ಒಪ್ಪಿಕೊಳ್ಳುತ್ತೇನೆ. ಯಾರ್ಯಾರೋ ಏನೇನೋ ಮಾಡುತ್ತಾರೆಂದು ನಾವು ಅಂಥದಕ್ಕೆ ಕೈ ಹಾಕಬಾರದು. ಇಂಥ ಧರ್ಮೋಪದೇಶ ಬಹಳಷ್ಟು ಬಾರಿ ಕೇಳಿದ್ದೇನೆ. ಅದು ಸತ್ಯವೂ ಹೌದು. ನಮ್ಮ ಸ್ಥಾನ ಮಾನವನ್ನು ಮರೆತು ನಾವು ವರ್ತಿಸಿದರೆ ಸರಿ ಇರಲಿಕ್ಕಿಲ್ಲ. ಆದರೆ ‘ನೀಲಿ ಪತ್ರಿಕೆ’ ಗಳಲ್ಲಿ ಒಮ್ಮೆ ಬರೆಸಿಕೊಂಡಾಗ, ಅದೂ ವಿನಾ ಕಾರಣ...ಆಗ ಹತ್ತುವ ಉರಿಯಿದೆಯಲ್ಲಾ ಅದನ್ನು ಅನುಭವಿಸಿದವರೇ ಹೇಳಬೇಕು.
ಬಹಳಷ್ಟು ಮಂದಿ ನನ್ನ ಬ್ಲಾಗಿಗೆ ಇದೇ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಫೋನಾಯಿಸಿ ಬೋಸಿದವರು ಇನ್ನೆಷ್ಟೋ ಮಂದಿ. ಹಾಗೆಂದು ಅವರು ನನ್ನ ಮೇಲಿಟ್ಟಿರುವ ಅಭಿಮಾನ, ಕಾಳಜಿಯ ಬಗ್ಗೆ ಅನುಮಾನವೇ ಇಲ್ಲ. ‘ಕೊಚ್ಚೆಗೇಕೆ ಕಲ್ಲು ಹೊಡೆಯುತ್ತೀರಿ. ಹಾಗೆ ಮಾಡಿದಲ್ಲಿ ಅದನ್ನು ಮತ್ತೆ ನಮ್ಮತ್ತಲೇ ಎರಚಿಕೊಂಡಂತಾಗುತ್ತದೆ’ ಎಂಬ ಉದಾಹರಣೆಯೇ ಎಲ್ಲರ ಬಾಯಲ್ಲಿ.
ಹೌದು ಸ್ವಾಮಿ, ಅದು ಕೊಚ್ಚೆಯೇ. ನನಗೂ ಗೊತ್ತು. ಕೇವಲ ಮನೆಯ ಹಿತ್ತಿಲಿನಲ್ಲಷ್ಟೇ ಹರಿಯುತ್ತಿದ್ದ ಕೊಳಚೆಯನ್ನು ಹೀಗೆ ಹಬ್ಬಲು ಬಿಟ್ಟವರಾರು ? ಅಂದೇ ಅದನ್ನು ಇಂಗಿಸಿಬಿಟ್ಟಿದ್ದರೆ ಹೀಗೆ ಬೆಂಗಳೂರಿನ ದೊಡ್ಡ ಮೋರಿಗಳಲ್ಲೆಲ್ಲಾ ಹಬ್ಬಿ ಪ್ರವಾಹ ಉಕ್ಕಿಸುತ್ತಿತ್ತೇ ? ಇಡೀ ಬೆಂಗಳೂರು ಗಬ್ಬು ನಾರುತ್ತಿದೆ ಸ್ವಾಮಿ ! ಅಷ್ಟೇ ಅಲ್ಲ, ಊರೂರಿನಲ್ಲಿ ಇಂದು ಕೊಳಚೆ ಪ್ರದೇಶಗಳು, ಕೊಳಗೇರಿಗಳು ಮಿತಿ ಮೀರುತ್ತಿವೆ. ಕಳೆದು ಹತ್ತು ಹದಿನೈದು ವರ್ಷಗಳಲ್ಲಿ ಪದ್ಮನಾಭನಗರದಿಂದ ಹರಿಯಲು ಆರಂಭವಾದ ಇಂಥ ಕೊಳಚೆ ಇಂದು ನಾಡಿನಾದ್ಯಂತ ವ್ಯಾಪಿಸಿಬಿಟ್ಟಿದೆ.
