About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Tuesday, June 14, 2011

ಪಾಪಿಯ ಲೋಕದಿಂದ ಪಾರಾದಳು ಸುಪ್ರಿಯಾ

ಅಪ್ಪನಂತೆನ್ನುತ್ತಲೇ ಅಪ್ಪಿಕೊಳ್ಳಹೋದ (ನಿವೇದಿತಾ)

ಮೂಲೆಯೊಂದರಲ್ಲಿ ಕುಳಿತು ಬಿಕ್ಕಳಿಸಿ ಅಳುತ್ತಿದ್ದಾಳೆ ಅವಳು. ಮನೆಗೆ ಬಂದ ಆತ ಬಾಚಿ ತಬ್ಬಿಕೊಂಡು ರಮಿಸಲು ಪ್ರಯತ್ನಿಸುತ್ತಾನೆ. ಆದರೆ ಅವಳು "ಮೊದಲು ಇಲ್ಲಿಂದ ಹೊರಡೋಣ. ಒಂದು ಕ್ಷಣವೂ ಇಲ್ಲಿ ಇರೋದು ಬೇಡ' ಎಂದು ಖಡಾ ಖಂಡಿತವಾಗಿ ಹೇಳುತ್ತಾಳೆ.



"ಬುದ್ಧಿ ಕೆಟ್ಟಿದೆಯಾ ನಿನಗೆ? ನಾವು ಇಲ್ಲಿಂದ ಹೋದರೆ ರಕ್ಷಣೆ ಸಿಗುತ್ತಾ?'
ಅವನ ಪ್ರಶ್ನೆ. "ಏನಾದರು ಆಗಲಿ. ಆದರೆ ಇಲ್ಲಿ ನಾನು ಒಂದು ಕ್ಷಣವೂ ಇರುವುದಿಲ್ಲ, ಮೊದಲು ನನ್ನ ಫೋನ್ ನಂಬರ್ ಬದಲಾಯಿಸಿ ಬೇರೆ ಎಲ್ಲಿಗಾದರೂ ಹೋಗೋಣ...' ಆಕೆಯದ್ದು ಒಂದೇ ವರಾತ.
"ಹಾಗಾದರೆ ನೀನು ನನ್ನನ್ನು ಪ್ರೀತಿಸಿದ್ದು ಸುಳ್ಳಾ?' ಹಾಗಂತ ಅವನು ಕೇಳಿದ್ದೇ ತಡ, ಕೆಂಡಾಮಂಡಲವಾದ ಆಕೆ ಕೆನ್ನೆಗೆ ಬಾರಿಸಿಯೇಬಿಟ್ಟಳು! ತಾನು ಮಾಡಿದ ತಪ್ಪೇನು ಎಂಬುದು ಅರಿವಾಗದೆ ಉರಿಯುತ್ತಿರುವ ಕೆನ್ನೆಯನ್ನು ಸವರಿಕೊಳ್ಳುತ್ತಾ ಅವಳನ್ನೇ ದಿಟ್ಟಿಸಿ ನೋಡುತ್ತಿದ್ದಾನೆ ಆತ. ಮುಖ ಎತ್ತಿ ನೋಡಿದ ಅವಳಿಗೆ ಪಶ್ಚಾತ್ತಾಪ ಕಾಡಿ ಓಡಿ ಬಂದು ಅವನನ್ನು ತಬ್ಬಿಕೊಂಡು ಒಂದೇ ಸಮನೆ ಅಳತೊಡುಗುತ್ತಾಳೆ. ಅವಳ ಕಣ್ಣೀರು ಧಾರೆಯಾಗಿ ಅವನ ಅಂಗಿಯ ತೋಳನ್ನು ತೋಯಿಸುತ್ತಿದ್ದರೆ ಆತ ಏನೂ ಅರ್ಥವಾಗದೆ ಸುಮ್ಮನೆ ನೋಡುತ್ತಿದ್ದಾನೆ...
ಇದು ಯಾವುದೋ ಸಿನಿಮಾ ಸನ್ನಿವೇಶವಲ್ಲ. ನಿಜವಾಗಲೂ ನಡೆದ ಒಂದು ಘಟನೆ; ಅದೂ ಉದ್ಯಾನ ನಗರಿಯ ನಡುವೆಯೇ! ಸತ್ಯ ಕಥೆಯ ಪೂರ್ಣ ವಿವರ
ಅರಿವಾಗಬೇಕಾದರೆ ನೀವು ಎರಡು ತಿಂಗಳ ಹಿಂದೆ ಹೋಗಬೇಕು...




