About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Friday, January 28, 2011

ಸ್ವಾಮೀ, ಬರಹಗಳಿಗಾವ ಪಂಥ ?

ಇದೊಂದು ರೀತಿಯ ವಿಚಿತ್ರ ಮನಃಸ್ಥಿತಿ. ಯಾವಾಗ ತನಗೊಬ್ಬ ಕಾಂಪೀಟೇಟರ್ ಹುಟ್ಟಿಕೊಂಡಿದ್ದಾನೆಂದು ಅನಿಸುತ್ತದೆಯೋ, ಆತ ತನಗಿಂತ ಬುದ್ಧಿವಂತ, ಜನಪ್ರಿಯ, ಬಲಶಾಲಿ ಎಂಬುದು ಮನವರಿಕೆಯಾಗುತ್ತದೆಯೋ ಆಗ ಇದ್ದಕ್ಕಿದ್ದಂತೆ ಅನಿಶ್ಚಿತತೆ ಕಾಡುತ್ತದೆ. ಏನಾದರೂ ಮಾಡಿ ಎದುರಾಳಿಯನ್ನು ಬಗ್ಗುಬಡಿಯಬೇಕು ಎನ್ನುವ ಭಾವನೆ ಮೂಡುತ್ತದೆ. ಅಂಥ ದುರ್ಬಲ ಮನಸ್ಸು ನಮ್ಮಿಂದ ಎಂಥಾ ಹೇಸಿಗೆಯನ್ನು ಮಾಡಿಸಲೂ ಹಿಂದೆ ಮುಂದೆ ನೋಡುವುದಿಲ್ಲ. ಇಷ್ಟು ದಿನ ತಾನು ಮಾಡಿದ್ದೇ ಸರಿ ಎಂದು ಮೆರೆಯುತ್ತಿದ್ದ ನರಿ ಕೊಳೆಗೆರೆಯಂಥವರದ್ದೂ ಸಹ ಇಂದು ಬಹುಶಃ ಇದೇ ಮನಸ್ಥಿತಿಯಿರಬೇಕು.

ಈವರೆಗೆ ಆತನನ್ನು ಈ ಪರಿ ಕೈತೊಳೆದುಕೊಂಡು ಬೆನ್ನು ಹತ್ತಿದವರೇ ಇಲ್ಲ. ಇಂದು ಎಲ್ಲ ರೀತಿಯಿಂದಲೂ ಆತನ ಅವಸಾನ ಆರಂಭವಾಗಿದೆ. ಅದು ಅರಿವಾಗುತ್ತಿದ್ದಂತೆಯೇ ವಿಚಿತ್ರವಾಗಿ ವರ್ತಿಸಲಾರಂಭಿಸಿದ್ದಾನೆ ಆತ. ನನ್ನ ಬ್ಲಾಗ್ ನೋಡಿ ವ್ಯಕ್ತಿಯೊಬ್ಬ (ಬಹುಶಃ ಆತನ ಶಿಷ್ಯನೇ ಇರಬಹುದು)ಕರೆ ಮಾಡಿದ್ದ. ತಾಕತ್ತಿದ್ದರೆ ಅವರಂತೆ ಬರೆದು ತೋರಿಸಿ, ವೃಥಾ ಕೆಸರೆರೆಚಾಟದಿಂದ ಪ್ರಯೋಜನವಿಲ್ಲ...ಎಂದೆಲ್ಲಾ ಸವಾಲೆಸೆದ. ಖಂಡಿತಾ ಆತ ಇಳಿದ ಕೀಳು ಮಟ್ಟಕ್ಕೆ ನಮ್ಮಿಂದ ಇಳಿಯಲಾಗದು. ಸ್ವಕುಚ ಮರ್ಧನದಲ್ಲಿ ಆತನಿಗಿದ್ದಷ್ಟು ಪರಿಣತಿ ನಮ್ಮದಲ್ಲ. ಆದರೆ ಬೌದ್ಧಿಕತೆ ಯಾರಿಗೂ ಮಾರಾಟವಾಗಿಲ್ಲ. ಇದನ್ನು ಮತ್ತೆ ಮತ್ತೆ ಹೇಳಿದ್ದೇನೆ. ಅಕ್ಷರ ಯಾರಪ್ಪನ ಸ್ವತ್ತೂ ಅಲ್ಲ. ಈಗಾಗಲೇ ಇದನ್ನು ನಾನು ಸಾಬೀತು ಪಡಿಸಿದ್ದೇನೆ.

‘ಕೇವಲ ನೀರಿನ ಬಗ್ಗೆ ನಾಲ್ಕಕ್ಷರ ಬರೆದ ಮಾತ್ರಕ್ಕೆ ಜಲಪತ್ರಕರ್ತನಾಗುವುದಿಲ್ಲ. ಅದನ್ನು ಬಿಟ್ಟು ಬೇರೇನಾದರೂ ಬರೆದಿದ್ದೀರಾ ? ವೈಚಾರಿಕ ಬರಹಗಳಲ್ಲಿ ನೀವು ಬಲಪಂಥೀಯರಿಗೆ ಯಾವುದೇ ಹಿಡಿತವಿಲ್ಲ. ಅಂಥ ಒಂದು ಬರಹವನ್ನು ಬರೆದು ತೋರಿಸಿ. ಆಮೇಲೆ ಬುದ್ಧಿಜೀವಿಗಳನ್ನು ಟೀಕಿಸಬಹುದು...’ಎಂಬಿತ್ಯಾದಿ ಹಳಹಳಿಸಿದ ನನಗೆ ಕರೆ ಮಾಡಿದ ವ್ಯಕ್ತಿ.

ಸ್ವಾಮಿ, ನಾನು ಬಲಪಂಥೀಯನೂ ಅಲ್ಲ, ಎಡಪಂಥೀಯನೂ ಅಲ್ಲ. ಬರಹಗಳಿಗೆ ಯಾವ ಪಂಥವಿರುತ್ತದೆ? ನನ್ನನ್ನು ನಾನು ಬುದ್ಧಿಜೀವಿಯೆಂದು ಕರೆದುಕೊಳ್ಳುವವನೂ ಅಲ್ಲ. ಅಕ್ಷರ ನನ್ನ ಜೀವನ, ಅದೇ ಬದುಕು. ನೀರು ನನ್ನ ಉಸಿರು. ಬೇರೆಯದ್ದನ್ನು ಬರೆಯಲೂ ನನಗೆ ಗೊತ್ತು. ಬುದ್ಧಿಪೂರ್ವಕ ನನ್ನ ಅಂಕಣವನ್ನು ನೀರಿಗೆ ಮೀಸಲಿಟ್ಟವನು ನಾನು. ಅದಕ್ಕಾಗಿ ಕಳೆದ ಹತ್ತು ವರ್ಷ ದುಡಿದಿದ್ದೇನೆ. ಇದು ನನ್ನ ಓದುಗರೆಲ್ಲರಿಗೂ ಗೊತ್ತು. ಇದರಿಂದ ಹೊರತಾಗಿ ನನ್ನ ಸಾಮರ್ಥ್ಯ ಏನೆಂಬುದನ್ನು ಒಂದು ‘ಲವಲವಿಕೆ’ಯಿಂದ ಸಾಬೀತುಪಡಿಸಿದ್ದೇನೆ. ಎಲ್ಲ ರೀತಿಯ ಬರಹಗಳೂ ನನ್ನಿಂದ ಸಾಧ್ಯವಿದೆ. ವ್ವೆವ್ವೆವ್ವೆ..ಶೈಲಿಯನ್ನು ಈಗಾಗಲೇ ಈ ಬ್ಲಾಗ್‌ನಲ್ಲೇ ನೋಡಿದ್ದೀರಿ. ಇನ್ನು ಬುದ್ಧಿಜೀವಿಗಳ ಶೈಲಿ (ಹಾಗೊಂದು ಶೈಲಿ ಕನ್ನಡ ಸಾರಸ್ವತದಲ್ಲಿದೆಯೇ?)ಯಲ್ಲೂ ಕಡಿಮೆ ಏನಿಲ್ಲ. ಕೇವಲ ಶಬ್ದಾಡಂಬರವೇ ಸಾಹಿತ್ಯವೆಂದಾದರೇ ಅದೇನೂ ಬ್ರಹ್ಮವಿದ್ಯೆಯಲ್ಲ. ಅದರಿಂದ ಬರಗಾರ ತನ್ನ ದೊಡ್ಡಸ್ತಿಕೆ ಮೆರೆಯಬಹದು. ಆದರೆ ಓದುಗನ ಮನಸ್ಸು ಬಳುತ್ತದೆ. ವಿಷಯವನ್ನು ನೇರವಾಗಿ, ಸರಳವಾಗಿ ಹೇಳುವವನೇ ನನ್ನ ದೃಷ್ಟಿಯಲ್ಲಿ ಉತ್ತಮ ಬರಹಗಾರ. ಆದರೂ ನರಿ ಕೊಳೆಗೆರೆಯಂಥವನಿಗೆ ಗೊತ್ತಿಲ್ಲದ, ಆತ ಈವರೆಗೆ ಅದರ ಅರ್ಥವನ್ನೇ ಅರಿಯದ ‘ಮಾನವೀಯ ಸಂಬಂಧ‘ಗಳ ಕುರಿತಾದ ಬರಹವನ್ನು ಇಂದು ಪೋಸ್ಟ್ ಮಾಡುತ್ತಿದ್ದೇನೆ. ನನ್ನ ಓದುಗರಲ್ಲಿಯೂ ಕೆಲವರು ಗಂಭೀರ ವೈಚಾರಿಕ ಲೇಖನ ಬರೆಯಿರಿ. ವೃಥಾ ಸಮಯ ವ್ಯರ್ಥ ಮಾಡಬೇಡಿ ಎಂದಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ಈ ಲೇಖನ ನೀಡುತ್ತಿದ್ದೇನೆ.

ಸ್ವಾಮಿ ಬುದ್ಧಿಜೀವಿಗಳೇ(?) ಸಾಮರ್ಥ್ಯವಿದ್ದರೆ ಅದನ್ನು ಓದಿ ಅರಗಿಸಿಕೊಳ್ಳಿ. ಹಾಗೆ ನಡೆದುಕೊಳ್ಳಿ...

ಜಲರಾಶಿಯಲ್ಲೊಂದು ಬಿಂದು...

ಸಂಬಂಧಗಳ ಅವಲೋಕನ ಇಂದಿನ ಕಾಲಘಟ್ಟದಲ್ಲಿ ತೀರಾ ಅನಿವಾರ್ಯವೆಂದುಕೊಳ್ಳುತ್ತೇನೆ. ಸಾಮಾಜಿಕ ಸಂಬಂಧಗಳ ಚರ್ಚೆ ಆತ್ಮಾವಲೋಕನದ ಭಾಗವಾಗಿ ಮಾರ್ಪಟ್ಟಿದೆ. ಈ ಎರಡೂ ಒಂದಕ್ಕೊಂದು ತಳಕು ಹಾಕಿಕೊಂಡಿದೆ. ಆದಿಲ್ಲದಿದ್ದರೆ ಅದು ಅಪೂರ್ಣವಾದೀತು. ವ್ಯಕ್ತಿಯ ವೈಯಕ್ತಿಕ ಚಟುವಟಿಕೆಗಳ ಹಿಂದೆ ಇರಬಹುದಾದ ವಿಘಟನಾಶೀಲ ಮನೋಭಾವವನ್ನು ಅರಿಯುವ ಹಂತದಲ್ಲಿ ಹುಟ್ಟಿದ ಪ್ರeಯಿದು. ಛಿದ್ರೀಕೃತವಾಗಿರುವ ಸಮಾಜ ಜೀವನವೇ ಈ ನಾಗರೀಕತೆಯ ಪ್ರಮುಖ ಲಕ್ಷಣವಾಗಿರುವಾಗ ಅಖಂಡತೆ, ಏಕತೆ ಸಾಧನೆಯೇ ಬಹುದೊಡ್ಡ ಸಾಹಸ.

ಸಮಕಾಲೀನ ಸಮಾಜ ಹತ್ತು ಹಲವು ಸಮಸ್ಯೆಗಳ ಕೂಪದಲ್ಲಿ ತೊಳಲುತ್ತಿರುವಾಗ ಇಂಥದೊಂದು ಅರಿವಿನ ಪ್ರಯತ್ನ ಅಸಂಬದ್ಧವಾಗಲಾರದು ಎಂದುಕೊಳ್ಳುತ್ತೇನೆ. ಸುತ್ತಲೆಲ್ಲ ಹರಿವಿರುವುದು ಜಡತೆಯ ವಿಸ್ತಾರ, ಸೋಲು, ಅಶಾಂತಿಯ ಭಂಡಾರ. ಈ ಸನ್ನಿವೇಶದಲ್ಲಿ ಸಂಬಂಧಗಳ ಮೂಲಭೂತ ಆಶಯವನ್ನು ಎತ್ತಿ ಹಿಡಿಯುವ ಕಾಯಕ ಬರಹಗಾರರ ಆದ್ಯತೆಯೆಂದು ಭಾವಿಸುತ್ತೇನೆ. ಎಂಥ ಕ್ರಾಂತಿಕಾರಿ ಬರಹಗಾರನು ತನ್ನ ಕೈಂಕರ್ಯದ ಅರ್ಥ ಶೋಧನೆಯ ಹಂತದಲ್ಲಿ ಇಂಥದೊಂದು ವಿಘಟನಾ ಸ್ಥಿತಿಯ ಸಮಸ್ಯೆಯನ್ನು ಎದುರಿಸಿಯೇ ಇರುತ್ತಾನೆ. ತನ್ನ ಮಾಂತ್ರಿಕ ಬರಹಗಳ ಮೂಲಕ ತನ್ನ ಕಾಯಕಕ್ಕೆ ನ್ಯಾಯಬದ್ಧತೆ ಕಂಡುಕೊಳ್ಳುವ ಮಾರ್ಗವಾಗಿ ಸಮಾಜ ಸಂಬಂಧಗಳ ಬಗ್ಗೆ ಲೇಖಕ ವಿಮರ್ಶೆಗಿಳಿಯಲೇಬೇಕು. ಸುತ್ತಲಿನ ಕ್ರೌರ್ಯ, ಹಿಂಸೆಗಳ ಮಲಿನವನ್ನು ಸೌಹಾರ್ದಮಯ ಬರಹಗಳ ಮೂಲಕ ತೊಳೆಯಲು ಯತ್ನಿಸದಿದ್ದರೆ ಆತ ಸಾರ್ಥಕ್ಯ ಕಾಣಲಾರ. ಅಸಹನೀಯ ಸ್ಥಿತಿಯೊಳಗೆ ಮುಳುಗಿಯೇ ಅದರ ವಿರುದ್ಧ ಈಜಿ ಸಾಹಸ ತೋರಲಾಗದಿದ್ದರೂ, ತಾನು ಮುಳುಗಿರುವುದು ಎಂಥ ಕಲ್ಮಶ ಸಾಗರದಲ್ಲೆಂಬುದನ್ನು ಆತ ಅಭಿವ್ಯಕ್ತಿಸಬಲ್ಲ.

ಈಗಿನ ಜಾಗತಿಕ ಜೀವನ ವಲಯದಲ್ಲಿ ಸಂಬಂಧಗಳ ವಿಮರ್ಶೆ ತುರ್ತು ಅಗತ್ಯವೆಂದು ಭಾವಿಸುತ್ತೇನೆ. ಪ್ರಾಯಶಃ ಇದು ಒಟ್ಟಾರೆ ಜೀವ ವಲಯಕ್ಕೇ ಸಂಬಂಸಿದ ಪ್ರಶ್ನೆ. ಜೀವನ ವ್ಯವಸ್ಥೆಯನ್ನು ಅರ್ಥೈಸುವಲ್ಲಿ ಅಥವಾ ವಿಮರ್ಶಿಸುವಲ್ಲಿ ಈ ಸಂಬಂಧಗಳ ಸ್ವರೂಪಕ್ಕೆ ಬಹುಮುಖ್ಯ ಸ್ಥಾನವಿದೆ. ಇದು ಅರ್ಥವಾಗಬೇಕಾದಲ್ಲಿ ನಮ್ಮ ನಾಗರೀಕತೆ ಬೆಳೆದು ಬಂದ ಬಗೆಗಿನ ಸಮಗ್ರ ಕಲ್ಪನೆಯೊಂದು ಅಗತ್ಯ. ನಾಗರಿಕತೆಯ ಹಿನ್ನೋಟದಲ್ಲಿ ನಮಗೆ ಸಾಮರಸ್ಯವೊಂದೇ ಅಲ್ಲ, ಹಿಂಸೆ, ಯುದ್ಧ, ಸಂಘರ್ಷಗಳ ಪುಟಗಳೂ ಕಂಡುಬರುತ್ತವೆ. ಹೀಗಾಗಿ ಸಮುದಾಯದ ಜತೆ ಜತೆಗೆ ಮಾನವನ ಸ್ವಾರ್ಥ, ಆ ಸ್ವಾರ್ಥಕ್ಕಾಗಿ ಹೋರಾಟ, ವಿಘಟನೆಗಳು ಬೆಳೆದುಬಂದಿವೆ. ಇಂದಿನ ವೈಚಾರಿಕ ಯುಗವೂ ಇದರಿಂದ ಹೊರತಲ್ಲ. ಆದರೆ ತೀರಾ ವಿಚಾರಪರತೆಯ ತುತ್ತ ತುದಿಗೆ ನಾವು ಏರಿ ನಿಂತಿದ್ದೇವೆಂದುಕೊಂಡಾಗಲೇ ಮನುಷ್ಯ ಸಹಜ ಭಾವನೆಗಳನ್ನು ನಿರ್ಲಕ್ಷಿಸಿದ್ದೇವೆಂಬುದು ದುರಂತ.


ಬಂಡವಾಳಶಾಹಿ ನಾಗರೀಕತೆಯ ಪರಿಕಲ್ಪನೆಯಡಿಯಲ್ಲಿ ಸಮಕಾಲೀನ ಜೀವನ ಕ್ರಮದಲ್ಲಿ ವೈಯಕ್ತಿಕ ಬದುಕಿಗಷ್ಟೇ ಪ್ರಾಧಾನ್ಯ ನೀಡುವುದರೊಂದಿಗೆ ಅದೇ ಬದುಕು ಎಂದುಕೊಂಡು ಬಿಟ್ಟಿದ್ದೇವೆ. ಇಂಥ ನಿರ್ಣಯದ ಮಾನದಂಡ ಸರ್ವಸಮಸ್ತ ಸಮಾಜಕ್ಕೂ ಹಬ್ಬಿಬಿಟ್ಟಿದೆ. ಸಮಾಜದ ಇಂಥ ‘ವಿಚಾರಪರ’ ನಿಲುವು ತಂತ್ರeನದ ಬೆಳವಣಿಗೆಯೊಂದಿಗೆ ಬೆಳೆದು ಬಂದುಬಿಟ್ಟಿದೆ. ಪಾರಂಪರಿಕ eನ ವಲಯಗಳು, ಭಾವನಾ ಲಹರಿಗಳ ಮೇಲೆ ಸೊಲ್ಲೆತ್ತಲಾಗದಂಥ ಆಕ್ರಮಣವನ್ನದು ನಡೆಸಿಬಿಟ್ಟಿದೆ. ಇದರ ಫಲವಾಗಿ ಅಸಹನೆ, ಕ್ರೌರ್ಯಗಳು ತಮ್ಮ ದಾರ್ಷ್ಟ್ರ ತೋರುತ್ತಿವೆ. ಆದ್ದರಿಂದಲೇ ಏಕರೂಪಿ ಜೀವನ ಕ್ರಮದಲ್ಲಿ ವಿಶಿಷ್ಟತೆಯೆಂಬುದು ಮರೆಯಾಗಿ ಬಿಟ್ಟಿದೆ.
ಇಂಥ ಸಂಕೀರ್ಣತೆಯಲ್ಲಿ ಸಂಬಂಧಗಳ ಪುನರ್ಸ್ಥಾಪನೆಯೆಂಬುದು ಮತ್ತಷ್ಟು ಜಟಿಲವೂ, ಅರ್ಥಹೀನವೂ ಅನಿಸಿಕೊಳ್ಳುತ್ತಿದೆ. ಇದರ ಅರಿವಾಗಬೇಕಾದಲ್ಲಿ ತಾತ್ವಿಕವಾಗಿ ಮಾನವೀಯ ಇತಿಹಾಸದ ಕುರಿತು ಚಿಂತನೆ ನಡೆಸಬೇಕಿದೆ. ಹಿಂಸೆ, ಅಸಹನೆ, ಸ್ವಾರ್ಥವೆಂಬುದು ಸಾಂಸ್ಥಿಕ ಸ್ವರೂಪ ಪಡೆದಿರುವಾಗ ಭಾವನೆ ಎಂಬುದು ಕನಸು, ಪ್ಯಾಂಟಸಿಗಳ ಲೋಕವಾಗಿ ತೋರುವುದರಲ್ಲಿ ತಪ್ಪೇನಿಲ್ಲ. ಇಂಥ ಸ್ಥಿತಿಯ ಪರಿವರ್ತನೆ ಸಣ್ಣ ಮಾತಲ್ಲ. ಹೊಸ ಸಮಾಜವೊಂದರ ನಿರ್ಮಾಣಕ್ಕೆ ಅಂಥದೇ ಕಸುವು ತುಂಬಿದ ಕ್ರಾಂತಿ, ಚಳವಳಿಯೊಂದರ ಅಗತ್ಯವಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಮಾನವ ಸಹಜ ಪ್ರವೃತ್ತಿಯಲ್ಲಿಯೇ ಈ ಕ್ರಾಂತಿ ಘಟಿಸಬೇಕಿದೆ.