ನಮ್ಮದೆಲ್ಲವೂ ಇಂಥದ್ದೇ ಧೋರಣೆ. ಉಪದೇಶ ಮಾಡುವುದರಲ್ಲಿ ನಮ್ಮದು ಎತ್ತಿದ ಕೈ. ರಾಷ್ಟ್ರ ಭಕ್ತಿಯಿಂದ ಹಿಡಿದು ಸಮಾಜೋದ್ಧಾರದವರೆಗೆ ಎಲ್ಲರದ್ದೂ ಉತ್ತರಕುಮಾರನ ಪೌರಷವೇ ! ವ್ಯವಸ್ಥೆ ಬಗ್ಗೆ ನಾವು ಭಾಷಣ ಬಿಗಿದಷ್ಟು ಬೇರಾರೂ ಮಾತನಾಡುವುದಿಲ್ಲ. ಇಷ್ಟೆಲ್ಲ ಮಾತನಾಡುವ ಭಾರೀ ಮಾನವ ಸಂಪನ್ಮೂಲ ನಮ್ಮಲ್ಲಿದ್ದರೂ ದೇಶವೇಕೆ ಉದ್ಧಾರವಾಗುತ್ತಿಲ್ಲ ಎಂಬುದಕ್ಕೆ ನಾವೇ ಉತ್ತರಿಸಿಕೊಳ್ಳಬೇಕು. ಕಾರಣ ಬಹಳ ಸರಳ. ನಾವು ಮಾತನಾಡುವವರಷ್ಟೆ. ಅಂದರೆ ಕೆಲಸವನ್ನು ನಾವು ಹೇಳುತ್ತೇವೆ; ಉಪದೇಶ ಕೊಡುತ್ತೇವೆ. ಅದರ ಅನುಷ್ಠಾನದ ಹೊಣೆ ಬೇರೆಯವರದ್ದೂ ಎಂಬ ಧೋರಣೆ ಪ್ರತಿಯೊಬ್ಬರದ್ದೂ. ಹೀಗಾಗಿಯೇ ಪದ್ಮನಾಭನಗರದಲ್ಲಿ ಕುಳಿತವರು ನಿಶ್ಚಿಂತೆಯಾಗಿ ಹಾದರ ಮಾಡುತ್ತಲೇ ಇದ್ದಾರೆ. ಅವರಿಗೂ ಗೊತ್ತು ತಮ್ಮಂಥ ಕೊಳಚೆಯನ್ನು ನಿರ್ಮೂಲನೆ ಮಾಡುವ ಇಚ್ಛಾ ಶಕ್ತಿ ಯಾರಲ್ಲೂ ಇಲ್ಲ ಎಂಬುದು. ಹೀಗಾಗಿ ಅವರಿಂದ ಉದ್ಭವಿಸಿದ ಕೊಳಚೆ ಬೆಳೆಯುತ್ತಲೇ ಇದೆ. ಇವತ್ತು ಒಬ್ಬ ಪ್ರತಾಪನಂಥವನು ಮಾಡಿದ ಗಂಡಸಿನ ಕೆಲಸವನ್ನು ಅವತ್ತೇ ಮಾಡಿದ್ದರೆ ನಾಡಿನಾದ್ಯಂತ ಕೊಳೆಗೇರಿಗಳು ಹಬ್ಬುವುದಾದರೂ ತಪ್ಪುತ್ತಿತ್ತು.