***
ಅದು ಕರಾವಳಿ ತೀರದ ಮಂಗಳೂರಿಗೆ ಸಮೀಪದ ಪುತ್ತೂರು. ಅವಳ ಹೆಸರು ಸುಪ್ರಿಯಾ (ಹೆಸರು ಬದಲಿಸಿದೆ) ಮಣಿಪಾಲ್್ನಲ್ಲಿ ಎಂಬಿಎ ಓದುತ್ತಿದ್ದಾಳೆ. ಮನೆಯವರು ಆರ್ಥಿಕವಾಗಿ ಅಷ್ಟೇನೂ ಉತ್ತಮವಾಗಿಲ್ಲದಿದ್ದರೂ ಯಾವುದೇ ತೊಂದರೆಗಳಿಲ್ಲದ ಕುಟುಂಬ. ಒಬ್ಬಳೆ ಮಗಳಾದ ಕಾರಣ ಪ್ರೀತಿಯಿಂದ ಬೆಳೆಸಿದ್ದಾರೆ. ಅಲ್ಲಿಂದ ಕೂಗಳತೆಯ ದೂರದಲ್ಲಿದೆ ಸೋಮನತಡಕ ಎಂಬ ಕುಗ್ರಾಮ. ಅಲ್ಲಿಂದ ಮಣಿಪಾಲ್ ಗೆ ಓದಲು ಬರುತ್ತಿದ್ದವನ ಹೆಸರು ವಿನಯಚಂದ್ರ.
ಅವನೂ ಮಧ್ಯಮವರ್ಗದ ಕುಟುಂಬದವನೆ. ಆದರೆ ಪ್ರೀತಿಗೆ ಆರ್ಥಿಕ ಮಟ್ಟದ ಅಗತ್ಯವೇನಿದೆ ಹೇಳಿ ? ವಿನಯಚಂದ್ರ ಮತ್ತು ಸುಪ್ರಿಯಾ ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ಕಾರಣವೋ, ಒಂದೇ ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಕಾರಣವೋ ಒಟ್ಟಿನಲ್ಲಿ ಇವರಿಬ್ಬರ ನಡುವೆ ಪ್ರೀತಿ ಅಂಕುರಿಸಿತು.
ಓದುವ ದಿನಗಳಲ್ಲಿ ಪ್ರೀತಿ ಎಂಬ ವಿಷಯ ಇವರಿಬ್ಬರಿಗೆ ಮಾತ್ರ ಸೀಮಿತವಾಗಿತ್ತು. ಓದು ಮುಗಿದು ಸುಪ್ರಿಯಾ ಮನೆಯಲ್ಲಿ ಹುಡುಗನ ಹುಡುಕಾಟ ಆರಂಭವಾದ ಕೂಡಲೇ ಪ್ರೇಮಿಗಳ ವಿರಹ ವೇದನೆ ಮುಗಿಲು ಮುಟ್ಟಿತು. ಇನ್ನು ಅಗಲಿರಲು ತಮ್ಮಿಂದ ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಇವರ ಪ್ರೀತಿ ಮುಟ್ಟಿತ್ತು. ಮನೆಯಲ್ಲಿ ತಿಳಿಯದ ಹಾಗೆ ಇವರು ಭೇಟಿಯಾಗುತ್ತಿದ್ದರು. ಆದರೆ ಅದೊಂದು ದಿನ ವಿಷಯ ಸುಪ್ರಿಯಾ ಮನೆಗೆ ತಿಳಿಯಿತು.
ವಿದ್ಯಾವಂತ ಹುಡುಗ ವಿನಯಚಂದ್ರನಿಗೆ ಮದುವೆ ಮಾಡಲು ಜಾತಿಯು ಅಡ್ಡಿಯಾಗಿತ್ತು. ಹಾಗಾಗಿ ಎರಡೂ ಕುಟುಂಬಗಳಿಂದ ಇವರ ಪ್ರೀತಿಗೆ ವಿರೋಧ ವ್ಯಕ್ತವಾಯಿತು. ಇದೇ ಕಾರಣಕ್ಕೆ ಅವರು ಮನೆಯವರಿಂದ ದೂರವಾಗಿ ಮದುವೆಯಾಗಲು ನಿರ್ಧರಿಸಿ ಹೇಳದೆ ಕೇಳದೆ ಮನೆಯಿಂದ ಬೆಂಗಳೂರಿಗೆ ಓಡಿ ಬಂದರು.
ಅದು ಗೋಮುಖ ವ್ಯಾಘ್ರ
ಅದುವರೆಗೆ ಬೆಂಗಳೂರು ಮುಖ ನೋಡದ ಅವರು ಹೋಗುವುದಾದರು ಎಲ್ಲಿಗೆ ? ಏನು ಮಾಡುವುದು ಎಂಬ ಆತಂಕ ಇಬ್ಬರನ್ನೂ ಕಾಡತೊಡಗಿತು. ಅದೇ ಸಮಯಕ್ಕೆ ಅವರಿಗೆ ನೆನಪಾಗಿದ್ದು ಪತ್ರಕರ್ತ ಸೂರ್ಯ ಬಿಳಿಗಿರಿ!
ಪರಮಹಂಸರ ಖಾಸಾ ಸಹೋದರ, ಮದರ್ ಥೆರೇಸಾರ ಮೊಮ್ಮಗ ಎಂಬಿತ್ಯಾದಿ ಬಿರುದುಗಳೊಂದಿಗೆ ಬಿಂಬಿಸಿಕೊಂಡ, ಪೀತ ಪತ್ರಿಕೋದ್ಯಮದ ಅಷ್ಟೂ ಪಟ್ಟುಗಳನ್ನು ಕರಗತ ಮಾಡಿಕೊಂಡ ಬಿಳಿಗಿರಿ ಬರೆಯುವುದೆಲ್ಲಾ ಪರರಿಗಾಗಿ, ತಾನು ಮಾಡುವುದೆಲ್ಲಾ ಬರೆಯಬಾರದು ಎಂಬ ಕಠಿಣ ಸಿದ್ಧಾಂತವನ್ನು ತಪ್ಪದೆ ಪಾಲಿಸುವವ ಎಂಬ ಸತ್ಯ, ಈ ಜೋಡಿ ಸೇರಿದಂತೆ ಅವನ ಬರಹ ಓದುವ ಹಲವಾರು ಜನರಿಗೆ ಗೊತ್ತಿರಲಿಲ್ಲ. ಹಾಗಾಗಿಯೆ
ಅವರು ನೇರವಾಗಿ ಹೋಗಿ ಬಿಳಿಗಿರಿಯನ್ನು ಭೇಟಿಯಾಗಲು ತೀರ್ಮಾನಿಸಿದರು.
ಪ್ರೀತಿಸಿ ಹಿರಿಯರ ವಿರೋಧ ಎದುರಿಸಲಾರದೆ ಓಡಿ ಬಂದ ಅವರಿಬ್ಬರ ಮಾತುಗಳನ್ನು ತುಂಬಾ ಕುತೂಹಲ ದಿಂದ ಕೇಳಿದ ಬಿಳಿಗಿರಿ, ತನ್ನ ಕಚೇರಿಗೆ ಸಮೀಪದ ಒಂದು ಪುಟ್ಟ ಮನೆಯಲ್ಲಿ
ಅವರಿಬ್ಬರನ್ನು ಉಳಿಯಲು ಏರ್ಪಾಟು ಮಾಡಿದ. "ಆರ್ಥಿಕವಾಗಿ ನೀವು ಸಬಲರಾಗಬೇಕು, ನಿಮ್ಮ ದುಡಿಮೆಯಲ್ಲಿ ನೀವು ಬದುಕುವ ಆರ್ಥಿಕ ಸ್ಥಿರತೆ ಬಂದು, ನಿಮ್ಮ ಕಾಲ ಮೇಲೆ ನೀವು ನಿಲ್ಲುವ ನಂಬಿಕೆ ಬಂದ ಕೂಡಲೇ ನಾನೇ ಮುಂದೆ ನಿಂತು ನಿಮ್ಮಿಬ್ಬರ ಮದುವೆ ಮಾಡಿಸುತ್ತೇನೆ ಮಗಳೆ' ಎಂದು ತಲೆ ಸವರುತ್ತಾ ಅವನು ಹೇಳುತ್ತಿದ್ದರೆ ಸುಪ್ರಿಯಾ ಕಣ್ಣಲ್ಲಿ ನೀರು ಜಾರುತ್ತಿತ್ತು. ಹೆತ್ತ ತಂದೆಗಿಂತ ಹೆಚ್ಚಿನ ಮುತುವರ್ಜಿವಹಿಸಿ ತಮ್ಮ ಮದುವೆ ಮಾಡಲು ಇಷ್ಟೆಲ್ಲಾ ತೊಂದರೆ ತೆಗೆದುಕೊಳ್ಳುತ್ತಿರುವ "ಬಿಳಿಗಿರಿ ಸರ್' ಬಗ್ಗೆ ಅವರಿಬ್ಬರಿಗೆ ಎಲ್ಲಿಲ್ಲದ ಗೌರವ ಉಕ್ಕಿ ಬಂತು.
ಅವರು ಓಡಿ ಬಂದು ಎರಡು ದಿನ, ಬಿಳಿಗಿರಿ ಬಳಿ ಬಂದು ಒಂದು ದಿನ ಕಳೆದಿತ್ತು. ಮಾರನೆ ದಿನ ಸಂಜೆ ಅವರಿಬ್ಬರೂ ಇದ್ದ ಶೀಟ್ ಮನೆ ಬಾಗಿಲಲ್ಲಿ ಬಿಳಿಗಿರಿ ಸರ್ ಪ್ರತ್ಯಕ್ಷ! ತಾವಿರುವ ಮನೆಗೆ
ಅವರೇ ಸ್ವತಃಬಂದಿರುವುದು ಕಂಡು ಆ ಯುವ ಜೋಡಿಗೆ ಅಚ್ಚರಿಯಾಯಿತು. ತಾವು, ತಮ್ಮಂತಹ ಅದೆಷ್ಟೋ ಯುವ ಜೋಡಿಗಳಿಗೆ ಮಾರ್ಗದರ್ಶಕರಾಗಿ, ಒಬ್ಬ ಅನಾಮಿಕರನ್ನೂ ತಮ್ಮ ಮಕ್ಕಳಂತೆ ಮುತುವರ್ಜಿಯಿಂದ ನೋಡಿಕೊಳ್ಳುವ ಬಿಳಿಗಿರಿ ಸರ್ ಬಗ್ಗೆ ಆ ಎರಡೂ ಯುವ ಹೃದಯಗಳಲ್ಲಿ ಎಲ್ಲಿಲ್ಲದ ಗೌರವ ಮೂಡಿಬಂತು.
ಮನೆಯಿಂದ ಅವರಿಬ್ಬರನ್ನೂ ಕಚೇರಿಗೆ ಕರೆತಂದ ಬಿಳಿಗಿರಿ, ಎದುರಿಗೆ ಕೂರಿಸಿಕೊಂಡು ತನ್ನ ಪತ್ರಿಕೋದ್ಯಮದ ಸಾಧನೆಯ ಬಗ್ಗೆ ದೀರ್ಘ ಉಪನ್ಯಾಸ ನೀಡಿದ. ನಂತರ "ಇನ್ನು ನೀವು ಹೊರಡಿ, ಎರಡು ಮೂರು ದಿನದಲ್ಲಿ ಒಂದು ಕೆಲಸ ಹುಡುಕುತ್ತೇನೆ. ಇಬ್ಬರೂ ದುಡಿಯಲಿಲ್ಲ ಅಂದರೆ ಬೆಂಗಳೂರಿನಲ್ಲಿ ಬದುಕುವುದು ತುಂಬಾ ಕಷ್ಟ' ಎಂದ ಬಿಳಿಗಿರಿ "ಈಗಲೇ ಬೆಂಗಳೂರಿನಲ್ಲಿ ಓಡಾಡಿ, ಪರಿಚಯಿಸಿಕೊಳ್ಳಿ' ಎಂದು ತನ್ನ ಜೇಬಿನಿಂದ ಐನೂರರ ನೋಟನ್ನು ತೆಗೆದು ಕೊಟ್ಟ. ಅವರು ಹೊರಡುತ್ತಿದ್ದ ಸಮಯದಲ್ಲಿ "ಎಲ್ಲಿ ನಿನ್ನ ಫೋನ್ ನಂಬರ್ ಕೊಡಮ್ಮ ಸುಪ್ರಿಯಾ, ಯಾವಾಗಾದರೂ ಅವನ ಫೋನ್ ಸಿಗಲಿಲ್ಲ ಎಂದರೆ ನಿನ್ನ ಕಾಂಟ್ಯಾಕ್ಟ್ ಮಾಡಬಹುದು' ಎಂದು ಅವಳ ಫೋನ್ ನಂಬರ್ ಪಡೆದು ಒಂದು ಮಿಸ್ಡ್ ಕಾಲ್ ಕೊಟ್ಟ. ಅವರಿಬ್ಬರಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗಿತ್ತು. ಆದರೆ ಆಗಲೇ ಅವರಿಬ್ಬರ ಗೃಹಗತಿಯಲ್ಲಿ ಸಾಡೇ ಸಾತಿ ಪ್ರವೇಶವಾಗಿದೆ ಎಂದು ಅರಿವಾಗಲು ಅವರಿಗೆ ಹೆಚ್ಚು ಕಾಲ ಬೇಕಾಗಲಿಲ್ಲ.
ಹುಡುಗಿ ಸುಪ್ರಿಯಾಳ ಫೋನ್ ನಂಬರ್ ಪಡೆದ ಬಿಳಿಗಿರಿ ಅಂದಿನ ತಡ ರಾತ್ರಿಯೇ ಎಸ್ ಎಂಎಸ್ ಶುರು ಮಾಡಿದ. ಏನೋ ತಂದೆಯಂಥವರು ಎಂದು ಅವಳು ಸುಮ್ಮನಿದ್ದಳು. ಎರಡು ದಿನ ಕಳೆಯುವುದರಲ್ಲಿ ವಿನಯಚಂದ್ರನಿಗೆ ಯಾವುದೋ ಒಂದು ಸೆಕ್ಯೂರಿಟಿ ಕಂಪನಿಯಲ್ಲಿ ಕೆಲಸ ದೊರೆಯಿತು. ಕೆಲಸ ದೊರೆತ ದಿನದಿಂದ ಆತನಿಗೆ ರಾತ್ರಿ ಪಾಳಿಯಲ್ಲಿ ಕೆಲಸ. ಇಡೀ ರಾತ್ರಿ ದುಡಿಯುವ ಆತ ಹಗಲಿಡೀ ನಿದ್ದೆಗೆ ಜಾರುತ್ತಿದ್ದ. ರಾತ್ರಿ ಸಮಯದಲ್ಲಿ ಮನೆಯಲ್ಲಿ ಒಬ್ಬಳೇ ಇರುತ್ತಿದ್ದ ಸುಪ್ರಿಯಾ ಫೋನ್್ಗೆ ಇತ್ತ ಬಿಳಿಗಿರಿ ಅಸಹ್ಯ ಸಂದೇಶಗಳ ರವಾನೆ ಆರಂಭವಾಯಿತು. ಮನುಷ್ಯರಾದವರು ಓದಲು ಅಸಹ್ಯ ಪಡುವ ರೀತಿಯ ಸಂದೇಶಗಳನ್ನು ನೋಡಿದ ಸುಪ್ರಿಯಾ ಒಂದು ದಿನ ವಿನಯಚಂದ್ರನಿಗೆ ತೋರಿಸಿದಳು "ಅವೆಲ್ಲಾ ಈಗಿನ ಕಾಲದಲ್ಲಿ ಮಾಮೂಲಿ. ಅದೇನು ಮಹಾ ಅಪರಾಧ ಎಂದು ಹೇಳುತ್ತೀಯ ಸುಮ್ನಿರು. ಅವರು ನಮಗಾಗಿ ಎಷ್ಟೆಲ್ಲಾ ಕಷ್ಟ ಪಟ್ಟಿದ್ದಾರೆ. ಹೀಗೆಲ್ಲಾ ಅಪಾರ್ಥ ಮಾಡಿಕೋಬೇಡ' ಎಂದು ಅವಳನ್ನೇ ಗದರಿಸಿದ. ಇದರಿಂದ ಅವಳು ಇನ್ನಷ್ಟು ಖಿನ್ನಳಾಗತೊಡಗಿದಳು.
ಒಂದು ದಿನ ಅವಳೇ ನೇರವಾಗಿ ಕೇಳಿದಳು "ನನಗೆ ಬೇಗ ಒಂದು ಕೆಲಸ ನೋಡಿ ಸಾರ್, ಇಬ್ಬರೂ ದುಡಿದು ಬೇಗ ಮದುವೆ ಆಗ್ತೀವಿ' ಎನ್ನುತ್ತಲೇ ಬಾಲ ತುಳಿದ ನಾಗರ ಹಾವಿನಂತಾದ ಬಿಳಿಗಿರಿ! "ಏನಮ್ಮ ವಿರಹ ಭರಿಸಲಾಗುತ್ತಿಲ್ಲವೆ? ಅಷ್ಟು ಆತುರ ಪಡ್ತಿದ್ದೀಯ. ಅಷ್ಟು ಬೇಕು ಅನ್ನೋದಾದರೆ ನಾನಿದ್ದೀನಿ ಹೇಳು. ಯಾವ ಸಮಯದಲ್ಲಿ ಬೇಕಾದರೂ ನನ್ನ ಫೋನ್ ಆನ್್ನಲ್ಲೇ ಇರುತ್ತೆ. ಒಂದು ಮಿಸ್ಡ್್ಕಾಲ್ ಕೊಡು ನೇರವಾಗಿ ನಿನ್ನ ತೋಳಿನಲ್ಲಿ ಬಂದು ಇಳೀತೀನಿ. ಹೇಗೂ ಅವನಿಗೆ ನೈಟ್ ಶಿಫ್ಟ್ ಅಲ್ಲವಾ, ಒಬ್ಬಳೇ ಬೇಜಾರು ಅನ್ನೋದಾದರೆ ನಾನು ಕಂಪನಿ ಕೊಡ್ತೀನಿ ಹೆದರಬೇಡ. ಇನ್ನೂ ನೀವು ಒಬ್ಬರನ್ನೊಬ್ಬರು ಪೂರ್ತಿ ಅರ್ಥ ಮಾಡಿಕೋಬೇಕು' ಎಂದು ತನ್ನ ಪುಂಗಿ ಊದುತ್ತಿರುವಾಗಲೇ ಅವಳ ಕಣ್ಣು ತುಂಬಿ ಬಂದಿತ್ತು. ಪೂರ್ತಿ ಕೇಳಿಸಿಕೊಳ್ಳುವ ಗೋಜಿಗೆ ಹೋಗದೆ ಎದ್ದು ನೇರವಾಗಿ ಮನೆಗೆ ಬಂದು ಗೊಳೋ ಎಂದು ಅತ್ತಿದ್ದಳು. ಹಾಗೆ ಅವಳು ಅಳುತ್ತಿರುವಾಗಲೇ ಮತ್ತೆ ಬಿಳಿಗಿರಿಯಿಂದ ಫೋನ್ ಬಂದಿತ್ತು. ಆದರೆ ಅವಳು ತೆಗೆಯುವ ಸಾಹಸ ಮಾಡಲಿಲ್ಲ. ಫೋನ್ ಒಂದೇ ಸಮನೆ ಹೊಡೆದುಕೊಳ್ಳುವುದು ನೋಡಿ ಕೊನೆಗೆ ತೆಗೆದಳು. "ಬೇಜಾರಾಯಿತಾ ಮಗಳೆ, ನಿಮ್ಮಿಬ್ಬರ ಪ್ರೀತಿ ಎಷ್ಟು ಗಾಢವಾಗಿದೆ ಎಂದು ಪರೀಕ್ಷೆ ಮಾಡಲು ಹಾಗೆ ಮಾತಾಡಿದೆ ಬೇಜಾರಾಗ್ಬೇಡ' ಎಂದ.
ಇವನ ನಡತೆ ಮತ್ತು ಅಂದು ನಡೆದ ವಿಚಾರದ ಬಗ್ಗೆ ವಿನಯಚಂದ್ರನಿಗೆ ಹೇಳುವುದಾ ? ಬೇಡವಾ? ಸಂದಿಗ್ಧತೆಯಲ್ಲಿ ತೊಳಲಾಡಿದಳು ಸುಪ್ರಿಯಾ. ಒಂದು ವೇಳೆ ತನ್ನನ್ನು ಪರೀಕ್ಷೆ ಮಾಡಲೇ ಹಾಗೆ ವರ್ತಿಸಿರಬಹುದು. ಬಿಳಿಗಿರಿ ಸರ್್ರನ್ನು ತಾನೇ ಅನವಶ್ಯಕ ಅಪಾರ್ಥ ಮಾಡಿಕೊಂಡೆ ಎಂದು ತನಗೆ ತಾನೆ ಸಮಾಧಾನ ಪಡಿಸಿಕೊಂಡು ಸುಮ್ಮನಾದಳು.
ಈ ಘಟನೆ ನಡೆದ ನಂತರ ಬಿಳಿಗಿರಿಯ ಮೇಲೆ ಒಂದು ರೀತಿಯ ನಿರುತ್ಸಾಹ ಭಾವನೆಯನ್ನು ಅವಳು ತಾಳಿದ್ದಳು. ಆದರೂ ಅದನ್ನು ಅವನೆದುರಿಗೆ ತೋರ್ಪಡಿಸುತ್ತಿರಲಿಲ್ಲ. ವಿನಯಚಂದ್ರ ಇಲ್ಲದ ಸಮಯದಲ್ಲಿ ಬಿಳಿಗಿರಿಯ ಫೋನ್ ತೆಗೆಯುವುದು ಕಡಿಮೆ ಮಾಡಿದಳು. ರಾತ್ರಿ ಸಮಯದಲ್ಲಿ ಫೋನ್ ಆಫ್ ಮಾಡತೊಡಗಿದಳು. ಇವಳ ಈ ನಡವಳಿಕೆಗಳು ಬಿಳಿಗಿರಿಗೆ ಸಹಿಸಲಸಾಧ್ಯವಾಯಿತು.
ಇನ್ನೂ ವಿಚಿತ್ರ ನಡೆದದ್ದು ಆಗಲೇ. ಆಧುನಿಕ ತಾಂತ್ರಿಕತೆಯ ಗಂಧ ಗಾಳಿ ಗೊತ್ತಿಲ್ಲದ ಬಿಳಿಗಿರಿ, ಇಂದಿಗೂ ಬರೆಯುತ್ತಾನೆಯೇ ಹೊರತು ಕಂಪ್ಯೂಟರ್ ನಲ್ಲಿ ಟೈಪ್ ಮಾಡಲು ಬರುವುದಿಲ್ಲ. ಇಂತಹ ಬಿಳಿಗಿರಿ ಸಿಕ್ಕಿಹಾಕಿಕೊಂಡಿದ್ದು ಇದೇ ಕೈಬರಹದಲ್ಲಿ! ತನಗಿರುವ ಇಬ್ಬರು ಹೆಣ್ಣು ಮಕ್ಕಳಿಗಿಂತ ಕಿರಿಯವಳಾದ ಸುಪ್ರಿಯಾಳಿಗೆ, ಐವತೈದು ವರ್ಷದ ಬಿಳಿಗಿರಿ ಪ್ರೇಮ ಪತ್ರವೊಂದನ್ನು ಬರೆದೇ ಬಿಡುತ್ತಾನೆ! ಅದರಲ್ಲಿ "ನೀನಿಲ್ಲದೆ ನನ್ನ ಬದುಕೇ ಶೂನ್ಯ, ಮರುಭೂಮಿಯಂಥ ನನ್ನ ಹೃದಯದಲ್ಲಿ ಓಯಸಿಸ್್ನಂತೆ ನಿನ್ನ ಪ್ರವೇಶವಾಗಿದೆ ದಯವಿಟ್ಟು ನನ್ನ ಕೈ ಬಿಡದೆ ಒಪ್ಪಿಕೋ. ನಿನ್ನನ್ನು ಮಹಾರಾಣಿಯಂತೆ ನೋಡಿಕೊಳ್ಳುತ್ತೇನೆ' ಎಂದು ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾನೆ. ಅಲ್ಲಿಗೆ ಅವಳ ಸಹನೆಯ ಕಟ್ಟೆ ಒಡೆಯುತ್ತದೆ. ಗೋಮುಖ ವ್ಯಾಘ್ರನ ಅಸಲಿ ಮುಖ ಅರಿವಾಗುತ್ತದೆ. ಅಲ್ಲಿಯವರೆಗೆ "ಪ್ರೀತಿ ಪರೀಕ್ಷೆ' ಎನ್ನುತ್ತಿದ್ದ ಕಪಟ ಮಾತುಗಳು ಅವಳ ಅರಿವಿಗೆ ಬರುತ್ತವೆ. "ಮಗಳೆ' ಎಂದು ಬೊಗಳೆ ಬಿಡುತ್ತಿದ್ದವನ ನೀಚತನದ ಅರಿವಾಗುತ್ತೆ. ಇಂಥ ದುಃಖದ ಮಡುವಿನಲ್ಲಿ ಕುಳಿತಿದ್ದ ಸುಪ್ರಿಯಾ, ವಿನಯಚಂದ್ರ ಕೇಳಿದ ಪ್ರಶ್ನೆಗೆ ಕೆನ್ನೆಗೆ ಬಾರಿಸಿದ್ದು ಸಹಜವಿತ್ತು.
ಆಮೇಲೆ...?
ಕಾಮ ಪಿಪಾಸುವಿನ ಪ್ರೇಮ ಪತ್ರವನ್ನು ವಿನಯಚಂದ್ರನಿಗೆ ತೋರಿಸುತ್ತಾಳೆ ಆಕೆ. ಅವನಿಗೂ ಅರ್ಥವಾಗುತ್ತದೆ ತಾನೇಕೆ ರಾತ್ರಿಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂಬ ಸತ್ಯ. ತಾವು ಇಲ್ಲಿಗೆ ಬಂದು ತಿಂಗಳು ಕಳೆಯುತ್ತಾ ಬಂದರೂ ಮದುವೆ ವಿಷಯ ಎತ್ತದ ಬಿಳಿಗಿರಿಯ ಅಸಲಿತನದ ಪರಿಚಯವಾಗಿ ಏನೂ ಮಾಡಲು ತೋಚದೆ ತಲೆ ಮೇಲೆ ಕೈ ಹೊತ್ತು ಕೂರುತ್ತಾರೆ. ಆದರೂ ತಾವಿರುವ ಪರಿಸ್ಥಿತಿಯ ಅರಿವಾಗಿ ತಮ್ಮ ಆರ್ಥಿಕ ಮಟ್ಟ ಸುದಾರಿಸುವವರೆಗೆ ತಡೆಯಲು ಹೇಳುತ್ತಾನೆ.
ಇದು ಅವಳಿಗೆ ಸಹಿಸಲಾಗುವುದಿಲ. ಅವನ ಮೇಲೆಯೇ ಅನುಮಾನ ಮೂಡಲಾರಂಭಿಸುತ್ತದೆ. ಅಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಎದೆಗುಂದದ ಸುಪ್ರಿಯಾಗೆ ತಾಯಿಯ ನೆನಪಾಗಿ ಅವಳಿಗೆ ಫೋನ್ ಮಾಡುತ್ತಾಳೆ. ಮನೆ ಬಿಟ್ಟು ಬಂದಾಗಲಿಂದ ನಡೆದ ಎಲ್ಲಾ ವಿಚಾರಗಳ ಬಗ್ಗೆ ವಿವರಿಸುತ್ತಾಳೆ. ಎಲ್ಲವನ್ನೂ ಕೇಳಿದ ಮಾತೃ ಹೃದಯದಲ್ಲಿ ದುಃಖದ ಕಟ್ಟೆ ಒಡೆಯುತ್ತದೆ. ಪಾಪಿಯ ಕೂಪದಲ್ಲಿ ಮಗಳು ಅನುಭವಿಸಿದ ಪ್ರತ್ಯಕ್ಷ ನರಕದ ನೆನಪಾಗಿ, ತಾಯಿ ಕೂಡಲೇ ಕಾರ್ಯ ಪ್ರವೃತ್ತಳಾಗುತ್ತಾಳೆ.
ಕೂಡಲೆ ಗಂಡನ ಜೊತೆ ಚರ್ಚಿಸುತ್ತಾಳೆ. ವಿಷಯ ತಿಳಿದ ಸುಪ್ರಿಯಾ ತಂದೆ ಕೆಲ ಗ್ರಾಮಸ್ಥರ ಜೊತೆ ನೇರವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ. ಭೂತದ ಬಾಯಲ್ಲಿ ಭಗವದ್ಗೀತೆ ಬೋಧನೆ ಕೇಳಿ, ಬಿಳಿಗಿರಿಯನ್ನು ಹಿಗ್ಗಾ ಮುಗ್ಗಾ ಥಳಿಸುತ್ತಾರೆ. ಇದ್ದ ಒಬ್ಬಳೇ ಮಗಳನ್ನು ಹಾದಿ ತಪ್ಪಿಸಿ ನರಕದ ಕೂಪಕ್ಕೆ ತಳ್ಳುವ ಪ್ರಯತ್ನ ಮಾಡಿದ ಎಂಬ ಕಾರಣಕ್ಕೆ ವಿನಯಚಂದ್ರನಿಗೂ ಗೂಸಾ ಬೀಳುತ್ತೆ.