ಪ್ರಕೃತಿಯನ್ನು ಮೀರಿದ eನವಂತ ತಾನೆಂಬ ಮಾನವನ ದುರಹಂಕಾರ ಇದಕ್ಕೆ ಕಾರಣ. ಖಗೋಳ ವಲಯದ ಸಮಸ್ತವನ್ನು ತಡಕಾಡಿ ಇದರ ಹಿಂದಿನ ರಹಸ್ಯ ಭೇದಿಸಬಲ್ಲೆ ಎಂಬ ಮಾನವ ವಲಯದ ಹಮ್ಮು ಹಾಗೂ ಪ್ರಕೃತಿಯಲ್ಲಿನ ಎಲ್ಲವೂ ತನಗಾಗಿಯೇ ಸ್ಪಷ್ಟಿಸಲ್ಪಟ್ಟದ್ದೆಂಬ ಭ್ರಮೆಯಿಂದ ಇಂಥದೊಂದು ‘ವೈಚಾರಿಕ ಮೌಢ್ಯಕ್ಕೆ ನಾವಿಂದು ಒಳಗಾಗುತ್ತಿದ್ದೇವೆ. ಪ್ರಗತಿ ತತ್ವದ ಮೂಲ ಆಶಯವನ್ನೇ ನಾವಿಂದು ಮರೆತುಹೋಗಿದ್ದೇವೆ. ಮಾನವ ಕೇಂದ್ರಿತ ಈ ಜಗದಲ್ಲಿ ಉಳಿದೆಲ್ಲವೂ ಗೌಣವಾಗಿದೆ. ನಾಗರೀಕತೆಯ ಆಂತರಿಕ ಸಾಂಗತ್ಯಕ್ಕೆ ಇಲ್ಲಿ ಅರ್ಥವೇ ಉಳಿದಿಲ್ಲ. ಮಾನವೀಯ ಭಾವತೀವ್ರತೆಯೇ ಮನುಷ್ಯನ ಅನ್ವರ್ಥವೆಂಬುದು ಈ ವ್ಯವಸ್ಥೆಯ ತರ್ಕಕ್ಕೆ ಸಿಲುಕಿ ನಾಶವಾಗಿದೆ. ಯಂತ್ರ ಯುಗದಲ್ಲಿ ಮನುಷ್ಯ ಆತ್ಮಹೀನವಾಗಿ ಬಿಟ್ಟಿದ್ದಾನೆ. ಈ ಬಗ್ಗೆ ಅಲ್ಲಲ್ಲಿ ಕೆಲ ಆತಂಕಗಳು ಧ್ವನಿಸಿದೆಯಾದರೂ ಜಾತ್ರೆಯ ಗದ್ದಲದೆಡೆಗೆ ದಾಟುವ ಪ್ರಯತ್ನ ಇಣುಕಿದ್ದರೂ ಅದು ಭೀಮನೆಗೆತವಾಗಿಲ್ಲ.

ಹೀಗಾಗಿ ಸಂಬಂಧಗಳೆನ್ನುವುದು ಆಧುನಿಕ ಯಾಂತ್ರಿಕ ಲೋಕ ನಡು ಮನೆಯ ಮಾತಾಗಿ ಮಾತ್ರ ಉಳಿದುಕೊಂಡಿದೆ. ಅದೊಂದು ಕನಸು. ‘ಸೌಹಾರ್ದ, ಸೋದರತೆ ಪ್ರೀತಿ, ವಿಶ್ವಾಸಗಳು ಈ ಸಮಾಜ ಬೆಳಗಿನೊಂದಿಗೆ ಮರೆತುಬಿಡುತ್ತಿರುವ ಸ್ವಲ್ಪ ಎಚ್ಚರದಲ್ಲಿ ನಾವಿದನ್ನು ಕೊನೆಪಕ್ಷ ನೆನಪು ಮಾಡಿಕೊಳ್ಳುತ್ತಲೂ ಇಲ್ಲ. ನಾಗರೀಕತೆಯ ಯಂತ್ರಯುಗ ಹತ್ತಿಕ್ಕ ಬಯಸುವುದರಲ್ಲಿ ಮಾನವೀಯ ಸಂಬಂಧಗಳೂ ಒಂದು. ಹಲವು ಸಂವೇದನೆಗಳ ಮೇಲೆ ಬೆಳೆದು ಬಂದ ಸಮಾಜಕ್ಕದು ಈಗ ಬೇಕಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳುವ ಕೆಲವು ಮೆಲುಕುಗಳನ್ನು ಹಂಚಿಕೊಳ್ಳಹೊರಟಿದ್ದೇನೆ. ಸಂಬಂಧಗಳ ಅಪಾರತೆಯ ಎದುರು ಇಂಥ ಪ್ರಯತ್ನಗಳು ಅನುಭವದ ಕೊರತೆಯನ್ನು ಎದುರಿಸುತ್ತವೆ. ವಸ್ತುನಿಷ್ಟ ಚರ್ಚೆಗಿಳಿದಾಗ ಅದರ ಸಂಕೀರ್ಣ, ಸಮಗ್ರತೆಯ ಬಗ್ಗೆ ಭಯ ಸಹಜ. ಪರಂಪರೆಯ ಹಿನ್ನೆಲೆಯಲ್ಲಿ ಸಂಬಂಧಗಳ ಸೌಂದರ್ಯಾನುಭವದಲ್ಲಿ ನನ್ನ ಮಿತಿಯೊಳಗೆ ಹಾಗೆಯೇ ಇಡಲು ಯತ್ನಿಸಿದ್ದೇವೆ. ಬೇರಾವುದೇ ಸಾಹಸ ಯಶಸ್ವಿ ಎನಿಸಲಾರದು. ಸಂಬಂಧಗಳೆಂಬುದೇ ಹಾಗೆ. ಅದು ಅನುಭವ ವಿಚಾರದ ಚೌಕಟ್ಟಿಗೆ ಒಳಗಾದದ್ದು. ಅದರ ವಿಶ್ಲೇಷಣೆ ತೀರಾ ಜಟಿಲ.

ವ್ಯಕ್ತಿಯ ವಿಮರ್ಶೆ ಸುತ್ತಲಿನ ಸಮಾಜದ ವಿಮರ್ಶೆಯೂ ಆಗುತ್ತದಾದ್ದರಿಂದ ಸಾಕಷ್ಟು ಎಚ್ಚರ ಅಗತ್ಯ. ಇಂಥ ಎಚ್ಚರದ ಸಂದರ್ಭದಲ್ಲಿ ಒಟ್ಟಾರೆ ವಿಷಯದ ಸಮಗ್ರತೆ ದೊರಕದಿದ್ದರೆ ಅದು ವೈಯಕ್ತಿಕ ಮಿತಿಯೇ ಹೊರತೂ ವಸ್ತುವಿನದ್ದಲ್ಲ. ಅದು ಗೊತ್ತಿದ್ದೂ ಈ ಪ್ರಯತ್ನಕ್ಕೆ ಕಾರಣ ಒಂದಷ್ಟು ಉಪಯುಕ್ತ ವಾದಿ ಚಿಂತನೆಯ ಅಭಿವ್ಯಕ್ತಿಗೆ ಹಾತೊರೆಯುತ್ತಿರುವುದು.


ತೀರಾ ಸಾವಯವದಾದಂಥ ಇಂಥ ವಸ್ತುಗಳ ಸಾಮಾಜಿಕ ಗ್ರಹಿಕೆ ಹಾಗೂ ಸಮಸ್ಯೆಗಳೆರಡೂ ಪ್ರಖರವಾದದ್ದು. ಯಾವುದೇ ನೆಲೆಯಿಂದ ನೋಡಿದರೂ ಅದು ಮುಗಿಯದ ಜಲರಾಶಿಯೇ. ಆದರೆ ಪ್ರಾತಿನಿಕ ಪ್ರಸ್ತಾಪಗಳು ಪ್ರಮುಖ ಸಂಬಂಧಗಳ ಜಾಡನ್ನು ಗುರುತಿಸಿಯಾವು ಎಂಬುದು ನನ್ನ ವಿಶ್ವಾಸ.

Thursday, January 27, 2011

ಮರುಗಿದರೆ ನಿಮ್ಮ ಮಾನಸಿಕ ಸ್ಥಿತಿ ಕದಡಿಬಿಟ್ಟಾನು, ಎಚ್ಚರ !

ಪ್ಪಿಕೊಳ್ಳುತ್ತೇನೆ. ನಮ್ಮ ಗುರಿ ಯಾವತ್ತೂ ವೈರಿಗಳ ವಿರುದ್ಧವೇ ಇರಬೇಕು. ನಾವು ಮಾಡುವ ದಾಳಿ ನೇರವಾಗಿ ಅವರನ್ನಷ್ಟೇ ಹಳಿಯಬೇಕೇ ವಿನಾ ಅವರ ಹೆಂಡತಿ ಮಕ್ಕಳು, ಸಂಬಂಗಳು, ಸ್ನೇಹಿತರು ಅವಲಂಬಿತರು ಇತ್ಯಾದಿ ಮುಗ್ಧರು ನಮ್ಮ ಅಸ್ತ್ರ ಪ್ರಯೋಗದಿಂದ ಘಾಸಿಗೊಳ್ಳಬಾರದು. ಯಾರ‍್ಯಾರೋ ಕೀಳು ಮಟ್ಟಕ್ಕೆ ಇಳಿಯುತ್ತಾರೆಂದ ಮಾತ್ರಕ್ಕೆ ನಾನು-ನನ್ನಂಥವರು ಆ ಮಟ್ಟದ ಬರವಣಿಗೆಗೆ ಇಳಿಯಬಾರದು. ಅದರಿಂದ ನಮ್ಮ ಆತ್ಮ ಗೌರವಕ್ಕೆ ಕುಂದುಂಟಾಗುತ್ತದೆ. ನನ್ನಂಥವರ ವ್ಯಕ್ತಿತ್ವದ ಮೌಲ್ಯ ಕಳೆದು ಹೋಗುತ್ತದೆ. ಅಂಥದ್ದೊಂದು ಪ್ರಜ್ಞೆ ನನ್ನಲ್ಲೂ ಇದೆ.


ಇದೇ ಸಂದರ್ಭದಲ್ಲಿ ಇಂಗ್ಲಿಷ್‌ನ ಹಳೆಯ ಗಾದೆಯೊಂದನ್ನು ನೆನಪಿಸಿಕೊಳ್ಳುತ್ತೇನೆ. ಯುದ್ಧ ಮತ್ತು ಪ್ರೀತಿಯಲ್ಲಿ ಯಾವುದೂ ತಪ್ಪಲ್ಲ ಎಂದಿದೆ ಆ ಮಾತು. ಪತ್ರಿಕೋದ್ಯಮದ ಹಿನ್ನೆಲೆಯಲ್ಲಿ ಇದೂ ಒಂದು ರೀತಿಯಲ್ಲಿ ಯುದ್ಧವೆಂದೇ ನಾನು ಪರಿಭಾವಿಸಿದ್ದೇನೆ. ಸಮಾಜದ ಕೆಳವರ್ಗದ, ಶೋಷಿತರ ಪರವೆಂಬ ಮುಖವಾಡ ಹೊತ್ತವರು ಪತ್ರಿಕೋದ್ಯಮದ ಹೆಸರಿನಲ್ಲಿ ನಡೆಸುತ್ತಿರುವ ದೌರ್ಜನ್ಯ, ಅನ್ಯಾಯ, ಅತ್ಯಾಚಾರ, ಅಕ್ರಮಗಳಿಗೆ ಲೆಕ್ಕ ಉಂಟೇ ? ಗೆರಿಲ್ಲಾ ಮಾದರಿಯ ಯುದ್ಧದಲ್ಲಿ ತೊಡಗಿರುವ ‘ನೀಲಿ ಪತ್ರಕರ್ತರು’ ಕಳೆದರೆಡು ದಶಕಗಳಲ್ಲಿ ಮಾಡಿದ ತೇಜೋವಧೆಗಳು, ವ್ಯಕ್ತಿತ್ವ ಹರಣಕ್ಕೆ ಮಿತಿ ಎಂಬುದು ಇದೆಯೇ. ಕನ್ನಡ ಓದುಗ ದೊರೆಗೆ ಇದರ ಅರಿವಿಲ್ಲದೇ ಇದೆಯೇ ? ಹೀಗಿದ್ದೂ, ಇಂಥ ಹೊಲಸನ್ನು ತುಂಬಿಯೇ ದಿನದಿಂದ ದಿನಕ್ಕೆ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಂಡು, ಇದೇ ನೈಜ ಪತ್ರಿಕೋದ್ಯಮ ಎಂಬಂತೆ ಬಿಂಬಿಸಿಕೊಂಡು ಮೆರೆದಾಡಿದ್ದು-ಮೆರೆದಾಡುತ್ತಿರುವುದು ಇಂದಿಗೂ ಪ್ರಶ್ನಾರ್ಹವಲ್ಲವೇ ?
ಸಮಾಜದ ಎಲ್ಲರ ನೈತಿಕತೆಯನ್ನು ಪ್ರಶ್ನಿಸುವ, ಮಠ-ಮಂದಿರಗಳೆನ್ನದೇ ಎಲ್ಲರನ್ನೂ ದೂಷಿಸುವ, ತನ್ನನ್ನು ಉಳಿದು ಬೇರೆಲ್ಲರೂ ಭ್ರಷ್ಟರೆಂದು ಹೇಳಿಕೊಳ್ಳುವ ಸೋಗಲಾಡಿತನಕ್ಕೆ ಏನೆಂದು ಹೆಸರು ಕೊಡುತ್ತೀರಿ ? ನೈತಿಕ ಅಧಃಪನವನ್ನೂ ಸುಂದರ, ಅತಿ ರಂಜಿತ ವಾಕ್ಯಗಳ ಮೂಲಕ ಸಮರ್ಥಿಸಿಕೊಂಡು ಬಿಟ್ಟರೆ ಕನ್ನಡಿಗ ಅದನ್ನು ಒಪ್ಪಿಕೊಂಡು ಬಿಡುತ್ತಾನೆಯೇ ? ಟ್ಯಾಬ್ಲಾಯ್ಡ್ ಗಾತ್ರದ ಪತ್ರಿಕೆಯೊಂದನ್ನು ಕೈಯಲ್ಲಿಟ್ಟುಕೊಂಡು ಬಿಟ್ಟರೆ ಏನನ್ನು ಬೇಕಾದರೂ ಮಾಡಿ ಜಯಿಸಿಕೊಂಡುಬಿಡಬಹುದು ಎಂಬ ಧೋರಣೆಯ ಬುಡಕ್ಕೇ ಒಮ್ಮೆ ಕೊಡಲಿ ಏಟು ಹಾಕಬೇಕಾದ ಅಗತ್ಯ ಇಲ್ಲವೇ ?


ಸ್ವಾಮೀ, ಧರ್ಮ ಬೋಧೆಯಷ್ಟು ಸುಲಭದ ಕೆಲಸ ಬೇರಾವುದೂ ಇಲ್ಲ. ಅದು ಯಾರಿಗೂ ಮಾರಾಟವಾಗಿಯೂ ಹೋಗಿಲ್ಲ. ಎಲ್ಲರಿಗಿಂತ ಮನೋಜ್ಞವಾಗಿ ಧರ್ಮಬೋಧೆ ಮಾಡಲು ನಮ್ಮಿಂದಲೂ ಸಾಧ್ಯ. ಆದರೆ ಪತ್ರಿಕಾ ಧರ್ಮಕ್ಕೆ ಬಂದರೆ ಪತ್ರಕರ್ತನೊಬ್ಬ ಮಾಡುವ ಅನ್ಯಾಯ, ಅಕ್ರಮಗಳನ್ನೂ ನೋಡಿಯೂ ಸಹಿಸಿಕೊಂಡರೆ, ಸುಮ್ಮನಿದ್ದರೆ, ಪ್ರತಿಭಟಿಸದೇ ಹೋದರೆ ಅದರಲ್ಲಿ ನಮ್ಮದೂ ಪಾಲಿದ್ದಂತೆ ಅಲ್ಲವೇ ? ಅವರಿಳಿಯುವ ಮಟ್ಟಕ್ಕೆ ನಾವಿಳಿಯಬೇಕೆಂದೇನೂ ಇಲ್ಲ; ಒಪ್ಪಿಕೊಳೋಣ. ಆದರೆ ಬೆಂಕಿ ಸುಡುತ್ತದೆ ಎಂಬುದರ ಅನುಭಾವಕ್ಕೆ ಸ್ವತಃ ಕೈ ಸುಟ್ಟುಕೊಂಡೇ ನೋಡಬೇಕೇ ಹೊರತೂ ಹಾಗೆಯೇ ಥಿಯರಿಯಿಂದ ಪ್ರಯೋಜನವಿಲ್ಲ. ಇನ್ನೊಬ್ಬರ ಹೆಂಡತಿ ಮಕ್ಕಳನ್ನು ವಿನಾ ಕಾರಣ ಹೀಗಳೆದಾಗ, ಆ ಮೂಲಕ ಯಾರದ್ದೋ ಚಾರಿತ್ರ್ಯವಧೆಗೆ ಮುಂದಾದಾಗ ಯಾವ ಪರಿಣಾಮವಾಗುತ್ತದೆ ಎಂಬುದು ‘ನರಿ ಕೊಳೆಗೆರೆ’ಯಂಥವರಿಗೆ ಗೊತ್ತಾಗುವುದಾದರೂ ಹೇಗೆ ? ಇಂಥ ತೇಜೋವಧೆಯ ಅಕಾರವನ್ನು ಅವರಿಗೆ ಮಾತ್ರ ಕನ್ನಡಿಗರು ಕೊಟ್ಟಿದ್ದಾರೆಯೇ ? ಅದಿಲ್ಲದಿದ್ದರೆ ಪ್ರತಾಪ್ ಸಿಂಹರ ಬಗ್ಗೆ ಬರೆಯುವ ಗೀಳು ಅಂಟಿಸಿಕೊಂಡಿರುವ ಕೊಳೆಗೆರೆಯಂಥವರು ತನ್ನ ಕೈ ಕೆರೆತ ನೀಗಿಸಿಕೊಳ್ಳಲು ಬರಕೊಳ್ಳಲಿ. ಆದರೆ ಪ್ರತಾಪ್ ವಿವಾಹವಾಗಿ ಇನ್ನೂ ವಾರ ಕಳೆಯುವ ಮೊದಲೇ ಆತನ ಹೆಂಡತಿಯ ಬಗ್ಗೆ(ತಾಯಿ, ತಂದೆ, ಸೋದರ, ಸೋದರಿಯರ ಬಗ್ಗೆಯೂ )ವಿನಾಕಾರಣ ತನ್ನ ನೀಲಿ ಪತ್ರಿಕೆಯಲ್ಲಿ ಫೋಟೋ ಸಹಿತ ಬರೆದದ್ದಾದರೂ ಹೇಗೆ ? ಅದೂ ಪ್ರತಾಪ್ ಸೇರಿದಂತೆ ನಾವೆಲ್ಲರೂ ಪತ್ರಿಕೆಗೆ ರಾಜೀನಾಮೆ ನೀಡಿ ನಿಶ್ಯಸ್ತ್ರರಾಗಿದ್ದ ಸಂದರ್ಭ ನೋಡಿ ದಾಳಿಗಿಳಿದದ್ದೂ ಗಂಡಸುತನವೇ ? ಇಷ್ಟು ಸಾಲದೆಂಬಂತೆ ನಮ್ಮೆಲ್ಲರ ಬಾಯಿಗೆ ಬಂದಂತೆ ಕಾರಿಕೊಂಡು ತನ್ನ ವಿಕೃತಿಯನ್ನು ಪ್ರದರ್ಶಿಸಿದ್ದು ಸರಿಯೇ ? ಇದನ್ನು ಕನ್ನಡಿಗರು ಸಹಿಸಿದರಾದರೂ ಹೇಗೆ?

ಇದು ಉದಾಹರಣೆ ಮಾತ್ರ. ಕಳೆದ ಇಪತ್ತು ವರ್ಷಗಳಲ್ಲಿ ಈತನ ವಾರದ ಅಚ್ಚರಿಯೆಂಬ ಹುಚ್ಚುತನದಲ್ಲಿ ಇಂಥ ಸಾವಿರಾರು ಹೆಂಗಸರ, ಮಕ್ಕಳ ತೇಜೋ ವಧೆಯಾಗಿದೆ. ಅದನ್ನು ಲೆಕ್ಕವಿಟ್ಟವರು ಇದ್ದಾರೆಯೇ ? ತಾನು ಬಹು ಸಂಭಾವಿತನೆಂದು ಹೇಳಿಕೊಳ್ಳುವ ಈ ನರಿ ಕೊಳೆಗೆರೆ ಈವರೆಗೆ ಎಷ್ಟು ಮುಗ್ಧ ಹೆಣ್ಣುಮಕ್ಕಳ ಶೀಲಹರಣ ಮಾಡಿದ್ದಾನೆಂಬುದರ ಅರಿವಿದೆಯೇ ? ಅಂದಿನಿಂದ ಇಂದಿನವರೆಗೆ ಅಣ್ಣ, ಅಪ್ಪ, ಗೆಳೆಯ, ಗುರು, ದಿಗ್ದರ್ಶಕ ಹೀಗೆ ಏನೇನೋ ಹೆಸರು ಹೇಳಿಕೊಂಡು ಅದೆಷ್ಟು ಹೆಣ್ಣು ಮಕ್ಕಳನ್ನು ತನ್ನ ಹಾಸಿಗೆಗೆ ಎಳೆದಿದ್ದಾನೆ ಎಂಬುದನ್ನು ಹೇಳಹೊರಟರೆ ಇದಕ್ಕಿಂತಲೂ ಅಸಹ್ಯವಾಗುತ್ತದೆ.


