆ ಜೊಲ್ಲು ಸುರಿಸುತ್ತಾ ಕದ್ದು ಕಚೇರಿಯ ಆಂತರಿಕ ವಿಚಾರಗಳನ್ನೂ ಆತನಿಗೆ ಪೂರೈಸುತ್ತಿದ್ದ ನಾಯಿಗಳು ಈ ‘ಕರ್ಮ’ಕ್ಕೆ ಉಪ್ಪು ಖಾರ ಸೇರಿಸಿ ತಕ್ಷಣ ವರದಿ ಮಾಡಿದರು. ಅಲ್ಲಿಂದಲೇ ಆತ ಸಮಯಕ್ಕಾಗಿ ಕಾಯುತ್ತಿದ್ದಿರಬೇಕು.


ಅದು ಬಿಟ್ಟರೆ ನಾನು ಶ್ರೀ ಭಟ್ಟರನ್ನು ಪತ್ರಿಕೋದ್ಯಮದಲ್ಲಿ ಮಾದರಿ ವ್ಯಕ್ತಿಯನ್ನಾಗಿ ಸ್ವೀಕರಿಸಿದ್ದೇನೆ ಎಂಬುದೂ ಅವನ ಇಂಥ ಕೃತ್ಯಕ್ಕೆ ಕಾರಣವಾದರೆ ಅದಕ್ಕೆ ನಾನು ಹೊಣೆಯಲ್ಲ. ಭಟ್ಟರಿಗಿಂತ ಯೋಗ್ಯ ವ್ಯಕ್ತಿ ಸದ್ಯಕ್ಕೆ ನನಗೆ ಪತ್ರಿಕೋದ್ಯಮದಲ್ಲಿ ಬೇರಾರೂ ಕಾಣುತ್ತಿಲ್ಲ. ಒಂದೊಮ್ಮೆ ಅಂಥ ಯೋಗ್ಯತೆಯನ್ನು ಆತ ಪ್ರದರ್ಶಿಸುವ ಕನಸನ್ನೂ ನಾವಿಂದು ಕಾಣಲು ಸಾಧ್ಯವಿಲ್ಲ. ಛೆ, ಎಂಥಾ ಅಸಂಬದ್ಧ ಹೋಲಿಕೆ; ಕ್ಷಮಿಸಿ.


ಆತ ನನ್ನನ್ನು ದ್ವೇಷಿಸಲು ಇರುವ ಇನ್ನೊಂದು ಕಾರಣವೆಂದರೆ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ. ಅನುಮಾನವೇ ಇಲ್ಲ, ನೂರಕ್ಕೆ ನೂರು ಶ್ರೀಗಳನ್ನು ನಾನು ಅಪಾರವಾಗಿ ಗೌರವಿಸುತ್ತೇನೆ. ಅದು ವ್ಯಕ್ತಿಗತವಾಗಿಯಷ್ಟೇ ಇರುವ ಪ್ರೀತಿಯಲ್ಲ. ಗೋ ಸಂರಕ್ಷಣೆಯ ನಿಟ್ಟಿನಲ್ಲಿ ಅವರು ಮಾಡಿದ ಕೆಲಸವೇ ಅಂಥದ್ದು. ತಮ್ಮ ಇಡೀ ಜೀವನವನ್ನು ಇಂಥ ಒಂದು ಅಭಿವೃದ್ಧಿಪರ ಕೆಲಸಕ್ಕೆ ಸಮರ್ಪಿಸಿಕೊಂಡದ್ದು ಸಾಮಾನ್ಯದ ಮಾತಲ್ಲ. ಅಂಥ ಶಕ್ತಿಯನ್ನು ಗೌರವಿಸುವ ಹೆಮ್ಮೆ ನನಗಿದೆ. ಒಂದೊಮ್ಮೆ ಅಂಥವರಿಗೆ ‘ಗಿಂಡಿಮಾಣಿ’ಯಾಗಿ ಸೇವೆ ಸಲ್ಲಿಸುವ ಭಾಗ್ಯ ನನ್ನದಾದರೆ ನನ್ನ ಜೀವನಕ್ಕಷ್ಟೇ ಅಲ್ಲ, ನನ್ನ ನೀರಿನ ಕೆಲಸಕ್ಕೊಂದು ಸಾರ್ಥಕ್ಯ. ಏಕೆಂದರೆ ಸಾಮಾಜಿಕ ಕಳಕಳಿಯ ವಿಚಾರದಲ್ಲಿ ಅಷ್ಟೊಂದು ಕಮಿಟೆಡ್ ಮನಸ್ಸು ಶ್ರೀಗಳದ್ದು.