ಕ್ಲೈಮ್ಯಾಕ್ಸ್...
ಬಿಳಿಗಿರಿ ಮಾಡಿದ ಎಲ್ಲಾ ಪಾಪದಲ್ಲೂ ವಿನಯಚಂದ್ರನ ಕೈವಾಡವಿದೆ ಎಂದು ಸುಪ್ರಿಯಾ ಕೂಡಾ ನಂಬುತ್ತಾಳೆ. ಸದ್ಯಕ್ಕೆ ಈ ಪಾಪಿಯಿಂದ ದೂರವಾದರೆ ಸಾಕು ಎಂಬ ನಿರ್ಧಾರಕ್ಕೆ ಬಂದಿದ್ದ ಸುಪ್ರಿಯಾ ತನ್ನ ಪ್ರೀತಿಯನ್ನು ಕೂಡಾ ಮರೆಯುತ್ತಾಳೆ. ವಿನಯಚಂದ್ರನನ್ನು ಬಿಟ್ಟು ತನ್ನ ತಂದೆಯ ಜೊತೆ ಊರಿಗೆ ಹೊರಡುತ್ತಾಳೆ. ತನ್ನ ತಪ್ಪೇ ಇಲ್ಲದೆ ಘಟಿಸಿದ ಬೆಳವಣಿಗೆಗಳ ಅರಿವಾಗದೆ ಚಿಂತಾಕ್ರಾಂತನಾಗುತ್ತಾನೆ ವಿನಯಚಂದ್ರ. ಸುಪ್ರಿಯಾ ಮನೆ ಬಿಟ್ಟ ಮಾರನೇ ದಿನವೇ ವಿನಯಚಂದ್ರನನ್ನು ಮನೆ ಖಾಲಿ ಮಾಡಿಸುತ್ತಾನೆ ಬಿಳಿಗಿರಿ. ಗೊತ್ತಿಲ್ಲದ ಊರಿನಲ್ಲಿ ನೆಲೆಯಿಲ್ಲದೆ ಪರದಾಡಲಾಗದೆ ಮತ್ತೆ ಊರು ಸೇರುತ್ತಾನೆ. ಸುಪ್ರಿಯಾಳನ್ನು ಪಡೆಯಲು ಮತ್ತೆ ಪ್ರಯತ್ನ ಮುಂದುವರೆಸುತ್ತಾನೆ. ಆದರೆ ಅವಳಿಗೆ ಮತ್ತು ಅವಳ ಕುಟುಂಬಕ್ಕೆ
ಅವನ ಮೇಲೆ ನಂಬಿಕೆಯಿಲ್ಲದೆ ಹೊರದಬ್ಬುತ್ತಾರೆ. ಅದೊಂದು ದಿನ ಸುಪ್ರಿಯಾಳಿಗೆ ಬೇರೊಬ್ಬನ ಜೊತೆ ಮದುವೆಯೂ ಆಗುತ್ತದೆ. ಪ್ರೀತಿಸಿದ ಹುಡುಗಿ ದೂರವಾದ ಗುಂಗಿನಲ್ಲಿ ವಿನಯಚಂದ್ರನಿಗೆ ಹುಚ್ಚು ಹಿಡಿದು ಮತ್ತೆ ಬೆಂಗಳೂರಿನ ನಿಮ್ಹಾನ್ಸ್ ಸೇರುತ್ತಾನೆ. ಪ್ರೇಮಿಗಳನ್ನು ದೂರ ಮಾಡಿದ ಪಾಪ ಹೊತ್ತ ಬಿಳಿಗಿರಿ ಮಾತ್ರ ಮತ್ತೊಂದು ಜೋಡಿ ತನ್ನನ್ನು ಹುಡುಕಿ ಬರುತ್ತದೆ, ಅವಳಿಗೆ ಗಾಳ ಹಾಕಬಹುದು ಎಂದು ಕಾಯುತ್ತಲೇ ಇದ್ದಾನೆ; ಯುವಕ ಯುವತಿಯರೆ ಹುಷಾರ್ !

Thursday, May 19, 2011

ಶಿಕಾರಿಗೆ ಸಿಕ್ಕ ಪಶು

ಹಸನಾಯಿತು ಸಹನೆಯ ಬಾಳು
ವೆಂಕಟರೆಡ್ಡಿ, ಆ ಲಾಡ್ಜ್ ನ ರಿಸೆಪ್ಷನ್ ನಲ್ಲಿ ಕೂತಿದ್ದರೂ ಆತನ ದೃಷ್ಟಿ ಎಲ್ಲಾ ಮುಂದಿನ ರಸ್ತೆ ಮೇಲೆಯೇ ಬಿದ್ದಿದೆ. ಅವನು ಬರ್ತಾನಾ ? ಬಂದೇ ಬರ್ತಾನೆ. ದೇಹ ಮಾರಿಕೊಂಡು ತುತ್ತು ತಿನ್ನೋ ಮಹಿಳೆಯರನ್ನೂ ಬಿಡದ, ಮಾನ, ಮರ್ಯಾದೆ, ನಾಚಿಕೆ ಇಲ್ಲದ ಅವನು ಇಲ್ಲಿಗೆ ಬರದೇ ಇರಲು ಸಾಧ್ಯವೇ? ಹೀಗಂತ ಬೆಳಗ್ಗೆ ಎದ್ದಾಗಲಿಂದ ಅದೆಷ್ಟು ಬಾರಿ ತನಗೆ ತಾನೆ ಈ ಪ್ರಶ್ನೆಯನ್ನು ಕೇಳಿಕೊಂಡಿದ್ದನೋ.
---
ಪ್ರತಿ ದಿನ ಎದ್ದ ಕೂಡಲೇ ರಿಸೆಪ್ಷನ್ ನಲ್ಲಿರುವ ತಿರುಪತಿ ವೆಂಕಟರಮಣಸ್ವಾಮಿ ಫೋಟೋಗೆ ಹೂಮಾಲೆ ಹಾಕಿ, ಊದುಬತ್ತಿ ಹಚ್ಚಿ ವೇಟರ್ ತಂದುಕೊಟ್ಟ ಕಾಫಿ ಕುಡಿದು ದೂರದ ಊರುಗಳಿಂದ ಬರುವ ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ತಾನು ಭೋಗ್ಯಕ್ಕೆ ಪಡೆದಿರುವ ಹಿಮವಂತ್ ಲಾಡ್ಜ್ ನ ರಿಸೆಪ್ಷನ್ ನಲ್ಲಿ ಕೂತರೆ ಗಮನವೆಲ್ಲವೂ ಬರುವ ಗಿರಾಕಿಗಳ ಮೇಲೆಯೇ.

ಆತನ ಹೆಸರು ವೆಂಕಟರೆಡ್ಡಿ. ಆತ್ಮೀಯರು ಆತನನ್ನು ರೆಡ್ಡಿ ಎಂದು ಕರೆಯುತ್ತಾರೆ. ಆಂಧ್ರ ಮೂಲದವನು. ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದವ, ಸ್ವಲ್ಪ ಹಣ ಕೂಡಿಟ್ಟು ಬೆಂಗಳೂರಿನ ಮೆಜೆಸ್ಟಿಕ್ ಸಮೀಪದ ಕಾಟನ್ ಪೇಟೆಯಲ್ಲಿರುವ ಲಾಡ್ಜ್ ಒಂದನ್ನು ಲೀಸ್ ಗೆ ಪಡೆದಿದ್ದಾನೆ. ಈತನಿಗೆ ಒಬ್ಬ ಮಗ ಮತ್ತು ಮಗಳು. ಆಕೆ ತುಂಬಾ ರೂಪವಂತೆ. ಅದೇ ಅವನ ಇಂದಿನ ಗಾಬರಿಗೆ ಕಾರಣ!

ಹಾಗಂತ ಅವಳೇನೂ ಯಾರನ್ನೂ ಪ್ರೀತಿಸಿ ಓಡಿ ಹೋಗಿಲ್ಲ. ಆದರೆ, ಬೆಳ್ಳಗಿರುವುದೆಲ್ಲಾ ಹಾಲು ಎಂದು ನಂಬಿದ್ದಳಷ್ಟೇ. ಪದವಿ ಮುಗಿಸಿದ ಬಳಿಕ ತಂದೆಗೆ ಸಹಾಯ ಮಾಡುವ ದೃಷ್ಟಿಯಿಂದ ಮತ್ತು ಸುಂದರವಾದ ಹುಡುಗಿ ರಿಸೆಪ್ಷನ್್ನಲ್ಲಿದ್ದರೆ ಗಿರಾಕಿಗಳನ್ನು ಸೆಳೆಯಬಹುದು ಎಂಬ ವ್ಯಾಪಾರ ತಂತ್ರದಿಂದ ಆಗಾಗ್ಗೆ ರಿಸೆಪ್ಷನ್್ನಲ್ಲಿ ಕೂರುತ್ತಿದ್ದಳು. ಅದೇ ಅವಳಿಗೆ ಮುಳುವಾಗುತ್ತೆ ಎಂಬುದನ್ನು ಪಾಪ, ರೆಡ್ಡಿ ಊಹಿಸಲೇ ಇಲ್ಲ.
--
ದುಗುಡಕ್ಕೆ ಕಾರಣ

ಬಿಳಿಗಿರಿ ರಂಗನಬೆಟ್ಟ ಗೊತ್ತಲ್ಲ ? ಅದರ ಪಕ್ಕದಲ್ಲೇ ಇದೆ ರಾಂಪುರ. ಸುಮಾರು 20 ಮನೆಗಳಿರುವ ಈ ಹಳ್ಳಿ ಹೊರ ಜಗತ್ತಿನ ಮಟ್ಟಿಗೆ ಅನಾಮಿಕ. ಹಾಗಾಗಿ, ಆ ಊರಿನ ಯಾರೇ ಆಗಲಿ ಮೈಸೂರು ಅಥವಾ ಬೆಂಗಳೂರಿಗೆ ಬಂದಾಗ ಎಲ್ಲರೂ ಊರ ಹೆಸರು ಹೇಳಬೇಕಾದರೆ ಬಿಳಿಗಿರಿರಂಗನ ಬೆಟ್ಟ ಎಂದೇ ಹೇಳುತ್ತಾರೆ.

ಅದೇ ಊರಿಂದ ಬಂದವನು ಸೂರ್ಯ. ಯಾರಾದರು ಊರ ಹೆಸರು ಕೇಳಲಿ ಕೇಳದಿರಲಿ, ಅವನು ಬಿಳಿಗಿರಿ ಎಂದು ಹೇಳುತ್ತಿದ್ದ. ತನ್ನನ್ನು ತಾನು ಸೂರ್ಯ ಬಿಳಿಗಿರಿ ಎಂದೇ ಕರೆಸಿಕೊಂಡಿದ್ದ. ಅವನೂ ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದವನೇ. ಕೆಲ ದಿನ ಊರಿನ ಕಾಲೇಜೊಂದರಲ್ಲಿ ಪಾಠ ಮಾಡಿಕೊಂಡಿದ್ದ ಪದವೀಧರ. ಆದರೆ, ತನ್ನ ವಿದ್ಯಾರ್ಥಿನಿ ಜತೆಯೇ ಅಸಭ್ಯವಾಗಿ ವರ್ತಿಸಿ ಗೂಸಾ ತಿಂದು ಓಡಿ ಬಂದವ. ತಾನೊಬ್ಬ ಖುಷ್ವಂತ್್ಸಿಂಗ್್ನಂತೆ ಆಗಬೇಕು ಎಂಬುದು ಅವನ ಆಸೆ. ಆದ್ದರಿಂದಲೇ ಅವನು ಪತ್ರಿಕೋದ್ಯಮಕ್ಕೆ ವಕ್ಕರಿಸಿ ಅವನಿಗಿಂತ ಮೊದಲೇ ಆರಂಭವಾಗಿದ್ದ ಪೀತ ಪತ್ರಿಕೋದ್ಯಮದ ಸದಸ್ಯನಾದ.