ತನ್ನ ಐವತ್ತನೆಯ ವಯಸ್ಸಿನ ನಂತರ, ಅದೂ ಎರಡು ಮದುವೆಯಾದ ಬಳಿಕ ಈ ಕೊಳೆಗೆರೆ ಮಹಾಶಯ ತನ್ನ ಮಗಳಿಗಿಂತಲೂ ಚಿಕ್ಕ ವಯಸ್ಸಿನ ಹೆಣ್ಣು ಮಗುವೊಬ್ಬಳಿಗೆ ‘ಲವ್ ಲೆಟರ್‘ ಬರೆದಿದ್ದಾನೆ ಎಂಬುದನ್ನು ನಂಬುತ್ತೀರಾ ? ಇವತ್ತಿಗೂ ಆನ್ ಲೈನ್ ಚಾಟಿಂಗ್‌ಗೆ ಇಳಿದು ಅಶ್ಲೀಲವಾಗಿ ಸೆಕ್ಸ್ ವಿಷಯವನ್ನು ಮುಗ್ಧ ಹೆಣ್ಣುಮಕ್ಕಳಿಗೆ ಬೋಸುತ್ತಾನೆ ಎಂಬುದರ ಅರಿವಿದೆಯೇ ? ತೀರಾ ಇತ್ತೀಚಿನ ಘಟನೆ-ಎಂಜಿನಿಯರಿಂಗ್ ಓದುತ್ತಿರುವ ಮಗನಿರುವ ಮಹಿಳೆಯೊಬ್ಬಳ ಮೇಲೆ ವಿನಾಕಾರಣ ಹರಿಹಾಯ್ದು, ಆಕೆ ಮತ್ತು ಆಕೆಯ ತಾಯಿಯನ್ನೂ ಹಾಸಿಗೆಗೆ ಕರೆದು ತನ್ನ ಹೇಸಿಗೆ ಬುದ್ಧಿ ಪ್ರದರ್ಶಿಸಿದ್ದಾನೆ ಎಂಬುದು ಗೊತ್ತೇ ? ಇವೆಲ್ಲಕ್ಕೂ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಸಂದರ್ಭ ಬಂದಾಗ ಅದು ಸೋಟಗೊಳ್ಳುತ್ತದೆ. ಮಾತ್ರವಲ್ಲ ಇವನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಹತ್ತಕ್ಕೂ ಹೆಚ್ಚು ಮಂದಿ ಪತ್ರಿಕೆಯೆದುರು ಸ್ಟೇಟ್‌ಮೆಂಟ್ ಕೊಡಲು ಸಜ್ಜಾಗಿ ನಿಂತಿದ್ದಾರೆ.


ಇಂಥವನ್ನೆಲ್ಲ ಸಹಿಸಿಕೊಂಡು ಸುಮ್ಮನಿರಬೇಕೇ ? ಇಂಥವನ ಬಗ್ಗೆ ಹೇಗೇ ಬರೆದರೂ ನನ್ನ ವ್ಯಕ್ತಿತ್ವಕ್ಕೆ ಖಂಡಿತಾ ಕುಂದುಂಟಾಗುವುದಿಲ್ಲ. ಇದರಿಂದ ನನ್ನ ನೈಜ ಅಭಿಮಾನಿಗಳು ಖಂಡಿತಾ ಮುನಿಸಿಕೊಳ್ಳುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆತನ ಬಗ್ಗೆ ಬರೆಯವುದಿದ್ದರೆ ಅತ್ಯಂತ ಸೌಜನ್ಯಯುತ ಬರವಣಿಗೆ ಸಾಧ್ಯವೇ ಇಲ್ಲ. ಏಕೆಂದರೆ ಆತ ಈವರೆಗೆ ಮಾಡಿರುವುದೇ ಮೃಗಗಳೂ ಅಸಹ್ಯಪಡುವಂಥಾ ಕೆಲಸಗಳನ್ನು. ಹಾಗಿದ್ದ ಮೇಲೆ ಹೊಲಸನ್ನು ಸುಂದರ ಪದಗಳಲ್ಲಿ ಕಟ್ಟಿಕೊಡುವುದಾದರೂ ಹೇಗೆ; ಹೇಳಿ ಗೆಳೆಯರೇ ?


ಇಂಥ ಮಹಾನುಭಾವ ನನ್ನ ಬಗ್ಗೆ ಬರೆಯುತ್ತಾ ಶ್ರೀ ರಾಮಚಂದ್ರಾಪುರಮಠದ ಗುರುಕುಲದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯವನ್ನು ಮುಚ್ಚಿ ಹಾಕಲು ಯತ್ನಿಸಿದ್ದೇನೆ ಎನ್ನುವ ಅರೋಪ ಮಾಡಿದ್ದಾನೆ. ಯಾವ ಗುರುಕುಲದಲ್ಲಿ ಸ್ವಾಮಿ ಇದು ನಡೆದದ್ದು ? ನೀವು ಅದಕ್ಕೆ ಸಾಕ್ಷಿಯೇ ? ಆ ಗುರುಕುಲದ ಕುಲಪತಿಯಾಗಿದ್ದ ಶ್ರೀ ಜಗದೀಶ್ ಶರ್ಮರನ್ನು ತೀರಾ ಹತ್ತಿರದಿದಂದ ಬಲ್ಲ ವ್ಯಕ್ತಿ ನಾನು. ಭಾರತೀಯ ಗುರುಕುಲ ಪದ್ಧತಿಯನ್ನು ಸಂರಕ್ಷಿಸಲೋಸುಗವೇ ತನ್ನ ಜೀವನವನ್ನು ಮುಡುಪಿಟ್ಟ ಸಜ್ಜನನಾತ. ಅವರು ಮನಸ್ಸು ಮಾಡಿದ್ದರೆ, ಅವರಿಗಿರುವ ಸಂಸ್ಕೃತ ವಿದ್ವತ್‌ಗೆ ಇಂದು ಲಕ್ಷಾಂತರ ರೂ. ಸಂಬಳ ಪಡೆದು ಬಂಗಲೆ, ಕಾರು ಎಂದು ಆರಾಮವಾಗಿರಬಹುದಿತ್ತು. ಅದೆಲ್ಲವನ್ನು ಬಿಟ್ಟು ಹೊಸನಗರದ ಮೂಲೆಯೊಂದರಲ್ಲಿ ಹೋಗಿ ಕುಳಿತು, ಕಳೆದ ಹತ್ತು ವರ್ಷಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಜಗತ್ತೊಂದರ ಸೃಷ್ಟಿ ಮಾಡಿದ್ದಾರೆ. ಅದನ್ನು ಈ ಕೊಳೆಗೆರೆ ಒಮ್ಮೆಯಾದರೂ ಹೋಗಿ ನೋಡಿ ಬಂದಿದ್ದಾನಾ ? ಬುದ್ಧಿಜೀವಿಗಳೆಂದು ಫೋಸು ಕೊಡುತ್ತಾ ಈತ ಬಿಸಾಕುವ ಬಿಸ್ಕೆಟ್‌ಗೆ ಜೊಲ್ಲು ಸುರಿಸುವ ಕೆಲ ಪತ್ರಕರ್ತರು ಬರೆಯುತ್ತಾರೆಂದು ಅದನ್ನೇ ಪ್ರಕಟಿಸುವ ಈತನಿಗೂ ಪತ್ರಿಕಾ ಧರ್ಮವೆಂಬುದು ಉಂಟೇ? ಕೊನೆ ಪಕ್ಷ ಜಗದೀಶ ಶರ್ಮರನ್ನು ಒಮ್ಮೆಯಾದರೂ ಈತ ನೋಡಿದ್ದಾನಾ? ಮಾತನಾಡಿಸಿದ್ದಾನಾ ? ಈ ಬಗ್ಗೆ ಅವರ ಅಭಿಪ್ರಾಯ ಕೇಳಿದ್ದಾನಾ?
ಹೋಗಲಿ, ಶ್ರೀ ಜಗದೀಶ ಶರ್ಮರಿಂದ ಅನ್ಯಾಯವಾಗಿದೆ ಎಂದು ಹೇಳುವ ಹೆಣ್ಣುಮಗಳನ್ನಾಗಲೀ, ಆಕೆಯ ಹೆತ್ತವರನ್ನಾಗಲೀ ಮಾತನಾಡಿಸಿದ್ದಿದೆಯೇ? ಒಂದೊಮ್ಮೆ ಮಾತನಾಡಿಸಿದ್ದರೂ ಆಕೆಯ ಬಗ್ಗೆ ಕೊಳೆಗೆರೆಗೆ ಗೊತ್ತಿರುವದಕ್ಕಿಂತ ಹೆಚ್ಚಿನ ವಿಷಯ ನನಗೆ ಗೊತ್ತಿದೆ. ಹಾಗೆಂದು ಎದೆ ತಟ್ಟಿ ಹೇಳಿಕೊಳ್ಳಬಲ್ಲೆ. ಏಕೆಂದರೆ ಆಕೆ ಸ್ವತಃ ನನಗೆ ಸೋದರ ಸಂಬಂ ಎಂಬುದು ತಿಳಿದಿರಲಿ. ಆ ಬಾಲಕಿಯ ಬಗ್ಗೆ, ಆಕೆಯ ತಂದೆ-ತಾಯಿಯ ಬಗ್ಗೆ ಕೊಳೆಗೆರೆಗಿರುವುದಕ್ಕಿಂತ ಹೆಚ್ಚಿನ ಕಾಳಜಿ, ಪ್ರೀತಿ, ಗೌರವಗಳು ನನಗಿವೆ. ಪರಿಸ್ಥಿತಿಯ ಅನಿವಾರ್ಯತೆಗೆ ಸಿಲುಕಿಯೋ, ಕೆಲವರ ಪಿತೂರಿ, ಷಡ್ಯಂತರಕ್ಕೆ ಒಳಗಾಗಿಯೋ ಅಜ್ಞಾನದಿಂದಲೋ ಇಂಥ ಸುಳಿಯಲ್ಲಿ ಅವರು ಬಿದ್ದಿದ್ದಾರೆ. ಅದಿಲ್ಲದೇ ಅವರಿಗೆ ನಿಜಕ್ಕೂ ಅನ್ಯಾಯವಾಗಿದ್ದರೆ ಅದರ ವಿರುದ್ಧ ಮೊದಲು ಸಿಡಿದೇಳುವ ವ್ಯಕ್ತಿ ನಾನಾಗಿರುತ್ತಿದ್ದೆ. ಈಗಲೂ ಅದೇ ಸತ್ಯವೆಂದು ಶ್ರೀಮಾನ್ ಕೊಳೆಗೆರೆ ಸಾಬೀತು ಪಡಿಸಿದರೆ ಜೀವನದ ಕೊನೆಯವರೆಗೆ ಆತನ ಅಡಿಯಾಳಾಗಿರಲು ಸಿದ್ಧ.


ಅಷ್ಟಕ್ಕೂ, ಅಂಥ ನೈತಿಕತೆ ಆತನಿಗೆ ಅದೆಲ್ಲಿಂದ ಬರಬೇಕು ? ಗುರು, ಗುರುಕುಲ ಇವುಗಳ ಸ್ಥಾನ ಮಹಿಮೆ ಕೊಳೆಗೆರೆಯಂಥವನಿಗೆ ಹೇಗೆ ಅರಿವಿದ್ದೀತು? ತನ್ನಂತೆ ಎಲ್ಲ ಶಿಕ್ಷಕರೂ ಎಂಬ ಸಮಾನ ಭಾವ ಆತನದ್ದಿರಬೇಕು. ಏಕೆಂದರೆ ಆತ ಬೋಧನಾ ವೃತ್ತಿಬಿಟ್ಟಿದ್ದೇ ತನ್ನ ಶಿಷ್ಯಯೊಬ್ಬಳ ಮಾನಭಂಗಕ್ಕೆ ಯತ್ನಿಸಿದ ಬಳಿಕವೇ ಅಲ್ಲವೇ? ಬಳ್ಳಾರಿಯ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕನಾಗಿದ್ದಾಗ ಈತ ಪ್ರವಾಸದ ನೆಪ ಒಡ್ಡಿ ವಿದ್ಯಾರ್ಥಿನಿಯೊಬ್ಬಳ ಮಾನಭಂಗಕ್ಕೆ ಯತ್ನಿಸಿದಾಗ ಇಡೀ ಬಳ್ಳಾರಿ ತಿರುಗಿ ಬಿತ್ತು. ಇದೇ ಅನಂತ್‌ಕುಮಾರ್(ಆಗ ಎಬಿವಿಪಿ ಕಾರ್ಯದರ್ಶಿ) ನೇತೃತ್ವದಲ್ಲಿ ಬಳ್ಳಾರಿ ಬಂದ್ ಸಹ ಆಗಿತ್ತು. ಇನ್ನೂ ತನ್ನ ಪ್ರಾಣ ಉಳಿಯಲಿಕ್ಕಿಲ್ಲ ಎಂದುಕೊಂಡು ಎದ್ದೆನೋ ಬಿದ್ದೆನೋ ಎಂದು ಹುಬ್ಬಳ್ಳಿಗೆ ಓಡಿ ಬಂದದ್ದನ್ನು ಈ ಕೊಳೆಗೆರೆ ತನ್ನ ಖಾಸ್ ಬಾತ್‌ನಲ್ಲಿ ಎಂದಾದರೂ ಬರೆದುಕೊಂಡಿದ್ದಾನೆಯೇ ? ಈತ ಕಾಡಿಸಿ, ಪೀಡಿಸಿ ಮದುವೆಯಾದ್ದದು(ಮೊದಲನೇ) ತನಗಿಂತ ಹನ್ನೊಂದು ವರ್ಷ ಹಿರಿಯವರಾದ ತನ್ನ ಟ್ಯೂಷನ್ ಟೀಚರ್ ಅನ್ನು. ಹಾಗಿದ್ದ ಮೇಲೆ ‘ಗುರು’ ಪದದ ಬಗ್ಗೆ ಈತನಿಗೆ ಗೌರವವಾದರೂ ಹೇಗಿದ್ದೀತು?


ಇಂಥ ಮಹಾನುಭಾವ ಮತ್ತೂ ಈತನ ವರದಿಗಾರರು ಶ್ರೀ ರಾಮಚಂದ್ರಾಪುರಮಠದ ಗುರುಕುಲದ ಬಗ್ಗೆ ಮಾತನಾಡುತ್ತಾರೆ. ಅದರಲ್ಲಿ ಆದ ಅನ್ಯಾಯದ ಬಗ್ಗೆ ವರದಿಗಳು ಪತ್ರಿಕೆಗಳಲ್ಲಿ ಬಾರದಂತೆ ನಾನು ತಡೆದೆ ಎಂಬ ಆರೋಪ ಮಾಡುತ್ತಾನೆ. ಅದು ಸತ್ಯವೆಂದೇ ಅಂದುಕೊಳ್ಳೋಣ. ಅವತ್ತು ನಾನು ವಿಜಯ ಕರ್ನಾಟಕದಲ್ಲಿ ಉದ್ಯೋಗಿಯಾಗಿದ್ದೆ. ಸಂಪಾದಕರ ಸಾಮೀಪ್ಯ ಇತ್ತು ಎಂಬ ಕಾರಣಕ್ಕೆ ಆ ಒಂದು ಪತ್ರಿಕೆಯಲ್ಲಿ ವರದಿಯಾಗದಂತೆ ತಡೆಯಬಹುದಿತ್ತು. ಆದರೆ ಪ್ರಜಾವಾಣಿ, ಕನ್ನಡಪ್ರಭ ಸೇರದಂತೆ ಎಲ್ಲ ಪತ್ರಿಕೆಗಳ ಸಂಪಾದಕರು, ಸುದ್ದಿವಾಹಿನಿಗಳ ಮುಖ್ಯಸ್ಥರು ಕೇವಲ ನನ್ನ ಮಾತಿಗಾಗಿ ಸುದ್ದಿ ಪ್ರಕಟಿಸದೇ ಇರಲು ಕಾರಣ ಉಂಟೇ ? ಹಾಗೊಮ್ಮೆ ಪ್ರಕಟಿಸದೇ ಇದ್ದಾರೆಂದರೆ ಒಂದೋ ಸತ್ಯದ ಪರವಾಗಿರುವ ನನ್ನ ವ್ಯಕ್ತಿತ್ವದ ಅರಿವು ಅವರಿಗಿರಬೇಕು, ಇಲ್ಲವೇ ಆ ಎಲ್ಲ ಪತ್ರಿಕೆಗಳು ಸತ್ಯವನ್ನಷ್ಟೇ ಬರೆಯುವ ವಸ್ತುನಿಷ್ಠ, ವಿಶ್ವಾಸಾರ್ಹ ಮಾಧ್ಯಮಗಳಾಗಿರಬೇಕು. ಇಲ್ಲಿ ಎರಡೂ ಸತ್ಯ. ಮಾತೆತ್ತಿದರೆ ಸತ್ಯಸಂಧನೆಂದುಕೊಳ್ಳುವ ಈ ಕೊಳೆಗೆರೆಗೆ ನಿಜಕ್ಕೂ ಸಾಮರ್ಥ್ಯವಿದ್ದರೆ ಒಂದು ಸುದ್ದಿಯನ್ನು ಕನ್ನಡದ ಎಲ್ಲಾ ಮಾಧ್ಯಮಗಳಲ್ಲೂ ಪ್ರಕಟವಾಗದಂತೆ ತಡೆ ಹಿಡಿಯಲಿ.


ಸಾಧ್ಯವೇ ಇಲ್ಲ, ಏಕೆಂದರೆ ಕನ್ನಡದ ಸಂಪಾದಕರೆಲ್ಲರೂ ವಿವೇಚನಾಶೀಲರೆಂಬುದು ಈಗಾಗಲೇ ಸಾಬೀತಾಗಿದೆ. ಈತನ ಪತ್ರಿಕೆಯನ್ನು ಬಹಿಷ್ಕರಿಸುವ ಮೂಲಕ ಕನ್ನಡಿಗ ಓದುಗರೆಲ್ಲರೂ ವಿವೇಚನಾವಂತರೆಂಬುದಷ್ಟೇ ಸಾಬೀತಾಗಬೇಕಿದೆ. ಅದೂ ಇಷ್ಟರಲ್ಲೇ ಅಗಲಿದೆ.


ಗಿಂಡಿತೀರ್ಥ: ಕೊಳೆಗೇರಿಯಂಥವ ಇಂಥ ವಿಕೃತಿಯೂ ಒಂದು ಮಾನಸಿಕ ಅಸಮತೋಲನದ ಸ್ಥಿತಿ. ಆ ಬಗ್ಗೆ ಮರುಕ ಹುಟ್ಟುತ್ತದೆ. ಹಾಗೆಂದು ಅದಕ್ಕೆ ತಕ್ಷಣವೇ ಚಿಕಿತ್ಸೆ ಕೊಡಿಸದಿದ್ದರೆ ಇಂಥವರು ಇಡೀ ಸಮಾಜದ ಮಾನಸಿಕ ಸ್ಥಿತಿಯನ್ನು ಕದಡಿಬಿಡುತ್ತಾರೆ. ಎಚ್ಚರ !

Saturday, January 22, 2011

ಎಂದೋ ಮರೆತ ಹಾಡು...ಕೊಳೆಗೆರೆ ರಮ್‌ಗಯ್ಯಾ...

‘ಕೊಳೆಗೆರೆ ರಮ್‌ಗಯ್ಯಾ...’

ಹೀಗೊಂದು ಎಂದೂ ಮರೆಯದ ಹಾಡಿನ ಅಪ್ರಭಂಶ ಸ್ವರೂಪವೊಂದು ಕೇಳಿಬರುತ್ತಿತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ.
ಇದೇನಿದು ಹಾಡಿನ ಧಾಟಿ ಅದೇ ಇದೆಯಲ್ಲಾ, ಆದರೆ ಎಲ್ಲೋ ವ್ಯತ್ಯಾಸವಾದಂತೆ ಕಾಣುತ್ತಿದೆ ಅಂದುಕೊಂಡರೆ ಅದರ ಹಿಂದೆಯೇ ಬಿಳಿಹೆಂಡ್ತಿ ಚಿತ್ರದ ‘ರಮ್‌ಗೇನ ಹಳ್ಳಿಯಾಗೆ ರಂಗಾದ ರಮ್‌ಗೆ ಗೌಡ...’ಅಂತ ಮೊದಲನೆ ಹೆಂಡ್ತಿ ಎರಡನೆಯವಳಿಗೆ ಹೇಳಿಕೊಡುತ್ತಾ ನಿಟ್ಟುಸಿರು ಬಿಡುತ್ತಿರುವುದೂ ಅರಿವಿಗೆ ಬಂತು. ಆದರೆ ಇದ್ಯಾವುದರ ಪರಿವೆಯೇ ಇಲ್ಲದ ರಮ್‌ಗಯ್ಯ ಮಾತ್ರ ಬ್ಯಾರಲ್‌ಗಟ್ಟಲೆ ರಮ್ ಅನ್ನು ತನ್ನ ಹಂಡೆ ಹೊಟ್ಟೆಯೊಳಗೆ ಸುರುವಿಕೊಳ್ಳುತ್ತಾ ಹೊಸ ಬಾಟಮ್‌ಐಟಮ್‌ಗಾಗಿ ಆ ಹಿಮಾಚ್ಛಾದಿತ ಬೆಟ್ಟದಲ್ಲೂ ತಡಕಾಡುತ್ತಿದ್ದ. ರಮ್ ಜಾಸ್ತಿ ಆಗಿದ್ದರಿಂದ ಆತನ ಬಾಯಿಂದ ವ್ವೆ...ವ್ವೆ...ವ್ವೆ..ಎಂಬ ಕೀರಲು ಸ್ವರ ನಿರಂತರ ‘ಕೇಳಿ’ ಬರುತ್ತಿತ್ತು.


ಇದೆಲ್ಲಾ ನಮ್ಮಣ್ಣಂದಲ್ಲವಾ ಅಂತ ಗೋರಗೊರ ಊರಿನ ನಾಗನ ಮೂಲಕ ರಮ್‌ಗಯ್ಯ ಕಾಪೀರೈಟ್‌ಗೆ ಅರ್ಜಿ ಗುಜರಾಯಿಸಿಬಿಟ್ಟ. ಅಯ್ಯೋ ಸ್ವಾಮಿ, ಇಲ್ಲಾ ಅಂತ ಹೇಳಿದವರಾರು ? ಅವರ ಹೆಸರಿನಲ್ಲೇ ಆ ಕಾಪಿರೈಟ್ ಇದೆ. ಅದೇನೋ ಮರೆಯದ ಹಾಡಿನ ಗುಂಗಿನಲ್ಲೇ ಇದ್ದುದಕ್ಕೆ ಬೆಳೆಗೆರೆ ಅನ್ನುವಾಗ ಸ್ವಲ್ಪ ಯಡವಟ್ಟಾಗಿ ಕೊಳೆಗೆರೆ ಅಂತಾಗಿ ಹೋಯ್ತು ಅಂತದ್ದಿದ್ದು ಹುಬ್ಬಳ್ಳಿಯ ಕಮರೀಪೇಟೆಯ ಹಂದಿಯೊಂದಕ್ಕೆ ಕೇಳಿಬಿಡಬೇಕೇ? ಅದೂ ಸಹ ಕಾಪೀರೈಟ್ ಪೈಟೋಟಿಗೆ ಇಳಿಯಿತು. ‘ಕೊಳೆಗೆರೆ ಅನ್ನೋದು ನನ್ನ ಹೆಸರಿನ ಭಾಗ. ಅದನ್ನು ನನಗಿಂತ ಉತ್ತಮರಿಗೆ ಇಟ್ಟರೆ ಒಪ್ಪಿಕೊಳ್ಳಬಹುದಿತ್ತು. ಹೋಗೀಹೋಗಿ ನಮ್ಮೂರಿನ ಉಳ್ಳಾಗಡ್ಡಿ ಓಣೀಲಿ ಯಾರ‍್ಯಾರ ಜತೆಗೋ ಬಿದ್ದೆದ್ದು ಗಬ್ಬೆದ್ದು ಹೋಗಿರುವ ವ್ಯಕ್ತಿಗಲ್ಲಾ ಅಂಥ ಹೆಸರನ್ನು ಇಟ್ಟು ನಮ್ಮ ಪಾವಿತ್ರ್ಯವನ್ನು ನಾಶ ಮಾಡಿದ್ದೀರಿ’ ಅಂತ ಹೂಂಕರಿಸಲಾರಭಿಸಿತು.