ಇವು ಮೂರೇ ಕಾರಣಕ್ಕೆ ಕೊಳಗೆರೆಗೆ ನನ್ನ ಬಗ್ಗೆ ಈ ಪರಿಯ ದ್ವೇಷವಾದರೆ ನಾನೇನೂ ಮಾಡಲಿಕ್ಕಾಗುವುದಿಲ್ಲ. ದ್ವೇಷಕ್ಕೆ ಪ್ರತಿಯಾಗಿ ನನ್ನದು ಸಣ್ಣದೊಂದು ವಿಷಾದ ಪೂರಿತ, ಅಯ್ಯೋ ಎನ್ನುವ ಅನುಕಂಪಯುಕ್ತ ನಗೆಯೊಂದೇ ಉತ್ತರವಾಗುತ್ತದೆ.


ಆದರೆ, ಅಸಲಿ ಸಂಗತಿ ಅದಲ್ಲ. ಆತನಿಗೆ ದ್ವೇಷ, ವ್ಯಂಗ್ಯ, ಟೀಕೆ, ಕುಹಕ, ಕಾಮ ವಿಕೃತಿಗಳೇ ಬದುಕು. ಒಂದೊಮ್ಮೆ ಆತನಿಗೆ ದ್ವೇಷಿಸಲು ಯಾರೂ ಸಿಗಲಿಲ್ಲ ಎಂತಾದರೆ ತನ್ನನ್ನೇ ತಾನು ದ್ವೇಷಿಸಿಕೊಳ್ಳುತ್ತಾನೆ. ಆತ ತನ್ನ ಹೆಂಡತಿಯರನ್ನೂ, ಮಕ್ಕಳುಗಳನ್ನೂ ದ್ವೇಷಿಸದೇ ಬಿಟ್ಟವನಲ್ಲ. ಅದೊಂದು ಮಾನಸಿಕ ವಿಕೃತಿ; ಮನೋರೋಗ. ಬೇಕಿದ್ದರೆ ಮನೋರೋಗ ತಜ್ಞರನ್ನು ಕೇಳಿ ನೋಡಿ. ಒಬ್ಬೊಂಟಿಯಾಗಿ ಬೆಳೆದವರಲ್ಲಿ, ಅನಾಥ ಪ್ರಜ್ಞೆ ಕಾಡುತ್ತಿರುವವರಲ್ಲಿ, ಈ ಸಮಾಜದ ನಿಕೃಷ್ಟೆಗೆ, ಅವಹೇಳನಕ್ಕೆ ಗುರಿಯಾದವರಲ್ಲಿ ಇಂಥ ವಿಕೃತಿಗಳು ಕಂಡುಬರುತ್ತವೆ.