ಪತ್ರಕರ್ತನಾದವನು ಹೊಟ್ಟೆಪಾಡಿಗಾಗಿ ಮತ್ತೇನಾದರೂ ಕಸುಬು ಮಾಡಲೇಬೇಕಾದ ಸ್ಥಿತಿ ಇದ್ದ ಸಮಯವದು. ಆದರೆ, ಈ ಬಿಳಿಗಿರಿ ಆಯ್ದಕೊಂಡಿದ್ದೇ ಬೇರೆ ಕಸಬು! ಮೆಜೆಸ್ಟಿಕ್್ನ ಅಕ್ಕಪಕ್ಕದ ಕೆಲವು ಲಾಡ್ಜ್ ಸೇರಿದಂತೆ ಕೆ. ಆರ್. ಮಾರುಕಟ್ಟೆಯ ಕೆಲವು ಲಾಡ್ಜ್ ಗಳಲ್ಲಿ ಇಂದಿಗೂ ಅವ್ಯಾಹತವಾಗಿ ವೇಶ್ಯಾವಾಟಿಕೆ ನಡೆಯುತ್ತಿದೆ. ಇದು ಗೊತ್ತಿದ್ದರೂ ಪೊಲೀಸರು ಜಾಣ ಕುರುಡು ಪ್ರದರ್ಶಿಸುತ್ತಾರೆ. ಅದಕ್ಕೆ ಕಾರಣ ಹೊಟ್ಟೆಪಾಡಿಗಾಗಿ ಪರದಾಡುವ ಹೆಣ್ಣುಗಳ ಬಗ್ಗೆ ಸ್ವಲ್ಪ ಮಟ್ಟಿಗಿನ ಕನಿಕರದ ಜೊತೆಗೆ ಲಾಡ್ಜ್ ಗಳಿಂದ ತಿಂಗಳು ತಿಂಗಳು ಬರುವ ಮಾಮೂಲಿಯೂ ಒಂದು ಕಾರಣ.

ಈ ಗುಟ್ಟನ್ನು ಮೊದಲು ಗುರ್ತಿಸಿದವನು ಬಿಳಿಗಿರಿ. ಮೊದಲೇ ಭಗನಿ ಕಳ್ಳು, ನಾಟಿ ಸಾರಾಯಿ ಕುಡಿದು ಬೆಳೆಸಿದ್ದ ದೇಹಕ್ಕೆ ಪ್ರತಿ ದಿನ ಮದ್ಯ, ಮಾನಿನಿ ಇಲ್ಲದೆ ಕಾಲ ಕಳೆಯುವುದು ಅಸಾಧ್ಯವಾಗಿತ್ತು. ಇಂಥ ಸಂದರ್ಭದಲ್ಲಿ ಇವನು ಬಳಸಿಕೊಂಡಿದ್ದು ಪೀತ ಪತ್ರಿಕೋದ್ಯಮವನ್ನು. ಲಾಡ್ಜ್ ನಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಪತ್ರಿಕೆಯಲ್ಲಿ ಬರೆಯುವುದಾಗಿ ಹೆದರಿಸಿ ಲಾಡ್ಜ್್ಗಳಿಂದ ತಿಂಗಳ ಮಾಮೂಲಿ ವಸೂಲಿ ಮಾಡಲು ಆರಂಭಿಸಿದ. ಲಾಡ್ಜ್್ನವರೂ ಪತ್ರಿಕೆಯವರನ್ನು ಎದುರು ಹಾಕಿಕೊಳ್ಳುವುದು ಯಾಕೆ ಎಂದು ಚಿಲ್ಲರೆ ಕೊಟ್ಟು ಕಳುಹಿಸುತ್ತಿದ್ದರು.

ಇದರ ರುಚಿ ಕಂಡ ಬಿಳಿಗಿರಿ ಹೊಟ್ಟೆ ಪಾಡಿಗಾಗಿ ಮೈಮಾರಿಕೊಳ್ಳುವ ಹೆಂಗಸರನ್ನೂ ಬಿಡಲಿಲ್ಲ. ಲಾಡ್ಜ್್ಗಳಲ್ಲಿ ದುಡಿಯುವ ಹೆಂಗಸರು ಇವನಿಗೆ ಉಚಿತವಾಗಿ ಸಿಗಬೇಕಿತ್ತು! ಪ್ರಶ್ನಿಸಿದರೆ ಪತ್ರಿಕೆಯಲ್ಲಿ ಬರೆಯುವ ಬೆದರಿಕೆ. ವಿಧಿ ಇಲ್ಲದೆ ಅವರೂ ಇವನ ಹಿಂಸೆಯನ್ನು ತಡೆದುಕೊಳ್ಳಬೇಕಿತ್ತು. ಇಂಥ ಗುಳ್ಳೆ ನರಿಯ ಬಿಳಿಗಿರಿ ರೆಡ್ಡಿಗೆ ಪರಿಚಯವಾಗಿದ್ದು ಒಂದು ಅನಿರೀಕ್ಷಿತ ಸನ್ನಿವೇಶದಲ್ಲಿ.
--
ಹಿಮವಂತ್ ಲಾಡ್ಜ್ ಪಕ್ಕದಲ್ಲೇ ಇದ್ದ ಒಂದು ಲಾಡ್ಜ್ ನಲ್ಲಿ ಅಕ್ರಮ ಚಟುವಟಿಕೆಗಳು ಹೇರಳವಾಗಿ ನಡೆಯುತ್ತಿರುತ್ತವೆ. ಒಂದು ದಿನ ಆ ಲಾಡ್ಜ್್ನಲ್ಲಿ ಒಬ್ಬ ಹೆಂಗಸಿನ ಕೊಲೆಯಾಗುತ್ತದೆ. ಇದರ ಜತೆ ರೆಡ್ಡಿ ಲಾಡ್ಜ್ ಗೆ ವ್ಯಾಪಾರ ಪೈಪೋಟಿ ಇತ್ತಾದರೂ ರೆಡ್ಡಿ ಲಾಡ್ಜ್್ನಲ್ಲಿ ಯಾವುದೇ ಅಕ್ರಮಗಳು ನಡೆಯದ ಕಾರಣ, ಸಂಪ್ರದಾಯಸ್ಥರು ಮಾತ್ರ ಹಿಮವಂತ್ ಲಾಡ್ಜ್್ಗೆ ಬಂದು ವ್ಯಾಪಾರ ಕಡಿಮೆ ಇರುತ್ತಿತ್ತು. ಕೊಲೆಯಾದಾಗ ಅದನ್ನು ಪತ್ರಿಕೆಯಲ್ಲಿ ಬರೆಸಿದರೆ ತಮ್ಮ ಲಾಡ್ಜ್ ವ್ಯಾಪಾರದಲ್ಲಿ ಮುಂದುವರಿಯುತ್ತದೆ ಎಂಬ ಯೋಚನೆಯಿಂದ ರೆಡ್ಡಿ ಮೊದಲ ಬಾರಿಗೆ ಬಿಳಿಗಿರಿಗೆ ಪುಡಿಗಾಸು, ಅಗ್ಗದ ಮದ್ಯ ನೀಡಿ ಪತ್ರಿಕೆಯಲ್ಲಿ ಬರೆಸಿದ. ಒಂದು ಬಾರಿ ರುಚಿ ಕಂಡರೆ ಬಿಡುವವನಲ್ಲ ಬಿಳಿಗಿರಿ. ಎಲ್ಲೂ ಎಣ್ಣೆ ಸಿಗಲಿಲ್ಲವೆಂದರೆ ರೆಡ್ಡಿ ಬಳಿ ಬಂದು ಜೊಲ್ಲು ಸುರಿಸುತ್ತಿದ್ದ. ಹಾಗೆ ಪರಿಚಯವಾದ ಅವರ ಸ್ನೇಹ ಮನೆವರೆಗೂ ಮುಟ್ಟಿತು. ಬಿಳಿಗಿರಿಯ ನರಿ ಬುದ್ಧಿ ತಿಳಿಯದ ರೆಡ್ಡಿ ಯಾವಾಗ ಮನೆಗೆ ಬಿಟ್ಟುಕೊಂಡನೋ ಅದೇ ದಿನ ಅವನ ಮನೆಗೆ ಗೂಬೆ ಪ್ರವೇಶವಾದಂತಾಗಿತ್ತು!

ಮೊದಲಿಗೆ ರೆಡ್ಡಿ ಇದ್ದಾಗ ಬರುತ್ತಿದ್ದ ಬಿಳಿಗಿರಿ ಕ್ರಮೇಣ ರೆಡ್ಡಿ ಇಲ್ಲದ ಸಮಯದಲ್ಲೇ ಬರತೊಡಗಿದ. ಮೊದಲಿಗೆ ಏನೂ ತಿಳಿಯದ ರೆಡ್ಡಿ ಸುಮ್ಮನಿದ್ದ. ಆದರೆ, ಕ್ರಮೇಣ ಹೆಂಡತಿಯಲ್ಲಿ ಕೆಲ ಬದಲಾವಣೆಗಳನ್ನು ಕಂಡ. ಬಿಳಿಗಿರಿ ಮಾಡುತ್ತಿರುವ ದ್ರೋಹಕ್ಕೆ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ರೆಡ್ಡಿ ಒದ್ದಾಡತೊಡಗಿದ. ಹೆಂಡತಿ ವಿಚಾರವಾಗಿ ಸಹಿಸಿಕೊಂಡಿದ್ದ ರೆಡ್ಡಿಗೆ ಮತ್ತೊಂದು ಶಾಕ್; ಮಗಳು ಕೂಡಾ ಅದೇ ಬಿಳಿಗಿರಿಯ ಮೋಸದ ಜಾಲದಲ್ಲಿ ಸಿಲುಕಿದ್ದಳು! ಇದನ್ನು ತಿಳಿದು ಹೌಹಾರಿದ ರೆಡ್ಡಿ ಮಗಳಿಗೆ ಬುದ್ಧಿ ಹೇಳಿದ. ಆದರೆ, ಪ್ರಯೊಜನ ಆಗಲಿಲ್ಲ. ಮೊದಲೆಲ್ಲಾ ತಂದೆಗೆ ತಿಳಿಯದ ಹಾಗೆ ಓಡಾಡುತ್ತಿದ್ದ ಮಗಳು ಈಗ ನಿರ್ಭಯವಾಗಿ ತಂದೆಯ ಎದುರಿಗೇ ಓಡಾಡಲು ಆರಂಭಿಸಿದ್ದಳು. ಇದೆಲ್ಲವೂ ನಡೆಯುತ್ತಿರುವಾಗಲೇ

ಅವಳಿಗೆ ಅರಿವಾಗತೊಡಗಿತು; ಇವನು ಕೇವಲ ತನ್ನನ್ನು ಬಳಸಿಕೊಳ್ಳುತ್ತಾನೆ, ಹೊರತು ಬಾಳು ಕೊಡುವುದಿಲ್ಲ ಎಂಬುದು. ಅಷ್ಟರಲ್ಲಾಗಲೇ ಆಕೆ ಬಹುದೂರ ಬಂದಾಗಿತ್ತು. ಅವನಿಂದ ದೂರವಾಗುವ ಪ್ರಯತ್ನ ಮಾಡತೊಡಗಿದಳು. ಅದು ಸುಲಭವಿರಲಿಲ್ಲ. ಮಗಳ ಸ್ಥಿತಿ, ತಾನು ಮಾಡಿದ ತಪ್ಪಿನ ಅರಿವಾಗ ತೊಡಗಿತ್ತು ರೆಡ್ಡಿಯ ಹೆಂಡತಿಗೆ. ಆಕೆ ಕೂಡಾ ಬಿಳಿಗಿರಿಯ ತೆಕ್ಕೆಯಿಂದ ದೂರವಾದಳು. ಆದರೆ, ಇವರ ಅಗಲಿಕೆ ಬಿಳಿಗಿರಿಯ ಕೋಪಕ್ಕೆ ತಿರುಗಿತು.

'ತನಗೆ ಅವಶ್ಯವಿರುವ ಅಷ್ಟೂ ದಿನ ತನ್ನಿಂದ ದೂರವಾಗಲು ಬಿಡುವುದಿಲ್ಲ. ಒಂದು ವೇಳೆ ದೂರವಾಗುವ ಪ್ರಯತ್ನ ಮಾಡಿದರೆ ನಿಮ್ಮ ನನ್ನ ನಡುವಿನ ಸಂಬಂಧದ ಬಗ್ಗೆ ಪತ್ರಿಕೆಯಲ್ಲಿ ಬರೆಯುತ್ತೇನೆ. ಅಷ್ಟೇ ಅಲ್ಲ, ನಿಮ್ಮ ತಂದೆ ನಡೆಸುತ್ತಿರುವ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಪೊಲೀಸ್ ರೈಡ್ ಮಾಡಿಸುತ್ತೇನೆ' ಎಂಬ ಬೆದರಿಕೆ ಹಾಕತೊಡಗಿದ. ಸಹಜವಾಗಿ ಇಡೀ ಕುಟುಂಬದ ನೆಮ್ಮದಿ ಹಾಳಾಯಿತು.

ಇವನಿಗೆ ತಿಳಿಯದ ಹಾಗೆ ಮಗಳ ಮದುವೆ ಮಾಡಿ ಮುಗಿಸಿದರೆ ಮುಂದೆ ತಮ್ಮ ಬಾಳು ಹೇಗಾದರೂ ಆಗಲಿ ಎಂಬ ತೀರ್ಮಾನಕ್ಕೆ ರೆಡ್ಡಿ ದಂಪತಿ ಬಂದರು. ಹುಡುಗಿಗೆ ಒಂದು ಒಳ್ಳೆಯ ಸಂಬಂಧವೂ ಗೊತ್ತಾಯಿತು. ಈ ಸಂಬಂಧ ಒಪ್ಪಿದರೆ ಮಗಳು ವಿದೇಶದಲ್ಲಿ ನೆಲೆಸುತ್ತಾಳೆ. ನಂತರವಾದರೂ ಈ ಬಿಳಿಗಿರಿಯಿಂದ ಮುಕ್ತಿ ಸಿಗುತ್ತದೆ ಎಂಬುದು ರೆಡ್ಡಿಯ ಯೋಚನೆ. ಇದಕ್ಕೆ ಮಗಳೂ ಒಪ್ಪಿದಳು. ಆದರೆ, ಈ ವಿಷಯವನ್ನು ಹೇಗೋ ತಿಳಿದ ಬಿಳಿಗಿರಿ ಹಿಂದಿನ ದಿನದ ರಾತ್ರಿ ಫೋನ್ ಮಾಡಿ ನಾಳೆ ಬಂದು ಹುಡುಗನ ಮುಂದೆ ಎಲ್ಲಾ ವಿಚಾರ ಹೇಳುವುದಾಗಿ ಧಮಕಿ ಹಾಕಿದ. ಅದೇ ಕಾರಣಕ್ಕೆ ಇಂದು ರೆಡ್ಡಿ ತೀರಾ ತಲೆ ಕೆಡಿಸಿಕೊಂಡು ಪದೇ ಪದೇ ರಸ್ತೆಯ ಕಡೆ ನೋಡುತ್ತಿದ್ದಾನೆ.
--
ಬಂತು ಗುಳ್ಳೆನರಿ!