‘ಓಹೋ, ಸದಾ ಕೊಳಚೆ ಚರಂಡಿಯಲ್ಲೇ ಬಿದ್ದು ಹೊಲಸನ್ನೇ ತಿಂದು ಬದುಕುವ ನಿನಗೂ ಒಂದು ಪಾವಿತ್ರ್ಯ ಅನ್ನುವುದು ಇದೆಯೇ’ ಎಂಬ ಮರು ಪ್ರಶ್ನೆ ಎಸೆದವನು ಶೋಕರಾಮ. ಇದರಿಂದ ಇನ್ನಷ್ಟು ಕೆರಳಿ ಹೋದ ಹಂದಿ ಹೂಂಕರಿಸುತ್ತಾ ‘ಅದು ನಮ್ಮ ಆಹಾರ. ಇಷ್ಟಾದರೂ ನಮ್ಮಲ್ಲಿ ನಿಯತ್ತು ಅಂತ ಇರುತ್ತದೆ. ರಮ್‌ಗಯ್ಯನಂಥವರು ಹೇತದ್ದನ್ನು ನಾವು ತಿನ್ನದೇ ಹೋಗಿದ್ದರೆ ನಾಡು ಇಷ್ಟರಲ್ಲಿ ಇನ್ನಷ್ಟು ಕೊಳೆಗೇರಿಯಾಗುತ್ತಿತ್ತು. ನಾವು ಕಮರೀಪೇಟೆಯಲ್ಲಿ ಇಷ್ಟು ಓಡಾಡಿದರೂ ಎಂದಿಗೂ ಉಳ್ಳಾಗಡ್ಡಿ ಓಣಿಯ ಮನೆ ಬಾಗಿಲುಗಳನ್ನು ತಟ್ಟಲಿಲ್ಲ. ಈ ಮನುಷ್ಯ ಆ ಓಣಿಯಲ್ಲಿ ಗಂಟೆಗೊಬ್ಬ ಹೆಂಗಸರ ಸೆರಗಿನಲ್ಲಿ ಅಡಗಿಕೊಂಡಿರುತ್ತಾನೆ. ಅದು ನಮಗೆ ಗೊತ್ತಾದ ಮೇಲೆ ಕಮರಿಪೇಟೆಗೆ ಬಂದರೂ ಅಪ್ಪಿ ತಪ್ಪಿಯೂ ನಮ್ಮ ತಿಪ್ಪೆಯಲ್ಲಿ ಬೀಳಲು ಅವನಿಗೆ ಅವಕಾಶ ಕೊಡಲಿಲ್ಲ. ಆತ ನಮ್ಮ ವಾಸಸ್ಥಾನವಾದ ತಿಪ್ಪೆಗೆ ಆತ ಬಿದ್ದರೆ ಅದೂ ಅಪವಿತ್ರಗೊಂಡು ಬಿಡುತ್ತದೆ ಗೊತ್ತುಂಟೋ ?’ ಅಂತ ಕೆಂಗಣ್ಣು ಬೀರಿತು.
ಇಷ್ಟಕ್ಕೆ ಸುಮ್ಮನಿದ್ದರೂ ಇರಬಹುದಿತ್ತು. ಆದರೆ ರಮ್ ಮತ್ತಿನಲ್ಲಿದ್ದ ಆತ ಮತ್ತೆ ಪದ್ಮನಾಭನಗರದ ತುಂಬೆಲ್ಲಾ ಕೇಳಿಸುವಂತೆ ಕಿರುಚಾಡಿದ್ದಕ್ಕೆ ನಾಗಮಂಡಲದವರೆಲ್ಲ ಬೆಚ್ಚಿಬಿದ್ದರಂತೆ. ಈ ಬಾರಿ ಅವರಿಂದಲೇ ‘ಕೇಳಿ’ಸಿಬಿಟ್ಟ ರಮ್‌ಗಯ್ಯ. ಇನ್ನಷ್ಟು ಕೋಪ ಉಕ್ಕಿತು ಹಂದಿಗೆ. ಅಂಥಾ ಆವೇಶದಲ್ಲೂ ತಾಳ್ಮೆ ತಂದುಕೊಂಡು ರಮ್‌ಗಯ್ಯನ ಇತಿಹಾಸವನ್ನು ಬಿಚ್ಚಿಟಿತು ಅದು.


ಹೀಗೆ ಒಮ್ಮೆ ಉಳ್ಳಾಗಡ್ಡಿ ಓಣಿಯಲ್ಲಿ ಉರುಳಾಡಿ, ಕಮರೀಪೇಟೆಯಲ್ಲಿ ಕಂಠಮಟ್ಟ ಕುಡಿದ ಆತ ‘ವ್ವೆ...ವ್ವೆ...ವ್ವೆ...ವ್ಯಾಕ್..ವ್ಯಾಕ್’ ಕಾರಿಕೊಳ್ಳುತ್ತಾ ಬರುತ್ತಿದ್ದಾಗ ಆಯ ತಪ್ಪಿ ಕೊಳಚೆ ತುಂಬಿ ಹರಿಯುತ್ತಿದ್ದ ಚರಂಡಿಗೆ ಬಿದ್ದುಬಿಟ್ಟನಂತೆ. ದಡಬಡಿಸಿ ಏಳಬೇಕೆನ್ನುವಾಗಲೇ ಇದೇ ನಮ್ಮ ಕಥಾನಾಯಕ ಹಂದಿ ಇದೆಯಲ್ಲಾ ಅದರ ವಂಶದ ಹೆಣ್ಣುಹಂದಿಯೊಂದಕ್ಕೆ ಈ ವಿಚಾರ ತಿಳಿದುಬಿಟ್ಟಿತಂತೆ. ತಗೋ ಬಿಡಬೇಡ ಅನ್ನುತ್ತಾ ಅದು ರಮ್‌ಗಯ್ಯನನ್ನು ಅಟ್ಟಿಸಿಕೊಂಡು ಹೊರಟಿತು. ಪಕ್ಕಾ ಬಳ್ಳಾರಿಯಿಂದ ಓಡಿ ಬಂದಂತೆಯೇ ಎದ್ದೆನೋಬಿದ್ದೆನೋ ಅನ್ನುತ್ತಾ ಓಟಕಿತ್ತ ಆತ ಮತ್ತೆ ಉಳ್ಳಾಗಡ್ಡಿ ಓಣಿಯ ಕೋಣೆಯೊಂದಕ್ಕೆ ಹೋಗಿ ಬಾಗಿಲು ಹಾಕಿಕೊಂಡುಬಿಟ್ಟನಂತೆ. ಬದುಕಿದೆಯಾ ಬಡಜೀವವೇ ಅನ್ನುತ್ತಾ ನಿಟ್ಟುಸಿರುಬಿಟ್ಟು ಕಣ್ಣು ತೆರೆದರೆ ಅದು ಹೇಗೋ ಹಂದಿಯೂ ಒಳ ನುಗ್ಗಿ ಬಾಗಿಲ ಬಳಿ ನಿಂತುಬಿಟ್ಟಿತ್ತು. ಅಲ್ಲಿಂದ ಮೂರುತಿಂಗಳು ಇಬ್ಬರೂ ಹೊರಬರಲಿಲ್ಲ. ಮೂರನೇ ತಿಂಗಳೂ ಹಂದಿ ನಿಧಾನಕ್ಕೆ ಹೊರಬರುವಾಗ ಅದೂ ಸಹ ಬಸಿರಾಗಿಬಿಟ್ಟಿತ್ತು. ಇದರಿಂದ ಕೋಪಗೊಂಡ ವರಾಹ ವಂಶಸ್ಥರೆಲ್ಲಾ ಆತನನ್ನು ಅಟ್ಟಾಡಿಸಿಕೊಂಡು ಹೊರಟರಂತೆ. ವ್ವೆ..ವ್ವೆ..ವ್ವೆ ಅನ್ನುತ್ತಾ ಕಾಲ್ಕಿತ್ತ ಆತ ಬಂದು ಬಿದ್ದಿದ್ದು ಬೆಂಗಳೂರಿನ ವೃಷಭಾವತಿಗೆ. ಅಲ್ಲಿವರೆಗೂ ಶುದ್ಧವಾಗಿಯೇ ಇದ್ದ ವೃಷಭಾವತಿ ಅವತ್ತೇ ಇಂದಿನ ಸ್ವರೂಪಕ್ಕೆ ತಿರುಗಿಬಿಟ್ಟಿತಂತೆ. ಅಷ್ಟೇ ಅಲ್ಲ ಅವತ್ತು ಅತ್ಯಾಚಾರದ ಭಯದಿಂದ ನಡುಗಿ ಹೋದ ಹಂದಿ ಸಮುದಾಯ ರಾತ್ರೋ ರಾತ್ರಿ ಬೆಂಗಳೂರಿನಿಂದ ಹೊರಟುಬಿಟ್ಟವಂತೆ. ಹೀಗಾಗಿ ಬೆಂಗಳೂರಿನಲ್ಲಿ ಇವತ್ತು ಎಲ್ಲಿ ನೋಡಿದರೂ ಕೊಳಚೆ ಮಿತಿಮೀರಿ ಬೆಳೆಯುತ್ತಿದೆ. ಅವತ್ತಿಂದ ಹಂದಿಗಳು ಮಾತ್ರ ನೋಡಲೂ ಸಿಗುವುದಿಲ್ಲ. ಅವತ್ತೇ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯನ್ನು ಅಸ್ತಿತ್ವಕ್ಕೆ ತರುವುದೂ ಸರಕಾರಕ್ಕೆ ಅನಿವಾರ್ಯವಾಯಿತು ಅಂತ ಕಥೆ ಹೇಳಿ ಮುಗಿಸಿತು ಕೋಪೋದ್ರಿಕ್ತ ಹಂದಿ.


ಅಷ್ಟರಲ್ಲಿ ನಿತ್ಯಾನಂದನಂತೆ ಸಾಧುವೇಷ ತೊಟ್ಟ ಪತ್ರಕರ್ತನೊಬ್ಬ ಪಂಪಮಾರ್ಗದಿಂದ ಓಡಿ ಬಂದು, ‘ಹಾಗಾದರೆ ಕೊಳೆಗೇರೆ ಅನ್ನೋ ಹೆಸರಿನ ಮೇಲೆ ನಮ್ಮಣ್ಣಂಗೆ ಅತ್ಯಂತ ಅಕೃತ ಅಕಾರ ಇದೆ ಅಂತಾಯ್ತು. ಇನ್ನು ಮುಂದೆ ಇದೇ ಹೆಸರಿನಲ್ಲಿ ರಮ್‌ಗಯ್ಯನ ಹೆಸರು ಅಜರಾಮರವಾಗಲಿ’ ಎಂದು ಆಶೀರ್ವದಿಸಿ ಹೊಸಬರಿಗೆ ತಲೆ ಹಿಡಿಯಲು ಸಜ್ಜಾದನಂತೆ. ಇದರಿಂದ ಸಂತೃಪ್ತಗೊಂಡ ಆ ಜೀವ ತನ್ನ ಹೆಸರನ್ನು ‘ನರಿ ಕೊಳೆಗೆರೆ’ ಎಂದು ಬದಲಿಸಿ ಅಫಿಡೆವಿಟ್ ಮಾಡಿಸುವಂತೆ ತನ್ನ ಕಾನೂನು ಸಲಹೆಗಾರ ಸಂಡೆ ಲಾಯರ್‌ನತ್ತ ತಿರುಗಿ ಗುಟುರು ಹಾಕಿತಂತೆ.


ಮತ್ತೆ ಅದೇ ಮರೆಯದ ಹಾಡು ಕೊಳೆಗೆರೆ ರಮ್‌ಗಯ್ಯಾ.... ಎಂಬ ನಿನಾದ ನಿರಾತಂಕವಾಗಿ ಮುಂದುವರಿಯಿತು. ಈ ಬಾರಿ ಹೆಂಡ್ತಿಯರಿಬ್ಬರೂ ಸಹ ಬಿಕ್ಕುತ್ತಾ ಹಾಡು ಮುಂದುವರಿಸಿದ್ದರು.


Friday, January 21, 2011

ಕೊಳಚೆ ನಿರ್ಮಲನೆ ಮಾಡೋಣ ಬನ್ನಿ

ಒಪ್ಪಿಕೊಳ್ಳುತ್ತೇನೆ. ಯಾರ‍್ಯಾರೋ ಏನೇನೋ ಮಾಡುತ್ತಾರೆಂದು ನಾವು ಅಂಥದಕ್ಕೆ ಕೈ ಹಾಕಬಾರದು. ಇಂಥ ಧರ್ಮೋಪದೇಶ ಬಹಳಷ್ಟು ಬಾರಿ ಕೇಳಿದ್ದೇನೆ. ಅದು ಸತ್ಯವೂ ಹೌದು. ನಮ್ಮ ಸ್ಥಾನ ಮಾನವನ್ನು ಮರೆತು ನಾವು ವರ್ತಿಸಿದರೆ ಸರಿ ಇರಲಿಕ್ಕಿಲ್ಲ. ಆದರೆ ‘ನೀಲಿ ಪತ್ರಿಕೆ’ ಗಳಲ್ಲಿ ಒಮ್ಮೆ ಬರೆಸಿಕೊಂಡಾಗ, ಅದೂ ವಿನಾ ಕಾರಣ...ಆಗ ಹತ್ತುವ ಉರಿಯಿದೆಯಲ್ಲಾ ಅದನ್ನು ಅನುಭವಿಸಿದವರೇ ಹೇಳಬೇಕು.


ಬಹಳಷ್ಟು ಮಂದಿ ನನ್ನ ಬ್ಲಾಗಿಗೆ ಇದೇ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಫೋನಾಯಿಸಿ ಬೋಸಿದವರು ಇನ್ನೆಷ್ಟೋ ಮಂದಿ. ಹಾಗೆಂದು ಅವರು ನನ್ನ ಮೇಲಿಟ್ಟಿರುವ ಅಭಿಮಾನ, ಕಾಳಜಿಯ ಬಗ್ಗೆ ಅನುಮಾನವೇ ಇಲ್ಲ. ‘ಕೊಚ್ಚೆಗೇಕೆ ಕಲ್ಲು ಹೊಡೆಯುತ್ತೀರಿ. ಹಾಗೆ ಮಾಡಿದಲ್ಲಿ ಅದನ್ನು ಮತ್ತೆ ನಮ್ಮತ್ತಲೇ ಎರಚಿಕೊಂಡಂತಾಗುತ್ತದೆ’ ಎಂಬ ಉದಾಹರಣೆಯೇ ಎಲ್ಲರ ಬಾಯಲ್ಲಿ.
ಹೌದು ಸ್ವಾಮಿ, ಅದು ಕೊಚ್ಚೆಯೇ. ನನಗೂ ಗೊತ್ತು. ಕೇವಲ ಮನೆಯ ಹಿತ್ತಿಲಿನಲ್ಲಷ್ಟೇ ಹರಿಯುತ್ತಿದ್ದ ಕೊಳಚೆಯನ್ನು ಹೀಗೆ ಹಬ್ಬಲು ಬಿಟ್ಟವರಾರು ? ಅಂದೇ ಅದನ್ನು ಇಂಗಿಸಿಬಿಟ್ಟಿದ್ದರೆ ಹೀಗೆ ಬೆಂಗಳೂರಿನ ದೊಡ್ಡ ಮೋರಿಗಳಲ್ಲೆಲ್ಲಾ ಹಬ್ಬಿ ಪ್ರವಾಹ ಉಕ್ಕಿಸುತ್ತಿತ್ತೇ ? ಇಡೀ ಬೆಂಗಳೂರು ಗಬ್ಬು ನಾರುತ್ತಿದೆ ಸ್ವಾಮಿ ! ಅಷ್ಟೇ ಅಲ್ಲ, ಊರೂರಿನಲ್ಲಿ ಇಂದು ಕೊಳಚೆ ಪ್ರದೇಶಗಳು, ಕೊಳಗೇರಿಗಳು ಮಿತಿ ಮೀರುತ್ತಿವೆ. ಕಳೆದು ಹತ್ತು ಹದಿನೈದು ವರ್ಷಗಳಲ್ಲಿ ಪದ್ಮನಾಭನಗರದಿಂದ ಹರಿಯಲು ಆರಂಭವಾದ ಇಂಥ ಕೊಳಚೆ ಇಂದು ನಾಡಿನಾದ್ಯಂತ ವ್ಯಾಪಿಸಿಬಿಟ್ಟಿದೆ.


ನಮ್ಮದೆಲ್ಲವೂ ಇಂಥದ್ದೇ ಧೋರಣೆ. ಉಪದೇಶ ಮಾಡುವುದರಲ್ಲಿ ನಮ್ಮದು ಎತ್ತಿದ ಕೈ. ರಾಷ್ಟ್ರ ಭಕ್ತಿಯಿಂದ ಹಿಡಿದು ಸಮಾಜೋದ್ಧಾರದವರೆಗೆ ಎಲ್ಲರದ್ದೂ ಉತ್ತರಕುಮಾರನ ಪೌರಷವೇ ! ವ್ಯವಸ್ಥೆ ಬಗ್ಗೆ ನಾವು ಭಾಷಣ ಬಿಗಿದಷ್ಟು ಬೇರಾರೂ ಮಾತನಾಡುವುದಿಲ್ಲ. ಇಷ್ಟೆಲ್ಲ ಮಾತನಾಡುವ ಭಾರೀ ಮಾನವ ಸಂಪನ್ಮೂಲ ನಮ್ಮಲ್ಲಿದ್ದರೂ ದೇಶವೇಕೆ ಉದ್ಧಾರವಾಗುತ್ತಿಲ್ಲ ಎಂಬುದಕ್ಕೆ ನಾವೇ ಉತ್ತರಿಸಿಕೊಳ್ಳಬೇಕು. ಕಾರಣ ಬಹಳ ಸರಳ. ನಾವು ಮಾತನಾಡುವವರಷ್ಟೆ. ಅಂದರೆ ಕೆಲಸವನ್ನು ನಾವು ಹೇಳುತ್ತೇವೆ; ಉಪದೇಶ ಕೊಡುತ್ತೇವೆ. ಅದರ ಅನುಷ್ಠಾನದ ಹೊಣೆ ಬೇರೆಯವರದ್ದೂ ಎಂಬ ಧೋರಣೆ ಪ್ರತಿಯೊಬ್ಬರದ್ದೂ. ಹೀಗಾಗಿಯೇ ಪದ್ಮನಾಭನಗರದಲ್ಲಿ ಕುಳಿತವರು ನಿಶ್ಚಿಂತೆಯಾಗಿ ಹಾದರ ಮಾಡುತ್ತಲೇ ಇದ್ದಾರೆ. ಅವರಿಗೂ ಗೊತ್ತು ತಮ್ಮಂಥ ಕೊಳಚೆಯನ್ನು ನಿರ್ಮೂಲನೆ ಮಾಡುವ ಇಚ್ಛಾ ಶಕ್ತಿ ಯಾರಲ್ಲೂ ಇಲ್ಲ ಎಂಬುದು. ಹೀಗಾಗಿ ಅವರಿಂದ ಉದ್ಭವಿಸಿದ ಕೊಳಚೆ ಬೆಳೆಯುತ್ತಲೇ ಇದೆ. ಇವತ್ತು ಒಬ್ಬ ಪ್ರತಾಪನಂಥವನು ಮಾಡಿದ ಗಂಡಸಿನ ಕೆಲಸವನ್ನು ಅವತ್ತೇ ಮಾಡಿದ್ದರೆ ನಾಡಿನಾದ್ಯಂತ ಕೊಳೆಗೇರಿಗಳು ಹಬ್ಬುವುದಾದರೂ ತಪ್ಪುತ್ತಿತ್ತು.


ಗೆಳೆಯರೇ ಇನ್ನಾದರೂ ಒಣ ಉಪದೇಶ ಮಾಡುವ ಸೋಗಲಾಡಿತನ ನಮಗೇಗೆ ? ನಮ್ಮ ಸುತ್ತಮುತ್ತಲನ್ನು ನಾವೇ ಸ್ವಚ್ಛಗೊಳಿಸಿಕೊಳ್ಳಬೇಕು. ಗೆಳೆಯರಾರೋ ಹೇಳಿದ್ದಾರೆ-ಇದರ ಬದಲು ನೀರಿನ ಕೆಲಸವನ್ನೇ ಮುಂದುವರಿಸಿ ಅಂತ. ಖಂಡಿತಾ ನೀರು ನನ್ನ ಪ್ಯಾಷನ್, ಅದೇ ನನ್ನ ಉಸಿರು. ಅದಕ್ಕಾಗಿ ನನ್ನ ಜೀವಿತವನ್ನು ಕೊಟ್ಟಿದ್ದೇನೆ. ನಡುನಡುವೆ ಇಂಥ ಜಲ ಮಾಲಿನ್ಯ ತಪ್ಪಿಸುವ, ತಡೆಯುವ ಕೆಲಸವನ್ನೂ ನಾನೇ ಮಾಡಬೇಕಲ್ಲದೇ ಅದನ್ನಿನ್ನಾರು ಮಾಡಿಯಾರು?