ಅದು ಅವನ ತಪ್ಪಲ್ಲ. ಹುಟ್ಟುವ ಮೊದಲೇ ಅಪ್ಪನಿಗೆ ಈತ ಬೇಡವಾಗಿದ್ದ. ಕೈ ಮೀರಿ ಹುಟ್ಟಿದ ಈತನನ್ನು ಮಗ ಎಂದುಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ತಂದೆಯೇ ಇಲ್ಲದವನಾದ ಮೇಲೆ ಇನ್ನು ತುಂಬು ಕುಟುಂಬದ ಮಾತಂತೂ ದೂರವಾಯಿತು. ತಾಯಿಯೊಬ್ಬಳೇ ಪ್ರೀತಿಗೆ ದಿಕ್ಕೂ. ಅದನ್ನಾದರೂ ಪೂರ್ಣ ಕಾಣಲು ಈತನೊಳಗಣ ಅಸಹನೆ ಬಿಡಲಿಲ್ಲ. ಸಮಾಜದ ಕುಹಕ, ಟೀಕೆಗಳಿಗೆ ಪ್ರತಿಯಾಗಿ ಬಾಲ್ಯದಿಂದಲೇ ದ್ವೇಷ, ಅಸಹನೆಗಳು ಈತನ ಮೈಗೂಡಿದ್ದರೆ ಅದಕ್ಕೆ ಯಾರು ಹೊಣೆ ? ಹುಟ್ಟಿಸಿದವನ ಬುದ್ಧಿವಂತಿಕೆ ರಕ್ತಗತವಾಗಿ ಬಂದ ಮಾತ್ರಕ್ಕೆ ಬೆಳೆದ ವಾತಾವರಣವೂ ಅದಕ್ಕೆ ಪೂರಕವಾಗಿರಬೇಕೆಂಬುದೇನೂ ಇಲ್ಲವಲ್ಲಾ? ಸಂಸ್ಕಾರ ಇಲ್ಲದ ಮಕ್ಕಳು ಏನಾಗುತ್ತಾರೆ ಎಂಬುದಕ್ಕೆ ಈತ ಸ್ಪಷ್ಟ ಉದಾಹರಣೆ.


ಬದುಕಿನಲ್ಲಿ ನಿರಂತರ ಕಾಡಿದ ಅಭದ್ರತೆ, ಈ ಸಮಾಜದ ಬಗ್ಗೆ ಇದ್ದ ತಿರಸ್ಕಾರ, ಹುಟ್ಟಿನಿಂದಲೇ ಬಂದ ಚಾಂಚಲ್ಯ, ಬೆಳೆಯುತ್ತಾ ದೊರೆತ ಸಹವಾಸ, ಒಳಗೊಳಗೇ ಬುಸುಗುಡುವ ಕಾಮ ವಿಕೃತಿ, ಇವಕ್ಕೆಲ್ಲಾ ನೀರೆರದ ಅನಿರೀಕ್ಷಿತ ಕೀರ್ತಿ ಮತ್ತು ಸಿರಿವಂತಿಕೆ ಕೊಳಗೆರೆಯಂಥವನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ.
ವ್ಯಕ್ತಿಯೊಬ್ಬನ ಮಾನಸಿಕ ಅಸಮತೋಲನ ಆತನಿಗಷ್ಟೇ ಮಾರಕವಲ್ಲ. ಕುಟುಂಬ ಮತ್ತು ಸಮಾಜಕ್ಕೂ ಕಂಟಕ ಎಂಬುದಕ್ಕೆ ಇದು ಜ್ವಲಂತ ನಿದರ್ಶನ. ಅಯ್ಯೋ ಎನ್ನುವ ಒಂದೇ ಒಂದು ಅನುಕಂಪವನ್ನಲ್ಲದೇ ನಾನು, ನನ್ನ ತಲೆಮಾರಿನವರು ಬೇರಿನ್ನೇನು ಕೊಡಲು ಸಾಧ್ಯ? ಏಕೆಂದರೆ ಆಗಲೇ, ಬಾಲ್ಯದಲ್ಲೇ ಈತನನ್ನು ಆದರಿಸಿ, ಪ್ರೀತಿಯಿಂದ ಒಲಿಸಿ ಸರಿದಾರಿಗೆ ತಂದಿದ್ದರೆ ಇವತ್ತಿನ ಸಮಾಜದ ಎಷ್ಟೋ ಹೆಣ್ಣುಮಕ್ಕಳು ಜೀವನವಿಡೀ ಕಣ್ಣಿರಿನಲ್ಲಿ ಕೈತೊಳೆಯುವುದು ತಪ್ಪುತ್ತಿತ್ತು. ಎಷ್ಟೋ ತಂದೆ-ತಾಯಂದಿರ ಬಸಿರು ಸುಡುವುದು ನಿಲ್ಲುತ್ತಿತ್ತು. ಎಷ್ಟೋ ಮುಗ್ಧರು ಹಿಡಿಶಾಪ ಹಾಕುವುದು ನಿಲ್ಲುತ್ತಿತ್ತು. ಆದರೇನು ಮಾಡೋಣ ? ಇವತ್ತೂ ಕೈ ಮೀರಿ ಹೋಗಿದೆ.