ಲಾಡ್ಜ್ ಮುಂದೆ ಕೆಂಪು ಬಣ್ಣದ ಸ್ಕೋಡಾ ಕಾರು ಬಂದು ನಿಂತಿತೆಂದರೆ ಸಾಕು ರೆಡ್ಡಿಯ ಎದೆ ಬಡಿತ ಹೊರಗೆ ಕೇಳಿಸುವಷ್ಟು ಗಟ್ಟಿಯಾಗಿ ಬಡಿದುಕೊಳ್ಳುತ್ತದೆ. ಯಾಕೆಂದರೆ, ಆ ಕಾರು ಬಿಳಿಗಿರಿಯದು ಎಂದು ಅವನಿಗೆ ಚೆನ್ನಾಗಿ ಗೊತ್ತಿದೆ. ಅನೇಕ ಮಾಂಸದ ಮನೆಗಳ ಅದೆಷ್ಟೋ ಹೆಣ್ಣುಮಕ್ಕಳು ಬೆವರು ಸುರಿಸಿ ರಾತ್ರಿ ಹಗಲು ದುಡಿದು ಸಂಪಾದಿಸಿದ ಹಣದಲ್ಲೂ ಪಾಲು ಪಡೆದು ಈ ಕಾರು ಪಡೆದಿದ್ದಾನೆ ಎಂಬ ಸತ್ಯವೂ ರೆಡ್ಡಿಗೆ ಗೊತ್ತು. ಆದರೆ, ಏನು ಮಾಡಲೂ ರೆಡ್ಡಿ ನಿಸ್ಸಾಹಯಕ. ಯಾಕೆಂದರೆ, ಅವನಿಗೆ ಪತ್ರಕರ್ತನೆಂಬ ಹಣೆಪಟ್ಟಿಯಿದೆ; ಅದೇ ಕಾರಣಕ್ಕೆ ಪೊಲೀಸ್ ಅಧಿಕಾರಿಗಳ ಸ್ನೇಹವಿದೆ, ರಾಜಕಾರಣಿಗಳ ಬೆಂಬಲವಿದೆ!

ಕಾರಿಳಿದು ಒಳಬರುತ್ತಿರುವ ಬಿಳಿಗಿರಿಯನ್ನು ಕಂಡ ರೆಡ್ಡಿ ಕೈ ಮುಗಿದು ಬೇಡಿಕೊಳ್ಳುತ್ತಾನೆ. ಆದರೆ, ಕೇಳುವುದಕ್ಕೆ ಬಿಳಿಗಿರಿ ಅನ್ನೋ ಪ್ರಾಣಿಗೆ ಮಾನವೀಯತೆ ಅನ್ನೋದು ಇದ್ದರೆ ತಾನೆ? ಇದ್ಯಾವುದಕ್ಕೂ ಸೊಪ್ಪು ಹಾಕದ ಅವನು ನೇರವಾಗಿ ಮನೆಯೊಳಗೆ ಹೋಗಿ ರೆಡ್ಡಿ ಮಗಳನ್ನು ತನ್ನ ಜೊತೆ ಬರುವಂತೆ ಆದೇಶಿಸುತ್ತಾನೆ. ಆದರೆ, ಇದನ್ನು ಮೊದಲೇ ಊಹಿಸಿದ್ದ ಅವಳು ನೇರವಾಗಿ ಮುಖದ ಮೇಲೆ ಕ್ಯಾಕರಿಸಿ ಉಗಿದು ನಿರಾಕರಿಸುತ್ತಾಳೆ. ಇಂಥ ಅಸಹ್ಯಗಳನ್ನು ಅದೆಷ್ಟೋ ನೋಡಿರುವ

ಅವನಿಗೆ ಇದೇನು ಮಹಾ ಲೆಕ್ಕ? ಮುಖದ ಮೇಲಿನ ಉಗುಳನ್ನು ಒರೆಸಿಕೊಂಡು 'ನೋಡಿಕೊಳ್ಳುತ್ತೇನೆ' ಎಂಬ ಧಮಕಿ ಹಾಕಿ ಹೊರಬಂದ. ಅದೇ ಸಮಯಕ್ಕೆ ಗಂಡಿನ ಕಡೆಯಿಂದ ಫೋನು ಬಂದು ಅಂದು ನಡೆಯಲಿರುವ ವಧು ಪರೀಕ್ಷೆ ಮುಂದೂಡಿರುವ ಬಗ್ಗೆ ತಿಳಿಸುತ್ತಾರೆ. ಇದರಿಂದ ರೆಡ್ಡಿ ಕುಟುಂಬ ಸ್ವಲ್ಪ ಮಟ್ಟಿಗೆ ನಿರಾಳವಾಗುತ್ತೆ ನಿಜ. ಆದರೆ, ಈ ಬಿಳಿಗಿರಿಯಿಂದ ಪಾರಾಗುವ ಮಾರ್ಗದ ಬಗ್ಗೆ ದಿಕ್ಕು ಕಾಣದೆ ಪರದಾಡುತ್ತಾರೆ.

ಮುಂದೇನಾಯ್ತು?

ಶತ್ರುವಿನ ಶತ್ರು ಮಿತ್ರ ಅಂತಾರೆ; ಇಲ್ಲಿ ಆಗಿದ್ದು ಅದೇ. ಈ ಬಿಳಿಗಿರಿ ಇದ್ದಾನಲ್ಲಾ ಇವನಿಗೆ ಸಜ್ಜನರನ್ನು ಕಂಡರೆ ಅವನ ಅಪ್ಪನಾಣೆಗೂ ಆಗೋದಿಲ್ಲ. ಒಳ್ಳೆಯ ವ್ಯಕ್ತಿಗಳ ಮೇಲೆ ಕೆಟ್ಟ ಸುದ್ದಿ ಹಬ್ಬಿಸೋದು

ಅವನ ಜಾಯಮಾನ. ಹಾಗಂತ ಅವನು ಹೇಳಿದ್ದೆಲ್ಲಾ ಸತ್ಯ ಎಂದು ನಂಬುವವರಿಲ್ಲ ಅದು ಬೇರೆ ಪ್ರಶ್ನೆ. ಆದರೂ ಮಾನವಂತರಾದವರಿಗೆ ಇವನ ಗಾಸಿಪ್ ಗಳಿಗೆ ಇರುಸು ಮುರುಸಾಗುವುದು ತಪ್ಪುತ್ತಿರಲಿಲ್ಲ. ಅಂಥ ಅನವಶ್ಯಕ ಗಾಸಿಪ್್ಗಳಿಗೆ ತುತ್ತಾಗಿದ್ದ ವ್ಯಕ್ತಿಯೊಬ್ಬರಿಗೆ ರೆಡ್ಡಿಯ ದುಃಖ ತಿಳಿಯಿತು. (ಅವರ ಹೆಸರು ಇಲ್ಲಿ ಅಪ್ರಸ್ತುತ) ಕೂಡಲೇ ಧಾವಿಸಿ ಬಂದ ಅವರು ರೆಡ್ಡಿಯ ಬೆನ್ನಿಗೆ ನಿಂತರು. ರೆಡ್ಡಿಯ ಹಿಂದೆ ಆ ಪ್ರಮುಖ ವ್ಯಕ್ತಿ ಇರುವುದನ್ನು ತಿಳಿದ ಬಿಳಿಗಿರಿ ಬಾಲ ಮುದುರಿಕೊಂಡು ಆ ಕಡೆ ಮುಖ ಹಾಕುವುದನ್ನು ಬಿಟ್ಟ. ಹಾಗಾಗಿ, ಯಾವುದೇ ಅಡ್ಡಿ ಇಲ್ಲದೆ ರೆಡ್ಡಿಯ ಮಗಳ ಮದುವೆಯಾಗಿದೆ. ಆಕೆ ಸದ್ಯ ಆಸ್ಟ್ರೇಲಿಯಾದಲ್ಲಿ ನೆಮ್ಮದಿಯಿಂದ ಇದ್ದಾಳೆ. ಬಿಳಿಗಿರಿ ಇನ್ನೂ ಇಂಥ ಹಲವು ಹೆಣ್ಣು ಮಕ್ಕಳ ಬಾಳು ಹಾಳು ಮಾಡುವ ಸಂಚು ಮುಂದುವರಿಸಿದ್ದಾನೆ. ಹೆಣ್ಣು ಹೆತ್ತವರೇ ಎಚ್ಚರ, ಆತ ಇನ್ನೂ ನಮ್ಮ ನಡುವೆ ಇದ್ದಾನೆ !
- ಅಶ್ವಪ್ರಭ

Friday, April 29, 2011

ತಪ್ಪಾಯ್ತು ತಿದ್ಕೋತೀನಿ!

ಹೌದು, ಹಾಗೊಂದು ತಪ್ಪೊಪ್ಪಿಗೆಯನ್ನು ನಿಮ್ಮಗಳ ಮುಂದೆ ಇಡಲೇಬೇಕಾಗಿ ಬಂದಿದೆ. ಎರಡು ಕಾರಣಕ್ಕಾಗಿ. ಮೊದಲನೆಯದಾಗಿ, ಮತ್ತೆ ಎಲ್ಲೊ ಒಂದು ಕಡೆ ಕೊಳೆಗೇರಿ ನಿರ್ಮಲನೆಯ ಕಾರ್ಯವನ್ನು ಮರೆತು ನನ್ನಷ್ಟಕ್ಕೆ ನಾನು ನನ್ನ ಕೆಲಸ, `ಸಖಿ' ನಿರ್ವಹಣೆಯಲ್ಲಿ ಮುಳುಗಿ ಹೋಗಿದ್ದೆ. ಕೆಲಸದ ಭರ, ಒತ್ತಡದಲ್ಲಿ ನಾನೇ ಕೈಗೆತ್ತಿಕೊಂಡಿದ್ದ ಮತ್ತು ಮೇಲಿಂದ ಮೇಲೆ ನೀವು ಹಕ್ಕೊತ್ತಾಯದಲ್ಲಿ ಮಂಡಿಸಿದ್ದ ಕೊಳೆಗೇರಿ ನಿರ್ಮೂಲನೆಯ ಈ ಆಂದೋಲನ ಅರ್ಧಕ್ಕೆ ನಿಂತು ಹೋಗಿತ್ತು. ಹಾಗಂತ ಅದನ್ನು ಮರೆತಿದ್ದೆ ಎಂದಲ್ಲ.

ಇಲ್ಲಿ ಕಾರಣಗಳು ಹಲವು. ಮೊದಲ ಆದ್ಯತೆ ನಿಮ್ಮೆಲ್ಲರ ನಿರೀಕ್ಷೆಯಂತೆ ಬರವಣಿಗೆಯನ್ನು ಮತ್ತೆ ಪ್ರಾರಂಭಿಸುವುದಾಗಿತ್ತು. ಮುಖ್ಯವಾಹಿನಿಯಲ್ಲಿನ ಬರಹ, ನೀರಿನ ಕುರಿತಾದ ಕೆಲಸಗಳನ್ನು ಪುನರಾರಂಭಿಸಲೇಬೇಕೆಂಬ ಒತ್ತಾಸೆಯೊಂದಿಗೆ ಉಳಿದೆಲ್ಲವನ್ನೂ ಬದಿಗೊತ್ತಿ ಲೇಖನಿಯನ್ನು ಹಿಡಿದಿದ್ದೆ. ಮೊದಲು ಈ ಕರ್ತವ್ಯ. ಜತೆಗೆ ಅನಿರೀಕ್ಷಿತವಾಗಿ ಜತೆಗೂಡಿದ ಸಖಿ. ಕನ್ನಡಕ್ಕೆ ಉತ್ತಮ ನಿಯತಕಾಲಿಕೆಯೊಂದನ್ನು ಕೊಡಲೇಬೇಕೆಂಬ ವ್ರತವನ್ನು ಸ್ವೀಕರಿಸಿ ಅದರಲ್ಲಿ ಮುಳುಗಿ ಹೋಗಿದ್ದೆ.

ನನಗೆ ಗೊತ್ತು, ಕೆಲಸವಿಲ್ಲದೇ ಮೂರು ತಿಂಗಳು ಮನೆಯಲ್ಲಿ ಕುಳಿತಿದ್ದಾಗ ನನ್ನನ್ನು ಸ್ಥಿತಪ್ರಜ್ಞ ರೀತಿಯಲ್ಲಿ ಇಟ್ಟದ್ದು ನಿಮ್ಮ ಬೆಂಬಲವೇ. ಜತೆಗೆ ಕೊಳೆಗೇರೆಯಂಥವನ ವಿರುದ್ಧ ಹೋರಾಟಕ್ಕೆ ನೈತಿಕ ಸ್ಥೈರ್ಯ ನೀಡಿದ್ದೂ ನೀವೇ. ಹೀಗಾಗಿ ನಿಮ್ಮ ಅಣತಿಯನ್ನು ಮೀರುವಂತೆಯೇ ಇಲ್ಲ. ಅದನ್ನು ಅರ್ಧಕ್ಕೆ ನಿಲ್ಲಿಸುವ ಪ್ರಮೇಯವೂ ಇಲ್ಲ.

ಕೆಲವು ಸತ್ಯ ಜಗತ್ತಿಗೆ ಗೊತ್ತಾಗಲೇಬೇಕು. ಅದನ್ನು ಎಲ್ಲಿಯವರೆಗೆ ಮುಚ್ಚಿಟ್ಟುಕೊಳ್ಳಲು ಸಾಧ್ಯ ? ಅಂಥ ಸತ್ಯವನ್ನು ಸಾರುವ ಕೆಲಸವನ್ನು ಮಾಡುವವರು ಯಾರು? ಎಲ್ಲರೂ `ಹಾಳಾಗಿ ಹೋಗಲಿ, ಅವನ ಕರ್ಮ, ಅವನು ಅನುಭವಿಸುತ್ತಾನೆ' ಎಂಬರ್ಥದಲ್ಲಿ ಸುಮ್ಮನಿದ್ದುಬಿಟ್ಟರೆ ಬೆಕ್ಕಿಗೆ ಗಂಟೆ ಕಟ್ಟುವವರು...ಅಲ್ಲಲ್ಲ ನರಿಗೆ ಬುದ್ಧಿ ಕಲಿಸುವವರಾದರೂ ಯಾರು ? ಜನರ ಮುಂದೆ ವಾಸ್ತವವನ್ನು ಬಿಚ್ಚಿಡಬೇಕು. ನಮ್ಮ ನಡುವಿನ ಸೋಗುಗಾರರ ಅಸಲೀ ವಿಕೃತಿಯನ್ನು ಸಾರಬೇಕು. ತನ್ಮೂಲಕ ಈ ಸಮಾಜ ಎಚ್ಚೆತ್ತುಕೊಳ್ಳುಬೇಕು. ತಾನು ಹೇಳಿದ್ದೇ ಸತ್ಯವೆಂದು ನಂಬಿಸಿ, ಮನಸ್ಸಿಗೆ ಬಂದ್ದದ್ದನ್ನು ಬರೆದು ಅಕ್ಷರ ಹಾದರ ಮಾಡುತ್ತಾ, ಅದನ್ನೇ ಸಾಧನೆಯೆಂದು ಬಿಂಬಿಸಿಕೊಳ್ಳುತ್ತಾ ವ್ಯಾಪಾರಕ್ಕಿಳಿದಿರುವ `ದೈತ್ಯ ಬರಹಗಾರ'ರನ್ನು ತಿರಸ್ಕರಿಸುವಂತಾಗಬೇಕು. ಕನ್ನಡ ಓದುಗರು ಸದಭಿರುಚಿಯುಳ್ಳವರು, ಕ್ರಿಯಾಶೀಲ, ರಚನಾತ್ಮಕವಾದುದಷ್ಟೇ ಓದುತ್ತಾರೆ ಎಂಬ ಸಂದೇಶ ಇಂಥ ಟ್ಯಾಬ್ಲಾಯ್ಡ್ ಪತ್ರಕರ್ತರಿಗೆ ತಲುಪಲೇಬೇಕು. ಅದಕ್ಕಾಗಿ ನನ್ನ ಆಂದೋಲನ.