ಸಾಧ್ಯವಾದರೆ ಕೊಚ್ಚೆ ನೀರನ್ನು ಪರಿಷ್ಕರಣೆಗೊಳಿಸಿ ಶುದ್ಧಗೊಳಿಸೋಣ. ಅದಿಲ್ಲದಿದ್ದರೆ ಕೊಳೆಗೇರಿ ನಿರ್ಮೂಲನೆಯನ್ನು ಮಾಡೋಣ. ನಿಜವಾಗಿ ಕಳಕಳಿಯಿದ್ದರೆ ನಮ್ಮ ಜೊತೆ ಕೈ ಜೋಡಿಸಿ. ಇಂಥ ಕೊಳೆಯ ವಿರುದ್ಧ ರಾಜ್ಯಾದ್ಯಂತ ಆಂದೋಲನ ಮಾಡೋಣ. ಎಲ್ಲರೂ ಒಂದಾದರೆ ಜನ ಜಾಗೃತಿ ಕಷ್ಟವೇನಲ್ಲ.


ಮುದ್ರಣ ಮಾಧ್ಯಮಕ್ಕೆ ಹೋಲಿಸಿದರೆ ಅಂತರ್ಜಾಲದಲ್ಲಿ ಓದುಗರು ಕಡಿಮೆ ಎನ್ನುವುದನ್ನು ಒಪ್ಪುತ್ತೇನೆ. ಆದರೆ ಇವತ್ತಿನ ಬೆಳವಣಿಗೆಗಳನ್ನು ಗಮನಿಸಿದಾಗ ಅಂಥ ಸಮೂಹವೂ ಕಡಿಮೆ ಏನಿಲ್ಲ. ಕೇವಲ ಐದು ದಿನದಲ್ಲಿ ‘ಗಿಂಡಿಮಾಣಿಯ’ ಅಭಿಮಾನಿಗಳ ಸಂಖ್ಯೆ ಎರಡು ಸಾವಿರವನ್ನೂ ದಾಟಿದೆ ಎಂದರೆ ನಂಬುತ್ತೀರಾ ? ಆ ನೀಲಿಪತ್ರಿಕೆಯ ಓದುಗರು ಎಷ್ಟಿದ್ದಾರು ? ಆರಂಭವಾದ ಐದನೇ ದಿನಕ್ಕೆ ಆ ಪತ್ರಿಕೆ ಖಂಡಿತಾ ಈ ಸಂಖ್ಯೆಯ ಓದುಗರನ್ನು ಹೊಂದಿದ್ದಿರಲಿಲ್ಲ.


ಎಲ್ಲಕ್ಕಿಂತ ಹೆಚ್ಚಾಗಿ ಒಂದನ್ನು ತಿಳಿದುಕೊಳ್ಳೋಣ ಅಂಥ ಕೊಚ್ಚೆಯನ್ನು ಬೆಳೆಸಿದವರೇ ನಾವು. ಇಂದು ಆತ ಹೀಗೆಲ್ಲಾ ತನ್ನ ‘ಹುಚ್ಚು ಮನಸ್ಸಿನ ಹತ್ತು ಮುಖ’ಗಳನ್ನು ಪ್ರದರ್ಶಿಸುತ್ತಿದ್ದಾನೆಂದರೆ ಅದಕ್ಕೆ ಕಾರಣ ನಾವೇ. ಅಂಥವನ್ನು ನಾವು ಓದಿ ಸುಮ್ಮನಿದ್ದುದರಿಂದಲೇ ಈ ಮಟ್ಟಿಗೆ ಪತ್ರಿಕೆ ಬೆಳೆಯಿತು. ಇವತ್ತೇ ಇಂಥ ಪತ್ರಿಕೆಗಳ ಓದಿಗೆ ಬಹಿಷ್ಕಾರ ಹಾಕೋಣ.


ಇನ್ನು ಕಾನೂನಿನ ಹೋರಾಟದ ಪ್ರಶ್ನೆ. ಆ ವಿಚಾರದಲ್ಲೂ ನಾವು ಸುಮ್ಮನೆ ಕುಳಿತಿಲ್ಲ. ‘ವಿ.ಭಟ್ ಎಂಡ್ ಟೀಮ್’ನಿಂದ ಕಾನೂನು ಸಮರದ ಬ್ರೇಕಿಂಗ್ ನ್ಯೂಸ್ ಹೊರಬೀಳಲಿದೆ. ಅದನ್ನು ಕೇಳಿ ಮತ್ತೆ ವ್ವೆ..ವ್ವೆ..ವ್ವೆ...ಅಂತ ಹೇಳದಿದ್ದರೆ ಆ ದೇವರಾಣೆ. ಇಂಥ ಕಾನೂನು ಹೋರಾಟಕ್ಕೂ ನಿಮ್ಮೆಲ್ಲರ ಬೆಂಬಲ ಬೇಕು. ನಾಡಿನ ಮೂಲೆ ಮೂಲೆಗಳಲ್ಲಿ ಮೊಕದ್ದಮೆಗಳು ದಾಖಲಾಗಬೇಕು. ಅಂಥ ಆಸಕ್ತರು ‘ಬೆಬಾಸಂ’(ಬೆಳೆಗೆರೆ ಬಾತರ ಸಂಘ)ವನ್ನು ಸಂಪರ್ಕಿಸಬಹುದು. ಅಷ್ಟಾದರೆ ಇನ್ನಾದರೂ ನಾಡಿನ ಅದೆಷ್ಟೋ ಮುಗುದೆಯರ ಶೀಲಹರಣ ತಪ್ಪೀತು. ಅಪ್ಪಾ, ಅಣ್ಣನೆಂಬ ಭಾವನೆಯಿಂದ ಬರುವ ಹೆಣ್ಣುಮಕ್ಕಳನ್ನು ಅಮ್ಮನನ್ನಾಗಿಸಿ ಕಳುಹಿಸುವ ರಾಕ್ಷಸೀ ಪ್ರವೃತ್ತಿಗೆ ಕಡಿವಾಣ ಬಿದ್ದೀತು ಎಂಬ ಆಶಯ ನಮ್ಮದು.


ಎಲ್ಲಕ್ಕಿಂತ ಹೆಚ್ಚಾಗಿ ನಮಗೂ ಇಂಥದ್ದೊಂದು ಮಟ್ಟಕ್ಕೆ ಇಳಿಯಲು ಬರುತ್ತದೆ ಎಂಬುದನ್ನು ತೋರಿಸಬೇಕಿತ್ತು. ಬೌದ್ಧಿಕತೆ ಯಾರಿಗೂ ಮಾರಾಟವಾಗಿಲ್ಲ ಎಂಬುದನ್ನು ತೋರಿಸಲೋಸುಗ ‘ವ್ವೆ..ವ್ವೆ..ವ್ವೆ...’ ಮಾದರಿಯ ಬರಹದಲ್ಲೇ ಅವರಿಗೆ ಪೇಮೆಂಟ್ ಬಾಕಿ ತೀರಿಸಲಾಗಿದೆ. ಚೀಟಿ ಹಣ ನುಂಗಿ ಬೆಂಗಳೂರಿಗೆ ಓಡಿ ಬಂದವನೆಂದು ನನ್ನ ಬಗ್ಗೆ ಅಲ್ಲಿ ಬರೆಯಲಾಗಿತ್ತು. ಆದರೆ ನಾನ್ಯಾವತ್ತೂ ಯಾವುದೇ ಬಾಕಿ ಇಟ್ಟುಕೊಳ್ಳುವ ಜಾಯಮಾನದವನಲ್ಲ ಎಂಬುದನ್ನು ತೋರಿಸಲಾದರೂ ಒಂದಷ್ಟು ಅವಕಾಶ ಕೊಡಿ ಪ್ಲೀಸ್...

ಗಿಂಡಿ ತೀರ್ಥ: ‘ಉಚಿತ ಸಲಹೆ’ ಕೊಡಲಷ್ಟೇ ಖುಷಿ. ಅದನ್ನು ತೆಗೆದುಕೊಳ್ಳಲು ಬೇಸರವಾಗುತ್ತದೆ. ಇದು ಇನ್‌ಸ್ಟಂಟ್ ಯುಗ ಸ್ವಾಮಿ, ಇವತ್ತು ಮಾಡಿದ ಪಾಪವನ್ನು ಮುಂದಿನ ಜನ್ಮದಲ್ಲಿ ಅನುಭವಿಸುವ ಪ್ರಶ್ನೆಯೇ ಇಲ್ಲ. ಏನಿದ್ದರೂ ಇವತ್ತಿನ ‘ಕರ್ಮ’ಕ್ಕೆ ಇವತ್ತೇ ಫಲ ಎನ್ನುತ್ತಿದ್ದಾರಂತೆ ಪಂಪ ಮಾರ್ಗದ ‘ಸಾಧು’ ಸಂತರೊಬ್ಬರು. ಬೇಕಿದ್ದರೆ ‘ಕೇಳಿ’ನೋಡಿ.

Wednesday, January 19, 2011

ಯಶೋಮತಿ ಪ್ರಾಪ್ತಿಗಾಗಿ ಲಲಿತಾ ಸಹಸ್ರನಾಮ

‘ಅಸಲಿಗೇ....ಈ ಭಡ್ತಿಗೆ ಬಾಲ ಇದೆಯೋ ಇಲ್ಲವೋ...’

ಪದ್ಮನಾಭನಗರದ ಪತ್ರಿಕಾ ಕಚೇರಿಯಲ್ಲಿ ಕಳೆದವಾರ ಇಂಥದ್ದೊಂದು ಪ್ರಶ್ನೆ, ಕೀರಲು ಸ್ವರದಲ್ಲಿ ಕೇಳಿಬರುತ್ತಿತ್ತಂತೆ. ಅಂದರೆ ‘ಭಡ್ತಿ‘ಯಲ್ಲಿ ಬರುವ ‘ಭ’ ಅಕ್ಷರ ಮಹಾಪ್ರಾಣವೋ, ಅಲ್ಪ ಪ್ರಾಣವೋ ಎಂಬುದು ತಿಳಿಯದೇ ಒದ್ದಾಡುತ್ತಿತ್ತು ಆ ಪ್ರಾಣಿ. ಅದು ನರಿಯೋ, ನಾಯಿಯೋ ಊಳಿಟ್ಟ ಸದ್ದಿರಬಹುದೆಂದು ಮಂದಿ ತಮ್ಮ ಪಾಡಿಗೆ ತಾವು ತಲೆ ಬಗ್ಗಿಸಿ ಕೆಲಸಕ್ಕೆ ತೊಡಗಿದರೂ ಬಿಡದೇ ಅದು ಊಳಿಡುತ್ತಲೇ ಇತ್ತಂತೆ. ಹೀಗಿರುವಾಗ ಆ ದೈತ್ಯ ಪ್ರತಿಭೆ ಕಿರುಚಿದ್ದು ಕೇಳಿ ಕೇವಲ ಆ ಕಚೇರಿಯಲ್ಲಿದ್ದವರಷ್ಟೇ ಅಲ್ಲ, ಪಂಪ ಮಾರ್ಗದಲ್ಲಿರುವ ಪತ್ರಿಕಾ ಕಚೇರಿಯ ಒಂದಷ್ಟು ಮಂದಿಯೂ ದಡಕ್ಕನೆ ಓಡೋಡಿ ಬಂದು ‘ಏನಪ್ಪಣೆ...’ ಎಂಬಂತೆ ಡೊಗ್ಗು ಸಲಾಮ್ ಹೊಡೆದು ನಿಂತರಂತೆ. ಅವರಲ್ಲೇ ಎರಡು ಗುಂಪುಗಳಾಗಿ ಹೋಯಿತು. ಕೆಲವರು ಬಾಲ ಇದೆ ಅಂದರೆ, ಮತ್ತೆ ಕೆಲವರು ಇಲ್ಲ ಅಂದರಂತೆ.

ಹೀಗೆಯೇ ಚರ್ಚೆ ಮುಂದುವರಿಯುತ್ತಿರುವಾಗಲೇ ಇವರ ಗದ್ದಲದಿಂದ ಎಚ್ಚೆತ್ತ ‘ಸಿಂಹದ ಮರಿ’ ಕೋಪದಿಂದ ಒಮ್ಮೆಲೆ ಘರ್ಜಿಸಿ ತನ್ನ ಪ್ರತಾಪ ತೋರಿತು. ಮಲಗಿದ್ದ ಸಿಂಹವನ್ನು ಕೆಣಕಿದ ತಪ್ಪಿನ ಅರಿವಾಗಿ ಅಲ್ಲಿದ್ದವರೆಲ್ಲರ ಚಡ್ಡಿಯೂ ಒದ್ದೆಯಾಗಿತ್ತಂತೆ. ಆ ಘರ್ಜನೆಗೆ ದೈತ್ಯ ಪ್ರತಿಭೆಯ ರವಿಮೊಗದಲ್ಲಿ ಅದೆಷ್ಟು ಬೆವರಿಳಿದು ಹೋಗಿತ್ತೆಂದರೆ, ಬೆಂಗಳೂರಿನ ದೊಡ್ಡ ಮೋರಿಯಲ್ಲಿ ಅದೇ ಭೋರ್ಗರೆದು ಹರಿಯತೊಡಗಿ, ವೃಷಾಭಾವತಿ ಮೊದಲಿಗಿಂತಲೂ ದುರ್ವಾಸನೆ ಬೀರ ತೊಡಗಿತು. ಇದೆಂಥಾ ವಾಸನೆ ಎಂದು ಅರಿಯದೇ ಯಾರಿಗಾದರೂ ನಿವೇದಿಸಿಕೊಳ್ಳೋಣ ಎಂದು ಉಷಾಕಾಲದಲ್ಲೇ ಎದ್ದು ಹೊರಬಂದು ನೋಡಿದರೆ ಕೋರ್ಟಿನಿಂದ ಬಂದ ವ್ಯಕ್ತಿಯೊಬ್ಬರು ಅದೇನೋ ಇಂಜಂಕ್ಷನ್ ಚುಚ್ಚಲು ಸಿದ್ಧವಾಗಿ ನಿಂತಿದ್ದರಂತೆ. ಅದನ್ನು ಚುಚ್ಚಿಸಿಕೊಳ್ಳಲೋ ಬೇಡವೋ ಎಂಬುದು ತಿಳಿಯದೇ ಒಳಗೋಡಿದರೆ ದೈತ್ಯ ಪ್ರತಿಭೆಯ ಮುಖದಲ್ಲಿ ಅದ್ಯಾವ ಭಾವನೆ ಇದೆಯೆಂಬುದನ್ನೇ ಗುರುತಿಸಲಾಗದ ಸ್ಥಿತಿ. ಚೇತನವನ್ನೇ ಕಳಕೊಂಡ ಸ್ಥಿತಿಯಲ್ಲಿ ಚಿಕ್ಕದ್ದೊಂದು ಮಾಂಸದ ಪರ್ವತದಂತೆ ವ್ವೆ,ವ್ವೆ,ವ್ವೆ...ಅನ್ನುತ್ತಾ ಬಿದ್ದುಕೊಂಡಿತ್ತು ಆ ದೇಹ.

ಎದ್ದೆನೋ ಬಿದ್ದೆನೋ ಎಂಬಂತೆ ಊರ ತುಂಬೆಲ್ಲ ಇದ್ದ ಶುಶ್ರೂಕಿಯರು ಓಡಿ ಬಂದು ಗಾಳಿ ಬೀಸಿ, ನೀರು ಕುಡಿಸಿ ಶೈತ್ಯೋಪಚಾರ ಮಾಡಿದ್ದೇ ಮಾಡಿದ್ದು. ಆದರೆ ಅದರಿಂದ ಯಾವುದೇ ಪ್ರಯೋಜನವೂ ಆಗದಿದ್ದಾಗ ಇನ್ನೇನು ಮಾಡಲೂ ದಿಕ್ಕು ತೋಚದೇ ಆ ಆ ಹಿಮವಂತನಾದ ಈಶ್ವರನನ್ನೇ ಪ್ರಾರ್ಥಿಸುತ್ತಾ ಕುಳಿತು ಬಿಟ್ಟರಂತೆ. ಹಿನ್ನೆಲೆಯಲ್ಲಿ ಜೋಗಿಯರ ಪದವೂ ಕೇಳಿಬರುತ್ತಿತ್ತು. ಅಷ್ಟರಲ್ಲಿ ಪ್ರಕಾಶಮಾನವಾದ ಬೆಳಕೊಂದು ಪ್ರಜ್ವಲಿಸಿ ವಿಠ್ಠಲ ಮಲ್ಯ ರಸ್ತೆಯಲ್ಲಿ ಅನುಗ್ರಹಿತವಾದ ವಿಚಿತ್ರವಾದ ದ್ರವವೊಂದನ್ನು ದೇಹದ ಮುಂದೆ ಹಿಡಿಯಿತು. ಅದೇನು ಅಚ್ಚರಿಯೋ, ಪವಾಡವೋ, ಕೈಗುಣವೋ ಕ್ಷಣದಲ್ಲಿ ಅದು ಚೇತರಿಸಿಕೊಂಡು ‘ಅಣ್ಣಾ...’ ಎಂದು ಕೀರಲು ಸ್ವರದಲ್ಲಿ ಮತ್ತೆ ಉದ್ಘರಿಸಿತು. ಹತ್ತಿರಹೋಗಿ ಕಿವಿಗೊಟ್ಟು ಕೇಳಿದರೆ, ಗಿಂಡಿ. ಗಿಂಡಿ... ಎನ್ನುವ ಪ್ರಲಾಪ ಕೇಳಿಬಂತು. ಓಹೋ...ನೀರು ಕೇಳುತ್ತಿರಬೇಕು ಎಂದುಕೊಂಡು ಗಿಂಡಿಯಲ್ಲಿನ ತೀರ್ಥ ತಂದು ಬಾಯಿಗೆ ಬಗ್ಗಿಸಲು ಹೊರಟರು ಮಂದಿಮಾಗದರು. ಅದನ್ನು ಒಂದೇ ಏಟಿಗೆ ತಳ್ಳಿ ಹಾಕಿದ ಆ ದೈತ್ಯ ದೇಹ, ಎದುರಿಗಿದ್ದ ಇಡೀ ಬ್ಯಾರೆಲ್ ಅನ್ನೇ ಸುರುವಿಕೊಂಡು ಮತ್ತೆ ವ್ವೆ,ವ್ವೆ,ವ್ವೆ...ಅನ್ನತೊಡಗಬೇಕೇ ?

ಕರ್ಣ ಕರ್ಕಶವಾದ ಆ ಧ್ವನಿಯನ್ನು ಕೇಳಿ ಅಲ್ಲಿದ್ದ ಎಲ್ಲರೂ ಮುಖ ಕಿವುಚಿದರೆ ಈ ದೇಹ ಮಾತ್ರ ಏದುಸಿರು ಬಿಡುತ್ತಾ ಮುಂದೇನು ಮಾಡಬೇಕೆಂಬುದನ್ನೇ ಅರಿಯದೇ ‘ವಿಶ್ವರೂಪ ದರ್ಶನವನ್ನು ಮಾಡಿಸಿಯೇ ತೀರುತ್ತೇನೆ. ಈ ಸತ್ಯಸಂದನಿಂದ ಎಲ್ಲವೂ ಇತಿಹಾಸದಲ್ಲಿ ದಾಖಲಾಗಿಯೇ ಆಗುತ್ತದೆ’ ಎನ್ನುತ್ತಾ ಪೆನ್ನನ್ನೆತ್ತಿಕೊಂಡು ಅದಕ್ಕೆ ಶಾಯಿ ತುಂಬಿಸುವ ಬದಲಿಗೆ ಬ್ಯಾರೆಲ್‌ನಲ್ಲಿದ್ದುದನ್ನೇ ಅದ್ದಿ ಅದ್ದಿ ಬರೆಯ ತೊಡಗಿದ್ದು ಮಾತ್ರ ಸತ್ಯ.

ಹಾಗೆ ಗೀಚಿ ಬೀಚಿ ಬಿಟ್ಟಿದ್ದೆಲ್ಲವೂ ಕಪ್ಪು ಸುಂದರಿಯ ಬಾಟಮ್ ಐಟಮ್ಮುಗಳ ಸಾಫ್ಟ್ ಕಾರ್ನರ್‌ಗಳಲ್ಲಿ ಸೇರಿಕೊಳ್ಳಲುತೊಡಗಿದಂತೆ ಆ ದೇಹದ ಮುಖದಲ್ಲಿ ವ್ಯಂಗ್ಯ, ವಿಕೃತವಾದ ನಗೆಯೊಂದು ಮೂಡಲಾರಂಭಿಸಿತು. ಅದನ್ನು ನೋಡಿ ಅಲ್ಲಿದ್ದವರೆಲ್ಲ ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದರೆ ಜೆಪಿ ನಗರದ ಫ್ಲ್ಯಾಟ್ ಒಂದರಲ್ಲಿ ಇನ್ನಾದರೂ ಈ ದೇಹಕ್ಕೆ ಸನ್ಮತಿ, ಯಶೋಮತಿಗಳು ದೊರಕಲೆಂದು ಲಲಿತಾ ಸಹಸ್ರನಾಮಾರ್ಚನೆ, ಪ್ರಾರ್ಥನೆ ಇತ್ಯಾದಿ ನಡೆಯುತ್ತಿತ್ತು.

ಅಷ್ಟರಲ್ಲಿ ಗಿಂಡಿಹಿಡಿದ ಮಾಣಿಯೊಬ್ಬ ಭಡ್ತಿಗೆ ಬಾಲ ಇದೆ, ಆದರೆ ಎಲ್ಲ ಸಂದರ್ಭದಲ್ಲೂ ಆತ ಬಾಲ ಬಿಚ್ಚುವುದಿಲ್ಲ ಎಂದು ಕೂಗಿ ಹೇಳಿದ್ದು ಕಿವಿಗಪ್ಪಳಿಸಿಬಿಡಬೇಕೇ ? ಬಾಲ ಎಂಬ ಪದ ಕೇಳುತ್ತಿದ್ದಂತೆಯೇ ಆ ದೈತ್ಯ ಪ್ರತಿಭೆಗೆ ಇದ್ದಕ್ಕಿಂದಂತೆ ಆಂಜನೇಯನ ದರ್ಶನವಾಗಿ, ಲಂಕೆಯನ್ನು ಸುಟ್ಟ ಘಟನೆ ಮನದಲ್ಲಿ ಮೂಡಿತಂತೆ ...ಅಷ್ಟೆ, ಮತ್ತೆ ಸ್ಮೃತಿ ತಪ್ಪಿದ ಪ್ರಾಣಿ ಅದೇನೋ ಸುಟ್ಟ ಬೆಕ್ಕಿನಂತೆ ವ್ವೆ,ವ್ವೆ,ವ್ವೆ...ಎನ್ನತೊಡಗಿದ್ದನ್ನು ಕೇಳಿ, ಕೇಳಿ ಎಂದರೂ ಯಾರೂ ಕೇಳಿಸಿಕೊಳ್ಳಲೇ ಇಲ್ಲ.