ಗೆಳೆಯರೇ ಇನ್ನಾದರೂ ಒಣ ಉಪದೇಶ ಮಾಡುವ ಸೋಗಲಾಡಿತನ ನಮಗೇಗೆ ? ನಮ್ಮ ಸುತ್ತಮುತ್ತಲನ್ನು ನಾವೇ ಸ್ವಚ್ಛಗೊಳಿಸಿಕೊಳ್ಳಬೇಕು. ಗೆಳೆಯರಾರೋ ಹೇಳಿದ್ದಾರೆ-ಇದರ ಬದಲು ನೀರಿನ ಕೆಲಸವನ್ನೇ ಮುಂದುವರಿಸಿ ಅಂತ. ಖಂಡಿತಾ ನೀರು ನನ್ನ ಪ್ಯಾಷನ್, ಅದೇ ನನ್ನ ಉಸಿರು. ಅದಕ್ಕಾಗಿ ನನ್ನ ಜೀವಿತವನ್ನು ಕೊಟ್ಟಿದ್ದೇನೆ. ನಡುನಡುವೆ ಇಂಥ ಜಲ ಮಾಲಿನ್ಯ ತಪ್ಪಿಸುವ, ತಡೆಯುವ ಕೆಲಸವನ್ನೂ ನಾನೇ ಮಾಡಬೇಕಲ್ಲದೇ ಅದನ್ನಿನ್ನಾರು ಮಾಡಿಯಾರು?
ಸಾಧ್ಯವಾದರೆ ಕೊಚ್ಚೆ ನೀರನ್ನು ಪರಿಷ್ಕರಣೆಗೊಳಿಸಿ ಶುದ್ಧಗೊಳಿಸೋಣ. ಅದಿಲ್ಲದಿದ್ದರೆ ಕೊಳೆಗೇರಿ ನಿರ್ಮೂಲನೆಯನ್ನು ಮಾಡೋಣ. ನಿಜವಾಗಿ ಕಳಕಳಿಯಿದ್ದರೆ ನಮ್ಮ ಜೊತೆ ಕೈ ಜೋಡಿಸಿ. ಇಂಥ ಕೊಳೆಯ ವಿರುದ್ಧ ರಾಜ್ಯಾದ್ಯಂತ ಆಂದೋಲನ ಮಾಡೋಣ. ಎಲ್ಲರೂ ಒಂದಾದರೆ ಜನ ಜಾಗೃತಿ ಕಷ್ಟವೇನಲ್ಲ.
ಮುದ್ರಣ ಮಾಧ್ಯಮಕ್ಕೆ ಹೋಲಿಸಿದರೆ ಅಂತರ್ಜಾಲದಲ್ಲಿ ಓದುಗರು ಕಡಿಮೆ ಎನ್ನುವುದನ್ನು ಒಪ್ಪುತ್ತೇನೆ. ಆದರೆ ಇವತ್ತಿನ ಬೆಳವಣಿಗೆಗಳನ್ನು ಗಮನಿಸಿದಾಗ ಅಂಥ ಸಮೂಹವೂ ಕಡಿಮೆ ಏನಿಲ್ಲ. ಕೇವಲ ಐದು ದಿನದಲ್ಲಿ ‘ಗಿಂಡಿಮಾಣಿಯ’ ಅಭಿಮಾನಿಗಳ ಸಂಖ್ಯೆ ಎರಡು ಸಾವಿರವನ್ನೂ ದಾಟಿದೆ ಎಂದರೆ ನಂಬುತ್ತೀರಾ ? ಆ ನೀಲಿಪತ್ರಿಕೆಯ ಓದುಗರು ಎಷ್ಟಿದ್ದಾರು ? ಆರಂಭವಾದ ಐದನೇ ದಿನಕ್ಕೆ ಆ ಪತ್ರಿಕೆ ಖಂಡಿತಾ ಈ ಸಂಖ್ಯೆಯ ಓದುಗರನ್ನು ಹೊಂದಿದ್ದಿರಲಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಒಂದನ್ನು ತಿಳಿದುಕೊಳ್ಳೋಣ ಅಂಥ ಕೊಚ್ಚೆಯನ್ನು ಬೆಳೆಸಿದವರೇ ನಾವು. ಇಂದು ಆತ ಹೀಗೆಲ್ಲಾ ತನ್ನ ‘ಹುಚ್ಚು ಮನಸ್ಸಿನ ಹತ್ತು ಮುಖ’ಗಳನ್ನು ಪ್ರದರ್ಶಿಸುತ್ತಿದ್ದಾನೆಂದರೆ ಅದಕ್ಕೆ ಕಾರಣ ನಾವೇ. ಅಂಥವನ್ನು ನಾವು ಓದಿ ಸುಮ್ಮನಿದ್ದುದರಿಂದಲೇ ಈ ಮಟ್ಟಿಗೆ ಪತ್ರಿಕೆ ಬೆಳೆಯಿತು. ಇವತ್ತೇ ಇಂಥ ಪತ್ರಿಕೆಗಳ ಓದಿಗೆ ಬಹಿಷ್ಕಾರ ಹಾಕೋಣ.