ಅವನು ಅಸಹಾಯಕತೆಯ ಪರೋಚ್ಚ ಸ್ಥಿತಿಯನ್ನು ತಲುಪಿದ್ದಾನೆ. ಕೈಲಾಗದವನು ಮೈ ಪರಚಿಕೊಂಡ ಎಂಬಂತೆ ನನ್ನ ಹೆಂಡತಿ, ಹತ್ತು ವರ್ಷದ ಮಗಳ ಬಗ್ಗೆಯೆಲ್ಲಾ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದಾನೆ. ನಿಮ್ಮ ಬೆಂಬಲ ಇರುವವರೆಗೆ ಇಂಥದಕ್ಕೆಲ್ಲಾ ಬಗ್ಗುವವನು ನಾನಲ್ಲ. ಅವನ ವಿಕೃತಿಯ ಪರಾಕಾಷ್ಠೆಯ ಬಗ್ಗೆ ಪೋಲಿಸರಿಗೆ ದೂರಿದ್ದೇನೆ. ಸಮರ ಮುಂದುವರಿಯಲಿದೆ.

ಅದೆಲ್ಲಾ ಇರಲಿ, ಅವನ ವಿಚಾರ ಬದಿಗಿಟ್ಟು ಸದ್ಯಕ್ಕೆ ನಿಮಗೆ ನಾನು ಮಾಡುವ ಮನವಿ ಇಷ್ಟೇ, ನೀವು ಸಖಿಯನ್ನು ಓದಲೇಬೇಕು; ಹಾಗೂ ಓದುತ್ತಲೇ ಇರಬೇಕು.


Friday, April 1, 2011

`ಬೆಳದಿಂಗಳು'-ನಿಮಗೇನನ್ನಿಸುತ್ತೆ ?

`ಬೆಳದಿಂಗಳು'

ಸುಂದರವಾದ ಒಂದು ವಾಕ್ಯದಲ್ಲಿ ಇದನ್ನು ನಿಮ್ಮಿಂದ ವ್ಯಾಖ್ಯಾನಿಸಲು ಸಾಧ್ಯವೇ?


ಸಾಲು ಕಾವ್ಯಾತ್ಮಕವಾಗಿದ್ದರೆ ಒಳಿತು.


ಇಲ್ಲವೇ ಪಂಚ್ ನೀಡಲಿ.


ಕಲ್ಪನೆಗೆ ಸಾಕಷ್ಟು ಅವಕಾಶವಿದೆ.


ಕೊಡುತ್ತೀರಾ ಪ್ಲೀಸ್ !



ಉದಾ: ಬಂಡೆಯ ಮೇಲೆ ಚೆಲ್ಲಿ ಹೋದ ನೊರೆವಾಲ ತೆರೆ...


ಭೂಮಿಯ ಮಹಾಮಜ್ಜನಕ್ಕೆ ತಿಂಗಳನು ತಂದಿಟ್ಟ ಕೆನೆ ಹಾಲು...


ನಿಶಾ ದೇವಿಯ ಮುಖಾರವಿಂದಕೆ ಲೇಪಿತ ಕಾಂತಿ ವರ್ಧಕ...

Thursday, March 10, 2011

ಮತ್ತೆ ಬರೆಯುತ್ತಿದ್ದೇನೆ...ಅಂಕಣವನ್ನೂ ಸಹ

ಇದಕ್ಕೆ ಕ್ಷಮೆ ಇಲ್ಲ. ಖಂಡಿತಾ ನಾನಾಗಿದ್ದರೆ ಇದನ್ನು ಸಹಿಸುತ್ತಿರಲಿಲ್ಲ. ಸರಿ ಸುಮಾರು 22 ದಿನಗಳಿಂದ ಒಂದಕ್ಷರವನ್ನೂ ಬ್ಲಾಗ್ಗೆ ಬರೆಯಲಿಲ್ಲ. ನನಗೆ ಗೊತ್ತು ಪ್ರತಿದಿನವೂ ಹೊಸತರ ಕಾತರದಲ್ಲಿ ನೀವು ಬ್ಲಾಗ್ ತೆರೆಯುವುದು ಮತ್ತದೇ ಹಳೆಯ ಹೆಡ್ಡಿಂಗ್ಗಳನ್ನು ನೋಡಿ ಬೇಸರದಿಂದ ಮನದಲ್ಲೇ "ಇವನಿಗೇನಾಗಿದೆ ಧಾಡಿ, ಹೊಸ ಪತ್ರಿಕೆ ಸೇರುತ್ತಿದ್ದಂತೆಯೇ ನಮ್ಮನ್ನು ಮರೆತೇಬಿಟ್ಟಿದ್ದಾನಲ್ಲಾ ?" ಎಂದು ಮನದಲ್ಲೇ ಶಪಿಸುತ್ತಾ ವಿಂಡೋ ಕ್ಲೋಸ್ ಮಾಡುವುದು ನಡೆಸಿಯೇ ಇರುತ್ತೀರಿ. ನಿಮ್ಮ ಗೊಣಗಾಟದಲ್ಲೂ ಅರ್ಥ ಇದೆ. ಆದರೇನು ಮಾಡಲಿ. ಒಮ್ಮಿಂದೊಮ್ಮಲೇ ಬ್ಯುಸಿ ಆಗಿಬಿಟ್ಟದ್ದು ನಿಜ. ಇಂಥದ್ದೊಂದು ಕೆಲಸಬಾಕತನಕ್ಕಾಗಿ ಎರಡೂವರೆ ತಿಂಗಳು ನಾನು ತಪಸ್ಸು ಮಾಡಿದ್ದು ಗೊತ್ತೇ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಹೊಸ ಪತ್ರಿಕೆ, ಹೊಸ ಪರಿಸರ, ಹೊಸ ವ್ಯವಸ್ಥೆ, ಹೊಸ ಮುಖಗಳು...ಹೀಗೆ ಎಲ್ಲ ಹೊಸತರ ನಡುವೆ ನಾವು ಮಾತ್ರ ಮುಖ ಸಿಂಡರಿಸಿಕೊಂಡು, ತಲೆ ಬಗ್ಗಿಸಿ ಮೂದೇವಿ ಥರ ಕುಳಿತುಬಿಡೋದರಲ್ಲಿ ಏನು ಅರ್ಥವಿದೆ ಹೇಳಿ. ಎಲ್ಲರಿಗೂ ಹೊಂದಿಕೊಳ್ಳಬೇಕು. ನಗುನಗುತ್ತಾ ಸ್ವಾಗತಿಸಬೇಕು. ನಮ್ಮ ಸ್ನೇಹದ ತೆಕ್ಕೆಯೊಳಕ್ಕೆ ಅವರನ್ನು ಎಳೆದುಕೊಳ್ಳಬೇಕು. ಅವರನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮನ್ನು ಅವರಿಗೆ ಅರ್ಥ ಮಾಡಿಸಿಬೇಕು. ಈ ಎಲ್ಲದರ ನಂತರ ಹೊಸ ಸಾಫ್ಟ್ವೇರ್ ಕಲಿಕೆಯೊಂದು ತಲೆಬಿಸಿ. ಇವನ್ನೆಲ್ಲಾ ಅರಗಿಸಿಕೊಳ್ಳಬೇಕೆನ್ನುವಾಗಲೇ ಹೊಸ "ಸಖಿ' ನನ್ನ ಬೆನ್ನುಬಿದ್ದುಬಿಡಬೇಕೇ? ಅತ್ಯಂತ ತುಂಟಿಯಾಕೆ. ಮೊದಲ ನೋಟದಲ್ಲೇ ನನ್ನ ಸೆಳೆದುಬಿಟ್ಟಳು ಚಕೋರಿ. ಅಷ್ಟೆ, ಸತ್ಯ ಹೇಳಬೇಕೆಂದರೆ ಆಕೆ ಸಿಕ್ಕ ಕ್ಷಣದಿಂದ ಎಲ್ಲೆವೆಂದರೆ ಎಲ್ಲವೂ, ಈ ಜಗತ್ತನ್ನೇ ಮರೆತುಬಿಟ್ಟೆ ನಾನು. ಮೊದಲೇ ರೂಪವತಿ. ತುಸುವೇ ಹಚ್ಚಿಕೊಂಡರೂ ಆಪ್ತವಾಗಿಬಿಡುತ್ತಾಳೆ. ಆದರೆ ಪೆದ್ದುಮುಂಡೇದು. ಏನೇನೋ ಹರಟುತ್ತಾಳೆ, ಸ್ವಲ್ಪ ಶಿಸ್ತುಕಡಿಮೆ. ಒಂಚೂರು ಜತೆಗಿದ್ದು, ಗಮನಕೊಟ್ಟು ತಿದ್ದಿದರೆ ಜಗತ್ತನ್ನೇ ಗೆಲ್ಲಬಲ್ಲಳು. ನನಗೆ ಸಿಕ್ಕ ಈ ಹೊಸ ಗೆಳತಿಯನ್ನು ಎಲ್ಲ ರೀತಿಯಿಂದಲೂ ಸವರ್ಾಂಗ ಸುಂದರಗೊಳಿಸಿ ನಿಮ್ಮೆದುರು ತಂದು ನಿಲ್ಲಿಸುವವರೆಗೆ ನನಗೆ ಸಮಾಧಾನವಿರಲಿಲ್ಲ. ಅದಕ್ಕಾಗಿ ಇಷ್ಟು ದಿನ ನಿಮ್ಮ ಜತೆ ಈ ಬ್ಲಾಗ್ ತಾಣದಲ್ಲಿ ಸಂವಾದಿಸಲು ಆಗಲಿಲ್ಲ. ಅರ್ಥ ಮಾಡಿಕೊಳ್ಳುತ್ತೀರಲ್ಲಾ ? ಪ್ಲೀಸ್...

ನನಗೆ ಗೊತ್ತು ನಿಮ್ಮದು ಹುಸಿ ಮುನಿಸು. ಈ ಬರಹ ನೋಡುತ್ತಿದ್ದಂತೆಯೇ ಕೋಪ ಕರಗಿ ಹೋಗಿರುತ್ತದೆ. ಹಾಗೆಂದು ನಿಮ್ಮ ಅವ್ಯಾಜ್ಯ ಪ್ರೇಮಕ್ಕೆ ದ್ರೋಹ ಬಗೆಯಲಾರೆ. ಕೊಟ್ಟ ಮಾತಿಗೆ ತಪ್ಪಿ ನಡೆಯಲಾರೆ. ತೀರಾ ಪ್ರತಿ ದಿನವಲ್ಲದಿದ್ದರೂ ಆಗಾಗ, ನಿಯಮಿತವಾಗಿ ನಿಮ್ಮ ಜತೆ ಸಂವಾದಿಸುತ್ತಿರುತ್ತೇನೆ. ಈಗ ಹೇಳಿ, "ಕನ್ನಡ ಪ್ರಭ' ಹೇಗನ್ನಿಸುತ್ತಿದೆ ? ನಮ್ಮ ಬದಲಾವಣೆಗಳು ನಿಮಗೆ ಇಷ್ಟವಾಗುತ್ತಿದೆಯಲ್ಲವೇ ? ಹೊಸ ಪುರವಣಿ ಸಖಿಯ ನನ್ನ ಪಾಲಿನ ಮೊದಲ ಸಂಚಿಕೆಯ ಕೆಲಸವನ್ನು ನಿನ್ನೆಯಷ್ಟೇ ಮುಗಿಸಿ ನಿಮ್ಮೊಂದಿಗೆ ಹರಟಲು ಕುಳಿತಿದ್ದೇನೆ.


ಇನ್ನೇನು ಈ ತಿಂಗಳ ಹದಿನೈದರ ಹೊತ್ತಿಗೆ ಆಕೆಯೂ ನಿಮ್ಮೆದುರು ಬಂದುಬಿಡುತ್ತಾಳೆ. ಆಕೆಯನ್ನೂ ಒಂದಷ್ಟು ಹೊಸರೂಪದಲ್ಲಿ ನೋಡಲು ಪ್ರಯತ್ನಿಸಿದ್ದೇನೆ. ಅದು ಆಕೆಗೆ ಚೆಂದ ಕಾಣುತ್ತದೆಯೋ ಇಲ್ಲವೋ ಎಂಬುದನ್ನು ನೋಡಿ ಹೇಳುತ್ತೀರಲ್ಲಾ ? ಬಹಳಷ್ಟು ಅಲ್ಲದಿದ್ದರೂ ಒಂದಷ್ಟು ಆಕೆಯನ್ನು ಬದಲಿಸಿದೇನೆ. ಇಷ್ಟರವರೆಗೆ ಕೇವಲ ಮಹಿಳೆಯರ ಗೆಳತಿಯಷ್ಟೇ ಆಗಿ ಉಳಿದಿದ್ದ ಆಕೆ, ಇನ್ನು ಮುಂದೆ ಎಲ್ಲ ಯುವ ಮನಸ್ಸುಗಳ ಸನಿಹಕ್ಕೆ ಆಕೆಯನ್ನು ಕರೆದೊಯ್ಯಲು ನಿರ್ಧರಿಸಿದ್ದೇನೆ. ಹಾಗೆಂದು ಮತ್ತೆ ಯುವಕರಿಗಷ್ಟೇ ಸೀಮಿತವೆಂತಲ್ಲ. ಅನುಭವ ಮಾಗಿದ, ಮನಸ್ಸು ಇನ್ನೂ ಯವ್ವನವನ್ನು ಕಳೆದುಕೊಳ್ಳದ ಎಲ್ಲ ಸಹೃದಯೀಗಳು ಪ್ರೀತಿಯಿಂದ ಸ್ವೀಕರಿಸುವ ಸಂಚಿಕೆಗಳನ್ನು ತರಬೇಕೆಂಬ ಹಂಬಲ ನನ್ನದು. ಆ ನಿಟ್ಟಿನಲ್ಲಿ ನಿಮ್ಮ ಬೆಂಬಲ.