ಗಿಂಡಿ ತೀರ್ಥ: ಈ ಕೇಳಿ ಅನ್ನೋದು ಕೆಲ ಪತ್ರಕರ್ತರಿಗೆ ಅತ್ಯಂತ ಪ್ರಿಯವಾದದ್ದು. ಹೀಗಾಗಿ ದಿನವೂ ಅವರು ಅಂಥ ಕೇಳಿಯಲ್ಲೇ ತೊಡಗಿರುತ್ತಾರೆ. ಅದರ ಹಿಂದೆ ಕಾಮದ ವಾಸನೆ ಹೊಡೆದರೆ ಅದು ಇತಿಹಾಸ, ಪರಂಪರೆಯ ಕೊಡುಗೆ.

Monday, January 17, 2011

ನಾವೇ ಇತಿಹಾಸ ನಿರ್ಮಿಸುತ್ತೇವೆ

ವೈರಿಗಳು ಎಸೆದ ಕಲ್ಲನ್ನೇ ಸಂಗ್ರಹಿಸಿ ಮನೆ ನಿರ್ಮಿಸಿಕೊಳ್ಳುವುದಿದೆಯಲ್ಲಾ ಅದು ನಿಜವಾದ ಜಾಣತನ. ಅದು ನೈಜ ತಾಕತ್ತು. ಅಂಥದ್ದೊಂದು ಸಿದ್ಧಾಂತದಲ್ಲಿ ನಂಬಿಕೆ ಇಟ್ಟವ ನಾನು. ಹಾಗೆ ಬೀಸಿದ ಕಲ್ಲುಗಳಿಂದ ಕಟ್ಟಿದ ಮನೆಯೇ ಈ ‘ಗಿಂಡಿಮಾಣಿ ಬ್ಲಾಗ್’. ಥ್ಯಾಂಕ್ಸ್ ಟು ರವಿ ಬೆಳಗೆರೆ. ನನ್ನನ್ನು ಈ ಹೆಸರಿನಲ್ಲಿ ವ್ಯಂಗ್ಯ ಮಾಡಿ ಅವತ್ತು ಬರೆಯದಿದ್ದರೆ ನನಗೆ ಇಂಥ ಅಪರೂಪದ ಕಾವ್ಯನಾಮ ಸಿಗುತ್ತಲೇ ಇರಲಿಲ್ಲ. ಈಗಲೇ ಘೋಷಿಸುತ್ತೇನೆ. ಈ ಗಿಂಡಿಮಾಣಿ ಇನ್ನು ಬರೆಯುತ್ತಲೇ ಇರುತ್ತಾನೆ.

‘ವಿಜಯ ಕರ್ನಾಟಕ’ವನ್ನು ಬಿಟ್ಟ ಮರುದಿನದಿಂದಲೇ ನನ್ನ ವಿರುದ್ಧ ಸನ್ಮಾನ್ಯ ಶ್ರೀ ಶ್ರೀ ರವಿ ಬೆಳಗೆರೆಯವರು ತಮ್ಮ ‘ವಾರದ ಅಚ್ಚರಿ’ಯಲ್ಲಿ ಇದ್ದಕ್ಕಿದ್ದಂತೆ ಕಲ್ಲು ಬೀಸಲಾರಂಭಿಸಿದರು. ನನಗೆ ಗೊತ್ತಿದ್ದಂತೆ ಅವರು ಹೀಗೆ ಕಲ್ಲು ಎಸೆಯಲು ಕಾರಣವೇ ಇಲ್ಲ. ಅಷ್ಟಕ್ಕೂ ನಾನೆಂದೂ ಅವರ ಅಂತಃಪುರದವರ ಯಾರ ‘ಹೆಗಲು ಸವರಲೂ’ ಹೋಗಿಲ್ಲ.

ಕೆಲವರಿಗೆ ಹಾಗೆಯೇ, ಸುಖಾಸುಮ್ಮನೆ ಕಲ್ಲು ಎಸೆಯುತ್ತಿರುವ ಚಟ. ಅದು ಹಿರಿಯರು, ಕಿರಿಯರು, ಸಮಾನ ಮನಸ್ಕರು/ ವಯಸ್ಕರು, ಸ್ನೇಹಿತರು, ವೈರಿಗಳು ಇತ್ಯಾದಿ ಯಾವ ಭೇದವೂ ಇರುವುದಿಲ್ಲ. ಒಟ್ಟಾರೆ ಕಲ್ಲು ಬೀಸುತ್ತಲೇ ಇರಬೇಕು. ಬಹುಶಃ ತಾವು ಹೀಗೆ ಕಲ್ಲು ಬೀಸುವುದನ್ನು ನಿಲ್ಲಿಸಿದಾಕ್ಷಣ ನಾಡಿನ ಮಂದಿಯೆಲ್ಲಾ ಸೇರಿ ತಮ್ಮತ್ತಲೇ ಕಲ್ಲೆಸೆಯಲಾರಂಭಿಸುತ್ತಾರೆ ಎಂಬ ಭೀತಿ (ನಂಬಿಕೆ)ಯೂ ಅವರ ಇಂಥ ವರ್ತನೆಗಳಿಗೆ ಕಾರಣವಿರಬಹುದು. ಹೀಗಾಗಿಯೇ ಅವರು ತಮ್ಮ ನಿಕಟ ಗೆಳೆಯ( ಹಾಗಂತ ರವಿಯವರೇ ಸಾಕಷ್ಟು ಬಾರಿ ಹೇಳಿಕೊಂಡದ್ದು) ವಿಶ್ವೇಶ್ವರ ಭಟ್ಟರ ಮೇಲೂ ಕಲ್ಲೆಸೆದದ್ದಿರಬೇಕು.

ಆದರೆ, ರವಿ ಬೆಳಗೆರೆಯವರಿಗೆ ನನ್ನ ವಿಚಾರದಲ್ಲಿ ಅದೆಂಥಾ ಭಯ, ದ್ವೇಷ ಕಾಡುತ್ತಿದೆಯೋ ನನಗಂತೂ ಗೊತ್ತಿಲ್ಲ. ಏಕೆಂದರೆ ಆ ವ್ಯಕ್ತಿಯ ಮೇಲೆ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ‘ದಾಖಲಿಸುತ್ತಿರುವ ಇತಿಹಾಸದ’ ಬಗ್ಗೆ ಒಂದು ಮಟ್ಟಿಗಿನ ಗೌರವವನ್ನು ಇಟ್ಟುಕೊಂಡಿದ್ದವನು ನಾನು. ಮಾತೆತ್ತಿದರೆ ‘ಒಬ್ಬ ಜವಾಬ್ದಾರಿಯುತ ಪತ್ರಕರ್ತನಾಗಿ ನಾವಿದನ್ನು ಇತಿಹಾಸದಲ್ಲಿ ದಾಖಲಿಸಲೇಬೇಕು...’ ಎಂಬಿತ್ಯಾದಿ ಪುಂಖಾನುಪುಂಖವಾಗಿ ಹೊಮ್ಮುವ ಅವರ ಭಾಷಣದ ಬಗ್ಗೆ ಒಮ್ಮೊಮ್ಮೆ ಅಚ್ಚರಿಯೂ ಆಗುತ್ತಿತ್ತು. ಪತ್ರಕರ್ತನ ಹೊಣೆಗಾರಿಕೆ ಕೇವಲ ಇತಿಹಾಸ ದಾಖಲಿಸುವುದಕ್ಕೆ ಮಾತ್ರವೇ ಸೀಮಿತವೇ ? ಹಾಗಾದರೆ ಇತಿಹಾಸದ ಭಾಗವಾಗಿ ಪತ್ರಕರ್ತ ನಿಲ್ಲುವುದಿಲ್ಲವೇ ? ಆತ ಈ ಸಮಾಜದ ಅಂಗವಲ್ಲವೇ ? ಈ ಎಲ್ಲ ಪ್ರಶ್ನೆಗಳೂ ಮನದಲ್ಲೇಳುತ್ತಿತ್ತು. ಕೊನೆಗೆ-ಎಷ್ಟಾದರೂ ಮಾಜಿ ಇತಿಹಾಸದ ಮಾಸ್ತರರಲ್ಲವೇ. ಅಭ್ಯಾಸ ಬಲದಿಂದ ಎಲ್ಲವನ್ನೂ ಇತಿಹಾಸದ ಚೌಕಟ್ಟಿನಲ್ಲೇ ನೋಡುತ್ತಿರಬಹುದು ಎಂದುಕೊಂಡು ಸುಮ್ಮನಾಗುತ್ತಿದ್ದೆ. ವಿ.ಭಟ್ ತಂಡದ ರಾಜೀನಾಮೆಯ ಬಗ್ಗೆಯೂ ಅದೇ ಇತಿಹಾಸ ದಾಖಲಿಸುವ ಹಂಬಲದಿಂದಲೇ ಬರೆದಿದ್ದರೆ ಸುಮ್ಮನಾಗಿಬಿಡಬಹುದಿತ್ತು. ಆದರೆ ಈ ಸೋ ಕಾಲ್ಡ್ ಇತಿಹಾಸಕಾರರೆಲ್ಲರ ಕತೆಯೂ ಇದೇ ಇರಬಹುದೇ ? ಇತಿಹಾಸವನ್ನು ತಿರುಚದೇ ಅವರೆಂದೂ ಬರೆದವರೇ ಅಲ್ಲ. ನಮ್ಮ ರಾಷ್ಟ್ರೀಯತೆಯಿಂದ ಹಿಡಿದು, ನಮ್ಮ ಆರಾಧನಾ ಸ್ಥಳಗಳು, ನಮ್ಮ ಪರಂಪರೆ, ಸಾಹಿತ್ಯ ಹೀಗೆ ಎಲ್ಲದರ ಬಗ್ಗೆಯೂ ಅವರದ್ದು ಪೂರ್ವಗ್ರಹಪೀಡಿತ ದೃಷ್ಟಿಯೇ. ಹೀಗಾಗಿಯೇ ಕೆಲವೊಮ್ಮೆ ನಮ್ಮ ಪಠ್ಯ ಪುಸ್ತಕಗಳಲ್ಲೂ ಇಂಥವರ ಅಪಸವ್ಯಗಳು ಇತಿಹಾಸದ ಪಾಠವಾಗಿ ಇಣುಕಿಬಿಡುತ್ತವೆ. ತಮ್ಮ ಮೂಗಿನ ನೇರಕ್ಕೆ ಹೇಳಿಕೊಳ್ಳುವುದೇ ನೈಜ ಇತಿಹಾಸ ಎನ್ನುವ ಭಾವನೆ ಅವರದ್ದು. ತಮ್ಮ ಶಿಷ್ಯ ಪರಂಪರೆಗೂ ಅವರು ಅದನ್ನೇ ಬೋಸುವುದು. ಅವರು ಉಗುಳಿದ್ದನ್ನೇ ಸತ್ಯವೆಂದು ನಂಬುವ ಮುಗ್ಧ ಮನಗಳಿಗೂ ಕೊರತೆಯಿಲ್ಲ. ಈ ಎಲ್ಲರ ಬಗೆಗೆ ಸಣ್ಣದ್ದೊಂದು ಕನಿಕರವನ್ನಷ್ಟೇ ತೋರಬಹುದೇ ವಿನಾ ಅದಕ್ಕಿಂತ ಹೆಚ್ಚೇನೂ ಉಳಿಯುವುದಿಲ್ಲ.

ಹಾಗೆಂದು ವೇದಾಂತ ಹೇಳಿಕೊಂಡೇ ಕಳೆಯುವಷ್ಟು ವಾನಪ್ರಸ್ತಕ್ಕೂ ನಾವು ಬಂದು ನಿಂತಿಲ್ಲ. ಕೆಲವೊಮ್ಮೆ ಅವರೆಸೆದ ಕಲ್ಲನ್ನೇ ತಿರುಗಿಸಿ ಬೀಸಲೂ ನಮಗೆ ಗೊತ್ತೆಂಬುದನ್ನು ಮನವರಿಕೆ ಮಾಡಿಕೊಡಬೇಕಾಗುತ್ತದೆ. ಹಾಗೆ ತಿರುಗಿಸಿ ಎಸೆದರೆ ಮತ್ತೆಂದು ಅದು ಗುರಿ ತಪ್ಪುವ ಪ್ರಶ್ನೆಯೇ ಇಲ್ಲ.

ಅದಕ್ಕಾಗಿಯೇ ಗಿಂಡಿಮಾಣಿ ಮೈಕೊಡವಿ ನಿಂತದ್ದು. ಕೇವಲ ಈ ದಾಟಿಯಲ್ಲೇ ಉತ್ತರಿಸಿದರೆ ಮುಟ್ಟುವಷ್ಟು ಸೂಕ್ಷ್ಮ ಮನಸ್ಸಿನವರಾಗಿದ್ದರೆ ಈ ಪ್ರಮೇಯವೇ ಬರುತ್ತಿರಲಿಲ್ಲ. ಅದಕ್ಕಾಗಿ ಕಾನೂನು ಹೋರಾಟಕ್ಕೂ ನಿಂತಿದ್ದೇವೆ. ಇಷ್ಟು ವರ್ಷದ ಮೇಲೆ ಕನ್ನಡದ ಹಿರಿಯ ಪತ್ರಕರ್ತರೊಬ್ಬರಿಗೆ ಪತ್ರಿಕೋದ್ಯಮವೆಂದರೆ ಏನು ಎಂಬುದನ್ನು ಗೆಳೆಯ ಪ್ರತಾಪ್‌ರಂಥ ಕಿರಿಯ ಬೋಸಬೇಕಾಗಿ ಬಂದಿರುವುದು ದುರಂತ. ಆ ಮೂಲಕ ಇತಿಹಾಸವನ್ನು ನಿರ್ಮಿಸ ಹೊರಟಿದ್ದೇವೆ.

ಹೌದು, ಈ ಬಗ್ಗೆ ಅತ್ಯಂತ ಆತ್ಮ ವಿಶ್ವಾಸದಿಂದ ಹೇಳಿಕೊಳ್ಳಬಲ್ಲೆವು. ಕೇವಲ ಇತಿಹಾಸ ದಾಖಲಿಸುವ ಪತ್ರಕರ್ತರು ನಾವಲ್ಲ, ಸ್ವತಃ ಇತಿಹಾಸ ನಿರ್ಮಿಸುತ್ತೇವೆ. ಇಷ್ಟರವರೆಗೆ ‘ವಿಜಯ ಕರ್ನಾಟಕ’ದಲ್ಲಿ ನಮ್ಮ ಬರವಣಿಗೆಗಳನ್ನು ಕಂಡವರು, ತಪ್ಪದೇ ಓದಿದವರಿಗೆ ಈ ಬಗ್ಗೆ ಅನುಮಾನಗಳು ಉಳಿದಿಲ್ಲ. ಒಂದೊಂದು ಅಂಕಣಗಳ ಮೂಲಕ, ಅದಕ್ಕಿಂತ ಹೆಚ್ಚಾಗಿ ಸುದ್ದಿಮನೆಯ ಬೇರೇಬೇರೇ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಇದನ್ನು ಸಾಬೀತುಪಡಿಸಿದ್ದೇವೆ. ಇಂಥ ಇನ್ನೂ ಹತ್ತು ಪತ್ರಿಕೆಗಳನ್ನು ಕಟ್ಟುವ ಕಸುವು, ಬುದ್ಧಿ ಮತ್ತೂ ವಯಸ್ಸೂ ಸಹ ದೇವರ ದಯೆಯಿಂದ ನಮ್ಮಲ್ಲಿದೆ. ತಾಕತ್ತಿದ್ದರೆ ಮನಬಂದಂತೆ ಕಾರಿಕೊಳ್ಳುವವರು ಕಾರಕೂನಿಕೆ ಬಿಟ್ಟು ಹೊಸ ಇತಿಹಾಸ ನಿರ್ಮಿಸಿ ತೋರಿಸಲಿ.

ಕೇವಲ, ಕಂಡವರ ಚಾರಿತ್ರ್ಯವಧೆಯನ್ನು ಮಾಡಿಕೊಂಡೇ, ತಮ್ಮ ತೆವಲುಗಳನ್ನು ಯಾವ್ಯವುದೋ ಅಂಕಣಗಳ ಹೆಸರಲ್ಲಿ ಸಮರ್ಥಿಸಿಕೊಂಡೇ, ಅದನ್ನೇ ಪತ್ರಿಕೋದ್ಯಮವೆಂದು ನಾವೆಂದೂ ಸಾರಿಲ್ಲ. ನಮ್ಮ ದೃಷ್ಟಿ, ಆಸಕ್ತಿಗಳು ಯಾವತ್ತೂ ‘ಬಾಟಮ್ ಐಟಮ್’ಗಳತ್ತ ದ್ವಂದ್ವಾರ್ಥದಲ್ಲಿ ಹರಿದಿಲ್ಲ. ನಮ್ಮದೇನಿದ್ದರೂ ನೇರ, ಮಂತ ನೋಟ. ಅದರಲ್ಲಿ ಯಾವ ‘ಸಾಪ್ಟ್ ಕಾರ್ನರ್’ ಸಹ ಇರಲಿಲ್ಲ. ನಮ್ಮ ಖಾಸಗೀ ಸಂಗತಿಗಳ, ಚಟಗಳ ವೈಭವೀಕರಣಕ್ಕೆ ಪತ್ರಿಕೆಯನ್ನು, ಓದುಗರ ಮನವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ನಾವೆಷ್ಟು ಹಾಸಿಗೆಗಳಲ್ಲಿ ಹೊರಳಾಡಿದ್ದೇವೆ, ಆಗೆಲ್ಲಾ ಎಷ್ಟು ಮುಗುದೆಯರ ಕಣ್ಣೀರು ತಲೆದಿಂಬನ್ನು ಒದ್ದೆ ಮಾಡಿತ್ತೂ ಎಂಬುದರ ಲೆಕ್ಕಕೊಡುತ್ತಾ ಅದನ್ನೇ ಪೌರುಷವೆಂದು ನಮ್ಮ ಅಂಕಣಗಳಲ್ಲಿ ಸಾರಿಕೊಳ್ಳಲಿಲ್ಲ. ರತಿವೈಭವೀಕರಣವೇ ಪತ್ರಿಕೋದ್ಯಮವೆಂಬ ಕೀಳು ಅಭಿರುಚಿಯನ್ನು ಎಂದಿಗೂ ವ್ಯಕ್ತಪಡಿಸಿಲ್ಲ. ಸುಟ್ಟ ಸಿಗರೇಟ್‌ನ ಬೂದಿ ರಾಶಿಯೊಳಗಿಂದಲೇ ಮೇಲೆದ್ದು ವಿಕಟಾಟ್ಟಹಾಸ ಮೆರೆದಿಲ್ಲ. ಗಡಂಗುಗಳನ್ನೇ ಖಾಲಿ ಮಾಡಿ ಬ್ಯಾರೆಲ್ ಹೊಟ್ಟೆಯೊಳಗೆ ವಿಷ ತುಂಬಿಕೊಂಡಿಲ್ಲ. ನಾನು ಈವರೆಗೆ ಬರೆದದ್ದು ಇದ್ದರೆ ಅದು ಅಭಿವೃದ್ಧಿಪರವಾದದ್ದನ್ನೇ. ಒಮ್ಮೆ ಮಾತ್ರ, ಅದ್ಯಾರೋ ಜಿ.ಕೆ.ಗೋವಿಂದರಾವ್ ಎಂಬ ಬುದ್ಧಿಜೀವಿಗಳಂತೆ, ನಾನು ಅಲ್ಲಿಯವರೆಗೆ ಅವರ ಹೆಸರನ್ನೂ ಕೇಳಿರಲಿಲ್ಲ, (ಬಹುಶಃ ಎಲ್ಲರೂ ಕೇಳಿರಬಹುದಾದ ಹೆಸರು ಅವರದ್ದಲ್ಲವೇನೋ) ನನ್ನ ಅಂಕಣದಲ್ಲಿ ಪ್ರಕಟಗೊಂಡಿದ್ದ ಗುಜರಾತ್‌ನಲ್ಲಿನ ಕೃಷಿ ಅಭಿವೃದ್ಧಿಯ ಬಗೆಗಿನ ಲೇಖನಕ್ಕೆ ಪ್ರತಿಕ್ರಿಯಿಸಿದ್ದರು. ಅದಕ್ಕೆ ‘ಸೂಕ್ತ ರೀತಿಯಲ್ಲಿ’ ಉತ್ತರಿಸಲು ಅಂಕಣ ಬಳಸಿಕೊಂಡದ್ದನ್ನು ಬಿಟ್ಟರೆ ಯಾವತ್ತಿಗೂ ಹೆಸರಿನಿಂದಲೇ ಸಾಧುಗಳಾಗಿರುವವರು ಉಸುರಿದ್ದನ್ನು ಕೇಳಿಕೊಂಡೋ, ಕೃತಘ್ನ ಕಲಾಕಾರರು ಇಟ್ಟ ಫಿಟ್ಟಿಂಗ್ ಅನ್ನು ನಂಬಿಯೋ, ಭ್ರಷ್ಟ-ದುರಹಂಕಾರಿ ದೇವಶ್ರೇಷ್ಠರು ಕಾರಿಕೊಂಡ ಹತಾಶೆಗೆ ಮರುಗಿಯೋ ಬರೆದವನಲ್ಲ.