ಇನ್ನು ಕಾನೂನಿನ ಹೋರಾಟದ ಪ್ರಶ್ನೆ. ಆ ವಿಚಾರದಲ್ಲೂ ನಾವು ಸುಮ್ಮನೆ ಕುಳಿತಿಲ್ಲ. ‘ವಿ.ಭಟ್ ಎಂಡ್ ಟೀಮ್’ನಿಂದ ಕಾನೂನು ಸಮರದ ಬ್ರೇಕಿಂಗ್ ನ್ಯೂಸ್ ಹೊರಬೀಳಲಿದೆ. ಅದನ್ನು ಕೇಳಿ ಮತ್ತೆ ವ್ವೆ..ವ್ವೆ..ವ್ವೆ...ಅಂತ ಹೇಳದಿದ್ದರೆ ಆ ದೇವರಾಣೆ. ಇಂಥ ಕಾನೂನು ಹೋರಾಟಕ್ಕೂ ನಿಮ್ಮೆಲ್ಲರ ಬೆಂಬಲ ಬೇಕು. ನಾಡಿನ ಮೂಲೆ ಮೂಲೆಗಳಲ್ಲಿ ಮೊಕದ್ದಮೆಗಳು ದಾಖಲಾಗಬೇಕು. ಅಂಥ ಆಸಕ್ತರು ‘ಬೆಬಾಸಂ’(ಬೆಳೆಗೆರೆ ಬಾತರ ಸಂಘ)ವನ್ನು ಸಂಪರ್ಕಿಸಬಹುದು. ಅಷ್ಟಾದರೆ ಇನ್ನಾದರೂ ನಾಡಿನ ಅದೆಷ್ಟೋ ಮುಗುದೆಯರ ಶೀಲಹರಣ ತಪ್ಪೀತು. ಅಪ್ಪಾ, ಅಣ್ಣನೆಂಬ ಭಾವನೆಯಿಂದ ಬರುವ ಹೆಣ್ಣುಮಕ್ಕಳನ್ನು ಅಮ್ಮನನ್ನಾಗಿಸಿ ಕಳುಹಿಸುವ ರಾಕ್ಷಸೀ ಪ್ರವೃತ್ತಿಗೆ ಕಡಿವಾಣ ಬಿದ್ದೀತು ಎಂಬ ಆಶಯ ನಮ್ಮದು.
ಎಲ್ಲಕ್ಕಿಂತ ಹೆಚ್ಚಾಗಿ ನಮಗೂ ಇಂಥದ್ದೊಂದು ಮಟ್ಟಕ್ಕೆ ಇಳಿಯಲು ಬರುತ್ತದೆ ಎಂಬುದನ್ನು ತೋರಿಸಬೇಕಿತ್ತು. ಬೌದ್ಧಿಕತೆ ಯಾರಿಗೂ ಮಾರಾಟವಾಗಿಲ್ಲ ಎಂಬುದನ್ನು ತೋರಿಸಲೋಸುಗ ‘ವ್ವೆ..ವ್ವೆ..ವ್ವೆ...’ ಮಾದರಿಯ ಬರಹದಲ್ಲೇ ಅವರಿಗೆ ಪೇಮೆಂಟ್ ಬಾಕಿ ತೀರಿಸಲಾಗಿದೆ. ಚೀಟಿ ಹಣ ನುಂಗಿ ಬೆಂಗಳೂರಿಗೆ ಓಡಿ ಬಂದವನೆಂದು ನನ್ನ ಬಗ್ಗೆ ಅಲ್ಲಿ ಬರೆಯಲಾಗಿತ್ತು. ಆದರೆ ನಾನ್ಯಾವತ್ತೂ ಯಾವುದೇ ಬಾಕಿ ಇಟ್ಟುಕೊಳ್ಳುವ ಜಾಯಮಾನದವನಲ್ಲ ಎಂಬುದನ್ನು ತೋರಿಸಲಾದರೂ ಒಂದಷ್ಟು ಅವಕಾಶ ಕೊಡಿ ಪ್ಲೀಸ್...