ಹಾಂ...ಮರೆತಿದ್ದೆ, ನಾಳೆಯಿಂದ ನನ್ನ ಅಂಕಣ "ಕನ್ನಡಪ್ರಭ"ದಲ್ಲಿ ಮತ್ತೆ ಪ್ರತ್ಯಕ್ಷವಾಗುತ್ತಿದೆ; ಒಂದಷ್ಟು ಬದಲಾವಣೆಗಳೊಂದಿಗೆ. ಹಾಗೆಂದು, ನೀರ ದಾಹವನ್ನು ಬತ್ತಿಸಿಕೊಂಡಿಲ್ಲ. ಬರಹದ ಕ್ಯಾನ್ವಾಸನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವ ಆಸೆ ನನ್ನದು. ನೀರಿಗಾಗಿ ಸೀಮಿತವಾದ ನನ್ನ ಅಂಕಣ ಆರಂಭವಾದ ದಿನವಿನ್ನೂ ನನಗೆ ಚೆನ್ನಾಗಿ ನೆನಪಿದೆ. ಅಂದು ನಾನು ಯಾರೆಂಬುದೇ ಓದುಗರಿಗೆ ಗೊತ್ತಿರಲಿಲ್ಲ. ಅಷ್ಟು ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದರೂ, ಸಂಯುಕ್ತ ಕನರ್ಾಟಕ, ಕರ್ಮವೀರ, ಕಸ್ತೂರಿ, ವಿಜಯ ಕನರ್ಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಆಗಾಗ ಬರೆಯುತ್ತಿದ್ದರೂ ನನ್ನದೇ ಅಂತ ಒಂದು ವೇದಿಕೆ ಸಿಕ್ಕಿರಲಿಲ್ಲ. ಅಂಥದ್ದೊಂದು ಅಪರೂಪದ ಅವಕಾಶವನ್ನು ಒದಗಿಸಿಕೊಟ್ಟವರು ನನ್ನ ನೆಚ್ಚಿನ ಸಂಪಾದಕ ಶ್ರೀ ವಿಶ್ವೇಶ್ವರ ಭಟ್ಟರು. ಮೂರ್ನಾಲ್ಕು ವರ್ಷಗಳಿಂದ ನೀರಿನ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರೂ ಅದನ್ನು ಬರೆದಿಡುವ, ನಿಯಮಿತವಾಗಿ ದಾಖಲಿಸಿಡುವ ಗೋಜಿಗೆ ಹೋಗಿರಲೇ ಇಲ್ಲ. ನನ್ನೊಳಗಿನ ಈ ಆಸಕ್ತಿಯನ್ನು ಗುರುತಿಸಿ ಶ್ರೀ ಭಟ್ಟರು ಅಂಕಣ ಬರೆಯಲು ಹಚ್ಚಿದರು. ಹಲವು ದಿನಗಳಿಂದ ಇಂಥದ್ದೊಂದು ಬಯಕೆಯನ್ನು ಅವರ ಮುಂದಿಟ್ಟು ಅವಕಾಶಕ್ಕಾಗಿ ಪೀಡಿಸುತ್ತಲೇ ಇದ್ದೆ. ನೀರಿನ ಬಗ್ಗೆ ಬರೆದರೂ ಎಷ್ಟು ಬರೆದಾನು ? ಅದು ಅಂಕಣಕ್ಕೆ ಸೂಕ್ತ ವಸ್ತುವೇ ? ಇಂಥ ಶುಷ್ಕ ವಿಷಯದ ಮೇಲೆ ಬರೆದರೆ ಓದುಗರು ಒಪ್ಪಿಕೊಂಡಾರೆ...ಎಂಬಿತ್ಯಾದಿ ಸಂಶಯಗಳು ಅವರಲ್ಲಿದ್ದಂತಿತ್ತು. ಬಹುಶಃ ಅವರಲ್ಲಿದ್ದುದಕ್ಕಿಂತ ಹೆಚ್ಚಿನ ಅನುಮಾನ ನನ್ನೊಳಗಿತ್ತು. ಆದರೆ ನೀರಿನ ಮೇಲಿರುವ ನನ್ನ ಪ್ರೀತಿ, ಮತ್ತು ಏನಾದರೂ ಹೊಸತನ್ನು ಕೊಡಬೇಕೆಂಬ ಹಂಬಲ, ಅದು ಅಭಿವೃದ್ಧಿಪರ ಬರವಣಿಗೇ ಆಗಿರಬೇಕೆಂಬ ಸಂಕಲ್ಪ ನನ್ನನ್ನು ನೀರಿನ ಮೇಲಿನ ಅಂಕಣಕ್ಕೆ ಪ್ರೇರೇಪಿಸಿತ್ತು.


ಅಂತೂ ಈಗ್ಗೆ ಆರು ವರ್ಷದ ಕೆಳಗೆ ಇದೇ ಮಾಚರ್್ ಮೊದಲ ಶುಕ್ರವಾರ "ನೀರು-ನೆರಳು" ಎಂಬ ಹೆಸರಿನಡಿ ನನ್ನ ಮೊದಲ ಅಂಕಣ ವಿಜಯ ಕನರ್ಾಟಕದ ಸಂಪಾದಕೀಯ ಪುಟದಲ್ಲಿ ಪ್ರಕಟವಾಗಿಯೇ ಬಿಟ್ಟಿತು. ಮೊದಲ ಲೇಖನವನ್ನು ಈಗ ಓದಿಕೊಂಡರೆ ನನಗೇ ನಾಚಿಕೆಯಾಗುತ್ತದೆ. ಅಷ್ಟೊಂದು ಬಾಲೀಶವಾಗಿತ್ತು. ಮುಂದಿನದಕ್ಕೆ ಸಾಕಷ್ಟು ಹಿಂಜರಿಕೆ ಕಾಡಿತು. ಆದರೆ ಓದುಗರು ಹಿಂಜರಿಯಲಿಲ್ಲ. ಅದನ್ನು ಮುಕ್ತವಾಗಿ ಸ್ವೀಕರಿಸಿದರು. ಸುಧಾರಣೆಗಾಗಿ ಕಾದರು. ಮೊದಲ ಹತ್ತು ಹನ್ನೆರಡು ವಾರದ ವರೆಗೂ ಅದೇ ಸ್ಥಿತಿ ಮುಂದುವರಿಕೆ. ನನ್ನ ಸಂಪಾದಕರೂ ತಾಳ್ಮೆ ಕಳೆದುಕೊಳ್ಳಲಿಲ್ಲ. ಅಷ್ಟರಲ್ಲಿ ಒಂದಷ್ಟು ಹಿಡಿತ ಸಿಕ್ಕಿತ್ತು. ಹಿತೈಷಿಗಳು, ವಿಷಯ ತಜ್ಞರು, ಹಿರಿಯರು ನನ್ನ ಬೆಂಬಲಕ್ಕೆ ನಿಂತರು. ಅಂಕಣವೊಂದಕ್ಕೆ ಬೇಕಾದ ಅಧ್ಯಯನ ಶಿಸ್ತು, ಗಾಂಭೀರ್ಯ, ನಿಯಮಿತತೆ, ಭಾಷೆ, ಓದಿಸಿಕೊಳ್ಳು ಶೈಲಿ, ವಿಯ ನಿರೂಪಣೆಗೆ ಅಗತ್ಯ ನವಿರು ಇತ್ಯಾದಿಗಳನ್ನು ಒಂದೊಂದಾಗಿಒ ಅವರು ನನಗೆ ಹೇಳಿಕೊಟ್ಟರು. ಅಲ್ಲಿಗೆ ನನ್ನಲ್ಲಿ ಒಂದು ರೀತಿಯ ವಿಶ್ವಾಸ ಮೂಡಿತ್ತು. ಇದನ್ನುಳಿದು ಮುಂದಿನದೆಲ್ಲವೂ ಓದುಗರದ್ದೇ ಸಿಂಹಪಾಲು. ಅವರು ನನ್ನ ಬೆನ್ನಿಗೆ ನಿಂತು ಕಾಯ್ದರು. ಆರು ವರ್ಷಗಳ ಬಳಿಕ ಇಂದು ನಾಡಿನಲ್ಲಿ ನನಗಿಂತ ನೀರು-ನೆರಳು ಜನಪ್ರಿಯ. ಆನಂತರ ಬೇರೆ, ಬೇರೆ ಜವಾಬ್ದಾರಿಗಳನ್ನು ಪತ್ರಿಕಾ ಕ್ಷೇತ್ರದಲ್ಲಿ ನಿರ್ವಹಿಸಿದ್ದೇನೆ. ಬೇರೆ ಅದೆಷ್ಟನ್ನೋ ಬರೆದಿದ್ದೇನೆ. ವೈಯಕ್ತಿಕವಾಗಿ ಅವೆಲ್ಲವೂ ಕೊಟ್ಟ ಖುಷಿಗಿಂತ ನೀರಿನ ಬಗೆಗಿನ ಬರಹ ನನ್ನಗೆ ತೃಪ್ತಿ ತಂದಿದೆ. ಅದು ನನಗೆ ತಂದುಕೊಟ್ಟ ಇಮೇಜಿನ ಮುಂದೆ ಉಳಿದೆಲ್ಲವೂ ಗೌಣ ಎಂದುಕೊಳ್ಳುತ್ತೇನೆ.


ನೀರಿನ ಬಗೆಗಿನ ನನ್ನ ಪ್ರಾಮಾಣಿಕ ಪ್ರೀತಿಯನ್ನು ಓದುಗರು ಗುರುತಿಸಿದ್ದಾರೆ. ಅಷ್ಟು ಸಾಕು. ಅದಕ್ಕಿಂತ ಇನ್ನೇನು ಬೇಕು ನನಗೆ ?ಇದೀಗ ಕನ್ನಡಪ್ರಭದಲ್ಲಿ ಮತ್ತೆ ಬರೆಯುವ ಹುಚ್ಚು ಸಾಹಸಕ್ಕೆ ಮುಂದಾಗುತ್ತಿದ್ದೇನೆ; ನೀವೆಲ್ಲ ನನ್ನ ಜತೆಗಿದ್ದೀರಿ ಎಂಬ ಧೈರ್ಯದೊಂದಿಗೆ. ನಾಳೆ ಅಂಕಣ ಓದಿ ಏನಾಗಿದೆ? ಏನಾಗಬೇಕಿತ್ತು ಎಂಬುದನ್ನು ತಿಳಿಸುತ್ತೀರಲ್ಲಾ ? ನಿಮ್ಮ ಉತ್ತರಕ್ಕಾಗಿ ಕಾದಿರುತ್ತೇನೆ. ಪ್ಲೀಸ್ ಮರೆಯದಿರಿ. ಬರಲೇ ?

Tuesday, February 22, 2011

ಪ್ರೀತಿಯ ಸೇಸೆಗೆ ಶಿರವೊಡ್ಡಿ...


ಆ ಸುಂದರ ಸಂಜೆಯ ಮಳೆಯಲ್ಲಿ ನೆನೆದು ತೊಪ್ಪೆಯಾಗಿಬಿಡಬೇಕೆಂಬ ತವಕ. ಹುಚ್ಚೆದ್ದು ಕುಣಿಯುವ ಉತ್ಸಾಹ....


ಅದೇಕೋ ಕಾಣೆ, ಕಳೆದು ಮೂರ‍್ನಾಲ್ಕು ದಿನಗಳಿಂದ ಬೆಂಗಳೂರೆಂಬ ಬೆಂಗಳೂರಿನ ವಾತಾವರಣ ಇನ್ನಿಲ್ಲದಂತೆ ಜನರನ್ನು ಕಾದು ಕಂಗೆಡಿಸಿಬಿಟ್ಟಿತ್ತು. ಮೈಮನಗಳೆಲ್ಲ ಗಾರು ಗಬರೆದ್ದುಹೋಗಿತ್ತು. ನಡುವೆಯೇ ಹಾದು ಹೋದ ಹುಣ್ಣಿಮೆಯ ಬೆಳದಿಂಗಳ ರಾತ್ರಿಯೂ ಸಹ ತಣ್ಣನೆಯ ಅನುಭವನ್ನು ಕಸಿದುಕೊಂಡುಬಿಟ್ಟಿತ್ತು. ಶಿವರಾತ್ರಿಗೆ ಇನ್ನೂ ಹದಿನೈದು ದಿನಗಳಿವೆ ಎಂಬಾಗಲೇ ಚಳಿ ಸುಳಿವಿಲ್ಲದಂತೆ ಓಡಿ ಹೋಗಿತ್ತು. ಅದೆಂಥದ್ದೋ ಅರ್ಥವಿಲ್ಲದ ಅಸಹನೆ, ಆಯಾಸ, ದುಗುಡಗಳು ಸುಳಿದಾಡುತ್ತಿದ್ದವು. ಒಂದಕ್ಕೂ ಉತ್ತರ ಸಿಕ್ಕುತ್ತಿರಲಿಲ್ಲ. ಸುದೀರ್ಘ ತಾಳ್ಮೆಯ ಎಳೆ ಎಲ್ಲೋ ಬಿಚ್ಚಿಕೊಳ್ಳಲಾರಂಭಿಸಿದ ಅನುಭವ. ವ್ಯಾಖ್ಯಾನಕ್ಕೆ ಸಿಗದ ಬೇಸರ. ಇವೆಲ್ಲದರ ಪ್ರತೀಕವೋ ಎಂಬಂತೆ ನಿನ್ನೆ ಸೋಮವಾರದ ಬೆಳಗು ಎಂದಿನಂತಿರಲಿಲ್ಲ. ಸೂರ್ಯ ಮೂಡಿ ತಾಸು ಎರಡಾದರೂ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ. ಹಾಗಿದ್ದರೂ ಒಳಗೊಳಗೇ ಬೆವರು ಕಿತ್ತು ಬರುತ್ತಿತ್ತು. ಸ್ವಲ್ಪ ಹೊತ್ತಷ್ಟೇ ಮತ್ತೆ ಬಿಸಿಲು ಕಣ್ಬಿಟ್ಟಿತ್ತು. ಬಹುಶಃ ಮನದ ಸ್ಥಿತಿಯೂ ಅದೇ ಆಗಿತ್ತೇನೋ ?


ಇದ್ದ ಬದ್ದ ಉತ್ಸಾಹವನ್ನೆಲ್ಲಾ ಒಟ್ಟುಗೂಡಿಸಿಕೊಂಡು ಹೊರಟರೂ ಲವಲವಿಕೆಯ ಸುಳಿವಿಲ್ಲ. ಬಹುತೇಕ ಅದೇ ಸ್ಥಿತಿಯಲ್ಲೇ ರಾಜವೀಥಿಯ ಮಗ್ಗುಲಲ್ಲೇ ಮೇಲೆದ್ದು ನಿಂತಿರುವ ‘ಕನ್ನಡಪ್ರಭ’ಕಟ್ಟಡದ ನಾಲ್ಕನೇ ಮಹಡಿಯನ್ನೇರಿದ್ದೆ. ಬಿಸಿಲು ಅದೇ ಪರಿ ಬಾರಿಸುತ್ತಲೇ ಇತ್ತು. ನೆಚ್ಚಿನ ಸಂಪಾದಕರ ಕೊಠಡಿಯನ್ನು ಪ್ರವೇಶಿಸಿದಾಗ ೩.೪೦. ಐದೇ ನಿಮಿಷದಲ್ಲಿ ಪತ್ರಿಕೆಯ ಸಹಾಯಕ ಸಂಪಾದಕ ಹುದ್ದೆಯ ಆದೇಶ ಕೈ ಸೇರಿತ್ತು. ಔಪಚಾರಿಕ ಪ್ರಕ್ರಿಯೆ ಮುಗಿದು ಹೊಸ ಸಹೋದ್ಯೋಗಿಗಳತ್ತ ಸ್ನೇಹದ ಹಸ್ತ ಚಾಚಿದರೆ ಅಭೂತಪೂರ್ವ ಪ್ರತಿಕ್ರಿಯೆ. ಯಾರೊಬ್ಬರೂ ಹೊಸಬರಂತೆ ಅನ್ನಿಸಲೇ ಇಲ್ಲ. ಅರ್ಧಕ್ಕಿಂತ ಹೆಚ್ಚುಮಂದಿ ವೃತ್ತಿಯಿಂದ ಪರಿಚಿತರೇ. ಉಳಿದವರದ್ದು ಹೊಸ ಮುಖ. ಒಂದು ಸುತ್ತು ಮುಗಿಸಿ ಕಿಟಕಿಯಿಂದ ಹೊರಗಿಣುಕಿದರೆ ಬೆಳಗ್ಗೆ ಕಂಡದ್ದಕ್ಕಿಂತಲೂ ದಟ್ಟ ಮೋಡ ಕಚೇರಿಯ ಮೇಲಿನ ಬಾನಿನಲ್ಲಿ ಆವರಿಸಿದಂತೆ ಕಂಡುಬರುತ್ತಿತ್ತು. ಒಮ್ಮೆ ಆಗಸದತ್ತ ಮುಖಮಾಡಿ ನಿಟ್ಟುಸಿರು ಬಿಟ್ಟು ಬರುವ ಬಯಕೆಯಾಗಿ ಹೊರ ಬಂದರೆ, ಇದ್ದಕ್ಕಿದ್ದಂತೆ ನಾಲ್ಕಾರು ಹನಿಗಳ ಸಿಂಚನ. ಹನಿಗಳ ಸಂಖ್ಯೆ ಬೆಳೆಯುತ್ತಲೇ ಹೋಯಿತು. ಇದ್ದಕ್ಕಿದ್ದಂತೆ ಧೋ ಗುಟ್ಟುತ್ತಾ ಮಳೆ ಸುರಿಯಲಾರಂಭಿಸಿತು. ಪಕ್ಕದಲ್ಲಿದ್ದ ಗೆಳೆಯರಾರೋ ಪ್ರಶ್ನಿಸಿದರು; ಇದೆಂಥಾ ಮಳೆ ? ಸ್ವಗತವೆಂಬಂತೆ ಆದರೆ, ಸ್ವರ ಬಿಟ್ಟೇ ಉಸುರಿದ್ದೆ ಒನಕೆಮಳೆ’, ಮುಸಲಧಾರೆ !