ದಿಟ್ಟ, ತೀಕ್ಷ್ಣ ಸತ್ಯಗಳು ಕೆಲವರಿಗೆ ರುಚಿಸದಿದ್ದರೆ ಅದಕ್ಕೆ ನಾವು ಹೊಣೆಗಾರರಲ್ಲ. ಕಳೆದ ಹತ್ತು ವರ್ಷಗಳಿಂದ ಜಲ ಸಂರಕ್ಷಣಾ ಕ್ಷೇತ್ರದಲ್ಲಿ ನಡೆಸಿದ ಅಧ್ಯಯನ, ಆ ಸಂದರ್ಭದಲ್ಲಿ ಅರಿವಿಗೆ ದಕ್ಕಿಸಿಕೊಂಡದ್ದು ಆರು ವರ್ಷಗಳಲ್ಲಿ ಮುನ್ನೂರಕ್ಕೂ ಹೆಚ್ಚು ಬರಹಗಳ ರೂಪದಲ್ಲಿ ಸತತವಾಗಿ ದಾಖಲಿಸಿದ್ದನ್ನು ಅರಿತವರು ‘ಜಲಪತ್ರಕರ್ತ’ರೆಂದು ಕರೆದರೇ ವಿನಃ ಯಾವತ್ತೂ ನಮ್ಮನ್ನು ನಾವೇ ‘ಸತ್ಯ ಸಂದ’ ಪತ್ರಕರ್ತರೆಂದು ಘೋಷಿಸಿಕೊಂಡಿಲ್ಲ. ಅಂಥವನ್ನೆಲ್ಲಾ ಓದುವ ತಾಳ್ಮೆಯಾದರೂ ಇವರಿಗೆ ಹೇಗೆ ಬರಬೇಕು ?
ದುರಂತವೆಂದರೆ ಇದೇ. ನನಗೆ ಗೊತ್ತು. ಇಂಥ ಬರಹಗಳಿಂದ ಇವರೇನೂ ಬದಲಾಗುವುದಿಲ್ಲ. ಅಂಥ ಭ್ರಮೆಗಳೂ ನನ್ನಲ್ಲಿಲ್ಲ. ವೃಥಾ ಸಮಯ ವ್ಯರ್ಥ ಮಾಡುತ್ತಿದ್ದೇನೇನೋ ಅಂತಲೂ ಅನಿಸುತ್ತದೆ. ಆದರೆ ಸುಮ್ಮನೆ ಕುಳಿತುಬಿಟ್ಟರೆ ನಾವೇ ಸಾಕಿದ ನಾಯಿ ನಮ್ಮನ್ನೇ ಕಚ್ಚಲೂ ಹಿಂದೆ ಮುಂದೆ ನೋಡದ ಪರಿಸ್ಥಿತಿ ಬಂದೀತು. ಅಷ್ಟಕ್ಕೂ ಸುಮ್ಮನಿರಬೇಕೇಕೆ ? ಅಭಿವ್ಯಕ್ತಿ ಸ್ವಾತಂತ್ರವೆಂಬುದು ಯಾರದೇ ಜಹಗೀರು ಅಲ್ಲವಲ್ಲಾ ?

ಇತಿಹಾಸ ದಾಖಲಿಸುವ ಇಂಥವರ ಘನ ಇತಿಹಾಸವಾದರೂ ಏನು...
ನಾಳೆ ಬರೆಯುವೆ...

Sunday, January 16, 2011

ನನ್ನ ರಾಜೀನಾಮೆಗೆ ಕಾರಣವೇನು ?

ಟ್ಟರಿಗಾಗಿಯೇ ಪತ್ರಿಕೆಯನ್ನು ನಾವು ಮೂರೂ ಮಂದಿ ಬಿಟ್ಟಿದ್ದೇವೆ. ಇದರಲ್ಲಿ ಅನುಮಾನವೇ ಇಲ್ಲ. ಮತ್ತು ಹೀಗೆಂದು ಹೇಳಿಕೊಳ್ಳಲು ಯಾವುದೇ ಹಿಂಜರಿಕೆಯೂ ಇಲ್ಲ.

ಏಕೆಂದರೆ, ಸಮಕಾಲೀನ ಪತ್ರಿಕೋದ್ಯಮದ ಬಗ್ಗೆ ಹೇಳುವುದಾದರೆ ವಿಶ್ವೇಶ್ವರ ಭಟ್ಟರಿಲ್ಲದ ಪತ್ರಿಕೋದ್ಯಮದಲ್ಲಿ ಯಾವುದೇ ಮಜವೂ ಇಲ್ಲ. ಹಿಂದಾಗಿದ್ದರೆ ಒಬ್ಬ ಖಾದ್ರಿಯವರಿದ್ದರು, ಒಬ್ಬ ವೈಎನ್ಕೆ ಘಾನ್ನ ಪೀಠವನ್ನಲಂಕರಿಸುತ್ತಿದ್ದರು. ಒಬ್ಬ ಕೆ. ಶಾಮರಾವ್ ಬಂದರೆಂದು ನಡುಗುತ್ತಾ ಪೆನ್ನೆತ್ತಿಕೊಳ್ಳುತ್ತಿದ್ದೆವು....ಹೇಳಿಕೊಳ್ಳಲುನಾಲ್ಕಾರು ಹೆಸರಾದರೂ ಕನ್ನಡ ಪತ್ರಿಕೋದ್ಯಮದಲ್ಲಿ ಇತ್ತು. ಇವತ್ತು ಬರೆಯುವ ಒಬ್ಬನೇ ಒಬ್ಬ ಸಂಪಾದಕನೂ ಕನ್ನಡ ದಿನಪತ್ರಿಕೆಯ ಮಟ್ಟಿಗೆ ಕಾಣುತ್ತಿಲ್ಲ. ಟಾರ್ಚ್ ಹಾಕಿ ತಡಕಾಡಿದರೂ ಒಬ್ಬ ವ್ಯಕ್ತಿಯ ಹೆಸರು ಸಿಗುವುದಿಲ್ಲ. ಸಂಪಾದಕನ ಹುದ್ದೆಯನ್ನು ಕಾರಕೂನರ ಮಟ್ಟಕ್ಕೆ, ಹೆಚ್ಚೆಂದರೆ ಒಬ್ಬ ಸೂಪರ್‌ವೈಸರ್ ಮಟ್ಟಕ್ಕೆ ಇಳಿಸಿ ಇಟ್ಟ ‘ಕೀರ್ತಿ’ಗೆ ಹಲವರು ಭಾಜನರಾಗುತ್ತಾರೆ. ಇನ್ನು ಕೆಲ ಸಂಪಾದಕರು ಆಗೊಮ್ಮೆ ಈಗೊಮ್ಮೆ ಬರೆಯುವ ದುಸ್ಸಾಹಸ ಮಾಡುವುದಿದೆ. ಆದರೆ ಕನ್ನಡ ಅಕ್ಷರಗಳಲ್ಲಿಯೇ ಇರುವ ಅದನ್ನು ತರ್ಜುಮೆ ಮಾಡಿಕೊಳ್ಳಲು ಓದುಗರು ಪರದಾಡುವುದು ಸಾಮಾನ್ಯ ಸಂಗತಿ. ಹಿಂದೆ ಒಂದೆರಡು ಇಂಥ ಸಂಪಾದಕರ ಲೇಖನಗಳು ‘ದಯವಿಟ್ಟು ಅರ್ಥವಾದರೆ ತಿಳಿಸಿಕೊಡಿ‘ ಎಂಬ ಶಿರೋನಾಮೆಯಡಿಯಲ್ಲಿ ಮೇಲ್‌ಗಳಲ್ಲಿ ಓಡಾಡಿದ್ದು ನಿಮಗೆ ನನೆಪಿರಬಹುದು. ಇನ್ನು ‘ಕಪ್ಪು ಸುಂದರಿ’ಯಂಥ ಪತ್ರಿಕೆಗಳ ಸಂಪಾದಕರು ಏನನ್ನು ಬರೆಯುತ್ತಿದ್ದಾರೆ, ಹಾಗೆ ಬರೆದು ಎಂಥ ‘ಅಚ್ಚರಿ’ಗಳನ್ನು ಸೃಷ್ಟಿಸುತ್ತಾರೆ, ಅವರ ಆಸಕ್ತಿಗಳೇನು ಎನ್ನುವುದು ಓದುಗರಿಗೇ ಗೊತ್ತಿರುವುದರಿಂದ ಆ ಬಗ್ಗೆ ಹೇಳುವುದು ಬೇಕಿಲ್ಲ.

ಇಂಥ ಸನ್ನಿವೇಶದಲ್ಲಿ ಪತ್ರಿಕೋದ್ಯಮವನ್ನೇ ಮುಂದುವರಿಸುವುದಿದ್ದರೆ ಅದು ಭಟ್ಟರ ನೇತೃತ್ವದಲ್ಲಿಯೇ. ಅದಿಲ್ಲದಿದ್ದರೆ ಕೇವಲ ಹೊಟ್ಟೆಪಾಡಿಗೋಸ್ಕರ ನೌಕರಿ ಮಾಡುವುದಿದ್ದರೆ ಅದನ್ನು ಟೈಮ್ಸ್ ಸಮೂಹದ ಪತ್ರಿಕೆಯಲ್ಲೇ ಮಾಡಬೇಕೆಂದೇನೂ ಇಲ್ಲ. ಬೇರಾವುದೇ ಪತ್ರಿಕೇತರ ಸಂಸ್ಥೆಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಸಂಬಳ ಗಳಿಕೆ ಸಾಧ್ಯವಿದೆ ಎಂಬುದು ವೈಯಕ್ತಿಕವಾಗಿ ನನ್ನ ನಿಲುವಾಗಿತ್ತು. ಹೀಗೆ ಹೇಳಿದರೆ ನಮ್ಮ ರಾಜೀನಾಮೆಗೆ ಇನ್ನೂ ಸ್ಪಷ್ಟ ಕಾರಣಗಳು ತಿಳಿಯಬಹುದು.

ಹೌದು, ವಿಜಯ ಸಂಕೇಶ್ವರ ಅವರಿಂದ ಟೈಮ್ಸ್ ಸಮೂಹಕ್ಕೆ ‘ವಿಜಯ ಕರ್ನಾಟಕ’ ಹಸ್ತಾಂತರವಾದಾಗಲೇ ಓದುಗರಲ್ಲಿ ಮಾತ್ರವಲ್ಲ, ಪತ್ರಕರ್ತರಲ್ಲೂ ಒಂದು ರೀತಿಯ ಅನುಮಾನಗಳು ಮೂಡಿದ್ದು ಸುಳ್ಳಲ್ಲ. ಅದಕ್ಕೆ ನಾವೂ ಹೊರತಾಗಿರಲಿಲ್ಲ. ಆದರೆ ವಿಶ್ವೇಶ್ವರ ಭಟ್ಟರು ಯಾವತ್ತೂ ವೃತ್ತಿಪರತೆಯನ್ನು ನೋಡಿದವರು. ಓದುಗರಿಗೆ ಹೊಸತನ್ನು ಕಟ್ಟಿಕೊಡುವ ಭರದಲ್ಲಿ ಸಂಸ್ಥೆಯ ಹಿತವನ್ನು ಎಂದೂ ಕಡೆಗಣಿಸಿದವರಲ್ಲ. ಹೀಗಾಗಿ ಅವರು ಕೇವಲ ಮ್ಯಾನೇಜಿಂಗ್ ಎಡಿಟರ್ ಅಷ್ಟೇ ಆಗಿರಲಿಲ್ಲ ‘ಮ್ಯಾನೇಜ್‌ಮೆಂಟ್ ಎಡಿಟರ್’ ಸಹ ಆಗಿದ್ದರು. ಲಾಭ ಗಳಿಕೆಯಿಲ್ಲದ ಯಾವ ಪತ್ರಿಕೆಯೂ ಸುಸ್ಥಿರವಾಗಿ ನಿಲ್ಲಲಾರದು. ಪತ್ರಿಕೆ ಉತ್ತಮವಾಗಿ ಬಂದರಷ್ಟೇ ಸಾಲದು ಅದು ಸುದೀರ್ಘ ಅವಯವರೆಗ ನಿಲ್ಲಬೇಕು. ಇದಕ್ಕಾಗಿ ಮ್ಯಾನೇಜ್‌ಮೆಂಟ್‌ನ ಕೈ ಬಲಪಡಿಸುವುದು ಆಯಕಟ್ಟಿನ ಜಾಗದಲ್ಲಿ ಕುಳಿತ ಪ್ರತಿಯೊಬ್ಬರ ಕರ್ತವ್ಯ ಎಂಬುದನ್ನು ಸಾಕಷ್ಟು ಬಾರಿ ಅವರು ನಮ್ಮ ಬಳಿ ಹೇಳುತ್ತಿದ್ದರು. ಎಂಥದ್ದೇ ಸಂದರ್ಭದಲ್ಲೂ ಅವರು ಮ್ಯಾನೇಜ್‌ಮೆಂಟ್ ವಿರುದ್ಧದ ನಿಲುವನ್ನು ತಳೆಯುವುದು ಹಾಗಿರಲಿ, ಸಣ್ಣ ಮಾತನ್ನೂ ಆಡಿದ್ದಿಲ್ಲ. ಅಂಥ ವಿಶ್ವೇಶ್ವರ ಭಟ್ಟರೂ ಸಹ ರಾಜೀನಾಮೆ ನೀಡಿ ಹೊರಬರುವಂಥ ಸನ್ನಿವೇಶ ನಿರ್ಮಾಣವಾಗಿದ್ದು ವಿಪರ್ಯಾಸ.

ಹಾಗೆಂದು ಟೈಮ್ಸ್ ಸಮೂಹ ಯಾರನ್ನೂ ಎಂದಿಗೂ ಕೆಟ್ಟದಾಗಿ ನಡೆಸಿಕೊಂಡದ್ದಿಲ್ಲ. ಸತ್ಯ ಹೇಳಬೇಕೆಂದರೆ ಆರಂಭಿಕ ಅನುಮಾನಗಳಿಂದ ಹೊರತಾಗಿಯೂ ಕೆಲಸದ ಮಟ್ಟಿಗೆ ಒಂದು ಶಿಸ್ತು, ಅಕ ವೃತ್ತಿ ಪರತೆ ಬಂದದ್ದೇ ಪತ್ರಿಕೆಯ ಹಸ್ತಾಂತರದ ಬಳಿಕ. ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಸಮೂಹ. ದಶಕಗಳಿಂದ ಮಾಧ್ಯಮ ರಂಗದಲ್ಲಿದೆ. ಹತ್ತಾರು ವಿಭಿನ್ನ ಅನುಭವ ಸಂಸ್ಥೆಯ ಜತೆಗಿದೆ. ಈ ಹಿನ್ನೆಲೆಯಲ್ಲಿ ಅದು ಸಹಜವೂ ಆಗಿತ್ತು. ಜತೆಗೆ ಟೈಮ್ಸ್ ಸಮೂಹದ ಸಿಬ್ಬಂದಿ ಎಂದುಕೊಳ್ಳಲು ನಮಗೆ ಹೆಮ್ಮೆಯೂ ಆಗುತ್ತಿತ್ತು. ಅಂಥ ಮನಸ್ಥಿತಿಗೆ ನಾವೆಲ್ಲರೂ ಬರಲು ಕಾರಣ ಸ್ವತಃ ಭಟ್ಟರೇ. ಹಾಗಿದ್ದೂ ಭಟ್ಟರು ಹೊರಬಂದಾಗ ನಾವು ಅದೇ ಸಂಸ್ಥೆಯಲ್ಲಿ ಮುಂದುವರಿಯುವುದು ಉಚಿತ ಎನಿಸಲಿಲ್ಲ.

ಇವೆಲ್ಲಕ್ಕಿಂತ ಹೆಚ್ಚಿನದ್ದು ನಾವಿವತ್ತು ಏನಾಗಿದ್ದೇವೋ ಅದಕ್ಕೆ ‘ನೇರ ಹೊಣೆಗಾರರು’ ಭಟ್ಟರು. ಇದು ಖಂಡಿತಾ ಮುಖಸ್ತುತಿಯಲ್ಲ. ಋಣ ತೀರಿಸುವ ಮಾತಲ್ಲ. ಹಾಗೆ ನೋಡಿದರೆ ಅವರ ಎಷ್ಟೋ ನಿಲುವುಗಳು ವೈಯಕ್ತಿಕವಾಗಿ ನನಗೆ ಸರಿ ಕಂಡಿಲ್ಲ. ಬಹುಶಃ ಅಂಥ ಸ್ಥಾನದಲ್ಲಿ ಕುಳಿತಾಗ ಅವೆಲ್ಲ ಅನಿವಾರ್ಯವೇನೋ ಎಂದುಕೊಂಡು ಸುಮ್ಮನಿದ್ದು ಬಿಟ್ಟಿದ್ದೇನೆ. ಕೆಲವೊಮ್ಮೆ ಬಹಿರಂಗವಾಗಿಯೇ ಅವರನ್ನು ವಿರೋಸಿ ಅವರಿಗೆ ನೋವುಂಟು ಮಾಡಿದ್ದೇನೆ. ಆದರೆ ಅದೆಲ್ಲಕ್ಕಿಂತ ಹೆಚ್ಚಾಗಿ ಆ ವ್ಯಕ್ತಿಯನ್ನು ಇಷ್ಟ ಪಡಲು, ಪ್ರೀತಿಸಲು, ಆರಾಸಲು ಬೇಕಷ್ಟು ಕಾರಣಗಳು ಇವೆ. ಸಮಕಾಲೀನ ಪತ್ರಿಕೋದ್ಯಮ ಸನ್ನಿವೇಶದಲ್ಲಿ ನಾನು ನನ್ನಂಥವನಿಗೆ ‘ಒಂದು ಮಾದರಿ’ ಶ್ರೀ ಭಟ್ಟರು. ಅಂಥವರೊಟ್ಟಿಗೆ ಕಳೆದ ಹತ್ತು ವರ್ಷಗಳಿಂದ ಅತ್ಯಂತ ಆಪ್ತನಾಗಿ ಕೆಲಸ ಮಾಡಿದ್ದೇನೆ ಎಂಬ ಹೆಮ್ಮೆ ನನಗಿದೆ. ಬೇರೆಲ್ಲ ದೊಡ್ಡದೊಡ್ಡ ವಿಚಾರಗಳು ಹಾಗಿರಲಿ, ಪೆನ್ನೆತ್ತಿಕೊಂಡರೆ ಹೇಗೆ ತುಸುವೂ ಚಿತ್ತಲ್ಲದಂತೆ ಬರೆಯಬೇಕು, ನಾವು ಬರೆಯುವ ಪೆನ್ನು, ಹಾಳೆಗಳು ಹೇಗಿರಬೇಕೆಂಬ ಅತ್ಯಂತ ಪುಟ್ಟ ಪುಟ್ಟ ಸಂಗತಿಗಳಿಗೂ ಅವರೇ ಮಾದರಿ. ಅಲ್ಲಿಂದಲೇ ಆರಂಭವಾಗುತ್ತದೆ ಅವರ ಪತ್ರಿಕೋದ್ಯಮದ ಪಾಠ. ಅವರೆದುರು ಇಂಥವು ಪುಟ್ಟ ಸಂಗತಿಗಳಾಗಲೇ ಇಲ್ಲ. ಒಬ್ಬ ಯೋಧ ಹೇಗೆ ತನ್ನ ಆಯುಧಗಳನ್ನು ಜೋಪಾನಗೊಳಿಸುತ್ತಾನೋ, ಒಬ್ಬ ನಾವಿಕ ಹೇಗೆ ತನ್ನ ದೋಣಿ ಹುಟ್ಟುಗಳನ್ನು ಜತನ ಮಾಡುತ್ತಾನೋ, ಒಬ್ಬ ಡ್ರೈವರ್ ತನ್ನ ವಾಹನವನ್ನು ಸದಾ ಹೊಚ್ಚ ಹೊಸದಾಗಿಟ್ಟುಕೊಳ್ಳಲು ನೋಡುತ್ತಾನೋ ಹಾಗೆಯೇ ಪತ್ರಕರ್ತರಿಗೆ ಪೆನ್ನು ಹಾಳೆಗಳು. ಅದನ್ನು ನಾವು ಅತ್ಯಂತ ಕಾಳಜಿಯಿಂದ ಇಟ್ಟುಕೊಳ್ಳಬೇಕು ಎಂಬುದು ಅವರ ನಿಲುವು. ಅಲ್ಲಿಂದ ಕ್ರಿಯಾಶೀಲ ಬರವಣಿಗೆ ವರೆಗೆ ಎಲ್ಲವನ್ನೂ ಭಟ್ಟರು ತಿದ್ದಿದ್ದಾರೆ. ಹಾಗೆಂದು ಇವ್ಯಾವುದು ನಮ್ಮಲ್ಲಿರಲಿಲ್ಲ ಎಂದಲ್ಲ. ಆದರೆ ಇಂಥವಕ್ಕೆ, ನಮ್ಮೊಳಗಿದ್ದ ಪ್ರತಿಭೆಗೆ ಪುಟವಿಟ್ಟವರು ಅನುಮಾನವೇ ಇಲ್ಲ, ನಮ್ಮ ಪ್ರೀತಿಯ ಸಂಪಾದಕರು. ಸದ್ಯದ ಮಟ್ಟಿಗಂತೂ ಸಂಪಾದಕರ ಹುದೆಯಲ್ಲಿ ಇನ್ನೊಬ್ಬರನ್ನು ಕಲ್ಪಿಸಿಕೊಳ್ಳಲು ನನ್ನಿಂದ ಸಾಧ್ಯವೇ ಇಲ್ಲ. ಹೀಗಾಗಿ ಒಬ್ಬ ಸಂಪಾದಕನ ಜತೆಗೆ ಕೆಲಸ ಮಾಡಬೇಕೆಂಬ ಅದಮ್ಯ ಬಯಕೆಯಿಂದ ಇವತ್ತು ಸಂಸ್ಥೆಯ ಹೊರಗಿದ್ದೇವೆ... ನಾಳೆ ಇದೇ ಸಂಪಾದಕನೊಟ್ಟಿಗೆ ಸಾಂಸ್ಥಿಕ ಅಸ್ತಿತ್ವ ಪಡೆಯುತ್ತೇವೆ....