ಗಿಂಡಿ ತೀರ್ಥ: ‘ಉಚಿತ ಸಲಹೆ’ ಕೊಡಲಷ್ಟೇ ಖುಷಿ. ಅದನ್ನು ತೆಗೆದುಕೊಳ್ಳಲು ಬೇಸರವಾಗುತ್ತದೆ. ಇದು ಇನ್ಸ್ಟಂಟ್ ಯುಗ ಸ್ವಾಮಿ, ಇವತ್ತು ಮಾಡಿದ ಪಾಪವನ್ನು ಮುಂದಿನ ಜನ್ಮದಲ್ಲಿ ಅನುಭವಿಸುವ ಪ್ರಶ್ನೆಯೇ ಇಲ್ಲ. ಏನಿದ್ದರೂ ಇವತ್ತಿನ ‘ಕರ್ಮ’ಕ್ಕೆ ಇವತ್ತೇ ಫಲ ಎನ್ನುತ್ತಿದ್ದಾರಂತೆ ಪಂಪ ಮಾರ್ಗದ ‘ಸಾಧು’ ಸಂತರೊಬ್ಬರು. ಬೇಕಿದ್ದರೆ ‘ಕೇಳಿ’ನೋಡಿ.
Well said Bhadti ji :)
ReplyDeleteನೀವ್ ಹೇಳೋದೂ ಸರೀನೇ...
ReplyDeleteHi ! super sir.... i agree with u.
ReplyDeleteಓಕೆ ಬಾಸ್ ನಿಮ್ಮ ನೋವಿನ ಹೋರಾಟಕ್ಕೆ ನಮ್ಮದೂ ಬೆಂಬಲವಿದೆ.
ReplyDeletehoudu..
ReplyDeleteಭಡ್ತಿ ಸರ್,
ReplyDeleteಇಂಥ 420ಗಳಿಗೆ ಕೆಲವರು ಕೊರಳುಪಟ್ಟಿ ಹಿಡಿದು ಕೆರದಲ್ಲಿ ಹೊಡೆಯುತ್ತಾರೆ. ನೀವು ದೂರ ಕುಳಿತೇ ಆ ಕೆಲಸ ಮಾಡಿದ್ದೀರಿ.ಆದರೂ ಎಫೆಕ್ಟ್ ಸೂರ್....!!!! ಯಾವುದೋ ಮುದಿ ನಾಯಿ ಏನೋ ಬೊಗಳಿದರೆ ಊರ ಜನರೆಲ್ಲ ನಂಬಬುವ ಕಾಲ ಿದಲ್ಲ..ಕಳೆದ 15 ವರ್ಷಕ್ಕೂ ಇವತ್ತಿಗೂ ಪರಿಸ್ಥಿತಿ ಬದಲಾಗಿದೆ.ಬೊಗಳುವ ನಾಯಿ ಮಾತ್ರ ಬದಲಾಗಿಲ್ಲ(ಾಗುವುದೂ ಇಲ್ಲ..!)
ನಿಮ್ಮ ಬೆಂಬಲಕ್ಕೆ ನಾವೆಲ್ಲ ಇದ್ದೇವೆ..keep on writing..
Yeah.. We should clean it.. atleast at this stage.. otherwise he would become much more stronger dan the present..
ReplyDeleteHe has high political influence.. In future he may enter to politics and he will corrupt this corrupted system much more... We r with U.. Go ahead..Tit for tat.. (This not just words.. We r wit u sir)
ಸರ್ ಒಂದು ಹಾಡು ಹೇಳ್ತಿನಿ ... ಹೊಡಿ ಮಗ ಹೊಡಿ ಮಗ ಬಿಡಬೇಡ ಅವನ್ನ ....
ReplyDeleteThese elements are dangerous than anti social elements or politicians themselves. Pretending as saints preaching all noble (just go through his Sunday's column in VK) and practically he(RB) is a disgusting social evil, but not only him there is so many similar all over the country roaming freely and earning all dignity. (Go to NDTV, Times Now you could meet them every day)(even so called secular intellectuals, their utility to our society is a big zero but damage they are causing to the society and social harmony is irreversible.
ReplyDeletetrue said
ReplyDeleteನೀವ್ ಹೇಳೋದೂ ಸರೀನೇ...
ReplyDelete