ಬಿಟ್ಟೂಬಿಡದೇ ಅರ್ಧ ತಾಸು ನನ್ನ ನೆಚ್ಚಿನ ಮಳೆ ಸುರಿಯುತ್ತಲೇ ಇತ್ತು. ಹೊಸ ಮಿತ್ರರಲ್ಲಿ ಕೆಲವರು ರೇಗಿಸಿದರು; ನೆರಳೂ ಸಿಕ್ಕಿತ್ತು, ಜತೆಗೆ ನೀರೂ ಬಂತು. ಅವರದನ್ನು ಹಾಗೇ ಸುಮ್ಮನೇ ಹೇಳಿದ್ದರೂ ನನ್ನ ಪಾಲಿಗೆ ನೀರು-ನೆರಳೆರಡೂ ಹೊಸ ಕಚೇರಿಯ ಬಾಗಿಲಲ್ಲೇ ದಕ್ಕಿತ್ತು.


ಕೊನೆಗೂ ಎರಡೂವರೆ ತಿಂಗಳ ವನವಾಸಕ್ಕೆ ಮಂಗಳ ಹಾಡಿದ್ದೆ. ಡಿಸೆಂಬರ್ ೮, ೨೦೧೦ರ ಮಧ್ಯಾಹ್ನ ವಿಜಯ ಕರ್ನಾಟಕವನ್ನು ತೊರೆದು ಬಂದ ಬಳಿಕ ಪತ್ರಿಕಾ ಕಚೇರಿಗಳ ಕಡೆ ಮುಖ ಹಾಕಿ ನೋಡಿರಲಿಲ್ಲ. ಇಷ್ಟು ಸುದೀರ್ಘ ವಿಶ್ರಾಂತಿಯೆಂದರೆ ನಿಜವಾದ ಪತ್ರಕರ್ತನೊಬ್ಬನಿಗೆ ಅದಕ್ಕಿಂತಲೂ ಕಠಿಣ ಶಿಕ್ಷೆ ಬೇರೊಂದು ಇರಲಾರದು. ಆದರೆ ಇದೊಂದು ರೀತಿಯ ಅದ್ಭುತ ಅನುಭವ. ಜೀವನದಲ್ಲಿ ಮ್ಮೆಯಾದರೂ ಇಂಥ ಸಮಯ ಬರದಿದ್ದರೆ ನಮ್ಮನ್ನು ನಾವು ಅವಲೋಕಿಸಿಕೊಳ್ಳಲೇ ಆಗದೇನೋ. ನಾವೇನು ಎಂಬುದನ್ನು ಕಂಡುಕೊಳ್ಳುವುದರ ಜತೆಗೆ ನಿಜವಾಗಿ ನಮ್ಮವರು ಯಾರು ಎಂಬುದನ್ನು ಅರಿಯಲು ಸಾಧ್ಯವಾದದ್ದು ಈ ಅವಯ ಲಾಭ. ಹಾಗೆ ನೋಡಿದರೆ ನಿಜವಾಗಿ ನನ್ನ ಜತೆಗೆ ನಿಂತವರು ನನ್ನ ಅಭಿಮಾನಿ ಓದುಗರು. ಯಾವುದೇ ಕಾರಣವಿಲ್ಲದೇ ಕೇವಲ ನನ್ನ ಬರಹಗಳಿಗಾಗಿಯೇ ನನ್ನನ್ನು ಪ್ರೀತಿಸಿದವರು ಅವರು. ನಾವು ಪತ್ರಿಕೆಯ ಒಳಗಿದ್ದಾಗಲೂ ಹೊರಗಿದ್ದಾಗಲೂ ಒಂದೇ ರೀತಿಯಲ್ಲಿ ಕಂಡವರು. ಏನಂದರೆ ಏನನ್ನೂ ಅಪೇಕ್ಷಿಸದೇ ನಿಷ್ಕಲ್ಮಷವಾದ ಪ್ರೀತಿಯ ಧಾರೆ ಹರಿಸಿದರು. ಅದೇ ನನ್ನಲ್ಲಿ ಧೈರ್ಯ, ವಿಶ್ವಾಸ ಮೂಡಿಸಿದವು. ಮತ್ತೆ ಹೊಸ ಸಾಹಸಕ್ಕೆ ಹುರಿದುಂಬಿಸಿದವು. ಯಾರ‍್ಯಾರೋ ಏನೇನೋ ಬರೆದರು, ಹೀಗಳೆದರು, ನಿಂದಿಸಿದರು, ಬಿದ್ದಾಗಲೇ ಕಲ್ಲು ಎಸೆಯಲು ಹವಣಿಸಿದರು, ಮತ್ತೆ ಕೆಲವರು ಹೊಗಳಿದರು, ಸಹಾನುಭೂತಿಯನ್ನೂ ವ್ಯಕ್ತಪಡಿಸಿದರು, ವೃಥಾ ಅನುಕಂಪ ತೋರಿದವರಿಗೂ ಕಡಿಮೆ ಇಲ್ಲ. ಇದಾವುದಕ್ಕೂ ನನ್ನ ಓದುಗರು ತಲೆ ಕೆಡಿಸಿಕೊಳ್ಳಲಿಲ್ಲ. ಅವರಿಗೆ ಗೊತ್ತಿರುವುದು ನಿಷ್ಕಪಟ ಪ್ರೀತಿ. ಅದನ್ನು ನಿರಂತರ ನೀಡಿ, ನನ್ನಲ್ಲಿ ಬರಹ ಪ್ರೀತಿಯನ್ನು ಹೆಚ್ಚಿಸಿದರು.


ಹೆಚ್ಚಿಗೆ ಹೇಳಲೇನು ? ಮತ್ತೆ ಲೇಖನಿಗೆ ಸಾಣೆ ಹಿಡಿದುಕೊಂಡು ಸಜ್ಜಾಗಿದ್ದೇನೆ ಓದುಗರ ಅಪ್ಪಣೆಯ ಪಾಲಿಸಲು. ಮತ್ತದೇ ತುಂತುರು ಮಳೆ ಮನಕ್ಕೆ ಹಿತ ನೀಡುತ್ತಿದೆ. ಒಬ್ಬೊಬ್ಬ ಓದುಗನ ಪ್ರೀತಿಯೂ ಒಂದೊಂದು ಹನಿಯ ರೂಪದಲ್ಲಿ ಸೇಸೆಯಾಗುತ್ತಿದೆ. ಅದಕ್ಕೆ ತಲೆ ಒಡ್ಡಿದೇನೆ....ಇನ್ನೇನು ಬೇಕು ಜೀವನದಲ್ಲಿ ?

Monday, February 7, 2011

ನಿಜವಾದ ಬ್ರೇಕಿಂಗ್ ನ್ಯೂಸ್

ಬೆಸ್ಟ್ ವಿಷಸ್ ಟು ವಿಷ್ ಭಟ್....

ಅಬ್ಬಾ, ಕೊನೆಗೂ ನಾವು ಕಾಯುತ್ತಿದ್ದ ಕಾಲ ಬಂದೇ ಬಿಟ್ಟಿದೆ. ‘ಒಂದಾಟ ಭಟ್ರುದ್ದು’ ಎಂಬ ವಿನೂತನ ನಾಟಕವನ್ನು ರಂಗದ ಮೇಲೆ ತರಲು ಅತ್ತ ನಾಟಕಕಾರ ಯಶವಂತ ಸರದೇಶಪಾಂಡೆ ರಿಹರ್ಸಲ್ ನಡೆಸುತ್ತಿದ್ದಾಗಲೇ ನಮ್ಮ ಭಟ್ರು ಆಟ ಶುರು ಮಾಡೇಬಿಟ್ಟಿದ್ದಾರೆ ಕಣ್ರಿ.


ನಿಜವಾದ ಬ್ರೇಕಿಂಗ್ ನ್ಯೂಸ್ ಇದು ಸ್ವಾಮಿ, ನಮ್ಮ ನೆಚ್ಚಿನ ಸಂಪಾದಕ ವಿಶ್ವೇಶ್ವರ ಭಟ್ಟರು ‘ಕನ್ನಡ ಪ್ರಭ’ದ ಮುಖ್ಯ ಸಂಪಾದಕರಾಗಿ ಇವತ್ತು (ಸೋಮವಾರ, ೦೭.೦೨.೨೦೧೧) ಮಧ್ಯಾಹ್ನ ಅಭಿಜಿನ್ ಮೂಹೂರ್ತದಲ್ಲಿ ಅಕಾರ ಸ್ವೀಕರಿಸಿದ್ದಾರೆ. ಕನ್ನಡದ ಓದುಗರಿಗೆ ಇದಕ್ಕಿಂತ ಒಳ್ಳೆಯ ಬ್ರೇಕಿಂಗ್ ನ್ಯೂಸ್ ಬೇರಾವುದು ಇದ್ದೀತು ? ಅದೇ ಕ್ಷಣಕ್ಕೆ ಕೆಲವರ ಪಾಲಿಗೆ ಇದು ಹಾರ್ಟ್ ಬ್ರೇಕಿಂಗ್ ನ್ಯೂಸ್ ಆಗಿಯೂ ಕಾಡಿರುತ್ತದೆ ಎಂಬ ಅರಿವು ಇದ್ದೇ ಇದೆ. ಏನು ಮಾಡೋದು ? ತಲೆಗೆ ಹೊಯ್ದ ನೀರು ಕಾಲಿಗೆ ಇಳಿಯಲೇ ಬೇಕಲ್ಲಾ ?

ಈ ಎರಡು ತಿಂಗಳಲ್ಲಿ ಯಾರ‍್ಯಾರೋ ತಲೆಗೆ ಏರಿಸಿಕೊಂಡಿದ್ದರು, ಯಾರ‍್ಯಾರದೋ ತಲೆ ತಿರುಗಿತ್ತು, ಇನ್ಯಾರ‍್ಯಾರೋ ತಲೆ ಕೆಡಿಸಿಕೊಂಡಿದ್ದರು...ಆಗೋದೆಲ್ಲಾ ಒಳ್ಳೇದಕ್ಕೇ ಎಂಬ ಪಾಸಿಟೀವ್ ಥಿಂಕಿಂಗ್ ನಮ್ಮದಾಗಿತ್ತು. ಒಂದು ರೀತಿಯಲ್ಲಿ ನಮ್ಮ ಸಾಮರ್ಥ್ಯದ ನೈಜ ಅರಿವು ಆದದ್ದೇ ಈ ಅವಯಲ್ಲಿ. ಎಲ್ಲಕ್ಕಿಂತ ಹೆಚ್ಚಾಗಿ ಈ ಅವಯಲ್ಲಿ ಬಹಳಷ್ಟು ‘ಮಿತ್ರರ’ ಮುಖವಾಡ ಕಳಚಿಬಿದ್ದಿದೆ. ಎಲ್ಲವನ್ನು ಕೊಡವಿಕೊಂಡು ಹೊಸ ಹುಮ್ಮಸ್ಸಿನೊಂದಿಗೆ ಆಟ ಶುರು ಮಾಡಿದ್ದಾರೆ ಭಟ್ಟರು. ನಾವುಗಳೂ ವೀರ ಯೋಧರಂತೆ ಭಟ್ಟರ ಸಮರ್ಥ ಸೇನಾಪತ್ಯದಲ್ಲಿ ಮುನ್ನುಗ್ಗಲು ಸಜ್ಜಾಗಿದ್ದೇವೆ. ಇನ್ನೇನು ಅಕೋ, ಇಕೋ ಎನ್ನುವಷ್ಟರಲ್ಲಿ ಒಂದೇ ಮನಸ್ಸಿನಲ್ಲಿ ಮತ್ತೆ ಓದುಗ ದೊರೆಯ ದಾಹ ತಣಿಸಲು ಹೊರಡುತ್ತೇವೆ.

ಒಬ್ಬೊಬ್ಬ ಓದುಗನೂ ತಾನೇ ಸಂಪಾದಕ ಹುದ್ದೆಗೇರಿದಷ್ಟು ಸಂಭ್ರಮ ಪಡುತ್ತಿದ್ದಾನೆ. ಒಬ್ಬೊಬ್ಬರ ಉತ್ಸಾಹವನ್ನೂ ನೀವು ನೋಡಬೇಕು. ಬೆಳಗ್ಗಿನಿಂದ ಫೋನ್ ಕಾಲ್‌ಗಳದ್ದೇ ಪಾರುಪತ್ಯ. ಖಂಡಿತಾ ಓದುಗರ ನಿರೀಕ್ಷೆ ನಮ್ಮನ್ನು ದಂಗಾಗಿಸಿದೆ. ಇಂಥದ್ದೊಂದು ಭೀಮ ಬಲದೊಂದಿಗೆ ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಲು ಹೊರಡುತ್ತೇವೆ. ನಿಮ್ಮೆಲ್ಲರ ಕಣ್ಕಾಪು ಎಚ್ಚರ ತಪ್ಪದಂತೆ ಸರಿದಾರಿಯಲ್ಲಿ ನಮ್ಮನ್ನು ಕೊಂಡೊಯ್ಯುತ್ತದೆ ಎಂಬ ವಿಶ್ವಾಸ ನಮಗಿದೆ. ಗುರಿ ಮುಟ್ಟುವರೆಗೆ ಇನ್ನು ವಿರಮಿಸುವ ಪ್ರಶ್ನೆಯೇ ಇಲ್ಲ. ಮನ ಹುಚ್ಚೆದ್ದು ಕುಣಿಯುತ್ತಿದೆ. ಹೆಚ್ಚು ಬರೆಯಲು ಇವತ್ತು ಸಾಧ್ಯವೇ ಇಲ್ಲ. ಪತ್ರಿಕೆಗಳಲ್ಲಿ ಬರೆಯಲು ಇನ್ನೂ ಸಾಕಷ್ಟಿದೆಯಲ್ಲಾ ? ಇನ್ನು ದಿನವಿಲ್ಲ. ಲೇಖನಿಗೆ ಸಾಣೆ ಹಿಡಿದುಕೊಳ್ಳಬೇಕು. ಬರಲೇ...?

ನಿಮ್ಮ
ಗಿಂಡಿ ಮಾಣಿ