ಕೇವಲ ಇತಿಹಾಸ ದಾಖಲಿಸುವ ಪತ್ರಕರ್ತರು ನಾವಲ್ಲ, ಸ್ವತಃ ಇತಿಹಾಸ ನಿರ್ಮಿಸುತ್ತೇವೆ...ಒಂದು ‘ಲವಲವಿಕೆ’, ಒಂದು ‘ನೀರು ನೆರಳು’ ಇದಕ್ಕೆ ಸಾಕ್ಷಿ.
ಹೇಗೆಂಬುದನ್ನು ನಾಳೆ ಬರೆಯುವೆ...

ಸುದ್ದೀಶರೇ ಸುದ್ದಿಯಾದಾಗ...

ಒಂದು ರೀತಿಯಲ್ಲಿ ಇದು ಮಧ್ಯಂತರ ರಜೆ. ಅಬ್ಬಾ, ಅಂತೂ ಹೆಗಲ ಮೇಲಿದ್ದ ದೊಡ್ಡದ್ದೊಂದು ಭಾರ ಇಳಿಯಿತು ! ಆಹಾ, ಎಂಥಾ ನಿರಾಳ ! ‘ವಿಜಯ ಕರ್ನಾಟಕ’ವೆಂಬ ನಾವೇ ಹುಟ್ಟಿಸಿದ, ಓದುಗರ ಬೆಂಬಲದೊಂದಿಗೆ ಬೆಳೆಸಿದ ಪತ್ರಿಕೆಯೊಂದನ್ನು ಅತ್ಯಂತ ನಿರ್ವಿಕಾರ ಭಾವದಲ್ಲಿ, ಯಾವುದೇ ಬೇಸರ-ವಿಷಾದಗಳಿಲ್ಲದೇ ಬಿಟ್ಟು ಬಂದ ಕ್ಷಣದಲ್ಲಿ ಅನಿಸಿದ್ದು ಇಷ್ಟೇ. ಏಕೆಂದರೆ ಯಾವುದೇ ಭ್ರಮೆಗಳೂ ನಮ್ಮಲ್ಲಿಲ್ಲ. ಪತ್ರಿಕೆ ಇಂದು ರಾಜ್ಯದಲ್ಲಿ ನಂ.೧ ಸ್ಥಾನಕ್ಕೆ ಬೆಳೆದು ನಿಂತಿದೆ. ಅದಕ್ಕೆ ಕಾರಣ ನಾವಷ್ಟೇ ಅಲ್ಲ. ಅಂಥ ಬೆಳವಣಿಗೆಗೆ ನಾವೂ ಸಾಕ್ಷಿಯಾಗಿದ್ದೇವೆ ಎಂಬುದು ನಿಜ. ಅದರೊಂದಿಗೇ ನಾವೂ ಅಷ್ಟೇ ಎತ್ತರಕ್ಕೆ ಬೆಳೆದಿದ್ದೇವೆ ಎಂಬುದೂ ಅಂಥದ್ದೇ ವಾಸ್ತವ.


ಇಪ್ಪತ್ತು ವರ್ಷಗಳಲ್ಲಿ ಬರೆದದ್ದು, ಬರೆಯಲಾಗದ್ದು ಬಹಳಷ್ಟಿದೆ. ಆದರೆ ಒಂದು ಮಾತಂತೂ ಸತ್ಯ, ಒಮ್ಮೊಮ್ಮೆ ನಮಗೇ ರೇಜಿಗೆ ಬರುವಷ್ಟರ ಮಟ್ಟಿಗೆ ನಾವು ಬರವಣಿಗೆಯಲ್ಲಿ ತೂರಿಕೊಂಡು ಹೋಗಿದ್ದಿದೆ. ನನ್ನ ಮಟ್ಟಿಗೆ ಹೇಳುವುದಾದರೆ ಅದು ‘ನೀರು ನೆರಳು’ ಇರಬಹುದು, ‘ಪಾಸಿಟೀವ್ ಥಿಂಕಿಂಗ್’ ಇರಬಹುದು...ಲವಲವಿಕೆಯಲ್ಲಿ ಮತ್ತಿನ್ನೇನೇನೋ...ಯಾವ್ಯಾವುದೋ ಹೆಸರಿನಲ್ಲಿ, ಯಾವ್ಯಾವುದೋ ತಲೆ ಬರಹದಡಿಯಲ್ಲಿ ಸತತ ಬರೆದೇ ಬರೆದಿದ್ದೇನೆ. ಯಾರ‍್ಯಾರದೂ ಬರಹಗಳನ್ನು ದಿನವೆಲ್ಲ ಕುಳಿತು ತಿದ್ದಿ ನಮ್ಮ ಮಗುವಿಗೆ ಇನ್ನೊಬ್ಬರನ್ನು ಅಪ್ಪನನ್ನಾಗಿಸಿದ್ದೂ ಇದೆ. ಒಟ್ಟಾರೆ ಒಂದು ದಿನವೂ ಪೆನ್ನು ಮುಟ್ಟದೇ ಇದ್ದುದೇ ಇಲ್ಲ. ಬರವಣಿಗೆಯೇ ಬದುಕು ಬಿಡಿ. ಹೀಗಾಗಿ ಅದರಲ್ಲಿ ಹೇಳಿಕೊಳ್ಳುವಂಥದ್ದು ಏನೂ ಇಲ್ಲ. ನಮ್ಮ ಕೆಲಸ ಮಾಡಿದ್ದೇವೆ.
ಆ ನಡುವೆಯೂ ಹೀಗೊಂದು ಬ್ರೇಕ್ ಬೇಕಿತ್ತೆನಿಸುತ್ತದೆ. ಇಲ್ಲದಿದ್ದರೆ ಎಲ್ಲೋ ಒಂದು ಕಡೆ ಸ್ಟ್ಯಾಗ್ನೆಂಟ್ ಆಗಿ ಬಿಡುವ ಅಪಾಯಗಳೂ ಇಲ್ಲದಿರಲಿಲ್ಲ. ಒಂದು ಬದಲಾವಣೆ, ಒಂದು ಹೊಸತಕ್ಕೆ ಮನ ತುಡಿಯುತ್ತಿತ್ತು. ಪತ್ರಿಕೋದ್ಯಮ ಎಂದಿಗೂ ನಿಂತ ನೀರಲ್ಲ. ಅದು ಸದಾ ಹರಿಯುತ್ತಲೇ ಇರಬೇಕು. ಸುದ್ದಿ ಮನೆಯಿಂದ ಹೊರಗೆ, ಒಬ್ಬ ಸಾಮಾನ್ಯ ಓದುಗನಾಗಿ ದೂರದಲ್ಲಿ ನಿಂತು ಪತ್ರಿಕೋದ್ಯಮವನ್ನು ನಿರಕಿಸುವುದಿದೆಯಲ್ಲಾ ಅಂಥದ್ದೊಂದು ಅನುಭವ ನಮಗೆ ದಕ್ಕಿರಲೇ ಇಲ್ಲ ಎನ್ನಬಹುದು. ಹಾಗೆ ನಿಂತು ನೋಡಿದಾಗ ನಾವು ಮಾಡದೇ ಉಳಿದದ್ದು ಎಷ್ಟೆಲ್ಲಾ ಇದೆ ಎಂಬ ಅರಿವು ನಮ್ಮೊಳಗೆ ಮೂಡಲು ಸಾಧ್ಯ. ಅದನ್ನು ಮೂಡಿಸಿಕೊಂಡಿದ್ದೇವೆ.


ಹೌದು, ಇನ್ನೂ ಎಷ್ಟೆಲ್ಲಾ ಸಾಧ್ಯತೆಗಳಿವೆ. ಏನೆಲ್ಲಾ ಮಾಡಬಹುದಾದ್ದಿದೆ. ಎಷ್ಟೆಲ್ಲಾ ಬರೆಯುವುದು ಉಳಿದು ಹೋಗಿದೆ. ಎಂಥೆಂಥಾ ಪ್ರಯೋಗಳಿಗೆಲ್ಲಾ ಇನ್ನೂ ಮನ ಮಾಡಿಯೇ ಇಲ್ಲವೇಕೆ....? ಇಂಥ ಹತ್ತಾರು ಹೊಳಹುಗಳು ಮೂಡಿವೆ. ಹಾಗಂಥ ಇವನ್ನೆಲ್ಲಾ ವಿಜಯ ಕರ್ನಾಟಕದಲ್ಲೇ ಮಾಡಲಿಕ್ಕಾಗುತ್ತಿರಲಿಲ್ಲವೇ ಅಂದರೆ...ಮಾಡಬಹುದಾಗಿತ್ತೇನೋ. ಆದರೆ, ಮೊದಲೇ ಹೇಳಿದೆನಲ್ಲಾ ಅಂಥದ್ದೊಂದು ಅರಿವು ಮೂಡಿಸಿಕೊಳ್ಳುವ ವಾತಾವರಣಕ್ಕೆ ನಮ್ಮನ್ನು ನಾವು ತೆರೆದುಕೊಳ್ಳುವುದು ಅನಿವಾರ್ಯವಾಗಿತ್ತು. ಅದಕ್ಕಾಗಿ ಒಮ್ಮೆ ಸುದ್ದಿ ಜಗತ್ತಿನಿಂದ ಹೊರಬಂದು ನೋಡಲೇ ಬೇಕಿತ್ತು.


ಖಂಡಿತಾ ಯಾರದ್ದೋ ಒತ್ತಾಯಕ್ಕೆ, ಇನ್ಯಾವುದೋ ಒತ್ತಡಕ್ಕೆ ಕಟ್ಟುಬಿದ್ದು ಪತ್ರಿಕೆಯಿಂದ ಹೊರಬಂದದ್ದಲ್ಲ. ಹಾಗೆ ನೋಡಿದರೆ ಇದು ನೂರಕ್ಕೆ ನೂರು ನಮ್ಮದೇ ನಿರ್ಧಾರ. ಬರೆದುಕೊಳ್ಳುವವರು ಏನೇನೋ ಬರಕೊಂಡು ತಮ್ಮ ಟ್ಯಾಬ್ಲಾಯ್ಡ್ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆಡಿಕೊಳ್ಳುವವರು ತಮ್ಮ ನಾಲಿಗೆ ಚಪಲವನ್ನು ತೀರಿಸಿಕೊಂಡಿದ್ದಾರೆ. ಆ ಮೂಲಕ ತಮ್ಮ ಚಿಂತನಾ ಶಕ್ತಿ(?)ಯನ್ನು ಪ್ರದರ್ಶಿಸಿದ್ದಾರೆ. ಬಿಡಿ, ನಮ್ಮಂಥವರ ಬಗ್ಗೆ ಬರೆದೇ ಅವರು ಬದುಕಬೇಕು. ಒಂದು ‘ಬೆತ್ತಲೆ ಜಗತ್ತ’ನ್ನು ಬರೆಯುವ ತಾಕತ್ತು ಅವರಿಗೆಲ್ಲಿದೆ ? ಒಂದು ‘ನೂರೆಂಟು ಮಾತು’ ಬರೆಯುವ ಬೌದ್ಧಿಕ ಸಾಮರ್ಥ್ಯ ಅವರಿಗೆಲ್ಲಿಂದ ಬರಬೇಕು ? ಒಂದು ‘ಒಳಸುಳಿ’ಯನ್ನೋ, ಒಂದು ‘ಸುದ್ದಿ ಮನೆ ಕಥೆ’ಯನ್ನೋ ಹೇಳುವ ತಾಳ್ಮೆ, ಚಾಕಚಕ್ಯತೆ, ಅರಿವು, ಜ್ಞಾನಗಳಿಂದ ಅವರು ದೂರ. ಹೋಗಲಿ ಎಂದರೆ ‘ನೀರು ನೆರಳು’ ಅನ್ನೋ, ‘ಪಾಸಿಟೀವ್ ಥಿಂಕಿಂಗ್’ ಅನ್ನೋ ಬರೆದು ಓದಿಸುವಷ್ಟು ತಾಕತ್ತು ಇಂಥ ಟ್ಯಾಬ್ಲಾಯ್ಡ್‌ಗಳಿಗೆ ಇವೆಯೇ ? ಅದೇ ಟೀಕೆ, ವ್ಯಂಗ್ಯ, ಚಾರಿತ್ರ್ಯ ಹರಣ, ಭೂಗತ ಜಗತ್ತು, ರಾಸಲೀಲೆಗಳ ಹಸಿಹಸಿ ಕಮಟು...ಇಂಥವನ್ನು ಬರೆದರಷ್ಟೇ ಅವರ ಪತ್ರಿಕೆಗಳು ಬಿಕರಿಯಾಗಬಹುದು. ಇಂಥದ್ದರಲ್ಲೇ ‘ಇತಿಹಾಸ’ ನಿರ್ಮಿಸುವ ಮಾಜಿ ಮಾಸ್ತರನ ಬಗ್ಗೆ, ಅವರ ಓದುಗ ವರ್ಗದ ಬಗ್ಗೆ ನನ್ನ ಮಾತಿಲ್ಲ. ಅಷ್ಟಕ್ಕೂ ‘ಏ-ಸರ್ಟಿಫೈಡ್ ಜರ್ನಲಿಸಂ’ ಬಗ್ಗೆ ಮಾತಾನಾಡುವಷ್ಟು ವ್ಯವಧಾನ ನನಗಿಲ್ಲ. ಹಾಗೆ ನೋಡಿದರೆ ಇದೂ ಯಲ್ಲೋ ಜರ್ನಲಿಸಂ (ಪೀತ ಪತ್ರಿಕೋದ್ಯಮ) ಸಹ ಅಲ್ಲ. ಬೇಕಿದ್ದರೆ ಬ್ಲೂ ಜರ್ನಲಿಸಂ (ಬ್ಲೂ ಫಿಲ್ಮ್ ಇದ್ದ ಹಾಗೆ)ಅನ್ನಬಹುದೇನೋ.


ದಿವಂಗತ ಮುಖ್ಯಮಂತ್ರಿ ಜೆ. ಎಚ್. ಪಟೇಲ್ ಅವರ ಜೋಕೊಂದು ಈ ಸಂದರ್ಭದಲ್ಲಿ ನೆನಪಾಗುತ್ತಿದೆ. ಅದಾಗ ಅವರ ಸರಕಾರ ಡೋಲಾಯಮಾನ ಸ್ಥಿತಿಯಲ್ಲಿತ್ತು. ಪ್ರತಿ ಪಕ್ಷಗಳು ಅದಾಗಲೇ ಕ್ಷಣಗಣನೆ ಆರಂಭಿಸಿದ್ದವು. ಇದನ್ನರಿತ ಪಟೇಲರು ಅಸೆಂಬ್ಲಿಯಲ್ಲಿ ಹೋತ, ನರಿಯ ಕಥೆಯೊಂದನ್ನು ಹೇಳಿದ್ದರು. ‘ಒಮ್ಮೆ ಹೋತವೊಂದು ಮೇಯುತ್ತಾ ಹೊಳೆಯಗುಂಟ ಹೊರಟಿತ್ತಂತೆ. ಅದರ ಹಿಂಗಾಲ ನಡುವೆ ನೇತಾಡುತ್ತಿದ್ದ ‘ಬೀಜ’ಗಳನ್ನು ನೋಡಿ ಜೊಲ್ಲು ಸುರಿಸಿದ ನರಿಯೊಂದು ಇನ್ನೇನು ಅವು ನೆಲಕ್ಕೆ ಬೀಳುತ್ತವೆ. ತಕ್ಷಣ ತಿಂದು ಬಿಡಬೇಕೆಂದುಕೊಂಡು ಹೋತವನ್ನು ಹಿಂಬಾಲಿಸಿಕೊಂಡೇ ಹೊರಟಿತ್ತಂತೆ. ಹೋತದ ಬೀಜ ಬೀಳುವುದಿಲ್ಲ. ನರಿಯ ಆಸೆ ಪೂರೈಸುವುದಿಲ್ಲ’ ಎಂದು ಸರಕಾರದ ಪತನವನ್ನು ನಿರೀಕ್ಷಿಸುತ್ತಿದ್ದ ಪ್ರತಿಪಕ್ಷವನ್ನು ತಿವಿದಿದ್ದರು. ಇಂದಿನ ಪತ್ರಿಕೋದ್ಯಮದಲ್ಲೂ ಯಾರು ಬೀಳಬೇಕೆಂದು ಯಾರು ಕಾದಿದ್ದರೋ, ಅವರ ಕಥೆ ಏನಾಗುತ್ತದೋ ಎಂಬುದಕ್ಕೆ ಉತ್ತರ ಸಿಗಲು ಇನ್ನು ಬಹಳಷ್ಟು ದಿನವಿಲ್ಲ ಬಿಡಿ.


ಇರಲಿ ಬಿಡಿ, ಯಾರು ಏನೇ ಅಂದರೂ ಬಹುಶಃ ಈ ವರೆಗೆ ಕನ್ನಡ ಪತ್ರಿಕೋದ್ಯಮದಲ್ಲಿ ಯಾರೂ ಆಗದಷ್ಟು ನಾವು ಸುದ್ದಿಯಾಗಿದ್ದೇವೆ. ಇದನ್ನು ಎಲ್ಲರೂ ಒಪ್ಪುತ್ತಾರೆ. ಮಾಡುತ್ತಿದ್ದ ಕೆಲಸಕ್ಕೆ ಕೇವಲ ರಾಜೀನಾಮೆ ಕೊಟ್ಟ ಕಾರಣಕ್ಕೆ ಇಡೀ ರಾಜ್ಯ ಒಂದಾಗಿ ಮಾತಾಡಿಕೊಂಡದ್ದು ಯಾವ ಪತ್ರಕರ್ತನ ಬಗೆಗೂ ಇಲ್ಲ. ವಿಶ್ವೇಶ್ವರ ಭಟ್ ಇವತ್ತು ಅಷ್ಟು ಮಾತಾಗಿದ್ದಾರೆ, ಅವರೊಂದಿಗೆ ನಾವು ಮೂವರು ಸಹ.


ಹಾಗೇ ನೋಡಿದರೆ ನಾವು ಒಬ್ಬೊಬ್ಬರೂ ನಮ್ಮದೇ ಆದ ಓದುಗ ವರ್ಗವನ್ನು ಹೊಂದಿದ್ದೇವೆ. ಒಂದಷ್ಟು ಮಂದಿಯನ್ನು ಚಿಂತನೆಗೆ ಹಚ್ಚಿದ್ದೇವೆ. ಎಲ್ಲೋ ಒಂದು ಕಡೆ ಚರ್ಚೆಗೆ ಇಳಿದ್ದಿದ್ದೇವೆ. ನಮ್ಮನಮ್ಮ ವಿಚಾರಗಳನ್ನು ಮಥಿಸಿದ್ದೇವೆ. ಅಭಿಪ್ರಾಯ ಭೇದಗಳು-ಸೈದ್ಧಾಂತಿಕ ಭಿನ್ನತೆಗಳು ಎದುರಾಗಿಲ್ಲ ಎಂದೇನೂ ಅಲ್ಲ. ಆದರೂ, ಓದುಗರು ನಮ್ಮ ಬರವಣಿಗೆಯನ್ನು ಒಪ್ಪಿದ್ದರು. ನಮ್ಮ ಅಂಕಣಗಳಿಗಾಗಿ ಕಾದು ಕುಳಿತಿರುತ್ತಿದ್ದರು ಒಂದು ವಾರ ಬರೆಯದಿದ್ದರೆ ಕಾದಾಟಕ್ಕೇ ಇಳಿಯುತ್ತಿದ್ದರು. ಹಾಗೆ ಮಾಡುವುದು ತಮ್ಮ ಹಕ್ಕೆಂದು ವಾದಿಸಿದ್ದರು. ತಪ್ಪಿದಾಗ ಗದರಿದ್ದರು, ಒಪ್ಪಿದಾಗ ಪ್ರೀತಿಯಿಂದು ಬೆನ್ನು ತಟ್ಟಿದ್ದರು. ಒಟ್ಟಾರೆ ಇವತ್ತು ನಾವು ಇದ್ದೇವಲ್ಲಾ ಆ ಸ್ಥಾನಕ್ಕೆ ನಮ್ಮನ್ನು ಏರಿಸಿದ್ದು ಅದೇ ಓದುಗರು. ಹೀಗಿದ್ದೂ ಇವತ್ತೂ ಅಂಥ ಓದುಗರಿಂದ ದೂರ ನಿಂತಿದ್ದೇವೆ. ಅವರನ್ನೂ ಕೇಳದೆಯೇ, ಅವರಿಗೆ ಹೇಳದೆಯೇ ಬರವಣಿಗೆಯಿಂದ ನುಣುಚಿಕೊಂಡಿದ್ದೇವೆ. ಓದುಗರಿಗೆ ಬೇಕಾದ್ದನ್ನು ಬರೆಯುವ ಬದಲು ನಾವು ಅಕ್ಕರೆಯಿಂದ ಬರೆಯುತ್ತಿದ್ದ ‘ವಿಕ’ಕ್ಕೆ ಒಂದೊಂದು ಸಾಲಿನ ರಾಜೀನಾಮೆಯನ್ನು ಬರೆದು ಕೊಟ್ಟು ಹೊರಬಂದು ಕುಳಿತುಬಿಟ್ಟಿದ್ದೇವೆ. ಇದು ಹೀಗೇಕೆ ? ಎಲ್ಲಿಯವರೆಗೆ ?


ಕೊನೆಯ ಪ್ರಶ್ನೆಗೆ ಮೊದಲು ಉತ್ತರ- ಇದು ಕೇವಲ ತಾತ್ಕಾಲಿಕ. ಇನ್ನು ಕೆಲವೇ ದಿನಗಳಲ್ಲಿ ಭರ್ಚಿಯನ್ನು ಮಸೆದುಕೊಂಡು ಹೊರಡುವ ಬೇಡನಂತೆ ನಮ್ಮನಮ್ಮ ಲೇಖನಿಗಳನ್ನು ಸಜ್ಜುಗೊಳಿಸಿಕೊಂಡು ಮತ್ತೆ ಆಖಾಡಕ್ಕೆ ಇಳಿದೇ ಇಳಿಯುತ್ತೇವೆ. ಅದಕ್ಕೂ ಮೊದಲು ಇದು ಹೀಗೇಕೆ ಎನ್ನುವ ಪ್ರಶ್ನೆಗೆ ಉತ್ತರಿಸಲು ಕುಳಿತರೆ...